tag:blogger.com,1999:blog-19640491593464803232024-03-14T03:02:15.033-07:00ಕುಶಲೋಪರಿಕುಶಲೋಪರಿಕೆ. ಸತ್ಯನಾರಾಯಣhttp://www.blogger.com/profile/15167030166766836381noreply@blogger.comBlogger16125tag:blogger.com,1999:blog-1964049159346480323.post-34328414751089391002009-10-26T01:28:00.000-07:002009-10-26T03:06:38.501-07:00ಮುಂದಿನ ಶತಮಾನಕ್ಕೆ ಮಾಸ್ತಿ ಕತೆಗಳು<a onblur="try {parent.deselectBloggerImageGracefully();} catch(e) {}" href="http://3.bp.blogspot.com/_D9K0HARbkSE/SuVpQKeL8kI/AAAAAAAAAII/fUuwjUG_5Sw/s1600-h/mastiyavara+ayda+sannakathegalu0001.jpg"><img style="float:left; margin:0 10px 10px 0;cursor:pointer; cursor:hand;width: 207px; height: 320px;" src="http://3.bp.blogspot.com/_D9K0HARbkSE/SuVpQKeL8kI/AAAAAAAAAII/fUuwjUG_5Sw/s320/mastiyavara+ayda+sannakathegalu0001.jpg" border="0" alt="" id="BLOGGER_PHOTO_ID_5396835454883197506" /></a>ಕನ್ನಡದಲ್ಲಿ ಸಣ್ಣಕಥೆಯ ಪ್ರಕಾರವು ಹುಟ್ಟಿ, ವಿಕಾಸಗೊಂಡು ಪ್ರವರ್ಧಮಾನಕ್ಕೆ ಬಂದುದು ಇನ್ನೇನು ಮುಗಿಯುತ್ತಿರುವ ಇಪ್ಪತ್ತನೆಯ ಶತಮಾನದಲ್ಲೆ. ಒಂದು ಶತಮಾನದ ಅವಧಿಯಲ್ಲೆ ಈ ಪ್ರಕಾರದ ಸಾಧನೆ ಅದೆಷ್ಟು ಅಸಾಧಾರಣವಾಗಿದೆಯೆಂದರೆ ಅತಿ ಸಂಕೀರ್ಣವಾದ ಆಧುನಿಕ ಬದುಕಿನ ಯಾವುದೇ ಸ್ತರವನ್ನಾದರೂ ಸರಿಯೇ, ಆಯಾಮವನ್ನಾದರೂ ಸರಿಯೇ ಸಣ್ಣಕತೆಯಲ್ಲಿ ಅಭಿವ್ಯಕ್ತಿಸಬಹುದು ಎಂಬ ಆತ್ಮವಿಶ್ವಾಸ ಇದೀಗ ಹೊಸದಾಗಿ ಬರೆಯುತ್ತಿರುವ ಕತೆಗಾರರ ಬರವಣಿಗೆಯಲ್ಲು ಎದ್ದು ಕಾಣುತ್ತದೆ. ಇಂತಹ ಆತ್ಮವಿಶ್ವಾಸ ಕತೆಗಾರರೆಲ್ಲರಿಗೂ ದಕ್ಕಲು ಕಾರಣರಾದವರಲ್ಲಿ ಹೆಚ್ಚು ಕಡಿಮೆ ಈ ಶತಮಾನದುದ್ದಕ್ಕೂ (ಸುಮಾರು ೧೯೧೦ರಿಂದ ೧೯೮೫ರ ತನಕ) ಸಣ್ಣಕಥೆಗಳನ್ನು ಬರೆದುಕೊಂಡು ಬಂದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಪ್ರಮುಖರು. ಈ ಶತಮಾನದ ಸಣ್ಣಕಥೆಗಳನ್ನು ಚರ್ಚಿಸುವಾಗ ಮತ್ತೆ ಮತ್ತೆ ನಾವು ಮಾಸ್ತಿಯನ್ನು ಎದುರಾಗಲೇ ಬೇಕೆಂಬುದು ಮಾತ್ರ ಅವರ ಸಾಧನೆಯ ಹೆಗ್ಗಳಿಕೆಯಲ್ಲ. ಕತೆಗಾರಿಕೆಯ ಉದ್ದೇಶವೇನು, ಕತೆಗೂ ಕತೆಗಾರನಿಗೂ, ಕತೆಗೂ ಜೀವನಕ್ಕೂ ಇರುವ ಇರಬೇಕಾದ ಸಂಬಂಧ ಯಾವ ಸ್ವರೂಪದ್ದು ಎಂಬೆಲ್ಲ ಪ್ರಶ್ನೆಗಳ ಅರ್ಥಪೂರ್ಣ ಚರ್ಚೆಗೆ ಮಾಸ್ತಿ ಕತೆಗಳು ನೆರವಿಗೆ ಬರುವ ಹಾಗೆ ಮತ್ತ್ಯಾವ ಕತೆಗಾರರ ಬರವಣಿಗೆಯೂ ಬರುವುದಿಲ್ಲ. ಪ್ರಸಿದ್ಧ ನವ್ಯ ಕತೆಗಾರರಾದ ಚಿತ್ತಾಲರು ಮಾಸ್ತಿಯವರ ಮೂವತ್ತು ಕತೆಗಳನ್ನು ಆಯ್ದು, ಅಧ್ಯಯನಪೂರ್ಣವಾದ ಪ್ರಸ್ತಾವನೆಯೊಂದನ್ನು ಬರೆದು ಪ್ರಕಟಿಸಿರುವ ‘ಮಾಸ್ತಿ: ಮೂವತ್ತು ಕತೆಗಳು’ ಎಂಬ ಸಂಗ್ರಹ ಮಾಸ್ತಿಯವರ ಕತೆಗಾರಿಕೆಯನ್ನು ಕುರಿತು ಚರ್ಚಿಸುವುದಕ್ಕೆ ಮತ್ತೊಂದು ಅವಕಾಶವನ್ನು ಕಲ್ಪಿಸಿದಂತಾಗಿದೆ. ಇದೊಂದು ಸಾಂದರ್ಭಿಕ ಕಾರಣ ಮಾತ್ರ. ಇಂದು ನಾವು ಒಂದು ಸಮಾಜವಾಗಿ, ಸಂಸ್ಕೃತಿಯಾಗಿ ಆತ್ಮವಿಶ್ವಾಸ ಕಳೆದುಕೊಂಡು ಅನಾಥರಾಗುತ್ತಿದ್ದೇವೆ. ನಮ್ಮ ಚರಿತ್ರೆಯನ್ನು, ಬದುಕನ್ನು ನಾವೇ ರೂಪಿಸಿಕೊಳ್ಳುವ ಹಕ್ಕು ಮತ್ತು ಅವಕಾಶಗಳೆರಡನ್ನೂ ಉದಾರೀಕರಣ ಪ್ರತಿನಿಧಿಸುತ್ತಿರುವ ಹೊಸ ಆರ್ಥಿಕ ಶಕ್ತಿಗಳು ಹೊಸಕಿ ಹಾಕುತ್ತಿವೆ. ನಮ್ಮ ಸಂಸ್ಕೃತಿಗೆ, ಜನಜೀವನಕ್ಕೆ ಇದೊಂದು ಮರಣಾಂತಿಕ ಸಂದರ್ಭವೇ ಸರಿ. ನಮ್ಮ ಜನಪದರ ಜೀವನ ಸಂಸ್ಕೃತಿಯ ಜಾಣ್ಮೆಯನ್ನು, ಧಾರಣಾ ಶಕ್ತಿಯನ್ನು ಅರ್ಥಪೂರ್ಣವಾಗಿ ಹೀರಿಕೊಂಡು ಬರೆದ ಮಾಸ್ತಿ ಕತೆಗಳು ಇಂತಹ ಸಂದರ್ಭದಲ್ಲಿ ಹೇಗೆ ನೆರವಿಗೆ ಬರಬಲ್ಲವು ಎಂಬುದು ಮುಖ್ಯ ಪ್ರಶ್ನೆ. ಮಾಸ್ತಿಯಂತಹ ದೊಡ್ಡ ಲೇಖಕರ ಬರವಣಿಗೆ ಎದುರಿಸಲೇಬೇಕಾದ ಪ್ರಶ್ನೆ.<div><br /><span class="fullpost">ಮಾಸ್ತಿಯವರು ಕತೆಗಳನ್ನು ಬರೆಯಲು ಪ್ರಾರಂಭಿಸಿದಾಗಲೂ ನಮಗೆ ನಮ್ಮ ಸಂಸ್ಕೃತಿಯ ಬಗ್ಗೆ, ಅದರ ಧಾರಣಾಶಕ್ತಿಯ ಬಗ್ಗೆ ಅಂತಹ ಆತ್ಮವಿಶ್ವಾಸವೇನಿರಲಿಲ್ಲ. ನಮ್ಮನ್ನು ನಾವು ಹೇಗೆ ನೋಡಿಕೊಳ್ಳಬೇಕು ನಮ್ಮ ಕತೆಗಳನ್ನು, ನಮ್ಮ ಚರಿತ್ರೆಯನ್ನು ನಾವು ಹೇಗೆ ನೋಡಿಕೊಳ್ಳಬೇಕು ಎಂಬುದರ ಕುರಿತು ಸ್ಪಷ್ಟ ಕಲ್ಪನೆಯಿರಲಿಲ್ಲ. ಹೆಚ್ಚೆಂದರೆ ಏಳೆಂಟು ನೂರು ವರ್ಷಗಳ ಇತಿಹಾಸ ಮಾತ್ರವಿರುವ ಪಶ್ಚಿಮದ ನಾಗರಿಕತೆ ತಿಳಿದಿರುವಂತೆ ಕತೆ ಮತ್ತು ಚರಿತ್ರೆ ಎರಡೂ ಭಿನ್ನ ಭಿನ್ನ ಸಂಗತಿಗಳೆಂದು ನಾವು - ಅಂದರೆ ಸುಮಾರು ನಾಲ್ಕೈದು ಸಾವಿರ ವರ್ಷಗಳ ನಾಗರಿಕತೆಯ ವಾರಸುದಾರರು - ಗ್ರಹಿಸಬೇಕೆ ಎಂಬ ಪ್ರಶ್ನೆಯು ಕೂಡ ನಮ್ಮೆದುರಿಗಿತ್ತು. ಸಾರ್ವಜನಿಕ ಜೀವನದಲ್ಲಿ ಗಾಂಧಿ ಇಂತಹ ಪ್ರಶ್ನೆಗಳನ್ನು ಎದುರಿಸಿದರೆ ಮಾಸ್ತಿಯಂತವರು ಬರವಣಿಗೆಯಲ್ಲಿ ಈ ಪ್ರಶ್ನೆಗಳನ್ನು ಎದುರಿಸಿದರು. ಸಮರ್ಪಕವಾದ ಉತ್ತರಗಳನ್ನು ಕಂಡುಕೊಂಡರು.<br /><br />ನಮ್ಮನ್ನು ನಾವು ನಮ್ಮ ಕಣ್ಣುಗಳಿಂದಲೇ ನೋಡಿಕೊಳ್ಳಬೇಕು ಎಂಬುದು ಮಾಸ್ತಿಯವರಿಗೆ ಅವರ ಮೊದಲ ಕತೆ ‘ರಂಗನ ಮದುವೆ’ ಬರೆದಾಗಲೇ ಸ್ಪಷ್ಟವಾಗಿ ಹೋಗಿತ್ತೆಂದು ಕಾಣುತ್ತದೆ. ಈ ಮಾತುಗಳನ್ನು ಗಮನಿಸಿ "ನಮ್ಮೂರು ಹೊಸಹಳ್ಳಿ. ಅದರ ಹೆಸರನ್ನು ನೀವು ಕೇಳಿರುವಿರಲ್ಲವೆ? ಇಲ್ಲವೇ? ಅಯ್ಯೋ ಪಾಪ? ಅದು ನಿಮ್ಮ ತಪ್ಪಲ್ಲ. ಭೂವಿವರಣೆಗಳಲ್ಲಿ ಅದರ ಹೆಸರಿಲ್ಲ. ಇಂಗ್ಲೀಷಿನಲ್ಲಿ ಭೂವಿವರಣೆ ಬರೆಯುವ ಸಾಹೇಬು ಜನಗಳಿಗೆ ಹೊಸಹಳ್ಳಿ ಗೊತ್ತಿಲ್ಲದೆ ಅವರು ಸುಮ್ಮನಿದ್ದರೂ ಇರಬಹುದು. ನಮ್ಮ ಜನರೂ ಭೂವಿವರಣೆ ಬರೆಯುವಾಗ ಹೊಸಹಳ್ಳಿಯ ಹೆಸರನ್ನೇ ಮರೆಯುವರು. ಸರಿ ಕುರಿ ಹಿಂಡಿನ ಸಮಾಚಾರ.......ಇಂಗ್ಲೆಂಡಿನ ಸಾಹೇಬರೂ ನಮ್ಮ ಗ್ರಂಥಕರ್ತರೂ ಮರೆತ ಮೇಲೆ ಪಾಪ ಭೂಪಟ ಬರೆಯುವವನು ಅದನ್ನು ನೆನೆಯುವನೇ? ನಕ್ಷೆಯಲ್ಲಿ ನಮ್ಮೂರಿನ ನೆಲೆಯೇ ಇಲ್ಲ" ನಕ್ಷೆಯಲ್ಲಿ ನೆಲೆಯಿಲ್ಲದಿದ್ದರೇನು, ಹೊಸಹಳ್ಳಿಯಲ್ಲೇ ಬಾಳಿ ಬದುಕಿಕೊಂಡು ಬಂದ ಜನರಿಲ್ಲವೆ, ಅವರ ಜೀವನಕ್ರಮವಿಲ್ಲವೇ, ಹೊರಗಿನವರು ನೋಡಲು ನಿರಾಕರಿಸಿದ ಮಾತ್ರಕ್ಕೇ, ನೋಡಿದರೂ ಇಲ್ಲಿಯ ಜೀವನಕ್ರಮದ ಮಹತ್ವ ತಿಳಿಯಲು ನಿರಾಕರಿಸಿದ ಮಾತ್ರಕ್ಕೇ ನಾವೂ ಕುರುಡರಾಗಬೇಕೆ ಎನ್ನುವ ಪ್ರಶ್ನೆಗೆ ಮಾಸ್ತಿ ಉತ್ತರಿಸಿದ್ದು ಹೀಗೆ ".....ಏನೇ ಇರಲಿ ಇತರರ ಮಾತನ್ನು ಕೇಳಿ ನಾವು ನಿರ್ಣಯಗಳನ್ನು ತೆಗೆದುಕೊಳ್ಳಬಾರದು. ಹೊರಗಿನ ಜನ ಪಂಡಿತರೇ ಆದರೂ ಈ ದೇಶದ ಸಂಸ್ಥೆ ಸಂಸ್ಕೃತಿಗಳನ್ನು ನಿಷ್ಮಲ್ಮಶವಾದ ದೃಷ್ಟಿಯಿಂದ ನೋಡಲಾರರು.....ಈ (ಇಲ್ಲಿಯ) ಪ್ರತಿಬಿಂಬ ತಾನೊಂದು ಬಿಂಬವಾಗುವುದು ಎಂತು? ಎಂದು? ಪ್ರತಿಬಿಂಬ ಪ್ರತಿಬಿಂಬವಾಗಿಯೇ ಮುಗಿಯುತ್ತದೆ." (ಜೆ ಎಸ್ ವುಡ್ರೋಪ್ನ Shakti and Shakta ಎಂಬ ಪುಸ್ತಕದಿಂದ ಮಾಸ್ತಿ ಉದ್ಧರಿಸಿದ ಮಾತುಗಳಿವು.)<br /><br />ನಮ್ಮನ್ನು ನಾವು ನಮ್ಮ ಕಣ್ಣುಗಳ ಮೂಲಕವೇ ನೋಡಿಕೊಳ್ಳಬೇಕು ಎಂಬ ದೃಷ್ಟಿಕೋನವೇನೋ ಯಾವ ಕಾಲಕ್ಕೂ ಉದಾತ್ತವಾದುದೇ ಸರಿ. ಆದರೆ ಹಾಗೆ ನೋಡಿದಾಗ, ಹೇಗೆ ನೋಡಿಕೊಳ್ಳಬೇಕು ಎಂಬ ಪ್ರಶ್ನೆಯು ಇರುತ್ತದಲ್ಲ. ನಮ್ಮ ರಾಷ್ಟ್ರೀಯವಾದಿ ಲೇಖಕರು, ನವೋದಯದ ಲೇಖಕರೆಲ್ಲ ಈ ಸಮಸ್ಯೆಯನ್ನು ಎದುರಿಸಿದವರೆ. ಅವರೆಲ್ಲರಿಗಿದ್ದ ಸುಲಭದ ದಾರಿಯೆಂದರೆ ಇಲ್ಲಿಯ ಇತಿಹಾಸವನ್ನು, ಸಂಸ್ಕೃತಿಯನ್ನು, ಸಂಘಟನೆಗಳನ್ನು ಉದಾತ್ತೀಕರಿಸುವುದು. ಈ ಉದಾತ್ತೀಕರಣಕ್ಕೆ ಪ್ರೇರಕವಾಗಿ ಅವರಿಗೆ ಇಲ್ಲಿಯ ಸನಾತನ ಧರ್ಮವಿತ್ತು. ರಾಮಕೃಷ್ಣ, ಅರಬಿಂದೋ, ವಿವೇಕಾನಂದರಂತಹ ಚಿಂತಕರಿದ್ದರು. ಮಾಸ್ತಿಯವರ ಗಮನ ಈ ಕಡೆಗೆ ಹೋಗಲೇ ಇಲ್ಲ. ಅವರು ಇಲ್ಲಿಯ ಜನಪದರು ತಮ್ಮ ತಮ್ಮ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಜೀವನದ ಸಂಘರ್ಷಗಳನ್ನು ಎದುರಿಸುವಲ್ಲಿ ತೋರಿದ ಜಾಣ್ಮೆಯನ್ನು, ಧಾರಣಾಶಕ್ತಿಯನ್ನು ಮಾತ್ರವೇ ಮತ್ತೆ ಮತ್ತೆ ಎಂಬಂತೆ ತಮ್ಮ ಕತೆಗಳಲ್ಲಿ ಪ್ರತಿನಿಧೀಕರಿಸುತ್ತ ಹೋದರು. ಎಕೆಂದರೆ ಇಂತಹ ಜಾಣ್ಮೆ, ಧಾರಣಾಶಕ್ತಿ ಮಾತ್ರ ಇಲ್ಲಿಯ ನಾಗರಿಕತೆಗೆ ಬಹುಕಾಲ ಬದುಕುಳಿಯುವ ಗುಣ ಸ್ವಭಾವವನ್ನು ತಂದುಕೊಟ್ಟಿದೆಯೆಂದು ಅವರು ನಂಬಿದ್ದರು. ಈ ಕಾರಣಕ್ಕಾಗಿಯೇ ಮಾಸ್ತಿಯವರಿಗೆ ವೆಂಕಟಿಗ, ಬೈಚೇಗೌಡ, ಗೌತಮಿ, ಉಪನಿಷದ್ ಋಷಿ, ಯುಗಪುರುಷ ಶ್ರೀಕೃಷ್ಣ - ಇವರೆಲ್ಲರನ್ನು ಒಂದೇ ತೂಕದಲ್ಲಿ ನೋಡುವುದು ಸಾಧ್ಯವಾಯಿತು. ಈಶೋಪನಿಷದ್ ಋಷಿ ಇಲ್ಲಿಯ ವಿವೇಕಕ್ಕೆ ಕಾರಣನಾಗಿರುವಷ್ಟೆ ವೆಂಕಟಿಗನು ಕಾರಣ, ಅವನ ಆಯ್ಕೆಯು ಕಾರಣ ಎಂಬುದು ಮಾಸ್ತಿಯ ನಿಲುವು.<br /><br />ಈ ನಿಲುವಿನಿಂದಾಗಿಯೇ ಮಾಸ್ತಿಯವರಿಗೆ ಕಾಲವನ್ನು, ಪಾತ್ರಗಳನ್ನು ಸಾಮಾಜಿಕ, ಐತಿಹಾಸಿಕ, ಪೌರಾಣಿಕ - ಪಶ್ಚಿಮದವರಿಗೂ ಅವರನ್ನು ನೆಮ್ಮಿ ಬರೆಯುವ ವಿಮರ್ಶಕ ಪಟುಗಳಿಗೂ ಆದಂತೆ - ವೆಂದು ವಿಂಗಡಿಸಿ ನೋಡುವ ಅಗತ್ಯ ಕಂಡುಬರಲಿಲ್ಲ. ಅವರ ಕಥನ ಪ್ರತಿಭೆಯಲ್ಲಿ ಅವರ ಕತೆಗಳು ಏಕಕಾಲಕ್ಕೆ ಸಾಮಾಜಿಕ, ಐತಿಹಾಸಿಕ, ಪೌರಾಣಿಕ - ವೆಂಕಟಿಗನ ಕತೆಯನ್ನಾಗಲೀ, ವೆಂಕಟಶಾಮಿಯ ಪ್ರಣಯ ಕತೆಯನ್ನಾಗಲೀ ಕೇವಲ ವರ್ತಮಾನದ ಕತೆಯೆಂದು ಮಾತ್ರ ಓದಲು ಸಾಧ್ಯವೇ? ಈ ಕತೆಯ ಪಾತ್ರಗಳಿಗೆ, ಅವು ಎದುರಿಸುವ ಸನ್ನಿವೇಶಗಳಿಗೆ, ಮನುಷ್ಯನ ಮೂಲಭೂತ ಸ್ವಭಾವದ ಮಾದರಿಗಳನ್ನು ಪ್ರಕಟಿಸುವ ಧಾರ್ಷ್ಟ್ಯ ಮಾತ್ರವಲ್ಲ, ಪುರಾಣದ ಹೀರೋಗಳಾಗುವಷ್ಟು, ಇತಿಹಾಸದ ಸಂಧಿಕಾಲದ ಪರಿವರ್ತನಾ ಪಟುಗಳಾಗುವಷ್ಟು ಧಾರ್ಷ್ಟ್ಯವೂ ಇದೆ. ನಾವು ಯಾವ ನೆಲೆಯಲ್ಲಿ ನಿಂತು ಈ ಕತೆಗಳನ್ನು ಓದುತ್ತೇವೆ, ಓದುತ್ತಿದ್ದೇವೆ ಎಂಬಂಶದ ಮೇಲೆ ಈ ಕತೆಗಳು ಸಾಮಾಜಿಕ ಕತೆಗಳಾಗೋ, ಪೌರಾಣಿಕ ಕತೆಗಳಾಗೋ ಕಾಣಬೇಕಷ್ಟೆ. ಗೌತಮಿ ಹೇಳಿದ ಪುರಾಣದ ಕತೆಗೆ ಈವತ್ತೂ ಪ್ರತಿದಿನವೂ ಅಜ್ಜಿಯರು, ತಾಯಂದಿರು ವಯಸ್ಸಿಗೆ ಬಂದ ಹೆಣ್ಣುಮಕ್ಕಳಿಗೆ ಹೇಳುವ ವಿವೇಕದ ಮಾತಿನ ವರ್ತಮಾನದ ತುರ್ತಿದೆಯಲ್ಲವೆ? ಏಳೆಂಟು ನೂರು ವರ್ಷಗಳ ಹಿಂದಿನ ಮತಾಚಾರ್ಯ ರಾಮಾನುಜಾಚಾರ್ಯರ ಸಿಟ್ಟು ವರ್ತನೆಯೆಲ್ಲವೂ ನಿನ್ನೆ ಮೊನ್ನೆ ತಾನೇ ಹೆಂಡತಿಯೊಡನೆ ವಿನಾ ಕಾರಣ ಜಗಳವಾಡಿ ಸೆಟೆದುಕೊಂಡು ಹೋಗಿ ಸನ್ಯಾಸ ತೆಗೆದುಕೊಂಡಿದ್ದ ನಮ್ಮ ತಾತಮುತ್ತಾತಂದಿರ ವರ್ತನೆಯಂತೆಯೇ ಕಾಣುತ್ತದಲ್ಲ. ದೂರದೇಶದ ಗಯಟೆಯ ದಣಿವರಿಯದ ವಿಕೃತ ಕಾಮ ನಮ್ಮ ಹೊಸ ತಲೆಮಾರಿನ ಲೇಖಕರನ್ನೇ ಜ್ಞಾಪಿಸುವುದಿಲ್ಲವೇ?<br /><a onblur="try {parent.deselectBloggerImageGracefully();} catch(e) {}" href="http://4.bp.blogspot.com/_D9K0HARbkSE/SuVf4o2O4yI/AAAAAAAAAIA/UuLqaa_W-as/s1600-h/Presentation1.jpg"><img style="text-align: center;" src="http://4.bp.blogspot.com/_D9K0HARbkSE/SuVf4o2O4yI/AAAAAAAAAIA/UuLqaa_W-as/s320/Presentation1.jpg" border="0" alt="" id="BLOGGER_PHOTO_ID_5396825155115606818" /></a><br />ಇಂತಹ ಪಾತ್ರ ಸೃಷ್ಟಿ - ಕಾಲದ ಕಲ್ಪನೆಯಿಂದಲೇ ಮಾಸ್ತಿ ಚರಿತ್ರೆ ಮತ್ತು ನಾಗರಿಕತೆಗಳ ನಡುವೆ ಪ್ರತಿಯೊಬ್ಬ ದೊಡ್ಡ ಲೇಖಕನು ಮಾಡಲೇ ಬೇಕಾದ ಆಯ್ಕೆಗೆ ಸರಿಯಾದ ಉತ್ತರವನ್ನು ಕಂಡುಕೊಂಡಂತೆ ಕಾಣುತ್ತದೆ. ಲೇಖಕ ತಾನು ಬದುಕುವ ಕಾಲದ ಸಮಕಾಲೀನತೆಯ ಒತ್ತಡಗಳನ್ನು ಬಿಡಲಾರ, ಬಿಡಲೂಬಾರದು, ಬಿಟ್ಟರೆ ಅವನದು ರೂಪಹೀನವಾದ ವಿಶ್ವಸ್ತ ಸತ್ಯ-ಸುಭಾಷಿತವಾಗಿ ಬಿಡಬಹುದು. ಹಾಗೆಂದು ತೀರಾ ಸಮಕಾಲೀನವಾದಕ್ಕೆ ಗಂಟುಬಿದ್ದರೂ ಅವನಿಗೆ ಅಪಾಯ ತಪ್ಪಿದ್ದಲ್ಲ. ಅಖಂಡವೂ - ಅನಂತವೂ ಆದ ಕಾಲ ಪ್ರವಾಹದಲ್ಲಿ ನಮ್ಮ ಕಾಲದ ಅನುಭವಗಳು ಹಿಂದಿನ ಅನುಭವಗಳಿಂದ ಪಡೆದಿರುವುದು ಎಷ್ಟು, ಪಡೆಯಬೇಕಾದ್ದು ಎಷ್ಟು, ಮುಂದಿನ ಅನುಭವಗಳಿಗೆ ಸೇರಿಸಬೇಕಾದ್ದು ಎಷ್ಟು ಎಂಬ ದೃಷ್ಟಿಕೋನವು ತೀರಾ ಸಮಕಾಲೀನವಾದ್ದಕ್ಕೆ ಮಾತ್ರ ಗಂಟುಬೀಳಲಾರದು. ಮುಂದುವರೆಸಿ ಹೇಳುವುದಾದರೆ ಚರಿತ್ರೆಯ ಪುರಾಣಗಳ ಅನುಭವವನ್ನು ಅದು ಸಮಕಾಲೀನದ ಬೆಳಕಿನಲ್ಲೇ ಪರಿಶೀಲಿಸುತ್ತದೆ ಮತ್ತು ಸಮಕಾಲೀನವಾದ್ದನ್ನು ಚರಿತ್ರೆ - ಪುರಾಣಗಳ ಬೆಳಕಿನಲ್ಲಿ ನೋಡುತ್ತದೆ. ಹೀಗೆ ಮಾಡುವುದರ ಮೂಲಕ ಭೂತ - ಭವಿಷ್ಯ -ವರ್ತಮಾನವೆಂಬುದರ ಕಾಲದ ಕೃತಕ ವಿಂಗಡಣೆಯನ್ನು ನಿರಾಕರಿಸುತ್ತದೆ. ಕಾಲಬದ್ಧವಾದ ಚರಿತ್ರೆಯ ಕಲ್ಪನೆಯನ್ನು ನಿರಾಕರಿಸುತ್ತಾ ಮನುಷ್ಯಲೋಕದ ಅನುಭವಗಳ ಮೊತ್ತವನ್ನು ಪ್ರಕಟಿಸುವ ನಾಗರಿಕತೆಯ ಕಲ್ಪನೆಯ ಕಡೆಗೇ ಮಾಸ್ತಿಯವರ ಸಾರಿಪುತ್ರ, ಶ್ರೀಕೃಷ್ಣ, ವೆಂಕಟಿಗ, ಟಾಲ್ಸ್ಟಾಯ್ ಎಲ್ಲರೂ ಹೊರಟಿರುವುದು. ಇತಿಹಾಸವನ್ನು ಒಂದು Notion ಆಗಿ ಗ್ರಹಿಸುವವರಿಗೆ ಮಾಸ್ತಿಯ ಕತೆಗಳು ನಮ್ಮ ಚರಿತ್ರೆಯ ಒಂದು ಘಟ್ಟದಲ್ಲಿ ಪ್ರಕಟವಾಗುವ ನಮ್ಮ ಸಾಮಾಜಿಕ ಸನ್ನಿವೇಶದ ಸಾರಾಂಶ. ಚರಿತ್ರೆಯೆಂಬುದು ಅನುಭವಗಳ ಮೊತ್ತ ಎಂದು ನೋಡುವವರಿಗೆ ಮಾಸ್ತಿಯ ಕತೆಗಳು ನಮ್ಮ ಕಾಲಕ್ಕೂ ಪ್ರಸ್ತುತವಾಗುವಂತಹ ಅನುಭವವನ್ನು ಪ್ರಕಟಿಸುತ್ತವೆ.<br /><br />ಮಾಸ್ತಿಯವರ ಈ ಆಯ್ಕೆ ಅವರ ಬರವಣಿಗೆಯ ಸಂಯಮ, ನಿರುದ್ವಿಗ್ನತೆಗೆ ಸರಿಯಾದ ಕಾರಣವನ್ನು ಸೂಚಿಸುತ್ತದೆ ಎಂದು ನನ್ನ ಅಭಿಪ್ರಾಯ. ಬರವಣಿಗೆಯ ಸಂಯಮ, ನಿರುದ್ವಿಗ್ನತೆ ಕೇವಲ ಭಾಷೆಯ ಮೇಲಿನ, ಕಥಾವಸ್ತುವಿನ ಮೇಲಿನ ಹಿಡಿತದಿಂದ ಬರುವಂತದ್ದಲ್ಲ. ನಾನೇ ಮುಖ್ಯ, ನಾನು ಬದುಕುತ್ತಿರುವ ಕಾಲವೇ ನಾಗರಿಕತೆಯ ಚಲನೆಯಲ್ಲಿ ಮುಖ್ಯ, ಎಲ್ಲ ಸಮಸ್ಯೆಗಳಿಗೂ ನನ್ನ ತಲೆಮಾರು ಕಂಡುಕೊಳ್ಳುವ ಉತ್ತರವೇ ಮುಖ್ಯ, ನನ್ನ ತಲೆಮಾರು ಬದುಕಿನ ಎಲ್ಲ ಸಮಸ್ಯೆಗಳಿಗೂ ಉತ್ತರ ಕಂಡು ಹಿಡಿಯದಿದ್ದರೆ ಪ್ರಳಯ ಗ್ಯಾರಂಟಿ ಎಂದು ನಂಬುವ ಮನಸ್ಸಿಗೆ ಆತಂಕ ನ್ಯೂರೋಸಿಸ್ ಸಹಜ ಸ್ಥಿತಿ ಮಾತ್ರವಲ್ಲ, ಪ್ರಿಯವಾದ ಸ್ಥಿತಿಯೂ ಹೌದು. ಹಾಗೆಂದು ಆತಂಕ-ನ್ಯೂರೋಸಿಸ್ ತಪ್ಪಿಸಿಕೊಳ್ಳಲೆಂದು ಕೃತಕ ಭೋಳೆಯೂ ಆಗಿಬಿಡಬಾರದು. ಲೇಖಕನಿಗೆ ತಾನು ಬದುಕುತ್ತಿರುವ ಕಾಲದ ಬಗ್ಗೆ ಕುತೂಹಲವಿರಬೇಕು, ವಿನಯವಿರಬೇಕು. ಆಗಿಹೋದ ಕಾಲದ ಬಗ್ಗೆ ವಿಮರ್ಶಾತ್ಮಕ ಗೌರವವಿರಬೇಕು. ಭವಿಷ್ಯದ ಬಗ್ಗೆ ಸಕಾರಣವದ ಭರವಸೆಯಿರಬೇಕು. ಆಗ ಮಾತ್ರ ಅವನು ನೋಡುವ/ಸಾದರಪಡಿಸುವ ಅನುಭವಕ್ಕೊಂದು ವಿಶಿಷ್ಟ ಪ್ರಭೆ ಬರುತ್ತದೆ. ಆ ಪ್ರಭೆ ಮಾಸ್ತಿಯವರಲ್ಲಾದಂತೆ ಸಂಯಮ, ನಿರುದ್ವಿಗ್ನತೆ ತುಂಬಿದ ಬರವಣಿಗೆಯಲ್ಲಿ ವ್ಯಕ್ತವಾಗುತ್ತದೆ. ಸಾರಿಪುತ್ರನ ಕತೆಯಲ್ಲಿ ಬರುವ ಈ ಮಾತುಗಳನ್ನೂ ಗಮನಿಸಿ: "ಹಿರಿಯರು ಹೇಳಿದ್ದೆಂದು ನೋಡುವುದು ಒಳ್ಳೆಯದೇ. ಹಿರಿಯರು ನಮಗೆ ಹೊರಗಣ ಗುರುಗಳು. ಅವರ ಧ್ವನಿಯನ್ನು ಕೇಳಿ. ಒಳಗೂ ಒಬ್ಬ ಗುರು ಇದ್ದಾನೆ. ಅವನನ್ನು ಮುಚ್ಚಿಡಬೇಡಿ. ಎರಡೂ ಧ್ವನಿಗಳ ಶ್ರುತಿ ಸೇರಿದಾಗ ತೋರುವ ಸತ್ಯ ನಿಜವಾದ ಸತ್ಯ. ಅದುವರೆಗಿನ ಸತ್ಯ ವೇಷದ ಸತ್ಯ."</span></div><div><span class="fullpost"><br />ಮನುಷ್ಯ ನಿರ್ಮಿಸುವ ಅನುಭವ ಮತ್ತು ಅವನು ನಿರ್ಮಿಸಲಾಗದ ಆದರೆ ಅಧೀನವಾಗಿರಬೇಕಾದ ಕಾಲ ಎರಡರ ಅಖಂಡತೆ ಮತ್ತು ಎರಡರ ಅಖಂಡತೆಗಿರುವ ಅವಿನಾ ಸಂಬಂಧದ ಬಗ್ಗೆ ಸ್ಪಷ್ಟ ಕಲ್ಪನೆಯಿದ್ದದ್ದರಿಂದಲೇ ಮಾಸ್ತಿಗೆ ಕತೆ ಯಾವಾಗ ಚರಿತ್ರೆಯಾಗುತ್ತದೆ, ಚರಿತ್ರೆ ಯಾವಾಗ ಕತೆಯಾಗುತ್ತದೆ, ಕತೆಯನ್ನು ಯಾವಾಗ ಚರಿತ್ರೆಯಾಗಿ ನೋಡಬೇಕು, ಚರಿತ್ರೆಯನ್ನು ಯಾವಾಗ ಕತೆಯಾಗಿ ನೋಡಬೇಕು ಎಂಬ ಪ್ರಶ್ನೆ ಮುಖ್ಯವಾಗಿತ್ತು. ಗೌತಮಿ, ಶಕುಂತಳೆ, ವೆಂಕಟಶಾಮಿ, ವೆಂಕಟಿಗ ಇಂತವರ ಕತೆಗಳಲ್ಲಿ ಮನುಷ್ಯ ಚರಿತ್ರೆಯ (ಸಾಹಿತ್ಯ ಅಥವಾ ರಾಜಕೀಯ ಚರಿತ್ರೆಯಲ್ಲ) ವಿವರಗಳನ್ನು ಗಮನಿಸದೇ ಹೋಗುವ ನಿಲುವು ಅಪೂರ್ಣವಾಗುವಂತೆಯೇ ಶ್ರೀಕೃಷ್ಣ,, ಟಾಲ್ಸ್ಟಾಯ್, ವಾಮದೇವ - ಇಂತವರ ಚರಿತ್ರೆಗಳಲ್ಲಿ, ಇನ್ನೂ ಹತ್ತಿರವಾದ ಉದಾಹರಣೆಯಿಂದ ಹೇಳಬೇಕಾದರೆ ಚಿಕವೀರ ರಾಜೇಂದ್ರನಂತವನ ಚರಿತ್ರೆಯಲ್ಲಿ ನಮಗೆ ಪ್ರಸ್ತುತವಾದ ಕತೆಯನ್ನು ಕಾಣದೇ ಹೋಗುವ ನಿಲುವು ಕೂಡ ಅಪೂರ್ಣವಾದದ್ದು. ಕತೆಯಾಗದ ಚರಿತ್ರೆಯಿಂದ, ಚರಿತ್ರೆಯಾಗದ ಕತೆಯಿಂದ ಆಗುವ ಪ್ರಯೋಜನವಾದರೂ ಏನು ಎಂದು ಮಾಸ್ತಿ ಕೇಳುತ್ತಿರುವಂತಿದೆ. "ಸಾಮಾನ್ಯವಾಗಿ ಕತೆ ಇಲ್ಲಿಗೆ ಮುಗಿಯಬೇಕು. ಆದರೆ ವೆಂಕಟಿಗನ ಚರಿತ್ರೆ ಈ ವರ್ಷ ಮುಂದುವರೆಯಿತು" ಮತ್ತು "ಅಜ್ಜಿ ನೀನು ಹೇಳಿದ್ದು ಚರಿತ್ರೆಯಂತಿಲ್ಲ, ಒಂದು ಕತೆಯಂತಿದೆಯಲ್ಲ" ಎನ್ನುವ ಮಾತುಗಳಲ್ಲಿ ಅಡಕವಾಗಿರುವುದು ಈ ದೃಷ್ಟಿಕೋನವೇ. ಆಂಗ್ಲ ಶಕುಂತಲೆಯಲ್ಲಿ ಬರುವ ಈ ಮಾತು, "ಶಕುಂತಲೆ ಕತೆಯಲ್ಲಿ ದುಷ್ಯಂತನ ಅಪ್ಪ ಇರಲಿಲ್ಲ. ದುರ್ದೈವ, ದುಷ್ಯಂತ ಮಾತ್ರ ಇದ್ದು ಅವಳ ಮಾತನ್ನು ಒಪ್ಪಲಿಲ್ಲ. ಜೆನ್ನಿಯ ಸುದೈವ. ಇಲ್ಲಿ ದುಷ್ಯಂತ ಇರಲಿಲ್ಲ. ಅವನ ಅಪ್ಪ ಇದ್ದ, ಮಗು ತನ್ನ ಮೊಮ್ಮಗು ಎಂದು ಒಪ್ಪಿಕೊಂಡ" ಮತ್ತು ಕುಚೇಲನ ಮರಿಮಗದಂತಹ ಕತೆಗಳು, ಒಂದೇ ವಸ್ತುವಿಗೆ ಏಕಕಾಲದಲ್ಲಿ ಚರಿತ್ರೆ, ಕತೆ ಮತ್ತು ಪುರಾಣಗಳ ಸಾಧ್ಯತೆಯಿರುವುದನ್ನು ತೋರಿಸುತ್ತದೆ.</span></div><div><span class="fullpost"><br /><div style="text-align: center;"><span class="Apple-style-span" style="font-weight: bold; ">******</span></div><div style="text-align: center;"><b><br /></b></div><a onblur="try {parent.deselectBloggerImageGracefully();} catch(e) {}" href="http://1.bp.blogspot.com/_D9K0HARbkSE/SuVv-DRxJ7I/AAAAAAAAAIQ/TlQvh6PyZ38/s1600-h/Odi+hoda+mutti+banda0001.jpg"><img style="display:block; margin:0px auto 10px; text-align:center;cursor:pointer; cursor:hand;width: 320px; height: 162px;" src="http://1.bp.blogspot.com/_D9K0HARbkSE/SuVv-DRxJ7I/AAAAAAAAAIQ/TlQvh6PyZ38/s320/Odi+hoda+mutti+banda0001.jpg" border="0" alt="" id="BLOGGER_PHOTO_ID_5396842840295810994" /></a>ಮಾಸ್ತಿಯವರ ತಾತ್ವಿಕತೆಯ ಬಗ್ಗೆಯೇ ಹೇಳುತ್ತಾ ಕತೆಗಾರರಾಗಿ ಅವರಿಗಿರುವ ವಿಶಿಷ್ಟತೆಯನ್ನು ನಾವು ಮರೆಯಬಾರದಷ್ಟೇ. ಚಿತ್ತಾಲರ ಮುನ್ನುಡಿ ಈ ವಿಶಿಷ್ಟತೆಯನ್ನು ಸವಿವರವಾಗಿ ಚರ್ಚಿಸುತ್ತದೆ. ಒಬ್ಬ ಮನುಷ್ಯನ ಕತೆಯನ್ನು ಮನುಷ್ಯನಾದ ನಾನು ಇನ್ನೊಬ್ಬ ಮನುಷ್ಯನಿಗೆ ಹೇಳುತ್ತಿದ್ದೇನೆ, ಹೇಳ ಹೊರಟಿದ್ದೇನೆ ಎಂಬುದು ಮಾಸ್ತಿಯವರ ಕತೆಗಳ ಹಿಂದಿರುವ ಮುಖ್ಯ ತುಡಿತ ಎಂದು ಚಿತ್ತಾಲರು ಹೇಳಿರುವುದು ಮಾಸ್ತಿಯವರ ಕತೆಗಾರನ ಕಲ್ಪನೆಗೆ ಗೌರವ-ಆದರ ತೋರಿಸಿರುವ ರೀತಿ. ಇಷ್ಟು ಮಾತ್ರವಲ್ಲ ಮಾಸ್ತಿ ಕತೆಗಳು ಇನ್ನೊಬ್ಬರ ಕತೆಗಳನ್ನು ನಮ್ಮ ಕತೆಗಳಂತೆಯೇ ಹೇಗೆ ನೋಡಬೇಕು, ಹೇಗೆ ಒಳಗೆ ಮಾಡಿಕೊಳ್ಳಬೇಕು, ಹಾಗೆ ಒಳಗೆ ಮಾಡಿಕೊಂಡಿದ್ದನ್ನು ನಮ್ಮ ಬದುಕಿಗೆ ಹೇಗೆ ಪ್ರಸ್ತುತಗೊಳಿಸಿಕೊಳ್ಳಬೇಕು ಎಂದು ಕೂಡ ಪಿಸುಮಾತಿನಲ್ಲೂ, ಪ್ರಿಯವಾದ ಮಾತುಗಳಲ್ಲೂ ಹೇಳಿಕೊಡುತ್ತವೆ. ಹೀಗೆ ಹೇಳಿಕೊಡುತ್ತಾ ಕತೆಗೂ ಮನುಷ್ಯನಿಗೂ ಇರುವ ಇರಬೇಕಾದ ಸಂಬಂಧದ ಸರಿಯಾದ ಸ್ವರೂಪವನ್ನು ನೆನಪಿಸುತ್ತದೆ ಕೂಡ.<br /><br />ಸಣ್ಣ ಕಥೆಯ ಪ್ರಕಾರವನ್ನು ಮೈನರ್ ಪ್ರತಿಭೆಗಳಿಗೆ ಮಾತ್ರ ಸಲ್ಲುವ ಪ್ರಕಾರವೆಂದು ಜೀವನದ ವೈವಿಧ್ಯವನ್ನು ವಿಶಾಲವಾದ ವಿನ್ಯಾಸವನ್ನು ಕಾದಂಬರಿ ಪ್ರಕಾರದಲ್ಲಿ ಹಿಡಿದಿಡಲು ಸಾಧ್ಯವಾಗುವಂತೆ ಸಣ್ಣ ಕಥೆಯಲ್ಲಿ ಸಾಧ್ಯವಾಗುವುದಿಲ್ಲ ಎಂಬ ಸಾಹಿತ್ಯ ಚರಿತ್ರಕಾರರ ಮಾತುಗಳನ್ನು ಮಾಸ್ತಿ ಕತೆಗಳು ಸುಳ್ಳು ಮಾಡಿವೆ. ಜೀವನದ ಒಟ್ಟು ಅರ್ಥ ಮತ್ತು ವಿನ್ಯಾಸವನ್ನು ಪ್ರಕಟಪಡಿಸುವಂತಹ ಕಥಾ ಸಂದರ್ಭ - ಸನ್ನಿವೇಶಗಳನ್ನು (ಸಾವಿನ ಸಂದರ್ಭ, ಅಧಿಕಾರ-ಹಣ, ಸ್ವಜನ ಮೋಹ ಮತ್ತು ಜೀವನ ಸಾರ್ಥಕತೆಗಿರುವ ಸಂಬಂಧ) ಶೋಧಿಸಲು ಅನುಕೂಲವಾಗುವಂತಹ ಕಥಾವಸ್ತು - ಪಾತ್ರ ಸೃಷ್ಟಿ ಬಗ್ಗೆ ಮಾತ್ರ ಗಮನ ಕೊಟ್ಟಿದ್ದರಲ್ಲಿ ಮಾಸ್ತಿ ಕತೆಗಳ ವಿಶಿಷ್ಟತೆಯಿಲ್ಲ. ಇಂತಹ ಸಂದರ್ಭಗಳನ್ನು ನೋಡುವ ಅವರ ತಾತ್ವಿಕತೆಯಲ್ಲೆ ಅವರ ಕತೆಗಾರಿಕೆಯ ವಿಶಿಷ್ಟತೆಯೂ ಇರುವುದು. ಶ್ರೇಷ್ಠ ಲೇಖಕರಲ್ಲಾಗುವಂತೆ ಮಾಸ್ತಿಯವರಲ್ಲೂ ಅವರ ಕಲೆಗಾರಿಕೆ ಬೇರೆಯಲ್ಲ, ತಾತ್ವಿಕತೆ ಬೇರೆಯಲ್ಲ.<br /><br />ಮಾಸ್ತಿಯವರ ಬಹುಪಾಲು ಉತ್ತಮ ಕತೆಗಳನ್ನೊಳಗೊಂಡ ಈ ಸಂಗ್ರಹದ ಪ್ರಕಟಣೆಯ ಮೂಲಕ ಮತ್ತೆ ಮಾಸ್ತಿ ಸಾಹಿತ್ಯ ಕಲ್ಪನೆಗಳ ಬಗ್ಗೆ ಚರ್ಚೆಗೆ ಒಂದು ಅವಕಾಶ ಕಲ್ಪಿಸಿರುವ ಪ್ರಿಸಂ ಸಂಸ್ಥೆಯವರು ಕನ್ನಡಿಗರೆಲ್ಲರ ಅಭಿನಂದನೆಗೆ ಅರ್ಹರಾಗಿದ್ದಾರೆ.<br /><b>(ಪ್ರಜಾವಾಣಿ ಸಾಪ್ತಾಹಿಕ ಪುರವಣಿ, ೧೯೯೯)<br /></b><b>(ಮನೋಧರ್ಮ ಕೃತಿಯಿಂದ) </b></span></div>ಕೆ. ಸತ್ಯನಾರಾಯಣhttp://www.blogger.com/profile/15167030166766836381noreply@blogger.com0tag:blogger.com,1999:blog-1964049159346480323.post-47625381905474000742009-09-29T06:23:00.001-07:002009-09-29T08:21:12.164-07:00ಗಾಂಧಿ ಮುನ್ನೋಟದಲ್ಲಿ ನವ್ಯೋತ್ತರ<a onblur="try {parent.deselectBloggerImageGracefully();} catch(e) {}" href="http://2.bp.blogspot.com/_D9K0HARbkSE/SsIjbYcoc4I/AAAAAAAAAHw/HBivKJmcsEM/s1600-h/sanchaya-gandhi0001.jpg"><img style="float:left; margin:0 10px 10px 0;cursor:pointer; cursor:hand;width: 206px; height: 320px;" src="http://2.bp.blogspot.com/_D9K0HARbkSE/SsIjbYcoc4I/AAAAAAAAAHw/HBivKJmcsEM/s320/sanchaya-gandhi0001.jpg" border="0" alt="" id="BLOGGER_PHOTO_ID_5386907057614517122" /></a>ನಾವೆಲ್ಲರೂ ಮನುಷ್ಯರಾಗಿಯೂ, ಸಮುದಾಯಗಳಾಗಿಯೂ ನಿರ್ದಿಷ್ಟ ಸ್ಥಳವೊಂದರಲ್ಲಿ ವಾಸಿಸುತ್ತೇವೆ. ಈ ಸ್ಥಳಕ್ಕೆ (Place)ಮಾನಸಿಕ ಮತ್ತು ಭೌತಿಕ ಆಯಾಮಗಳಿರುತ್ತವೆ. ನೆರೆಹೊರೆ, ಬಂಧು-ಬಳಗ, ವೃತ್ತಿ-ವ್ಯಾಪಾರ, ಸಾಂಸ್ಕೃತಿಕ-ದೈವಿಕ ಚಟುವಟಿಕೆಗಳು, ಸ್ಮೃತಿ, ಸ್ವಾತಂತ್ರ್ಯ ಎಲ್ಲವೂ ಸೇರಿಕೊಂಡು ಈ ‘ಸ್ಥಳ’ ನಿರ್ಮಾಣವಾಗಿರುತ್ತದೆ. ನಮ್ಮಲ್ಲಿರುವ ‘ಸ್ಥಳವಂದಿಗ’ರೆಂಬ ಕಲ್ಪನೆಯ ಹಿಂದಿರುವುದು ಈ ಮನೋಭಾವವೇ. ಈ ‘ಸ್ಥಳ’ವೆಂಬ ಕಲ್ಪನೆ, ಭಾವನೆ ಹುಟ್ಟಲು ಶತಮಾನಗಳೇ ಬೇಕಾಗುತ್ತದೆ. ಒಮ್ಮೆಮ್ಮೆ ಹುಟ್ಟಲೂ ಹೋಗದೆ ಹೋಗಬಹುದು. ದಲಿತರ ಉದಾಹರಣೆಯನ್ನೇ ತೆಗೆದುಕೊಂಡರೆ ನೂರಾರು ವರ್ಷಗಳಿಂದ ಸಮುದಾಯವಾಗಿ ಒಂದೇ ಸ್ಥಳದಲ್ಲಿದ್ದರೂ ಗ್ರಾಮೀಣ ಚೌಕಟ್ಟಿನಲ್ಲಿ ಸಿಗದೇ ಹೋದ ಸ್ವಾತಂತ್ರ್ಯ-ಸಮಾನತೆಯಿಂದಾಗಿ ಅವರಿಗೆ ಸಾಂಪ್ರದಾಯಿಕವಾಗಿ ಸಿಕ್ಕಿದ್ದ ಸ್ಥಳದ ಬಗ್ಗೆ ಒಲವಿಲ್ಲ. ಹೊಸ ಹೊಸ ಸ್ಥಳಗಳನ್ನು ಮಾನಸಿಕವಾಗಿ, ಭೌತಿಕವಾಗಿ ಸದಾ ಹುಡುಕಲು, ಸ್ಥಾಪಿಸಲು ದಲಿತವರ್ಗದಿಂದ ಪ್ರಯತ್ನ ಮುಂದುವರೆದೇ ಇದೆ. ಯಹೂದಿಗಳು ತಮ್ಮದೆಂದು ಭಾವಿಸಿದ್ದ ‘ಸ್ಥಳ’ವನ್ನು ಮತ್ತೆ ಪಡೆಯಲು ನಡೆಸಿದ-ನಡೆಸುತ್ತಿರುವ ಪ್ರಯತ್ನ, ಯುದ್ಧ, ರಾಜಕೀಯ ತಂತ್ರಗಾರಿಕೆ ಎಲ್ಲರಿಗೂ ಗೊತ್ತೇ ಇದೆ. ಆದರೆ ಇದೇ ಯಹೂದಿಗಳು ಪ್ಯಾಲೇಸ್ತೀನಿಯರ ‘ಸ್ಥಳ’ದ ಆಕಾಂಕ್ಷೆಗಳನ್ನು ಗುರುತಿಸಲಾರರು, ಗೌರವಿಸಲಾರರು.<br /><br />ಇಪ್ಪತ್ತು-ಇಪ್ಪತ್ತೊಂದನೆ ಶತಮಾನದ ಬಂಡವಾಳಶಾಹಿ, ಜಾಗತೀಕರಣ, ನಗರೀಕರಣದ ವಿದ್ಯಮಾನಗಳು ಈ ‘ಸ್ಥಳ’ ಎಂಬ ಕಲ್ಪನೆಯನ್ನು ಗೌರವಿಸುವುದಿಲ್ಲ. ಲೆಕ್ಕಕ್ಕೆ ಕೂಡ ತೆಗೆದುಕೊಳ್ಳುವುದಿಲ್ಲ. ನಮ್ಮ ಕಾಲದಲ್ಲಿ ಬೃಹತ್ ಪ್ರಮಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ Space - ಪ್ರದೇಶ, ಜಾಗ ಎಂಬ ಅರ್ಥದಲ್ಲಿ ಗೆ ಆಕಾರವಿಲ್ಲ, ಆಕೃತಿಯಿಲ್ಲ, ಸಂಸ್ಕೃತಿ, ಸ್ಮೃತಿಗಳ ವಾಸನೆಯಿಲ್ಲ. ಈ ಬೆಳವಣಿಗೆ ಮನುಷ್ಯನ ಸಮುದಾಯ ಪ್ರಜ್ಞೆಯನ್ನು ಗೌರವಿಸುವುದಿಲ್ಲ.<br /><br />ಈ ಹಿನ್ನೆಲೆಯಲ್ಲಿ ನಾನು ಈ ಲೇಖನದಲ್ಲಿ ಎರಡು ವಿದ್ಯಮಾನಗಳನ್ನು ಪರಿಶೀಲಿಸಲು ಪ್ರಯತ್ನಿಸಿದ್ದೇನೆ.<span class="fullpost"><br /><br />ಮೊದಲನೆಯದು - ನಮ್ಮ ಕಾಲದಲ್ಲಿ ಬೃಹತ್ ಪ್ರಮಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ Spaceನ ಸ್ವರೂಪ ಎಂತಹುದು ಮತ್ತು ಇದರ ಹಿಂದಿರುವ ಸಾಂಸ್ಕೃತಿಕ - ರಾಜಕೀಯ ಲೆಕ್ಕಾಚಾರ ಮತ್ತು ಕನಸುಹೀನತೆ ಎಂತಹುದು.<br /><br />ಗಾಂಧಿ ದೇಶದ ವಿಭಜನೆಯನ್ನು ವಿರೋಧಿಸಿದಾಗ ಹೇಗಾದರೂ ಸರಿ ಬೇರೆ ಬೇರೆ ಧರ್ಮಗಳಿಗೆ, ಜಾತಿಗಳಿಗೆ, ನಂಬಿಕೆಗಳಿಗೆ ಸೇರಿದವರು ಹೊಂದಿಕೊಂಡು ಬದುಕಲೇಬೇಕು ಎಂದೆಲ್ಲಾ ಹೆಣಗಾಡಿದಾಗ, ರಾಜಕೀಯ ನಿರ್ಧಾರಗಳಿಂದ ನಿರ್ಮಾಣಗೊಳ್ಳುವ ದೇಶ, ರಾಷ್ಟ್ರ ಇಂತಹ ಕಲ್ಪನೆಗಳಿಗೆ, ಮನುಷ್ಯನ ಮೂಲಭೂತ ಅಗತ್ಯಗಳಲ್ಲೊಂದಾದ ಸ್ಥಳ -Placeನ ಮಹತ್ವವನ್ನು ಮನವರಿಕೆ ಮಾಡಿಕೊಳ್ಳಲು ಪ್ರಯತ್ನಪಟ್ಟಾಗ - ಈ ಎಲ್ಲ ಹೆಣಗಾಟಾ ಪ್ರಯತ್ನಗಳ ಹಿಂದೆ ಇದ್ದ ನಾಗರಿಕತೆಯ ಕಲ್ಪನೆ ಎಷ್ಟು ಕ್ರಾಂತಿಕಾರಿಯಾದದ್ದು, ನವೀನವಾದದ್ದು ಎಂಬುದರ ವಿಶ್ಲೇಷಣೆ ಗಾಂಧಿಯವರ ಈ ಹೆಣಗಾಟಕ್ಕೆ ‘ರಾಷ್ಟ್ರ’ದ ಕಲ್ಪನೆಗೆ ಗಂಟುಬಿದ್ದಿದ್ದ ಕಾಂಗ್ರೆಸ್, ಹಿಂದೂ ಮಹಾಸಭಾವಾದಿಗಳು ಮತ್ತು ಆಧುನಿಕವಾದಿಗಳಿಂದ ಏಕೆ ಬೆಂಬಲ-ಒತ್ತಾಸೆ ಸಿಗಲಿಲ್ಲ ಎಂಬುದರ ಪರಿಶೀಲನೆ ಕೂಡ ಈ ವಿಶ್ಲೇಷಣೆಯ ಒಂದು ಭಾಗ.<br /><br />ಈ ಎರಡು ವಿದ್ಯಮಾನಗಳನ್ನು ಪರಿಶೀಲಿಸಲು ನಾನು ಈ ಕೆಳಗೆ ಸೂಚಿಸಿರುವ ಬರಹಗಳಲ್ಲಿನ ಒಳನೋಟಗಳನ್ನು ಬಳಸಿಕೊಂಡಿದ್ದೇನೆ.<br /><br />Julian Murphet - ಇವರ Post Modernism and Space-ಲೇಖನ<br />Lloyd Rudolph ಮತ್ತು Susanne Rudolph ಇವರ Post Modern Gandhi ಎಂಬ ಕೃತಿಯThe Road not Taken - The Modernist Roots of Partition ಎರಡನೆಯ ಅಧ್ಯಾಯ.<br /><br /><div style="text-align: center;"><span class="Apple-style-span" style="font-weight: bold; ">೨</span></div><br />ಒಂದು, ಎರಡು ತಲೆಮಾರಿನಷ್ಟು ಕಾಲಚಕ್ರದಲ್ಲಿ ಹಿಂದಕ್ಕೆ ಹೋಗಿ ನಾವು ನಮ್ಮ ಮತ್ತು ನಮ್ಮ ಕುಟುಂಬಗಳ ಹಿನ್ನೆಲೆ ಬಗ್ಗೆ ಯೋಚಿಸಿದರೆ, ಒಂದಂಶ ತಿಳಿಯುತ್ತದೆ. ನಮ್ಮ ವಂಶಜರೆಲ್ಲರೂ ಬಹುಕಾಲ ಒಂದೇ ಸ್ಥಳದಲ್ಲಿ ವಾಸಿಸಿದವರಾಗಿರುತ್ತಾರೆ. ವಿದ್ಯೆ, ಉದ್ಯೋಗ, ಸಾಮಾಜಿಕ ಆಕಾಂಕ್ಷೆಗಳಿಂದಾಗಿ ನಾವೆಲ್ಲರೂ ಈ ‘ಸ್ಥಳ’ಗಳಿಂದ ಪಲ್ಲಟಗೊಳ್ಳುತ್ತೇವೆ. ಬಹುಪಾಲು ಸ್ವ ಇಚ್ಛೆಯಿಂದಲೇ ನಾವು ಬಯಸಿದ ವಿದ್ಯೆ, ಉದ್ಯೋಗ, ಸ್ವಾತಂತ್ರ್ಯ, ಎಲ್ಲವೂ ನಮಗೆ ಸಿಗುತ್ತದೆ. ಸ್ವಂತ ‘ಸ್ಥಳ’ವೆಂಬುದು ಮಾತ್ರ ಸಿಗುವುದಿಲ್ಲ.<br /><br />ನಾವು ಕೊಳ್ಳುವ ಸೈಟು, ಮನೆ, ಸರ್ಕಾರಗಳು ನಮಗಾಗಿ ನಿರ್ಮಿಸುವ ಫ್ಲೈಓವರ್, ಟೌನ್ಶಿಪ್, ನೈಸ್ ರಸ್ತೆಗಳು, ಮಾಲ್ಗಳು ಇವೆಲ್ಲ Space ಆಗುತ್ತದೆಯೇ ಹೊರತು Place ಆಗಲಾರದು. ಈ ರೀತಿಯ Space ನಿರ್ಮಾಣದ ಹಿಂದೆ ಜನರು, ಸಮುದಾಯಗಳು ವಾಸಿಸಲು ಬೇಕಾಗುವಂತಹ ಆತ್ಮೀಯ, ಖಾಸಗಿ ಸ್ಥಳಗಳನ್ನು ನಿರ್ಮಿಸಬೇಕೆಂಬ ಆಸೆಗಿಂತ ಹೆಚ್ಚಾಗಿ ಹೆಚ್ಚು ಹೆಚ್ಚು ಬಂಡವಾಳದ ಮೊತ್ತವನ್ನು ಹೊಸ ಹೊಸ ತಾಂತ್ರಿಕತೆಯನ್ನು ನಗರ ಪ್ರದೇಶಗಳಿಗೆ ಆಹ್ವಾನಿಸುವ ತಂತ್ರವಿರುತ್ತದೆ. ಹೀಗಾಗಿ ನಗರ ಪ್ರದೇಶಗಳಲ್ಲಿ Space ನ ನಿರ್ಮಾಣವಾಗುವ ಸಂದರ್ಭದಲ್ಲಿ ಸರ್ಕಾರದ ಹಣದ ಹೂಡಿಕೆಯು ಇರುವುದಿಲ್ಲ. ಹೋಗಲೆಂದರೆ ನಮ್ಮ ಸ್ವಂತ ಹಣದ ಹೂಡಿಕೆಯೂ ಇರುವುದಿಲ್ಲ. ಕೈಗಾರಿಕೋದ್ಯಮಿಗಳ ಬೃಹತ್ ಹಣದ ಹೂಡಿಕೆ ಇರುತ್ತದೆ. ಇವರ ಗಮನ ಹೆಚ್ಚು ಲಾಭ ತರುವ ಬೃಹತ್ Spaceಗಳಾದ ಮಾಲ್, ಫ್ಲೈಓವರ್, ಟೌನ್ಶಿಪ್, ಕಾರಿಡಾರ್ ರಸ್ತೆಗಳ ಕಡೆಗಳಿಗಿರುತ್ತದೆ. ಸ್ಥಳ ನಿರ್ಮಾಣದ ಕಡೆಗಲ್ಲ.<br /><br />ಸ್ಥಳ ನಿರ್ಮಾಣ, ಸ್ಥಳ ಪುರಾಣಗಳ ಹಿಂದೆ ನಮ್ಮ ನಮ್ಮ ವೈಯಕ್ತಿಕ ಸಾಮುದಾಯಿಕ ಆಕಾಂಕ್ಷೆಗಳಿಗೆ, ಆಶಯಗಳಿಗೆ ಸಾಮಾಜಿಕ ಗುರಿಗಳಿಗೆ ತಳುಕು ಹಾಕಿಕೊಳ್ಳುವ ಪ್ರಯತ್ನವಿರುತ್ತದೆ. Spaceನ ನಿರ್ಮಾಣದಲ್ಲಿ ಈ ಪ್ರಯತ್ನವಿರುವುದಿಲ್ಲ. ವೈಯಕ್ತಿಕವಲ್ಲದ, ಸಾಮುದಾಯಿಕವಲ್ಲದ Space ನಿರ್ಮಾಣ, ವೈಯಕ್ತಿಕವಾದ ಸಾಮುದಾಯಿಕವಾದ ಸ್ಥಳವನ್ನು ಕಬಳಿಸಲು ಪ್ರಯತ್ನಿಸುತ್ತದೆ. ಈ ಕಬಳಿಕೆಯ ಪ್ರಯತ್ನ ಕೇವಲ ಭೂ ಆಕ್ರಮಣದ ಸ್ವರೂಪದ್ದಲ್ಲ. ಸ್ಥಳವಂದಿಗರಿಗೆ ಸೇರಿದ ಕಥನಗಳು, ನಿರೂಪಣೆಗಳು, ಕಾದಂಬರಿಗಳು, ಐತಿಹ್ಯ ಎಲ್ಲವನ್ನೂ ಹಿಂಬದಿಗೆ, ಮರೆವಿಗೆ ಸರಿಸುತ್ತದೆ. ಮನುಷ್ಯರು, ಸಮುದಾಯದ ತಮ್ಮ ಕಥನ ಸ್ವಾತಂತ್ರ್ಯವನ್ನು, ನಿರೂಪಣಾ ಕೌಶಲವನ್ನು ಕಥಾಸಮೃದ್ಧಿಯನ್ನು ಕಳೆದುಕೊಂಡು ನಿರಾಕಾರ ಜೀವಿಗಳಾಗಿ ಬದುಕಬೇಕಾಗುತ್ತದೆ. ನಾವು ದಿನನಿತ್ಯವೂ ವಾಸಿಸುವ ಬದುಕುವ ಸ್ಥಳದೊಂದಿಗೆ ನಮ್ಮ ಸಂಬಂಧ ಆತ್ಮೀಯವಾಗುವ ಬದಲು ಅಮೂರ್ತವಾಗುತ್ತದೆ.<br /><br />ಸ್ವಾತಂತ್ರ್ಯ ಬಂದ ಹೊಸದರಲ್ಲಿ ಜರುಗಿದ ನಗರೀಕರಣ ಹಂತಹಂತದಲ್ಲಿ ಕ್ರಮೇಣವಾಗಿ ಜರುಗುವ ಸ್ವರೂಪದ್ದಾಗಿತ್ತು. ಹೀಗಾಗಿ ನಗರೀಕರಣದಿಂದ ಉಂಟಾಗುವ ಅನಾಥಪ್ರಜ್ಞೆಯ ಬಗ್ಗೆ ಮಾತ್ರ ನಾವು ಮಾತನಾಡುತ್ತಿದ್ದೆವು. ಕಳೆದೆರಡು ದಶಕಗಳ ಬೆಳವಣಿಗೆಗಳು, ಜಾಗತೀಕರಣ, ಬಂಡವಾಳಶಾಹಿಯ ದಿಡೀರ್ ವಿಸ್ತಾರ Space ನಿರ್ಮಾಣದ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ. ವಸತಿಹೀನರು, ಭೂಹೀನರನ್ನು ಕುರಿತು ನಾವು ಮಾತನಾಡುವಾಗಲೆಲ್ಲ ವಿಶೇಷ ಆರ್ಥಿಕವಲಯಗಳ ನಿರ್ಮಾಣದಿಂದಾಗಿ ಕೈಗಾ, ನರ್ಮದಾಗಳಿಂದಾಗಿ ನೆಲೆ ಕಳೆದುಕೊಂಡವರ ಬಗ್ಗೆ ಮಾತ್ರ ಮಾತನಾಡುತ್ತೇವೆ. ನಗರಗಳಲ್ಲಿ, ಒಳ್ಳೊಳ್ಳೆಯ ಫ್ಲಾಟ್ಗಳಲ್ಲಿ ವಾಸಿಸುತ್ತ ಫ್ಲೈಓವರ್ಗಳ ಮೇಲೆ ವಾಹನಗಳನ್ನು ಓಡಿಸುತ್ತ, ಮಾಲ್ಗಳಲ್ಲಿ ಸಂಗೀತವನ್ನು ಕೇಳಿಸಿಕೊಳ್ಳುತ್ತ, ದೊಡ್ಡ ದೊಡ್ಡ ಸ್ಟೇಡಿಯಂಗಳಲ್ಲಿ ಪಂದ್ಯಾವಳಿಗಳನ್ನು ನೋಡುತ್ತ ನಾವು ಕೂಡ ಸ್ಥಳಹೀನರಾಗುತ್ತಿರುತ್ತೇವೆ. ನೆಲೆ ಕಳೆದುಕೊಳ್ಳುತ್ತಿರುತ್ತೇವೆ. ಇದು ನಮ್ಮ ಅರಿವಿಗೆ ಬರಲಾರದು. ಸ್ವಂತವಾಗಿ ಅನುಭವಿಸುತ್ತಿರುವುದೇ ನಮ್ಮ ಪ್ರಜ್ಞೆಗೆ ತಟ್ಟದೇ ಹೋದಾಗ ಇನ್ನು ಚಿಂತನೆಯ ರೂಪದಲ್ಲಿ, ಅಮೂರ್ತ ಗ್ರಹಿಕೆಯ ರೂಪದಲ್ಲಿ ನಮಗೆ ಈ ವಿದ್ಯಮಾನವೆಲ್ಲ ಗ್ರಹಿಕೆಗೆ ಬರಬಹುದೆಂದು ಊಹಿಸುವುದು ಕೂಡ ತಪ್ಪಾಗುತ್ತದೆ.<br /><br /><div style="text-align: center;"><span class="Apple-style-span" style="font-weight: bold; ">೩</span></div><br />ನವ್ಯೋತ್ತರ ಕಾಲಮಾನದಲ್ಲಿ Space,Place ಪರಿಕಲ್ಪನೆಗಳು ಚಾಲ್ತಿಗೆ ಬರುತ್ತಿರುವ ರೀತಿಯನ್ನು ಈ ಬೆಳವಣಿಗೆಯ ಹಿಂದಿರುವ ದೃಷ್ಟಿಕೋನವನ್ನು ಸ್ಥೂಲವಾಗಿ ಗಮನಿಸಿದ ಮೇಲೆ ನಾವು ಎದುರಿಸಬೇಕಾದ ಪ್ರಶ್ನೆಯೆಂದರೆ ದೇಶಕ್ಕೆ ಸ್ವಾತಂತ್ರ್ಯ ಬರದೇ ಹೋದರೂ ಪರವಾಗಿಲ್ಲ, ತಡವಾಗಿ ಬಂದರೂ ಚಿಂತೆಯಿಲ್ಲ. ದೇಶವು ಒಂದಾಗಿರುವುದರ ಜೊತೆಗೆ ಹೀಗೆ ಒಂದಾಗಿರುವ ದೇಶದಲ್ಲಿ ಬಹುಸಂಖ್ಯಾತರಿಗಿಂತ ಅಲ್ಪಸಂಖ್ಯಾತರುಗಳಿಗೆ ಹೆಚ್ಚು ಹಕ್ಕು, ಅವಕಾಶಗಳಿರಬೇಕೆಂದು ವಾದಿಸುತ್ತಾ ಬಂದ ಗಾಂಧಿಯ ಗ್ರಹಿಕೆಗಳು ನವ್ಯೋತ್ತರ ಚಿಂತನಾ ಕ್ರಮಕ್ಕೆ ಎಷ್ಟು ಮತ್ತು ಹೇಗೆ ಹತ್ತಿರವಾಗಿದ್ದವು ಎಂಬುದು.<br /><br />ಎಲ್ಲ ಸ್ವಾತಂತ್ರ್ಯ ಹೋರಾಟಗಾರರಂತೆ ಗಾಂಧಿಗೂ ಭಾರತವು ಒಂದು ದೇಶವಾಗಬೇಕಾಗಿತ್ತು, ರಾಷ್ಟ್ರವಾಗಬೇಕಾಗಿತ್ತು. ಆದರೆ, ಈ ದೇಶ ಮತ್ತು ರಾಷ್ಟ್ರವೆಂಬುದು ಒಂದು ರಾಜಕೀಯ ಅಥವಾ ಭೌಗೋಳಿಕ ಕಲ್ಪನೆಯಾಗುವ ಬದಲಿಗೆ, ದೇಶ ಅಥವಾ ರಾಷ್ಟ್ರದೊಳಗೆ ಇರುವ ಎಲ್ಲ ಸಮುದಾಯಗಳ, ಆ ಸಮುದಾಯಗಳ ಜೀವಂತಿಕೆಯ ಒಂದು ಮೊತ್ತವಾಗಬೇಕಾಗಿತ್ತು. ಸಮುದಾಯಗಳು ವಾಸಿಸುವುದು, ಜೀವನ ಸಾಗಿಸುವುದು ನೆನಪು - ಕ್ರಿಯಾಶೀಲತೆ, ಕನಸುಗಾರಿಕೆ ಎಲ್ಲದಕ್ಕೂ ಇಂಬುಗೊಡುವ Placeನಲ್ಲಿ, ಸ್ಥಳಗಳಲ್ಲಿ - ನಿರಾಕಾರವಾದ ಬೃಹತ್ Spaceನಲ್ಲಲ್ಲ. ದೇಶವೆಂಬುದು ಸಮುದಾಯಗಳ ಮೊತ್ತವೆಂಬ ಗಾಂಧಿಯ ಕಲ್ಪನೆಯಲ್ಲಿ ಸಮುದಾಯಗಳ ನಡುವೆ ನಿರಂತರ ಕೊಡುಕೊಳ್ಳುವಿಕೆ ಸಂವಾದವೆಲ್ಲ ಇರುತ್ತದೆ. ಈ ಕೊಡುಕೊಳ್ಳುವಿಕೆ ಮತ್ತು ಸಂವಾದಗಳು ಸಮುದಾಯಗಳ ನಡುವೆ ನಿರಂತರವಾಗಿ ನಡೆಯುತ್ತಿರಬೇಕಾದರೆ ಸರ್ಕಾರವು ತುಂಬಾ ಬಲಿಷ್ಠವಾಗಿರಬೇಕಾಗಿಲ್ಲ. ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವಷ್ಟು ಶಕ್ತಿಶಾಲಿಯಾಗಿದ್ದರೆ ಸಾಕು. ಈ ಕಾರಣಕ್ಕಾಗಿ ಗಾಂಧಿ ಪೂರ್ಣ ಸ್ವಾತಂತ್ರ್ಯಕ್ಕಿಂತಲೂ ಹೆಚ್ಚಾಗಿ Dominion Statusನ್ನು ಇಷ್ಟಪಟ್ಟರು. ನೆಹರು, ಕಾಂಗ್ರೆಸ್, ಹಿಂದೂ ಮಹಾಸಭಾವಾದಿಗಳು, ಆಧುನಿಕವಾದಿಗಳು - ಎಲ್ಲರೂ ಬಯಸುತ್ತಿದ್ದುದು ಬಲಿಷ್ಠ ರಾಷ್ಟ್ರವನ್ನು. ಸಮುದಾಯಗಳ ನಡುವೆ ಕೊಡುಕೊಳ್ಳುವಿಕೆಯೇ ಇಲ್ಲದೆ ಬಲಿಷ್ಠ ಸರ್ಕಾರವೇ ಎಲ್ಲವನ್ನೂ ನಿಯಂತ್ರಿಸುವ, ನಿರ್ಧರಿಸುವ ಸನ್ನಿವೇಶವನ್ನು ಮುಸ್ಲಿಮರಿಗೆ, ಪಾಕಿಸ್ಥಾನದ ಪರವಾಗಿ ವಾದಿಸುತ್ತಿದ್ದವರಿಗೆ ಇಂತಹದೊಂದು ಸನ್ನಿವೇಶದ ಬಗ್ಗೆ ಭಯವಿತ್ತು, ಆತಂಕವಿತ್ತು. ಇದನ್ನರಿತಿದ್ದ ಗಾಂಧಿ ಪೂರ್ಣ ಸ್ವಾತಂತ್ರ್ಯದ ಬದಲಾಗಿ Dominion Status ಒಪ್ಪಿಕೊಂಡು ನಿರಂತರ ಕೊಡುಕೊಳ್ಳುವಿಕೆ, ಸಂವಾದದ ಮೂಲಕ ಎರಡೂ ಸಮುದಾಯಗಳು ಒಟ್ಟಾಗಿ ಬದುಕುತ್ತಾ ವಿಕಾಸಗೊಳ್ಳುವುದಾದರೆ, ಇಂತಹದೊಂದು ಸ್ಥಿತಿ ಪೂರ್ಣ ಸ್ವಾತಂತ್ರ್ಯ ಬಂದು ಸಮುದಾಯಗಳು ಮಾನಸಿಕವಾಗಿ ಸದಾ ದೂರವಿದ್ದು, ಸದಾ ಕಿತ್ತಾಡುವ ಸನ್ನಿವೇಶಕ್ಕಿಂತ ಉತ್ತಮ ಎಂದು ಭಾವಿಸಿದ್ದರು.<br /><br />ಇದು ಗಾಂಧಿಯ ಹಗಲುಗನಸಾಗಿರಲಿಲ್ಲ, ಆದರ್ಶ ಕಲ್ಪನೆಯಾಗಿರಲಿಲ್ಲ. ಒಂದು ಹಂತದಲ್ಲಿ ಕಾಂಗ್ರೆಸ್ ಕಾರ್ಯಕ್ರಮ, ನೀತಿಯಾಗಿಯೇ ಇತ್ತು ಎಂಬುದನ್ನು ಗಮನಿಸಬೇಕು.<br /><br />ಈ ದೃಷ್ಟಿಯಿಂದ ೧೯೨೯ರ ಲಾಹೋರ್ ಕಾಂಗ್ರೆಸ್ ಸಮ್ಮೇಳನ ತುಂಬಾ ಮಹತ್ವಪೂರ್ಣವಾದದ್ದು. ಈ ಸಮ್ಮೇಳನದಲ್ಲಿ ಜವಹರಲಾಲ್ರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಆರಿಸಲಾಯಿತು. ಮತ್ತು ಇದುವರೆಗೆ Dominion Status ಪರವಾಗಿ ವಾದಿಸುತ್ತಿದ್ದ ಕಾಂಗ್ರೆಸ್ ಈಗ ಪೂರ್ಣ ಸ್ವಾತಂತ್ರ್ಯದ ಪರವಾಗಿ ವಾದಿಸಲು, ಹೋರಾಡಲು ಪ್ರಾರಂಭಿಸಿತು. ಈ ಪರಿವರ್ತನೆಯ ಹಿಂದೆ ಒಂದು ದೊಡ್ಡ ಇತಿಹಾಸವೇ ಇದೆ. ಲಾಹೋರ್ ಸಮ್ಮೇಳನಕ್ಕೆ ಮುಂಚೆ ಕಾಂಗ್ರೆಸ್ ಚಳುವಳಿಯ ಧ್ಯೇಯ ಹೇಗಾದರೂ ಸರಿ ಹಿಂದೂ ಮುಸ್ಲಿಂ ಐಕ್ಯತೆಯನ್ನು ಉಳಿಸಿಕೊಳ್ಳಬೇಕು, ರೂಢಿಸಿಕೊಳ್ಳಬೇಕು ಎಂಬುದಾಗಿತ್ತು. ಇದಕ್ಕಾಗಿ ಗಾಂಧಿ ಒಂದು ಹಂತದಲ್ಲಿ ಜವಹಾರ್ ಲಾಲರನ್ನು ತಕ್ಷಣವೇ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಬೇಕೆಂಬ ಮೋತಿಲಾಲರ ಸೂಚನೆಯನ್ನು ಕೂಡ ಬದಿಗೆ ತಳ್ಳಿ ಸಾಂಕೇತಿಕವಾಗಿ ಎ.ಎಂ. ಅನ್ಸಾರಿಯವರನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಿ, ಜವಹರಲಾಲರನ್ನು ಮಹಾಕಾರ್ಯದರ್ಶಿಯಾಗಿ ನೇಮಿಸಿದ್ದರು. ತನಗೆ ಬೇಕಾದ ಮುಸ್ಲಿಂ ಕಾಂಗ್ರೆಸ್ ಅಧ್ಯಕ್ಷನನ್ನು ನೇಮಿಸುವ ಮೂಲಕ ಗಾಂಧಿಗಿದ್ದ ಯೋಚನೆಯೆಂದರೆ ೧೯೧೬ತ ಲಕ್ನೋ ಒಪ್ಪಂದಕ್ಕೆ ಹಿಂದೂ ಮುಸ್ಲಿಂ ಸಮುದಾಯಗಳ ಬೆಂಬಲವನ್ನು ಸಂಪಾದಿಸುವುದಾಗಿತ್ತು. ಲಕ್ನೋ ಒಪ್ಪಂದದ ಪ್ರಕಾರ ಹಿಂದೂ ಮುಸ್ಲಿಂ ಸಮುದಾಯಗಳು ಪಾರ್ಲಿಮೆಂಟರಿ ಪ್ರಜಾಪ್ರಭುತ್ವವನ್ನು ದೇಶೀಯ ಸರ್ಕಾರವನ್ನು ಬ್ರಿಟಿಷರಿಂದ ಒತ್ತಾಯಿಸುವುದರ ಜೊತೆಗೆ ಅಲ್ಪಸಂಖ್ಯಾತರಿಗೆ ದೇಶದಲ್ಲಿ ಅವರ ಜನಸಂಖ್ಯೆಯ ಪ್ರಮಾಣವನ್ನು ಮೀರಿ ಕೂಡ ಪ್ರಾತಿನಿಧ್ಯವಿರಬೇಕೆಂಬ ಸೂಚನೆಯನ್ನು ಕೂಡ ಒಪ್ಪಲಾಗಿತ್ತು. ಕಾಂಗ್ರೆಸ್ನಲ್ಲಿದ್ದ ಉದಾರವಾದಿಗಳು ಈ ಸೂಚನೆಯ ಪರವಾಗೇ ಇದ್ದರು. ಜವಹರಲಾಲ್ರಂತಹ ಕಾಂಗ್ರೆಸ್ಸಿಗರು ಮತ್ತು ಹಿಂದೂ ಮಹಾಸಭಾವಾದಿಗಳು ಮುಸ್ಲಿಮರಿಗೆ ಜನಸಂಖ್ಯೆಯ ಪ್ರಮಾಣಕ್ಕಿಂತ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡುವ ಅಗತ್ಯವನ್ನು ಒಪ್ಪಲಿಲ್ಲ. ಹೀಗೆಲ್ಲ ಇದ್ದರೂ ೧೯೨೮ರ ತನಕ ಮೋತಿಲಾಲ್, ಜಿನ್ನ ಎಲ್ಲರೂ ದೇಶವು ಒಡೆಯಕೂಡದು, ಹಿಂದು ಮುಸಲ್ಮಾನರು ಒಗ್ಗಟ್ಟಾಗಿಯೇ ಇರಬೇಕು ಎಂದು ವಾಸಿಸುತ್ತಿದ್ದರು, ಚಿಂತಿಸುತ್ತಿದ್ದರು. ಮೊದಲೇ ಹೇಳಿದಂತೆ ಈ ಒಗ್ಗಟ್ಟಿನ ಆಶಯಕ್ಕನುಗುಣವಾಗಿ ಸಮುದಾಯಗಳು ಒಟ್ಟಾಗಿ ಬದುಕುತ್ತಾ ನಿರಂತರ ಸಂವಾದ ಕೊಡುಕೊಳ್ಳುವಿಕೆ ಸಾಧ್ಯವಾಗಿಸುವ ಯತ್ನ Dominion Statusನ್ನೇ ಪ್ರತಿಪಾದಿಸಲಾಗುತ್ತಿತ್ತು.<br /><br />ಈ ಮಧ್ಯೆ ೧೯೨೭ರಲ್ಲಿ ಜವಹಾರ್ಲಾಲ್ ನಡೆಸಿದ ಯೂರೋಪು ಮತ್ತು ರಷ್ಯಾ ಪ್ರವಾಸ ಆತನ ದೃಷ್ಟಿಕೋನವನ್ನು ಪೂರ್ತಿಯಾಗಿ ಬದಲಾಯಿಸಿತು. ರಷ್ಯಾದ ಬಲಿಷ್ಠ ಕೇಂದ್ರ ಸರ್ಕಾರ, ಬ್ರಸೆಲ್ ಸಮ್ಮೇಳನದಲ್ಲಿ ವಸಾಹತುಶಾಹಿ ಶೋಷಣೆಯ ವಿರುದ್ಧ ಕಂಡುಬಂದ ಪ್ರಖರ ವಿರೋಧ ಜವಹಾರ್ಲಾಲ್ರನ್ನು ಪೂರ್ಣ ಸ್ವಾತಂತ್ರ್ಯ, ಬಲಿಷ್ಠ ದೇಶೀ ಸರ್ಕಾರದ ಪರವಾಗಿ ಪರಿವರ್ತಿಸಿತು. ಮಧು ಲಿಮೆಯೆ ಪ್ರಕಾರ ಯೂರೋಪಿನಿಂದ ಹಿಂದಿರುಗಿದ ಜವಾಹಾರ್ಲಾಲ್ ಇಡಿಯಾಗಿ ಬೇರೆ ಮನುಷ್ಯರೇ ಆಗಿದ್ದರು. ಮಾರ್ಕ್ಸ್ವಾದದ ಕಾರಂಜಿಯಲ್ಲಿ ಸಿಕ್ಕ ಜಲಪಾನದಿಂದಾಗಿ ಉನ್ಮತ್ತರಾಗಿದ್ದರು. ಜವಹಾರ್ಲಾಲ್ರಲ್ಲಾದ ಈ ಬದಲಾವಣೆಯನ್ನು ಗಾಂಧಿ ಬಹು ನೊಂದುಕೊಂಡು ವಿರೋಧಿಸಿದರು. ಪೂರ್ಣ ಸ್ವಾತಂತ್ರ್ಯದ ಕಲ್ಪನೆ, ಬಲಿಷ್ಠ ಸರ್ಕಾರದ ಕಲ್ಪನೆ ಭಾರತದ ವಿಶಿಷ್ಟ ಸಾಂಸ್ಕೃತಿಕ ಸನ್ನಿವೇಶವನ್ನು - ಇತಿಹಾಸವನ್ನು ಪರಿಗಣಿಸುತ್ತಿಲ್ಲ. ಹಾಗಾಗಿ ಆ ಬೇಡಿಕೆ ತುಂಬಾ ಆತುರದಿಂದ ಕೂಡಿದೆ ಎಂದು ಮತ್ತೆ ಮತ್ತೆ ನೆಹರೂಗೆ ಬರೆದರು. ನೆಹರೂ ೧೯೨೨-೧೯೨೯ರ ನಡುವೆ ಗಾಂಧಿಗೆ ಬರೆದ ಪತ್ರಗಳಲ್ಲಿ ತೀವ್ರವಾಗಿ, ಖಾರವಾಗಿ ಗಂಧಿಯ ಕಾರ್ಯವೈಖರಿ, ಸೀಮಿತ ಸ್ವಾತಂತ್ರ್ಯದ ಕಲ್ಪನೆ, ಹಿಂದ್ ಸ್ವರಾಜ್ ಕೃತಿಯ ಆಶಯಗಳು ಎಲ್ಲವನ್ನು ವಿರೋಧಿಸಿದರು. ಈ ಗುರುಶಿಷ್ಯರ ನಡುವೆ ನಡೆದ ಪತ್ರವ್ಯವಹಾರದಲ್ಲಿ ಇಬ್ಬರೂ ಆರೋಪ - ಪ್ರತ್ಯಾರೋಪಗಳನ್ನು ಮಾಡುವ ಹಂತಕ್ಕೂ ಹೋದರು. ನಂತರದ ಎಲ್ಲ ಬೆಳವಣಿಗೆಗಳನ್ನು ಇಲ್ಲಿ ವಿವರವಾಗಿ ನಮೂದಿಸುವ ಅಗತ್ಯವಿಲ್ಲ. ೧೯೩೭ರ ತನಕವು ದೇಶದ ವಿಭಜನೆ ಅನಿವಾರ್ಯವಾಗಿ ಕಂಡಿರಲಿಲ್ಲ. ಸ್ವಾತಂತ್ರ್ಯ ಚಳವಳಿ ತೀವ್ರವಾಗುತ್ತಿದ್ದಂತೆ, ಬ್ರಿಟಿಷರ ನಿರ್ಗಮನ ಖಚಿತವಾಗುತ್ತಿದ್ದಂತೆ ಆಧುನಿಕತೆಯ ಬಲಿಷ್ಠ ರಾಷ್ಟ್ರದ ಕನಸು ಹೆಚ್ಚಾಗುತ್ತಿದ್ದಂತೆ, ಅಲ್ಪಸಂಖ್ಯಾತರು ಬೇರೆಯೇ ಕಾರ್ಯಕ್ರಮಗಳನ್ನು ರೀತಿನೀತಿಗಳನ್ನು ಮಂಡಿಸಬೇಕಾದ್ದು ಅನಿವಾರ್ಯವಾಯಿತು. ಸಮುದಾಯಗಳು ಒಟ್ಟಿಗೇ ಹೊಂದಿಕೊಂಡು ಕೊಡುಕೊಳ್ಳುತ್ತ ಬದುಕುವ ಸಾಮಾಜಿಕ-ರಾಜಕೀಯ ವ್ಯವಸ್ಥೆಗೆ ಗಾಂಧಿ ಎಷ್ಟು ಒತ್ತುಕೊಟ್ಟರೆಂದರೆ ಹರಿಜನರಿಗಾಗಿ ಪ್ರತ್ಯೇಕ ಚುನಾವಣಾ ಕ್ಷೇತ್ರಗಳನ್ನು ಕೂಡ ಅವರು ಒಪ್ಪಲಿಲ್ಲವೆಂಬುದನ್ನು ಗಮನಿಸಬೇಕು. ಗಾಂಧಿಯ ಈ ನಿರ್ಧಾರದ ಬಗ್ಗೆ ಈವತ್ತಿಗೂ ಸಾಕಷ್ಟು ದಲಿತರಿಗೆ ವಿರೋಧವಿದೆ, ಸಿಟ್ಟಿದೆ. ಆದರೆ ಗಾಂಧಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಒಂದು ಸಮುದಾಯದ ಬಗ್ಗೆ ಮಾತ್ರ ಯೋಚಿಸುತ್ತಿರಲಿಲ್ಲ. ಒಟ್ಟು ಸಮಾಜ ಮತ್ತು ನಾಗರೀಕತೆಯ ಕಲ್ಪನೆಯ ಬಗ್ಗೆ ಮಾತ್ರ ಯೋಚಿಸುತ್ತಿದ್ದರು ಎಂಬುದನ್ನು ಯಾರೂ ಮರೆಯಬಾರದಷ್ಟೇ.<br /><br />ಗಾಂಧಿಯ ಹಿಂದ್ ಸ್ವರಾಜ್ ಕೃತಿಯ ಹಿಂದಾಗಲೀ, ಉಳಿದ ಕಲ್ಪನೆಗಳ ಹಿಂದಾಗಲೀ ಇದ್ದದ್ದು ಇಲ್ಲಿಯ ಜನಸಮುದಾಯ ಸಾಂಪ್ರದಾಯಿಕವಾಗಿ ರೂಢಿಸಿಕೊಂಡು ಬಂದಿದ್ದ ನೆಮ್ಮದಿ, ಜೀವನಪ್ರೀತಿ ಮತ್ತು ಸಮುದಾಯಪ್ರಜ್ಞೆ ಸಾವಿರಾರು ವರ್ಷ ರಾಜಕೀಯವಾಗಿಯಲ್ಲದಿದ್ದರೂ ಸಾಂಸ್ಕೃತಿಕವಾಗಿಯೂ ಜೀವನ ವಿಧಾನದಲ್ಲಿಯೂ ಒಟ್ಟಾಗಿ ಬದುಕಿಕೊಂಡು ಬಂದ ಸಮುದಾಯದ ಕಲ್ಪನೆಯನ್ನು ಗಾಂಧಿ ‘ದೇಶ’, ‘ರಾಷ್ಟ್ರ’ ಇಂತಹ ಅಮೂರ್ತ ಕಲ್ಪನೆಗಳ ಪರವಾಗಿ ಬಿಟ್ಟುಕೊಡಲು ತಯಾರಿರಲಿಲ್ಲ. ‘ದೇಶ’ ಮತ್ತು ‘ರಾಷ್ಟ್ರ’ದ ಕಲ್ಪನೆ ಹುಟ್ಟಿದ್ದೇ ಯೂರೋಪಿನ ಆಧುನಿಕತೆಯ - ವಸಾಹತುಶಾಹಿಯ ಚಿಂತನೆಯ ಒಂದು ಭಾಗವಾಗಿ. ಈ ಚಿಂತನೆ ಪ್ರೇರೇಪಿಸಿದ ಬಲಿಷ್ಠ ರಾಷ್ಟ್ರ, ಮಿಲಿಟರಿ ವ್ಯವಸ್ಥೆ, ನಗರೀಕರಣ, ಕೈಗಾರೀಕರಣ, ವಸಾಹತುಶಾಹಿ ಎಲ್ಲವನ್ನೂ ನಾವು ಕಂಡಿದ್ದೇವೆ. ಅದರ ವ್ಯಾಮೋಹಕ್ಕೆ ಒಳಗಾಗಿದ್ದೇವೆ. ನಮ್ಮ ಸ್ವಾತಂತ್ರ್ಯ ಚಳುವಳಿಯ ಹಿಂದಿನ ಪ್ರೇರಣೆ ಕೂಡ ಈ ಆಧುನಿಕ ಸಾಕ್ಷಾತ್ಕಾರವೇ. ಈ ಆಧುನಿಕತೆಯ ವ್ಯಾಮೋಹವೇ ದೇಶ ವಿಭಜನೆಯಲ್ಲಿ ಪರ್ಯಾವಸಾನಗೊಂಡಿತಷ್ಟೆ.<br /><br />ಈ ದೃಷ್ಟಿಯಿಂದ ಗಾಂಧಿ ನವ್ಯೋತ್ತರ, ನವ್ಯದ ಆಧುನಿಕರ ತೀವ್ರ ಕಾಲದಲ್ಲಿ ಬದುಕಿ ಕೂಡ ಅದರಿಂದಾಚೆಗೆ ಯೋಚಿಸಿದವರು. ಸ್ವಾತಂತ್ರ್ಯ ಬಂದ ನಂತರ ಕಳೆದ ಆರೇಳು ದಶಕಗಳ ಉಪಖಂಡದ ವಿದ್ಯಮನಗಳು ಗಾಂಧಿಯ ಚಿಂತನೆಯ ದೂರಗಾಮಿತನವನ್ನು ತೋರಿಸಿವೆ.<br /><br /><a onblur="try {parent.deselectBloggerImageGracefully();} catch(e) {}" href="http://4.bp.blogspot.com/_D9K0HARbkSE/SsIlUuF9WcI/AAAAAAAAAH4/y3fJLvV232E/s1600-h/gandhi-20001.jpg"><img style="float:left; margin:0 10px 10px 0;cursor:pointer; cursor:hand;width: 209px; height: 320px;" src="http://4.bp.blogspot.com/_D9K0HARbkSE/SsIlUuF9WcI/AAAAAAAAAH4/y3fJLvV232E/s320/gandhi-20001.jpg" border="0" alt="" id="BLOGGER_PHOTO_ID_5386909142189169090" /></a>ಭಾರತ-ಪಾಕಿಸ್ಥಾನ, ಬಾಂಗ್ಲಾವನ್ನು ತನ್ನ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಈ ದೇಶಗಳ ನಿರ್ಮಾಣವೇ ರಾಜಕೀಯ ನಿರ್ಧಾರವಾಗಿತ್ತು. ಗಡಿ ವಿಭಜನೆ, ಜನರ ವಲಸೆ, ಹಿಂಸೆ, ದೇಶಗಳ ನಡುವೆ ಇರುವ ಓಡಾಟಕ್ಕೆ ಇರುವ ಕೃತಕ ನಿಯಮಗಳು ಇದ್ಯಾವುದಕ್ಕೂ ಇತಿಹಾಸದ - ಸಂಸ್ಕೃತಿಯ ಒತ್ತಾಸೆಯಿರಲಿಲ್ಲ. ಏಕೆಂದರೆ ಸಾವಿರಾರು ವರ್ಷ ಇದೇ ನೆಲದಲ್ಲಿ ಇದೇ ಜನ ತಮ್ಮೆಲ್ಲ ವೈವಿಧ್ಯ, ಭಿನ್ನತೆಗಳ ನಡುವೆ ಬದುಕಿಕೊಂಡು ಬಂದಿದ್ದರು. ಧರ್ಮದ ಅಥವಾ ರಾಜಕೀಯದ ಕಾರಣಕ್ಕೂ ಈ ವೈವಿಧ್ಯ, ಭಿನ್ನತೆಯನ್ನು ಬದಿಗಿಟ್ಟು ‘ದೇಶ’ ‘ರಾಷ್ಟ್ರ’ದ ಕಲ್ಪನೆಯನ್ನು ಒಪ್ಪಿಕೊಂಡಿದ್ದರಿಂದ ಮೊದಲನೆಯದಾಗಿ ಮೂರೂ ದೇಶಗಳು ನಿರಂತರ ರಾಜತಾಂತ್ರಿಕ-ಮಿಲಿಟರಿ -ರಾಜಕೀಯ ಸಂಘರ್ಷದಲ್ಲಿರಬೇಕಾಯಿತು. ಭಾರತ-ಪಾಕಿಸ್ಥಾನ ಎರಡೂ ದೇಶಗಳಲ್ಲೂ ಬುಡಕಟ್ಟು ಜನಾಂಗಗಳಿಗೆ, ಧಾರ್ಮಿಕ ಅಲ್ಪಸಂಖ್ಯಾತರಿಗೆ ನೆಮ್ಮದಿಯಿಲ್ಲ. ಬಲೂಚಿಸ್ಥಾನ, ಸಿಂದ್, ಕಾಶ್ಮೀರ, ಅಸ್ಸಾಮ್, ಪೂರ್ವ ಬಾಂಗ್ಲಾ ಎಲ್ಲ ಕಡೆಯೂ ಇದೇ ಕಥೆ. ಈ ಭಾಗಗಳಲ್ಲಿ ವಾಸಿಸುವ ಜನರ ಸ್ವಯಂ ನಿರ್ಧಾರದ ಹಕ್ಕು ಭಾರತಕ್ಕೂ, ಪಾಕಿಸ್ಥಾನಕ್ಕೂ, ಬಾಂಗ್ಲಾ ದೇಶಕ್ಕೂ ಎಂದಿನಿಂದಲೂ ದೇಶವಿರೋಧಿ ಚಟುವಟಿಕೆಯಾಗಿಯೇ ಕಂಡುಬಂದಿದೆ. ಈ ದೇಶಗಳ ಮಿಲಿಟರಿ, ಅಣುವ್ಯವಸ್ಥೆಗಳು ಬಲಿಷ್ಠವಾದಂತೆಲ್ಲ ಸಮುದಾಯಗಳು, ವಿಶೇಷವಾಗಿ ಆಧುನಿಕತೆಯ ತೆಕ್ಕೆಗೆ ಪ್ರವೇಶಿಸಲಾರದಂತಹ ಗುಂಪುಗಳು ನೆಲೆ ಕಳೆದುಕೊಂಡಿವೆ, ಅನಾಥವಾಗಿವೆ. ಶ್ರೀಲಂಕಾ, ಬರ್ಮಾ, ಅಫ್ಘಾನಿಸ್ಥಾನದ ಪರಿಸ್ಥಿತಿ ಕೂಡ ಭಿನ್ನವಾಗೇನಿಲ್ಲ.<br /><br />ಇತಿಹಾಸದ, ಪುರಾಣದ ಬೇರೆ ಬೇರೆ ಘಟ್ಟಗಳಲ್ಲಿ ಈ ಎಲ್ಲ ಪ್ರದೇಶಗಳು ಒಂದಾಗಿದ್ದವು. ದಿನನಿತ್ಯದ ಜೀವನದ ಲಯದಲ್ಲಿ, ಸಾಂಸ್ಕೃತಿಕವಾಗಿ, ಕೃಷಿ, ಕೈಗಾರಿಕೆಯ ವಿಶಿಷ್ಟತೆಯಲ್ಲಿ, ಆದರೆ ರಾಜಕೀಯವಾಗಿ ಈ ಪ್ರದೇಶಗಳು ಯಾವಾಗಲೂ ‘ಅಖಂಡ’ವಾಗಿರಲಿಲ್ಲ. ಗಾಂಧೀಜಿ ಬಯಸಿದ್ದು ರಾಜಕೀಯ, ಮಿಲಿಟರಿ ಅಖಂಡತೆಯನ್ನಲ್ಲ. ಸಮುದಾಯಗಳಿಗೆ ಹೆಚ್ಚಿನ ಸ್ವಾತಂತ್ರ್ಯ, ಜೀವನಾವಕಾಶಗಳಿರುವಂತಹ ಅಖಂಡತೆಯನ್ನು. ಈ ರೀತಿಯ ‘ಅಖಂಡತೆ’ಯ ಕಲ್ಪನೆಯನ್ನು ಭಾರತ ಮತ್ತು ಪಾಕಿಸ್ಥಾನದಲ್ಲಿರುವ ಮೂಲಭೂತವಾದಿಗಳು ಒಪ್ಪುವುದಿಲ್ಲ.<br /><br />ಇಷ್ಟೆಲ್ಲ ಹೇಳಿದ ಮೇಲೂ ಗಾಂಧಿ ನಮಗೆ ಭಾವನಾತ್ಮಕವಾಗಿ, ವೈಚಾರಿಕವಾಗಿ ಆತ್ಮೀಯರಲ್ಲ ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳಬೇಕು. ಏಕೆಂದರೆ ನಮ್ಮೆಲ್ಲರ ಆಳದ ಒಲವಿರುವುದೇ ಆಧುನಿಕತೆ ಮತ್ತು ಬಲಿಷ್ಠ ರಾಷ್ಟ್ರದ ಪರವಾಗಿ. ಇದರಿಂದ ನಾವೆಲ್ಲರೂ ಒಂದು ದಿನ ನಾಶವಾಗುವ, ಅನಾಥವಾಗುವ ಸಾಧ್ಯತೆ ಇದ್ದರೂ ಇರಬಹುದು ಎಂಬುದು ಗೊತ್ತಿದ್ದರೂ ಈ ಕಾರಣಕ್ಕಾಗಿಯೇ ಬಲಿಷ್ಠ ರಾಷ್ಟ್ರದ ಕಲ್ಪನೆಯನ್ನು ಒಪ್ಪುವಂತಹ, ಹಿಂದೂ ಮಹಾಸಭಾವಾದಿಯಂತಹ ಸಂಘಟನೆಗಳನ್ನು ನಾವು ಮೊದಲಿನಿಂದಲೂ ಬೆಂಬಲಿಸುತ್ತಾ ಬಂದಿದ್ದೇವೆ.<br /><br />ಈ ರೀತಿಯ ಆಯ್ಕೆಗೆ ಕಾರಣ ಪ್ರಾಯಶಃ ನಾವೆಲ್ಲರೂ ಹೆಚ್ಚಾಗಿ ಸಮಕಾಲೀನತೆ ಮತ್ತು ಚರಿತ್ರೆಗೆ ಹೆಚ್ಚು ಹೆಚ್ಚು ಪ್ರತಿಕ್ರಿಯಿಸುವುದರಿಂದ. ಗಾಂಧಿ ಕೂಡ ಪ್ರತಿಕ್ರಿಯಿಸುತ್ತಿದ್ದುದು ಸಮಕಾಲೀನತೆ ಮತ್ತು ಚರಿತ್ರೆಗೇ. ಆದರೆ ಹಾಗೆ ಪ್ರತಿಕ್ರಿಯಿಸುವಾಗ ನಾವು ಯಾವ ರೀತಿಯ ನಾಗರೀಕತೆಯ ಪರವಾಗಿರಬೇಕು ಎಂಬುದು ಕೂಡ ಅವರ ಕಾಳಜಿಯಾಗಿತ್ತು. ಈ ರೀತಿಯ ಕಾಳಜಿಯನ್ನು ಗಾಂಧಿಯವರ ಮತ್ತ್ಯಾವ ಸಮಕಾಲೀನರಲ್ಲಿಯೂ ಕಾಣಲಾರೆವು ಎಂಬುದರಿಂದಲೇ ಗಾಂಧಿ ನವ್ಯ ಮತ್ತು ಆಧುನಿಕತೆಯ ತೀವ್ರ ಸಂದರ್ಭದಲ್ಲಿ ತೀವ್ರವಾಗಿ ಬದುಕಿಯೂ ಕೂಡ, ಮುಂದೆಂದೋ ಯೂರೋಪಿನಲ್ಲಿ ಚಿಂತನಾರೂಪಿಯಾಗಿ ಮಾತ್ರ ಕಾಣಿಸಿಕೊಂಡ ನವ್ಯೋತ್ತರ - ಆಧುನಿಕೋತ್ತರ ಪರಿಕಲ್ಪನೆ-ಆಶಯಗಳೆಲ್ಲವನ್ನೂ ಬಹು ಹಿಂದೆಯೇ ಇನ್ನೂ ಹೆಚ್ಚು ಸಮಗ್ರತೆಯಿಂದಲೂ, ಜೀವಂತಿಕೆಯಿಂದಲೂ ಒಳಗೊಂಡಿದ್ದರು.<br /><br />ಹಿಂದ್ ಸ್ವರಾಜ್ನ ಈವತ್ತಿನ ಹೊಸ ಮತ್ತು ಮರು ಓದು ಈ ಹಿನ್ನೆಲೆಯಲ್ಲೇ ಜರುಗಬೇಕು.<br /><br /><b>ಸಂಚಯ ದ್ವೈಮಾಸಿಕ ಸಾಹಿತ್ಯ-ಸಾಂಸ್ಕೃತಿಕ ಪತ್ರಿಕೆಯ ಜುಲೈ ಅಗಸ್ಟ್ ೨೦೦೯ರ ೮೧ನೇ ವಿಶೇಷ ಸಂಚಿಕೆ (ನೂರರ ಹಿಂದ್ ಸ್ವರಾಜ್)ಯಲ್ಲಿ ಪ್ರಕಟಿತ.</b></span>ಕೆ. ಸತ್ಯನಾರಾಯಣhttp://www.blogger.com/profile/15167030166766836381noreply@blogger.com0tag:blogger.com,1999:blog-1964049159346480323.post-30572951798656001832009-08-10T21:17:00.000-07:002009-08-10T21:27:31.554-07:00ನನ್ನ ಒಂದೆರಡು ಮಾತು<a onblur="try {parent.deselectBloggerImageGracefully();} catch(e) {}" href="http://4.bp.blogspot.com/_D9K0HARbkSE/SoDyajTrR8I/AAAAAAAAAHg/vT1CI2Wh8Ng/s1600-h/khasagi+vimarshe0001.jpg"><img style="float:left; margin:0 10px 10px 0;cursor:pointer; cursor:hand;width: 197px; height: 320px;" src="http://4.bp.blogspot.com/_D9K0HARbkSE/SoDyajTrR8I/AAAAAAAAAHg/vT1CI2Wh8Ng/s320/khasagi+vimarshe0001.jpg" border="0" alt="" id="BLOGGER_PHOTO_ID_5368557293793920962" /></a><b>ಆಸಕ್ತಿ</b> (೧೯೯೧), <b>ಮನೋಧರ್ಮ </b>(೨೦೦೧) ನನ್ನ ವಿಮರ್ಶಾತ್ಮಕ, ಸಾಂಸ್ಕೃತಿಕ ಬರಹಗಳ ಹಿಂದಿನ ಸಂಕಲನಗಳು. ಈಗ ಈ ಸಂಕಲನವನ್ನು ಹೊರತರಲು ನನಗೆ ಹಿಂಜರಿಕೆಯಿತ್ತು. ಈ ಹಿಂಜರಿಕೆ ಬೇಡವೆಂದು ಸೂಚಿಸಿ ಪ್ರೋತ್ಸಾಹಿಸಿದ ಸ್ನೇಹಿತರನ್ನೆಲ್ಲ ನೆನೆಯಬೇಕಾದ್ದು ನನ್ನ ಕರ್ತವ್ಯ.<br /><br />ಶ್ರೀ ಎಂ.ವಿ.ವೆಂಕಟೇಶಮೂರ್ತಿಯವರು ಇಲ್ಲಿಯ ಕೆಲವು ಬರಹಗಳನ್ನು ತುಂಬಾ ಇಷ್ಟಪಟ್ಟು ಸಂಕಲನ ಹೊರತರಲು ಪ್ರೋತ್ಸಾಹಿಸುವುದರ ಜೊತೆಗೆ ವಸಂತ ಪ್ರಕಾಶನದ ಮಿತ್ರರಾದ ಶ್ರೀಮುರಳಿಯವರಿಗೆ ಫೋನ್ ಮಾಡಿ ಕೃತಿಯನ್ನು ಪ್ರಕಟಿಸುವಂತೆ ಕೋರಿದರು. ಶ್ರೀ ಮೂರ್ತಿಯವರ ಪ್ರೋತ್ಸಾಹ ಮತ್ತು ಶ್ರೀ ಮುರಳಿಯವರ ನೆರವು ಇಲ್ಲದಿದ್ದರೆ ಈ ಸಂಕಲನ ಹೊರಬರುತ್ತಿರಲಿಲ್ಲ. ಈ ಇಬ್ಬರು ಹಿತೈಷಿಗಳಿಗೆ ಮೊದಲ ವಂದನೆ.<br /><br />ನನ್ನೆಲ್ಲ ಬರವಣಿಗೆಗಳನ್ನು ಪರಿಶೀಲಿಸಿ ಪ್ರೋತ್ಸಾಹಿಸುವ ಶ್ರೀ ಗಿರೀಶ್ ವಾಘ್ ಈ ಸಂಕಲನದ ಹಿಂದೆ ಕೂಡ ಒತ್ತಾಸೆಯಾಗಿದ್ದಾರೆ. ಪ್ರೂಫ್ ನೋಡುವುದರಲ್ಲು ನೆರವಾಗಿದ್ದಾರೆ.<span class="fullpost"><br /><br />ಕರ್ನಾಟಕದ ಹೊರಗಿರುವುದರಿಂದ, ಯಾವುದೇ ವಿಶ್ವವಿದ್ಯಾಲಯದ ವಿಮರ್ಶಕರ ಗುಂಪುಗಳ ಬೆಂಬಲವು ನನಗಿಲ್ಲದೆ ಇರುವುದರಿಂದ ಬರಹಗಳ ಪ್ರಕಟಣೆಗೆ ನಾನು ಕಿರುಪತ್ರಿಕೆಗಳನ್ನು, ಸಮೂಹಮಾಧ್ಯಮಗಳನ್ನು ನೆಚ್ಚಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಂತೂ ಸಂಪಾದಕರುಗಳನ್ನು ನಾನೇ ಪೀಡಿಸಿದ್ದೇನೆ. ಇಲ್ಲಿಯ ಬರಹಗಳನ್ನು ಪ್ರಕಟಿಸಿದ ದೇಶಕಾಲ, ಸಂಚಯ, ಹೊಸತು, ಒಂದಲ್ಲಾ ಒಂದೂರಿನಲ್ಲಿ, ಶೂದ್ರ, ಕನ್ನಡ ಅಧ್ಯಯನ, ಕನ್ನಡಪ್ರಭ, ಉದಯವಾಣಿ, ವಿಜಯಕರ್ನಾಟಕ, ವಿಕ್ರಾಂತ ಕರ್ನಾಟಕ - ಪತ್ರಿಕೆಗಳ ಸಂಪಾದಕರುಗಳಿಗೆ ಕೃತಜ್ಞ.<br /><br />ಕೆಲವು ಲೇಖನಗಳು ಈಗಾಗಲೇ ಬೇರೆ ಬೇರೆ ಸಂಪುಟ-ಸಂಗ್ರಹಗಳಲ್ಲಿ ಪ್ರಕಟವಾಗಿವೆ. ಇದರಿಂದಾಗಿ ನನ್ನ ಆತ್ಮವಿಶ್ವಾಸ ಹೆಚ್ಚಿದೆ. ಪುತಿನ, ಕುಸುಮಾಕರರ ಬರಹವನ್ನು ಆಯ್ಕೆ ಮಾಡಿದ ಡಾ||ಎಚ್.ಎಸ್.ರಾಘವೇಂದ್ರ ರಾವ್, ಕುವೆಂಪು, ಕನ್ನಡ ಕಾದಂಬರಿ ಪರಂಪರೆ ಬಗ್ಗೆ ಬರೆಯುವಂತೆ ಪ್ರೇರೇಪಿಸಿದ ಶ್ರೀ ಡಿ.ಎಸ್.ನಾಗಭೂಷಣ, ವಿ.ಸೀ. ಮತ್ತು ಬಿ.ಪಿ.ರಾಧಾಕೃಷ್ಣರನ್ನು ಕುರಿತು ಬರೆಯುವಂತೆ ಮಾಡಿದ ಶ್ರೀ ಎಂ.ವಿ.ವೆಂಕಟೇಶಮೂರ್ತಿ, ಆವರಣದ ಬಗ್ಗೆ ಬರೆಯಲು ಕಾರಣರಾದ ಶ್ರೀ ಗಿರೀಶ್ ರಾವ್, ಶ್ರೀ ಚಂದ್ರಶೇಖರಯ್ಯ, ಲಂಕೇಶ್ ಕತೆಗಳ ಬಗ್ಗೆ ಬರೆಸಿದ ಜಿ.ರಾಜಶೇಖರ, ಫಣಿರಾಜ್ ಮತ್ತು ವಿವೇಕ ಶಾನಭಾಗ ಇವರೆಲ್ಲರಿಗೆ ವಂದನೆಗಳು.<br /><br />"ಗಾಂಧಿ ಬಜಾರ್" ಪತ್ರಿಕೆಯ ಸಂಪಾದಕರಾದ ಶ್ರೀ ಬಾಕಿನರವರು ಬಹುವರ್ಷಗಳಿಂದ ನನ್ನ ಲೇಖನಗಳನ್ನು ಪ್ರಕಟಿಸುತ್ತಾ ಬಂದಿದ್ದಾರೆ. ಶ್ರೀಯುತರ ನಿರಂತರ ಪ್ರೋತ್ಸಾಹಕ್ಕೆ ಕೃತಜ್ಞನಾಗಿದ್ದೇನೆ.<br /><br />ಹಿರಿಯರಾದ ಡಾ||ಯು.ಆರ್.ಅನಂತಮೂರ್ತಿಯವರು ಈಚಿನ ದಿನಗಳ ಬರಹಗಳಿಗೆ ಪ್ರತಿಕ್ರಿಯಿಸಿ ಪ್ರೋತ್ಸಾಹಿಸುವುದರ ಜೊತೆಗೆ ಎಷ್ಟೋ ವಿಷಯಗಳ ಬಗ್ಗೆ ಮತ್ತೆ ಯೋಚಿಸುವಂತೆ ಮಾಡಿದ್ದಾರೆ. ಇವರೊಡನೆ ಒಡನಾಟ ಹೆಚ್ಚಲು ಇಲ್ಲಿಯ ಕೆಲವು ಬರಹಗಳಾದರೂ ಕಾರಣವಾಗಿವೆ ಎನ್ನುವುದೇ ನನಗೆ ಸಂತೋಷದ ಸಂಗತಿ. ಮೇಷ್ಟರ ಪ್ರೀತಿ ಮತ್ತು ಗಮನಕ್ಕೆ ಥ್ಯಾಂಕ್ಸ್.<br /><br />ಈ ಸಂಕಲನದ ಒಂದು ಹೆಚ್ಚುಗಾರಿಕೆಯೆಂದರೆ ನನ್ನದಲ್ಲದ ಬರವಣಿಗೆಯು ಸೇರಿರುವುದು. ಜಿ.ರಾಜಶೇಖರ್, ಗಿರೀಶ್ ವಾಘ್, ಲಂಕೇಶ್ - ಇವರ ಪತ್ರಗಳು, ಜಿ.ಎನ್.ರಂಗನಾಥರಾವ್, ಲಕ್ಷ್ಮಣ ಕೂಡಸೆ ಇವರ ಬರಹಗಳೂ ಇಲ್ಲಿ ಸೇರಿವೆ. ಇವರೆಲ್ಲರ ಬರಹಗಳಿಂದಾಗಿ ಸಂಕಲನದ ಮೌಲಿಕತೆಗೊಂದು ಮೆರುಗು ಬಂದಿದೆ. ಇವರೆಲ್ಲರಿಗೂ, ಈ ಕೆಲಸದಲ್ಲಿ ನೆರವಾದ ಗೌರಿ ಲಂಕೇಶ್ ಮತ್ತು ಡಾ||ಎಂ.ಎಸ್.ಆಶಾದೇವಿಯವರಿಗೂ ವಂದನೆಗಳು.<br /><br />ಸಾರಾಪುರದ ಶ್ರೀ ವಸಂತ ವಿ.ಬೆಳಗಾಂವ್ಕರ್ ಮತ್ತು ಕೊಲ್ಲಾಪುರ ಶ್ರೀಮತಿ ನಾಗರತ್ನ ಗ್ಯಾಲ್ ನನಗೆ ಪುಸ್ತಕಗಳು, ಪತ್ರಿಕೆಗಳನ್ನು ಒದಗಿಸುತ್ತಾ ನೆರವಾಗಿದ್ದಾರೆ. ಕೊಲ್ಲಾಪುರದಲ್ಲಿ ಮಾಡಿದ ಬಹುಪಾಲು ಬರವಣಿಗೆಯ ಮೊದಲ ಓದುಗರಾಗಿ ಶ್ರೀಮತಿ ನಾಗರತ್ನ ತುಂಬಾ ಸಮಯ ಮತ್ತು ಪ್ರೀತಿಯನ್ನು ನೀಡಿದ್ದಾರೆ.<br /><br />ಈ ಬರಹಗಳ ಬರಹಗಾರ ನಾನೆಂಬುದು ಪೂರ್ಣಸತ್ಯವಾಗಲಾರದು. ಈ ಬರಹಗಳು ಸ್ನೇಹಿತರ ಜೊತೆ ನಡೆಸುತ್ತಲೇ ಇರುವ ಮಾತುಕತೆ, ವಿಚಾರ ವಿನಿಮಯದ ಒಂದು ಭಾಗವಷ್ಟೆ. ಎನ್.ವಿದ್ಯಾಶಂಕರ್, ಡಾ||ಎಚ್.ಎಸ್.ರಾಘವೇಂದ್ರ ರಾವ್, ಗಿರೀಶ್ ವಾಘ್ - ಇವರೆಲ್ಲರ ಒಳನೋಟ, ವಿಶ್ಲೇಷಣೆಗಳೆಲ್ಲ ಈ ಬರಹದಲ್ಲಿ ಬೆರೆತು ಹೋಗಿದೆ. ಗೆಳೆತನದ ಸಲಿಗೆಯಿಂದಾಗಿ ಇವರೆಲ್ಲರೂ ಇದನ್ನು ಮನ್ನಿಸುತ್ತಾರೆಂದು ನಂಬುತ್ತೇನೆ.<br /><br /><div style="text-align: center;"><span class="Apple-style-span" style="font-weight: bold; ">****</span></div><br />೧೯೬೫-೧೯೭೦ ಈ ಕಾಲಾವಧಿಯಲ್ಲಿ ನಾನು ಕನ್ನಡ-ಇಂಗ್ಲೀಷ್ ಸಾಹಿತ್ಯವನ್ನು ಓದಲು ಪ್ರಾರಂಭಿಸಿದ್ದು. ಬಹುಪಾಲು ಪುಸ್ತಕಗಳನ್ನು ಓದಿದ್ದು ನಮ್ಮ ಕಾಲೇಜು-ಸ್ಕೂಲ್ ಮೇಷ್ಟರುಗಳ ಸೂಚನೆಯ ಮೇರೆಗೆ. ಎಲ್ಲ ಪಂಥಗಳ ಎಲ್ಲ ಭಾಷೆಗಳ, ಎಲ್ಲ ಮನೋಧರ್ಮದ ಕೃತಿಗಳನ್ನು ಓದಲು ಈ ಮೇಷ್ಟರುಗಳು ಪ್ರೋತ್ಸಾಹಿಸುತ್ತಿದ್ದರು. ನನ್ನ ಓದುವಿಕೆ ಈವತ್ತೂ ಕೂಡ ಇದೇ ದಾರಿಯದು.<br /><br />ನಾನೇ ಬರವಣಿಗೆಯ ಗೀಳನ್ನು ಹಚ್ಚಿಕೊಂಡ ಮೇಲೆ ಒಂದು ಸಂಗತಿ ನನಗೆ ಸ್ಪಷ್ಟವಾಯಿತು. ಸಾಹಿತ್ಯ ವಲಯದಿಂದ ಪ್ರೇರೇಪಣೆ ಪಡೆಯುವ ಓದು ಬಹುಪಾಲು ಒಂದು ಚಳುವಳಿಗೆ, ಒಂದು ಮನೋಧರ್ಮಕ್ಕೆ ಒಂದು ಲೇಖಕರ ಗುಂಪಿಗೆ ಮಾತ್ರ ಸೀಮಿತವಾಗಿರುತ್ತದೆ. ೧೯೬೫-೭೦ರ ಕಾಲಾವಧಿಯನ್ನೇ ತೆಗೆದುಕೊಂಡರೆ ಕಾರಂತ, ಕುವೆಂಪು, ಮಾಸ್ತಿ ಇಂತಹವರನ್ನು ಕುರಿತು ನವ್ಯ ಚಳುವಳಿಯ ತೀವ್ರ ದಿನಗಳಲ್ಲಿ ಒಳ್ಳೆಯ ಭಾವನೆಯೇನಿರಲಿಲ್ಲ. ಆದರೂ ನಮ್ಮ ಮೇಷ್ಟರುಗಳು ಇವರ ಕೃತಿಗಳನ್ನು ಓದಲು ಸೂಚಿಸುತ್ತಿದ್ದಂತೆಯೇ ಹೊಸ ಸಾಹಿತ್ಯ ಸಂವೇದನೆಯ ಸಂಸ್ಕಾರ, ತುಘಲಕ್ Outsiderನಂತಹ ಕೃತಿಗಳನ್ನು ಕೂಡ ಓದಲು ಸೂಚಿಸುತ್ತಿದ್ದರು. ಸಾಹಿತ್ಯ ವಲಯದೊಡನೆ ನನ್ನ ಎರಡು-ಮೂರು ದಶಕಗಳ ಒಡನಾಟದಿಂದ ಮೂಡಿರುವ ತಿಳುವಳಿಕೆಯೆಂದರೆ ನಮ್ಮ ಓದುವಿಕೆ ಈ ವಲಯದಿಂದ ಪ್ರೇರೇಪಣೆ ಪಡೆದಷ್ಟು ಪಾರ್ಶ್ವ ನೋಟದ್ದಾಗಿರುತ್ತದೆಂಬುದು. ಈ ಸಂಕಲನದ ಎಷ್ಟೋ ಬರಹಗಳ ಬಗ್ಗೆ ಕೆಲವರಾದರೂ ನನ್ನನ್ನು ಇದನ್ನೆಲ್ಲ ಈಗ ಓದುವ-ಬರೆಯುವ ತುರ್ತಾದರೂ ಏನಿತ್ತು ಎಂದು ಕೇಳಿದ್ದಾರೆ. ನನಗೆ ಸ್ಪಷ್ಟವಾಗಿ ಉತ್ತರ ಗೊತ್ತಿಲ್ಲ. ಈ ಕಾರಣಕ್ಕಾಗಿಯೂ ಈ ಸಂಕಲನಕ್ಕೆ "ಖಾಸಗಿ ವಿಮರ್ಶೆ" ಎಂಬ ಹೆಸರಿಟ್ಟಿದ್ದೇನೆ. ಇದಕ್ಕಿಂತ ಮುಖ್ಯವಾಗಿ ನನ್ನ ಮೆಚ್ಚಿನ ಲೇಖಕನೊಬ್ಬ ತನ್ನ ವಿಮರ್ಶಾ ಸಂಕಲನಕ್ಕೆ "INNER WORKING" ಎಂದು ಹೆಸರಿಟ್ಟಿರುವುದು ಕೂಡ ನನ್ನ ಪ್ರೇರಣೆಗಳಲ್ಲೊಂದು. ಎಷ್ಟೋ ಜನ ಸಮಕಾಲೀನ ವಿಮರ್ಶಕರ ಬರಹಗಳನ್ನು ಓದುವಾಗ ಅವರ ಬರಹಗಳಲ್ಲಿ ಗೈರುಹಾಜರಾಗಿರುವ ಒಳವ್ಯಕ್ತಿತ್ವ ನನಗೆ ಆಶ್ಚರ್ಯ ಹುಟ್ಟಿಸುತ್ತದೆ.<br /><div style="text-align: center;"><span class="Apple-style-span" style="font-weight: bold; ">(ಹೊಸ ಕೃತಿ ಖಾಸಗಿ ವಿಮರ್ಶೆಗೆ ಬರೆದ ಮುನ್ನುಡಿ)</span></div><br /><div style="text-align: center;"><span class="Apple-style-span" style="font-weight: bold; ">ಪರಿವಿಡಿ</span></div><br /><div style="text-align: center;"><span class="Apple-style-span" style="font-weight: bold; ">ಭಾಗ -1</span></div><b><div style="text-align: center;">ನನ್ನ ಬರವಣಿಗೆಯ ಸ್ವರೂಪ ಮತ್ತು ಆಕಾಂಕ್ಷೆ</div></b>೧. ಸಾಹಿತ್ಯದಲ್ಲಿ ಸಮೀಕರಣಗಳು<br />೨. ಒಂದು ಸಂದರ್ಶನ<br />೩. ಓದುಗನ ಏಕಾಂತ<br />೪. ಬರಹಗಾರನ ತಲ್ಲಣಗಳು<br /><br /><div style="text-align: center;"><span class="Apple-style-span" style="font-weight: bold; ">ಭಾಗ -2 </span></div><b><div style="text-align: center;">ಕತೆ, ಕಾದಂಬರಿ, ಕಾವ್ಯ, ಪ್ರಬಂಧ</div></b>೧. ನಮ್ಮ ಕಾದಂಬರಿ ಪರಿಸರ<br />೨. ಕುವೆಂಪು ಮತ್ತು ಮತಾಂತರ<br />೩. ಕುವೆಂಪು - ಬಹುಶಿಸ್ತೀಯ ನೋಟ<br />೪. ವಂದೇ ಮಾತರಂ ಕಾದಂಬರಿ<br />೫. ಕಂಡದ್ದು ಕಾಣದ್ದು<br />೬. ‘ಆವರಣ’ - ಕೃತಿ ಮತ್ತು ವಿದ್ಯಮಾನ<br />೭. ಬಯಲು ಬಸಿರು<br />೮. ಬಿಳಿ ಹುಲಿ<br />೯. ಹಾಲೂಡಿಸುವ ಪ್ರಸಂಗ<br />೧೦. ಲಂಕೇಶ್ ಹೇಳಿಕೊಂಡ ಕತೆಗಳು<br />೧೧. ಇಲಿಚ್ ಮತ್ತು ಮಂತ್ರೋದಯ<br />೧೨. ನೆಲೆಯಿಲ್ಲದ ಸಂಪಾದನೆ<br />೧೩. ನಿಧಾನ ಶ್ರುತಿ<br />೧೪. ಪುತಿನ ಪ್ರಬಂಧಗಳು<br />೧೫. ಗೋಕುಲಾಷ್ಟಮಿ<br />೧೬. ನೂರು ವರ್ಷದ ಏಕಾಂತ<br /><br /><div style="text-align: center;"><span class="Apple-style-span" style="font-weight: bold; ">ಭಾಗ -3</span></div><b><div style="text-align: center;">ವ್ಯಕ್ತಿಚಿತ್ರ - ಜೀವನ ಚರಿತ್ರೆ</div></b><br />೧. ದೊಡ್ಡ ಬದುಕಿನ ಸೂಕ್ಷ್ಮ ಚರಿತ್ರೆ<br />೨. ರಾಧಾಕೃಷ್ಣರ ‘ನನ್ನ ತಂದೆ’<br />೩. ವಿಜಯಶಂಕರ್ ಒಡನಾಟ<br />೪. ತಾಯಿಗುಣದ ಗೆಳೆಯ<br />೫. ರಿಲ್ಕೆ ಕಂಡ ಕಿರಂ<br />೬. ವೈ.ಎನ್.ಕೆ. ಪ್ರಸಂಗಗಳು<br />೭. ಬರೆದರೆ ಜಿ.ರಾಜಶೇಖರ್ ಹಾಗೆ<br /> <br /><div style="text-align: center;"><span class="Apple-style-span" style="font-weight: bold; ">ಭಾಗ -4</span></div><b><div style="text-align: center;">ಪತ್ರ ಸಾಹಿತ್ಯ</div></b><br />೧. ಜಿ.ರಾಜಶೇಖರ್ ಪತ್ರಗಳು<br />೨. ಗಿರೀಶ್ ವಾಘ್ ಪತ್ರಗಳು<br />೩. ಉತ್ತರಿಸಲಾಗದ ಪತ್ರ<br />೪. ಸಂಪಾದಕರ ಅಪರೂಪದ ಪತ್ರ<br />೫. ಲಂಕೇಶ್ ಪತ್ರಗಳು<br /><br /><div style="text-align: center;"><span class="Apple-style-span" style="font-weight: bold; ">ಭಾಗ -5</span></div><b><div style="text-align: center;">ವೈವಿಧ್ಯ</div></b><br />೧. ಗಾಂಧಿ - ಓದುಗನಾಗಿ<br />೨. ಪುಸ್ತಕ ಸಮೀಕ್ಷೆ - ಲೋಹಿಯಾ<br />೩. ಪತ್ರಿಕೆಗಳು ಮತ್ತು ಸಾಹಿತ್ಯ<br />೪. ಜಿ.ಎನ್.ರಂಗನಾಥರಾವ್<br />೫. ಲಕ್ಷ್ಮಣ ಕೂಡಸೆ<br />೬. ನಮ್ಮ ಕನಸುಗಳಲ್ಲಿ ಕನ್ನಡ<br />೭. ಕನ್ನಡದ ನಿನ್ನೆಗಳು<br />೮. ನಮ್ಮ ಆಧ್ಯಾತ್ಮಿಕತೆ<br />೯. ಜೆ.ಕೆ.ಚಿಂತನೆ<br />೧೦. ನಮ್ಮವರಂತೆಯೇ ಕಾಣುವ ನೈಪಾಲ್<br />೧೧. ಇದೊಂದು ಜೀವನ ಶೈಲಿಯ ವಾಙ್ಮಯ<br />೧೨. ಕ್ರಿಕೆಟ್ ಅಲ್ಲದ ಕ್ರಿಕೆಟ್<br />೧೩. ಗೂಡಿಗೆ ಸೇರದ ಹಕ್ಕಿಗಳು<br />೧೪. ಪಂಪಾಯಾತ್ರೆ<br /><br /><b>ಪುಟಗಳು : 328<br />ಪ್ರಕಾಶಕರು: ವಸಂತ ಪ್ರಕಾಶನ<br />ನಂ. 360. 10‘ಬಿ’ ಮೇನ್<br />(ಕಾಸ್ಮೋಪಾಲಿಟನ್ ಕ್ಲಬ್ ಎದುರು ರಸ್ತೆ)<br />ಜಯನಗರ 3ನೇ ಬ್ಲಾಕ್<br />ಬೆಂಗಳೂರು 560 011<br />ದೂರವಾಣಿ : 22443996<br />ಬೆಲೆ: ನೂರ ಎಪ್ಪತ್ತು ರೂಪಾಯಿ.<br />ISBN 81-89818-71-6</b><br /></span>ಕೆ. ಸತ್ಯನಾರಾಯಣhttp://www.blogger.com/profile/15167030166766836381noreply@blogger.com0tag:blogger.com,1999:blog-1964049159346480323.post-51026968155470753462009-07-30T21:19:00.001-07:002009-07-30T21:24:59.605-07:00ಕತೆಗಳು ಇರುತ್ತವೆ; ಕಾಣಬೇಕಷ್ಟೆ<a onblur="try {parent.deselectBloggerImageGracefully();} catch(e) {}" href="http://2.bp.blogspot.com/_D9K0HARbkSE/SnJxlFmJNhI/AAAAAAAAAHQ/eKS6it_voBI/s1600-h/5.gif"><img style="float:left; margin:0 10px 10px 0;cursor:pointer; cursor:hand;width: 247px; height: 221px;" src="http://2.bp.blogspot.com/_D9K0HARbkSE/SnJxlFmJNhI/AAAAAAAAAHQ/eKS6it_voBI/s320/5.gif" border="0" alt=""id="BLOGGER_PHOTO_ID_5364474988122945042" /></a><br />ಗೃಹಕೃತ್ಯಕ್ಕೆ ಸಂಬಂಧಿಸಿದಂತಹ ಒಂದು ಸಂಗತಿಯನ್ನು ನಮ್ಮ ತಾಯಿ ನನಗೆ ಹೇಳುತ್ತಿದ್ದಾಗ, ನಾನು ಅನ್ಯಮನಸ್ಕನಾಗಿ ಕೇಳಿಸಿಕೊಳ್ಳುತ್ತಿದ್ದೆ. ನನ್ನ ಅನ್ಯಮನಸ್ಕತೆಯಿಂದ ನಮ್ಮ ತಾಯಿಗೆ ರೇಗಿ ಹೀಗೆಂದು ಬೈದರು. "ಏನು ಯಾವಾಗಲೂ ನಿನಗೆ ಕತೆಗಳ ಗುಂಗು. ಕತೆಗಳಿಗೇನು ಯಾವಾಗಲೂ ಇರುತ್ತವೆ. ಸಾಯೋತನಕ ಇರುತ್ತವೆ...." ಇತ್ಯಾದಿ. ನಮ್ಮ ತಾಯಿ ಆಡಿದ ಮಾತಿನ ಎಳೆಯನ್ನು ಹಿಡಿದು, ಕತೆಗಳ ರಚನೆಯನ್ನು ಕುರಿತು ನನ್ನ ನಿಲುವನ್ನೂ ವಿವರಿಸುತ್ತೇನೆ.<br /><br />ಆಧುನಿಕತೆ, ವಿಶೇಷವಾಗಿ, ನವ್ಯತೆ ನಮ್ಮ ಕಥಾಸಾಹಿತ್ಯದಲ್ಲಿ ಪ್ರವೇಶಿಸಿದ ಮೇಲೆ ಕತೆಗಳೆಂದರೆ ಅದೇನೋ ವಿಶೇಷ ಪದಾರ್ಥವೆಂಬಂತೆ, ಕತೆಗಾರನೆಂದರೆ ಒಬ್ಬ ಅದ್ಭುತ ವ್ಯಕ್ತಿಯಂತೆ ಕಾಣುವ ಪರಿಪಾಠ ನಮ್ಮಲ್ಲಿ ರೂಢಿಗೆ ಬಂದಿದೆ. ಇದಕ್ಕನುಗುಣವಾಗಿ ಕತೆಗಾರರು ಕೂಡ ತಾವು ಇತರರಿಗಿಂತ ಬಹು ಭಿನ್ನರೆಂಬಂತೆ ‘ಶೈಲೀಕೃತ ಅಹಂ’ನಿಂದಲೇ ವರ್ತಿಸುತ್ತಾರೆ. ನನಗೆ ಯಾವತ್ತೂ ಹಾಗನಿಸಿಲ್ಲ. ಕ್ಯಾಥರೀನ್ ಪೋರ್ಟರಳ ಪ್ರಕಾರ ಬರಹಗಾರ ಸಮಾಜದಿಂದ, ಸಮಾಜದಲ್ಲಿ ಯಾವ ವಿಶಿಷ್ಟ ಸ್ಥಾನವನ್ನೂ ಬೇಡಕೂಡದು. ಎಲ್ಲರಂತಿದ್ದು, ಎಲ್ಲರ ಬದುಕಿನ ಬಗ್ಗೆ ಬರೆಯುವುದನ್ನು ಓದಲು ಉಳಿದೆಲ್ಲರಿಗೂ ಆಸಕ್ತಿಯಿರುತ್ತದೆಯೇ ಹೊರತು ತಾನೊಬ್ಬ ಮಹಾ, ತಾನೊಬ್ಬ ವಿಶೇಷ ಎಂದು ಭಾವಿಸಿಕೊಂಡು ಇತರರ ಬಗ್ಗೆ ‘ಧೋರಣೆ’ಯಿಂದ ಬರೆದ ಬರವಣಿಗೆಯನ್ನು ಉಳಿದವರು ಏಕೆ ಓದಬೇಕೆಂಬುದು ಅವಳ ಪ್ರಶ್ನೆಯಿದ್ದಂತೆ ಕಾಣುತ್ತದೆ.<span class="fullpost"><br /><br />ಕತೆಗಳು ಇರುತ್ತವೆ ಹಾಗೆಂದರೇನು ವಿವರಿಸಿ ಎಂದು ನೀವು ಕೇಳಿದರೆ ಸ್ವಲ್ಪ ಕಷ್ಟವೇ. ವಾತಾವರಣದಲ್ಲಿ ಗಾಳಿ ಇದೆ ಎಂದು ಹೇಳಿದಾಗ ನೀವು ಸಾಧಿಸಿ ತೋರಿಸಲೇ ಬೇಕಿಲ್ಲವಷ್ಟೆ. ಹಾಗೆಯೇ ಕತೆಗಳು ಕೂಡ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ ಕತೆ, ಕತೆಗಾರಿಕೆ ಎನ್ನುವುದು ಊಟ, ನಿದ್ರೆ, ಪ್ರೀತಿ, ಮೈಥುನಗಳಷ್ಟೆ ಸಹಜವಾದ್ದು, ನೈಸರ್ಗಿಕವಾದ್ದು.<br /><br />ಕತೆ ಬರೆಯುವವರು ಮಾತ್ರ ಕತೆಗಾರರೆಂದು ಪೋಸು ಕೊಟ್ಟರೆ ನನಗೆ ನಗು ಬರುತ್ತದೆ. ನಾವೆಲ್ಲರೂ ನಮ್ಮ ಬದುಕಿನ ಬಹಳ ಕಾಲವನ್ನು ಕತೆ ಹೇಳುವುದರಲ್ಲಿ ಕೇಳಿಸಿಕೊಂಡ ಕತೆಯನ್ನು ಇನ್ನೊಬ್ಬರಿಗೆ ನಮ್ಮ ನಮಗೆ ಬೇಕಾದ ರೀತಿಯಲ್ಲಿ ಹೇಳುವುದರಲ್ಲಿ ಕತೆ ಕೇಳಿಸಿಕೊಳ್ಳುವುದರಲ್ಲೇ ಕಳೆಯುತ್ತೇವೆ. ಕತೆಗಳೇ ಹೀಗೆ. ನಾವು ಎಚ್ಚರವಾಗಿದ್ದಾಗ, ನಿದ್ರೆಯಲ್ಲಿದ್ದಾಗ, ಕನಸಿನಲ್ಲಿದ್ದಾಗ, ಒಂಟಿಯಾಗಿದ್ದಾಗ, ಗುಂಪಿನಲ್ಲಿದ್ದಾಗ ಯಾವಾಗಲೂ ತಮ್ಮ ಪಾಡಿಗೆ ತಾವು ಬೆಳೆಯುತ್ತಿರುತ್ತವೆ. ಒಂದು ಉಚ್ಛ್ವಾಸ, ಒಂದು ನಿಶ್ಶ್ವಾಸದ ನಡುವೆ ಕಾಲ ಸರಿದು ವಯಸ್ಸಾಗುವಂತೆ ಕತೆಗಳಿಗೂ ಕೂಡಾ ವಯಸ್ಸಾಗಿ ಬೆಳೆಯುತ್ತಾ ಹೋಗುತ್ತವೆ.<br /><br />ಮಿತ್ರರಾದ ಶ್ರೀ ಜಿ.ರಾಜಶೇಖರ್, ನನ್ನ ‘ನಿಮ್ಮ ಮೊದಲ ಪ್ರೇಮದ ಕತೆ’ ಸಂಕಲನಕ್ಕೆ ಮುನ್ನುಡಿ ಬರೆಯುತ್ತಾ, ನಾನು ಬರೆಯುವ ಶೈಲಿಯಲ್ಲಿ ಪಕ್ಕದ ಮನೆಯವರ ಕಷ್ಟ ಸುಖಗಳನ್ನು ಅಲ್ಪಸ್ವಲ್ಪ ಬದಲಾವಣೆ ಮಾಡಿ ಕತೆ ಮಾಡಿಬಿಡಬಹುದು ಎಂದು ಹೇಳಿದರು. ನನಗಿರುವ ಆಸೆ ಅದೆ. ಆದರೆ ಈ ಕೆಲಸಕ್ಕೆ ಬಹಳ ಪ್ರತಿಭೆ, ಪ್ರೀತಿ ಬೇಕು. ಆಸೆಯಿದ್ದರೆ ಮಾತ್ರ ಸಾಲದು.<br /><br /><a onblur="try {parent.deselectBloggerImageGracefully();} catch(e) {}" href="http://4.bp.blogspot.com/_D9K0HARbkSE/SnJx4om5dYI/AAAAAAAAAHY/65JWj1CveVg/s1600-h/New+Picture.JPG"><img style="float:left; margin:0 10px 10px 0;cursor:pointer; cursor:hand;width: 189px; height: 320px;" src="http://4.bp.blogspot.com/_D9K0HARbkSE/SnJx4om5dYI/AAAAAAAAAHY/65JWj1CveVg/s320/New+Picture.JPG" border="0" alt=""id="BLOGGER_PHOTO_ID_5364475323938862466" /></a> ಮನುಷ್ಯನ, ಇನ್ನೊಬ್ಬ ಮನೆಯವರ ಕಷ್ಟವನ್ನು ನಮ್ಮದು, ನಮ್ಮದೇ ಎಂದು ತಿಳಿಯುವುದು ನಾವು ಪರಿಭಾವಿಸಿದಷ್ಟು ಸುಲಭವಲ್ಲ. ಸುಲಭವೇನು ಸಾಧ್ಯವೇ ಇಲ್ಲ ಎಂದು ನಂಬಿದವರು ನಾವು. ಅವರ ಕಷ್ಟ ಅವರಿಗೆ ನಮ್ಮ ಕಷ್ಟ ನಮಗೆ ಎಂಬ ಮಾತೇ ಇದೆಯಲ್ಲ. ಏಕೆಂದರೆ ಮನುಷ್ಯನ ಪ್ರೀತಿಸುವ ಶಕ್ತಿ ಬಹು ಸೀಮಿತವಾದದ್ದು. ನಾನು, ನನ್ನ ಹೆಂಡತಿ ಮಕ್ಕಳು, ನಮ್ಮ ಜಾತಿ, ನಮ್ಮ ದೇಶ ಇವುಗಳ ಗಡಿಯಿಂದಾಚೆಗೆ ಮನುಷ್ಯ ಹೋಗಲು ನಿರಾಕರಿಸುತ್ತಾನೆ. ನಿರಾಕರಿಸುತ್ತಾನೆ ಏನು, ಸಾಧ್ಯವೂ ಆಗುವುದಿಲ್ಲ. ಪ್ರಪಂಚದ ಬಹುತೇಕ ಮನುಷ್ಯರಿಗೂ, ಬಹುತೇಕ ಘಟನೆಗಳಿಗೂ ನಮಗೂ ಏನೂ ಸಂಬಂಧವೇ ಇಲ್ಲವೆಂದು ತಿಳಿಯುವ ನಮಗೆ ಕತೆಗಳು ಹೇಗೆ ಕಾಣಿಸಿಯಾವು. ಅಂದರೆ ನೀವು ಎಷ್ಟು ಕತೆಗಳನ್ನು ಕಾಣಬಲ್ಲಿರಿ ಎಂಬುದು ನಿಮ್ಮ ಪ್ರೀತಿಸುವ ಶಕ್ತಿಯನ್ನು, ನೀವು ಪ್ರಪಂಚದೊಡನೆ, ಪದಾರ್ಥಗಳೊಡನೆ ಇಟ್ಟುಕೊಳ್ಳುವ ಸಂಬಂಧದ ಸ್ವರೂಪವನ್ನು ಅವಲಂಬಿಸಿದೆ. ಈ ಜಗತ್ತಿನಲ್ಲಿ ನಡೆಯುವುದಕ್ಕೆಲ್ಲ ನೀವು ಹೊಣೆಗಾರರೆಂದು ಒಪ್ಪಿಕೊಳ್ಳುವುದಾದರೆ ನಿಮ್ಮ ಪಕ್ಕದ ಮನೆಯವರ ಕತೆಗೂ, ನಿಮ್ಮ ಕತೆಗೂ ಸಂಬಂಧವಿದೆ ಎಂದು ಒಪ್ಪಿಕೊಳ್ಳುವುದಾದರೆ ಮಾತ್ರ. ಹಾಗೆ ಒಪ್ಪಿಕೊಂಡು ವ್ಯಾಸ, ವಾಲ್ಮೀಕಿ, ಮಾಸ್ತಿ, ಟಾಲ್ಸ್ಟಾಯ್, ಕ್ಯಾಥರೀನ್, ಆನ್ ಪೋರ್ಟರ್ ಅಂತಹವರು ಬರೆದಿದ್ದರಿಂದಲೇ ಈಗ ನಮ್ಮೆದುರಿಗೆ ಒಂದಿಷ್ಟು ಒಳ್ಳೆಯ ಕಥಾ ಸಾಹಿತ್ಯವಾದರೂ ಇದೆ. ಹಾಗಲ್ಲದೆ ಆಧುನಿಕರಂತೆ, ನವ್ಯರಂತೆ ಅವರೆಲ್ಲರೂ ಅವರವರ ಬಾಲ್ಯದ ಅನುಭವಗಳನ್ನೋ, ಅವರವರ ಜಾತಿಯ ಕಷ್ಟ ಸುಖಗಳನ್ನೋ ಅವರವರ ಭ್ರಮೆಗಳನ್ನೋ ಮಾತ್ರವೇ ಹಿಡಿದು ಬರೆಯುತ್ತಾ ಕೂತಿದ್ದರೆ ಏನಾಗುತ್ತಿತ್ತು ನೀವು ಊಹಿಸಿಕೊಳ್ಳಬಹುದು.<br /><br />ಕತೆಗಾರರೊಬ್ಬರು ಹೇಳಿದ ಮಾತು ನೆನಸಿಕೊಂಡರೆ ಭಯವಾಗುತ್ತದೆ. ಹೇಳಬೇಕಾದ ಕತೆಗಳನ್ನು ಈಗಾಗಲೇ ಹೇಳಿಯಾಗಿದೆ. ಇನ್ನು ಹೊಸ ಕತೆಗಳೇ ಇಲ್ಲ ಎಂದು ಅಪ್ಪಣೆ ಕೊಡಿಸಿದವರು ಅವರು. ಬೇರೆ ಮಾತುಗಳಲ್ಲಿ ಅವರು ಹೇಳಿದ್ದೇನೆಂದರೆ ‘ಇನ್ನು ನಾವು ಕಾಣುವ ಅಗತ್ಯವಿಲ್ಲ’ವೆಂದು. ನಮ್ಮ ಸುತ್ತಮುತ್ತಲ ಪ್ರಪಂಚವನ್ನು, ಪದಾರ್ಥಗಳನ್ನು ಕಾಣದೆ, ಕಾಣಿಸದೇ ನಾವು ಬದುಕುವುದೆಂದರೆ ಆಯಸ್ಸು ಎಂಬುದು ಒಂದು ಶಿಕ್ಷೆಯಲ್ಲದೆ ಮತ್ತೇನು?<br /><br /><a onblur="try {parent.deselectBloggerImageGracefully();} catch(e) {}" href="http://2.bp.blogspot.com/_D9K0HARbkSE/SnJxlFmJNhI/AAAAAAAAAHQ/eKS6it_voBI/s1600-h/5.gif"><img style="float:left; margin:0 10px 10px 0;cursor:pointer; cursor:hand;width: 247px; height: 221px;" src="http://2.bp.blogspot.com/_D9K0HARbkSE/SnJxlFmJNhI/AAAAAAAAAHQ/eKS6it_voBI/s320/5.gif" border="0" alt=""id="BLOGGER_PHOTO_ID_5364474988122945042" /></a> ಬರೆಯುತ್ತಿರುವಾಗ ಕಣ್ಣೆದುರಿಗೆ ಬಣ್ಣ ಬಣ್ಣದ ಚಿಟ್ಟೆಗಳು ಕಾಣಿಸಿಕೊಳ್ಳುತ್ತಿವೆ. ಅವು ಪಾರ್ಥೇನಿಯಂ ಗಿಡದ ಮೇಲೆ ಕೂರುತ್ತಿವೆ. ಅದಕ್ಕೂ ನನಗೂ ಏನು ಸಂಬಂಧವೆನ್ನಲೇ ಅಥವಾ ಪಾರ್ಥೇನಿಯಂ ಗಿಡಗಳನ್ನ ಮನೆ ಸುತ್ತ ಬೆಳೆಸಿಕೊಂಡು ಅದಕ್ಕೂ ತನಗೂ ಸಂಬಂಧವಿಲ್ಲವೆನ್ನುವಂತೆ ಆ ಮನೆಯ ಒಡೆಯ ಬ್ಯಾಂಕಿನಲ್ಲಿ ಲಕ್ಷಾಂತರ ರೂಪಾಯಿ ಉಳಿಸಿ, ಮಕ್ಕಳನ್ನು ಕಾನ್ವೆಂಟಿಗೆ ಕಳಿಸಿ ಓದಿಸುತ್ತಾ ನಾಳೆಯ ಭವಿಷ್ಯ ಬಹು ಸುಂದರವಾಗಿರುತ್ತದೆ ಎಂದು ಕನಸು ಕಾಣುವ ದುರಂತದ ಬಗ್ಗೆ ಮಾತ್ರ ಬರೆಯಬೇಕೆ? ಚಿಟ್ಟೆಗಳು ಪಾರ್ಥೇನಿಯಂ ಗಿಡಗಳ ಮೇಲೆ ಕೂರಬೇಕಾಗಿ ಬಂದದ್ದು, ಕುಳಿತಾಗ ಏನಾಗಬಹುದೆಂಬ ಸಂಗತಿ, ಆ ಮನೆ ಒಡೆಯನ ಚಿಂತನೆಯ ದುರಂತಕ್ಕಿಂತ ಯಾವ ರೀತಿ ಕಡಿಮೆ. ಈಗ ಚಾಲ್ತಿಯಲ್ಲಿರುವ ಕಥನ ಕ್ರಮದ ಪ್ರಕಾರ ಮನೆ ಒಡೆಯನ ದುರಂತಕ್ಕೆ ನಾನು ಹೆಚ್ಚು ಗಮನ ಕೊಡಬೇಕು. ಚಿಟ್ಟೆ ಪಾರ್ಥೇನಿಯಂಗಳನ್ನೆಲ್ಲ ಸಸ್ಯಶಾಸ್ತ್ರಜ್ಞರಿಗೆ, ಛಾಯಾಗ್ರಾಹಕರಿಗೆ ಬಿಡಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿ ನನ್ನದೂ ಒಂದು ಕಾಣ್ಕೆಯಿದೆಯಲ್ಲ ದುರಂತಕ್ಕೆ; ಈ ಚಿಟ್ಟೆಗಳು, ಈ ಪಾರ್ಥೇನಿಯಂ ಇವೆಲ್ಲ ಈಗ ಬರೆಯುವಾಗ ಮಾತ್ರ ಕಾಣುತ್ತಿವೆ; ಎಷ್ಟೋ ವರ್ಷಗಳಿಂದ ಹೀಗೆ ಎದುರಿಗೇ ಇದ್ದರೂ ಮೊದಲು ಯಾಕೆ ಇವು ನನಗೆ ಕಾಣಲಿಲ್ಲ. ಈ ಸಂಗತಿಗಳಿಗೂ ನನಗೂ ಸಂಬಂಧವಿಲ್ಲವೆಂದೇ ನನ್ನ ಪ್ರಜ್ಞೆ ನನಗೇ ಹೇಳಿಕೊಂಡಿರಬೇಕು.<br /><br />ನಾನು ಕತೆಗಳನ್ನು, ಕತೆಗಾರಿಕೆಯನ್ನು ಸರಳೀಕರಿಸುತ್ತಿಲ್ಲ. ಹಾಗಂತ ಇದೆಲ್ಲವನ್ನು ಏನೋ ವಿಶೇಷವಾದದ್ದು ಎಂದು ನೋಡುವುದರಲ್ಲೂ ನನಗೆ ನಂಬಿಕೆಯಿಲ್ಲ. ನನ್ನ ಮಟ್ಟಿಗಂತೂ ಒಬ್ಬ ಕತೆಗಾರ ಅದೆಷ್ಟು ಕತೆಗಳನ್ನು ಬರೆಯುತ್ತಾನೆ, ಅದೆಷ್ಟು ಕಲಾತ್ಮಕವಾಗಿ ಬರೆಯುತ್ತಾನೆ ಎಂಬುದು ಮುಖ್ಯ ಸಂಗತಿಯೇ ಅಲ್ಲ. ಮನುಷ್ಯನಾಗಿ ಅವನು ಎಷ್ಟನ್ನು ಕಾಣುತ್ತಾನೆ, ಕಂಡ ಪದಾರ್ಥಗಳ ಸಂಗತಿಗಳ ಪರಸ್ಪರ ಸಂಬಂಧವನ್ನು ಎಷ್ಟರ ಮಟ್ಟಿಗೆ ತಿಳಿಯುತ್ತಾನೆ ಎಂಬುದು ನನಗೆ ಮುಖ್ಯ. ಇದಕ್ಕೂ ಕತೆಗಾರಿಕೆಗೂ ಸಂಬಂಧವಿಲ್ಲವೆನ್ನಬೇಡಿ. ಹಾಗೆ ಕಾಣುವವನು ನಮಗೂ ಕಾಣಿಸದೆ ಬಿಟ್ಟಾನೆ. ಆದರೆ ಅವನು ಕಾಣುವುದು, ಕಾಣಿಸುವುದು ಎಲ್ಲವೂ ಉಸಿರಾಟದಂತೆ, ಪ್ರೀತಿಯಂತೆ, ಚಿಟ್ಟೆಯ ಹಾರಾಟದಂತೆ, ಸಹಜವಾಗಿರುತ್ತದೆ, ಪ್ರಾಸಂಗಿಕವಾಗಿರುತ್ತದೆ. ತುಂಬಾ Elemental ಕೂಡಾ ಆಗಿರುತ್ತದೆ. "ಏನು ನೀನು ಹೇಳುವುದು, ಜಗತ್ತಿನಲ್ಲಿರುವವರೆಲ್ಲರೂ ಕತೆಗಾರರೋ, ಹಾಗಾದರೆ ನಮ್ಮ ಪ್ರತಿಭೆ, ಸೃಜನಶೀಲತೆ ಇವುಗಳಿಗೇನು ಬೆಲೆಯೇ ಇಲ್ಲವೆ" ಎಂದು ಕತೆಗಾರ ಮಿತ್ರರು ಮುನಿಯುವುದು ಬೇಡ. ಏಕೆಂದರೆ ಕೇವಲ ರಚಿಸುವ, ಶಿಲ್ಪಿಸುವ ಕತೆಗಳ ಬಗ್ಗೆ ನನಗೆ ಕೊಂಚವೂ ಆಸಕ್ತಿಯಿಲ್ಲ. ನನ್ನ ಆಸಕ್ತಿ ಏನಿದ್ದರೂ ನಮ್ಮಗಳ ಜೊತೆಯೇ ಬೆಳೆಯುವ, ಬದುಕುವ ಕತೆಗಳ ಬಗ್ಗೆಯೇ. ನಿಮಗಾಗಿ ನೀವು ಬರೆಯುವ ಕತೆಗಳನ್ನು ನಾನು ಓದದಿದ್ದರೂ ನಡೆದೀತು. ನನ್ನ ಜೊತೆಯೇ ಇರುವ, ನನ್ನೆದುರಿಗೆ ಇರುವ ಕತೆಗಳನ್ನ ಕಾಣದಿದ್ದರೆ ಹೇಗೆ. <br /><br /><a onblur="try {parent.deselectBloggerImageGracefully();} catch(e) {}" href="http://2.bp.blogspot.com/_D9K0HARbkSE/SnJxlFmJNhI/AAAAAAAAAHQ/eKS6it_voBI/s1600-h/5.gif"><img style="float:left; margin:0 10px 10px 0;cursor:pointer; cursor:hand;width: 247px; height: 221px;" src="http://2.bp.blogspot.com/_D9K0HARbkSE/SnJxlFmJNhI/AAAAAAAAAHQ/eKS6it_voBI/s320/5.gif" border="0" alt=""id="BLOGGER_PHOTO_ID_5364474988122945042" /></a> ಎದುರಿಗಿದ್ದ ಚಿಟ್ಟೆ ಆಗಲೇ ಎಲ್ಲಿಗೋ ಹಾರಿ ಹೋಗಿದೆ. ಈಗ ನೀವೇ ಹೇಳಿ, ನೀವು ಬರೆದಿರುವ ಕತೆ ಓದುತ್ತಾ ಕೂರಲೋ ಅಥವಾ ಆ ಚಿಟ್ಟೆಗಳಿಗೆ ಪಾರ್ಥೇನಿಯಂ ಮೇಲೆ ಬಂದಿರುವ ಮುನಿಸನ್ನೂ, ಬೇಸರವನ್ನೂ ತಿಳಿಯಲು ಅವುಗಳನ್ನು ಹಿಂಬಾಲಿಸಲೋ.<br /><span style="font-weight:bold;">(‘ಸಂಚಯ’ ಬೆಂಗಳೂರು, 1994.)</span><br /></span>ಕೆ. ಸತ್ಯನಾರಾಯಣhttp://www.blogger.com/profile/15167030166766836381noreply@blogger.com0tag:blogger.com,1999:blog-1964049159346480323.post-29140777014392234602009-06-28T05:18:00.000-07:002009-06-28T05:58:02.081-07:00ಪುಸ್ತಕಗಳ ಪುನರ್ಜನ್ಮ<a onblur="try {parent.deselectBloggerImageGracefully();} catch(e) {}" href="http://4.bp.blogspot.com/_D9K0HARbkSE/Skdhjujs8FI/AAAAAAAAAG4/TtiIxnDCNOE/s1600-h/manOdharma0001.jpg"><img style="margin: 0pt 10px 10px 0pt; float: left; cursor: pointer; width: 214px; height: 320px;" src="http://4.bp.blogspot.com/_D9K0HARbkSE/Skdhjujs8FI/AAAAAAAAAG4/TtiIxnDCNOE/s320/manOdharma0001.jpg" alt="" id="BLOGGER_PHOTO_ID_5352353948574216274" border="0" /></a>ಪುನರ್ಜನ್ಮದ ಕಲ್ಪನೆಯಲ್ಲಿ ನಂಬಿಕೆಯಿಲ್ಲದವರು ಕೂಡ ವಯಸ್ಸಾಗುತ್ತಿದ್ದಂತೆ ಪುನರ್ಜನ್ಮದ ಬಗ್ಗೆ ಆಸೆ ಪಡುತ್ತಾರೆ. ಮತ್ತೆ ತಾವು ಹುಟ್ಟಲು ಸಾಧ್ಯವಾಗುವುದಾದರೆ ಪ್ರಿಯರಾದವರ ಜೊತೆ, ಬಂಧುಗಳ ಜೊತೆ, ಶತ್ರು-ಹಿತ ಶತ್ರುಗಳ ಜೊತೆ ಹೇಗೆ ವ್ಯವಹರಿಸಬೇಕು ಎಂದೆಲ್ಲ ಲೆಕ್ಕ ಹಾಕುತ್ತಾರೆ. ಪುನರ್ಜನ್ಮದ ಕಲ್ಪನೆಯ ಬಗ್ಗೆಯೆ ಮನುಷ್ಯನಿಗೆ ಅದೇಕೆ ಅಷ್ಟೊಂದು ಆಸೆಯೆಂದರೆ ಅಮರತ್ವದ ಅವನ ಬಯಕೆಯನ್ನು ಅದು ಪೂರೈಸುತ್ತದೆ. ಮನುಷ್ಯ ಪುನರ್ಜನ್ಮದ ಸಂಬಂಧ ತುಂಬಾ ಗಹನವಾದ ವಿಷಯ, ತಾತ್ವಿಕರಿಗೆ, ಧರ್ಮಭೀರುಗಳಿಗೆ. ಅದನ್ನು ಬಿಟ್ಟು ಅಮರತ್ವ ಬಯಸದ, ನಿರ್ಲಿಪ್ತವಾಗಿ ನಿರುಪದ್ರವಿಯಾಗಿ ಗ್ರಂಥಾಲಯದ ಮೂಲೆಯಲ್ಲೋ, ಮನೆಯ ಅಟ್ಟದಲ್ಲೋ ಸೆಕೆಂಡ್ ಹ್ಯಾಂಡ್ ಪುಸ್ತಕದಂಗಡಿಯ ಬಿಕರಿ ವಸ್ತುವಾಗಿ ಫುಟ್ಪಾತ್ ಮೇಲೋ ಪುಸ್ತಕವೊಂದು ತಾನು ಬಯಸದೆ ಕೂಡ ಪುನರ್ಜನ್ಮ ಪಡೆಯುವ ಬಗೆ ಸೋಜಿಗವಾದದ್ದು.<br /><br /><span style="font-weight: bold;">ವರ್ಜೀನಿಯಾ</span><span style="font-weight: bold;"> </span><span style="font-weight: bold;">ವೂಲ್ಫ್</span>ದು ಒಂದು ಮಾತಿದೆ. `ನಿನ್ನ ಬರವಣಿಗೆಗೆ ಸಮಕಾಲೀನರಿಂದ ಬರುವ ಪ್ರತಿಕ್ರಿಯೆ, ಮೆಚ್ಚುಗೆ, ಪ್ರಶಸ್ತಿ ಇದೆಲ್ಲ ಸಾಕಾಗುತ್ತಿಲ್ಲವೆಂದು ನೀನು ತಲೆ ಕೆಡಿಸಿಕೊಳ್ಳಬೇಡ. ನಿಜಕ್ಕೂ ನೀನು ಪ್ರತಿಭಾವಂತನಾಗಿದ್ದರೆ, ಅದೃಷ್ಟವಂತನಾಗಿದ್ದರೆ, ಮುಂದೆಂದೋ ಒಂದು ದಿನ, ಒಬ್ಬ ಓದುಗ, ಕೇವಲ ಒಬ್ಬ ಓದುಗ ನಿನಗೆ ಪುನರ್ಜನ್ಮ ಕೊಡುತ್ತಾನೆ.' ಈ ಮಾತು ಎಷ್ಟು ಸತ್ಯ ಎಂಬುದು ಪ್ರತಿಯೊಬ್ಬ ಓದುಗನ ಅನುಭವಕ್ಕೂ ಬಂದಿರುತ್ತದೆ. ಅಪ್ರಜ್ಞಾಪೂರ್ವಕವಾಗಿ, ಅಸ್ಪಷ್ಟವಾಗಿ.<span class="fullpost"><br /><br /><a onblur="try {parent.deselectBloggerImageGracefully();} catch(e) {}" href="http://4.bp.blogspot.com/_D9K0HARbkSE/SkdiaTc5yEI/AAAAAAAAAHA/O-fiyOhX14I/s1600-h/Virginia.jpg"><img style="margin: 0pt 0pt 10px 10px; float: right; cursor: pointer; width: 205px; height: 248px;" src="http://4.bp.blogspot.com/_D9K0HARbkSE/SkdiaTc5yEI/AAAAAAAAAHA/O-fiyOhX14I/s320/Virginia.jpg" alt="" id="BLOGGER_PHOTO_ID_5352354886190745666" border="0" /></a>ದೊಡ್ಡ ಗ್ರಂಥಾಲಯವೊಂದಕ್ಕೆ ನೀವು ಪ್ರವೇಶಿಸುತ್ತೀರಿ. ಹಲವು ಅಂತಸ್ತುಗಳ ಕಟ್ಟಡ ಅದು. ಲಕ್ಷಾಂತರ ಪುಸ್ತಕಗಳು, ಮನುಷ್ಯನಾದವನು ನೂರಾರು ಜನ್ಮವೆತ್ತಿ, ಹತ್ತಾರು ದೇಶಗಳಲ್ಲಿ ಹುಟ್ಟಿ ಬರೆದ ಪುಸ್ತಕಗಳವು. ಒಂದು, ಒಂದೇ ಒಂದು ಪುಸ್ತಕವನ್ನು ನೀವು ಕೈಗೆತ್ತಿಕೊಳ್ಳುತ್ತೀರಿ. ಕತೆಯೋ, ಕಾದಂಬರಿಯೋ, ಜೀವನ ಚರಿತ್ರೆಯೋ, ಪ್ರವಾಸ ಕಥನವೋ, ಅದು ನಿಮ್ಮ ಮನಸ್ಸಿಗೆ ಪ್ರಿಯವಾಗುತ್ತದೆ. ಎಂದೋ, ಎಲ್ಲೋ, ಯಾರೋ ಬರೆದದ್ದು. ನಿಮ್ಮ ಅನುಭವಕ್ಕೆ, ಚಿಂತನೆಗೆ ಹೊಂದಿಕೆಯಾಗುವಂತಿರುತ್ತದೆ. ಆ ಕತೆ, ಆ ಚರಿತ್ರೆ, ಆ ಸನ್ನಿವೇಶ, ನಿಮ್ಮೆದುರಿಗೆ ನಡೆದಂತಾಗುತ್ತದೆ. ಮೆಚ್ಚಿ ನೀವು ಸುಮ್ಮನಿರುವುದಿಲ್ಲ. ನಿಮ್ಮ ಗೆಳೆಯರಿಗೆ, ಆಪ್ತರಿಗೆ ಹೇಳುತ್ತೀರಿ. ಕೃತಿ, ಅದರ ಲೇಖಕ, ಅವನ ಅನುಭವ, ಅವನ ಕಾಣ್ಕೆ, ಎಲ್ಲವೂ ನಿಮ್ಮಿಂದ ಪುನರ್ಜನ್ಮ ಪಡೆದು ಮತ್ತೆ ಚಾಲ್ತಿಗೆ ಬಂದು ಬಿಡುತ್ತದೆ. ನೀವು ಲೇಖಕರಾಗಿದ್ದು, ಸಾಹಿತ್ಯ ವಲಯದಲ್ಲಿದ್ದರೆ ಆ ಕೃತಿಯ ಬಗ್ಗೆ ಲೇಖನವನ್ನು, ವಿಮರ್ಶೆಯನ್ನೂ ಬರೆದು ಆ ಕೃತಿಯನ್ನು, ಆ ಲೇಖಕನನ್ನು ಸಮಕಾಲೀನ ಕೃತಿ-ಲೇಖಕನನ್ನಾಗಿ ಪರಿವರ್ತಿಸಿ ಬಿಡುತ್ತೀರಿ.<br /><br />ಇದೆಲ್ಲವೂ ನಮಗೆ ಸ್ಥೂಲವಾಗಿ ಅನುಭವಕ್ಕೆ ಬಂದಿರುವಂಥದ್ದೆ. ನನ್ನ ಅನುಭವದ ಒಂದೆರಡು ಪ್ರಸಂಗಗಳನ್ನು ಹೇಳುತ್ತೇನೆ. ವರ್ಷಗಳ ಹಿಂದೆ ನಡುರಾತ್ರಿಯಲ್ಲಿ ಎಚ್ಚರವಾಯಿತು. ನೀರವತೆ, ಆದರೂ ಏನೋ ಹವಣಿಕೆಯ ವಾಸನೆ, ತಹತಹ. ಏನೆಂದೂ ನನಗೂ ತಿಳಿಯುತ್ತಿಲ್ಲ. ಇಡೀ ಕೋಣೆಯೆಲ್ಲ ಯಾರದೋ ಆಗಮನಕ್ಕೆ, ಯಾರದೋ ಕಾಂತಿಗೆ ಸಿದ್ಧವಾಗುತ್ತಿರುವಂತಿದೆ. ನಡುರಾತ್ರಿಯಲ್ಲಿ ಯಾರು ಬರಬೇಕು. ನನಗೆ ದೆವ್ವ ಪ್ರೇತಗಳಲ್ಲಿ ನಂಬಿಕೆ ಕಡಿಮೆ, ನಂಬಲು ಆಸೆಯಿದ್ದರೂ. ಏನು ಮಾಡಿದರೂ ನಿದ್ದೆ ಬಾರದೆ ಶೆಲ್ಫ್ನಿಂದ ಒಂದು ಪುಸ್ತಕ ತೆಗೆದೆ. ಮಾಸ್ತಿಯವರ ಕತೆಗಳ ಸಂಗ್ರಹ ಅದು. ಪೂರ್ವಾಪರ ಯೋಚನೆಯಿಲ್ಲದೆ `<span style="font-weight: bold;">ಹೇಮಕೂಟದಿಂದ</span><span style="font-weight: bold;"> </span><span style="font-weight: bold;">ಬಂದ</span><span style="font-weight: bold;"> </span><span style="font-weight: bold;">ಮೇಲೆ</span>' ಕತೆಯನ್ನು ಓದಲು ಪ್ರಾರಂಭಿಸಿದೆ. ಎಷ್ಟೋ ಸಲ ಓದಿದ್ದು, ಆದರೆ ಆ ಕತೆ ಆ ನೀರವತೆಯಲ್ಲಿ ಮತ್ತೆ ಹುಟ್ಟಿದ ಬಗೆಯೇ ಬೇರೆ. ಕತೆ ಮುಗಿಸಿದ ತಕ್ಷಣ ಶಕುಂತಲೆ, ದುಷ್ಯಂತ, ಪ್ರಿಯಂವದೆ, ಅನಸೂಯ ಎಲ್ಲರೂ ನನ್ನೆದುರಿಗೆ ಬಂದು ಕೂತುಕೊಂಡ ಹಾಗೆ, ಶಕುಂತಲೆಯ ಪ್ರೇಮದ ವಿರಹದ ನೋವಿನ ಕತೆಯನ್ನು ಅವರವರ ದೃಷ್ಟಿಕೋನದಿಂದ ಬೆಳಗಾಗುವ ತನಕವೂ ಹೇಳಿದ ಹಾಗೆ. ಸುತ್ತಮುತ್ತಲ ವಾತಾವರಣದಲ್ಲಿದ್ದ ಹವಣಿಕೆ ಯಾವುದೋ ಅತಿಥಿಗಳ ಆಗಮನದ ಸೂಚನೆಯೆಂದು ನನಗೆ ಆಮೇಲೆ ಅರ್ಥವಾಯಿತು. ಮಾರನೆ ದಿನ ಬೆಳಿಗ್ಗೆಯಿಂದ ನನ್ನನ್ನು ಇಡಿಯಾಗಿ ಬೆನ್ನು ಹತ್ತಿದ ಈ ಕತೆಯನ್ನು ಹೊತ್ತುಕೊಂಡೇ ಇಡೀ ಬೆಂಗಳೂರು ನಗರದಲ್ಲಿದ್ದ ಸ್ನೇಹಿತರಿಗೆಲ್ಲ ತೋರಿಸಿ,ಅವರೆಲ್ಲರೂ ಕತೆಯನ್ನು ಓದುವಂತೆ ಮಾಡಿದೆ. ಶಕುಂತಲೆ, ಅವಳ ಕತೆ, ಎಲ್ಲವೂ ಮತ್ತೆ ನಮ್ಮೊಡನೆ ಬದುಕಲು ಪ್ರಾರಂಭಿಸಿದವು. ಆ ಕತೆಯ ಮೇಲೆ ನಾನು ಟಿಪ್ಪಣಿಯೊಂದನ್ನು ಕೂಡ ಬರೆದದ್ದುಂಟು.<br /><br /><a onblur="try {parent.deselectBloggerImageGracefully();} catch(e) {}" href="http://4.bp.blogspot.com/_D9K0HARbkSE/SkdkQ6Wbu0I/AAAAAAAAAHI/EEQx1bLsFe4/s1600-h/hemakoota0001.jpg"><img style="margin: 0pt 10px 10px 0pt; float: left; cursor: pointer; width: 217px; height: 263px;" src="http://4.bp.blogspot.com/_D9K0HARbkSE/SkdkQ6Wbu0I/AAAAAAAAAHI/EEQx1bLsFe4/s320/hemakoota0001.jpg" alt="" id="BLOGGER_PHOTO_ID_5352356923857156930" border="0" /></a>ಸಾಹಿತ್ಯ ವಲಯದ ವಾತಾವರಣ, ಜೀವಂತವಾಗಿರಬೇಕಾದರೆ ಈ ರೀತಿ ಕೃತಿಗಳು, ಲೇಖಕರು ದಿನವೂ ಓದುಗರ ಮನೆಗಳಲ್ಲಿ, ಮನಸ್ಸಿನಲ್ಲಿ, ಲೇಖಕರ ಕಲ್ಪನೆಗಳಲ್ಲಿ ಪುನರ್ಜನ್ಮ ಪಡೆಯುತ್ತಿರಲೇಬೇಕು. ವೈಯಕ್ತಿಕವಾಗಿ ನಮಗೆ ಹೀಗೆಲ್ಲ ಆಗುತ್ತಿರಬಹುದೇನೋ, ಆದರೆ ಉತ್ಸಾಹದಿಂದ, ಸಂಭ್ರಮದಿಂದ ನಾವು ಹಂಚಿಕೊಳ್ಳುವ, ಸಾಂಕ್ರಾಮಿಕಗೊಳಿಸಿರುವ ಉದಾಹರಣೆಗಳು ತೀರಾ ಕಡಿಮೆ. ಕನ್ನಡದ ಯಾವ ದಿನಪತ್ರಿಕೆಗಳೂ, ಸಾಹಿತ್ಯ ಪತ್ರಿಕೆಗಳೂ, ಇಂತಹ ಪುನರ್ಜನ್ಮದ ಅನುಭವವನ್ನು, ಅದರಿಂದ ಅನುಭವಿಸಿದ ಉತ್ಸಾಹವನ್ನು ದಾಖಲಿಸಿದ ಉದಾಹರಣೆಗಳು ಕಡಿಮೆ. ಶತಮಾನೋತ್ಸವ, ದಶಮಾನೋತ್ಸವ ಸಂದರ್ಭಗಳಲ್ಲೋ, ಸೆಮಿನಾರು ಸಂಕಿರಣದ ಸಂಕಷ್ಟದ ಸಮಯದಲ್ಲೋ ಹಿಂದಿನ ಲೇಖಕರ, ಕೃತಿಗಳ ಬಗ್ಗೆ ಲೇಖನಗಳು, ಪರಿಚಯ ಪ್ರಕಟವಾದರೂ ಇಂತಹ ಲೇಖನಗಳಲ್ಲೆಲ್ಲ ಸಾಂದರ್ಭಿಕ ಕೆಲಸವೊಂದನ್ನು ನಿರ್ವಹಿಸಿದ ಅಚ್ಚುಕಟ್ಟುತನ ಇರುತ್ತದೆಯೆ ಹೊರತು, ಮನುಷ್ಯರಾಗಿ, ಓದುಗರಾಗಿ ನಾವೇ ಅನುಭವಿಸಿದ ಸಂತೋಷ, ಪುಳಕ ಇರುವುದಿಲ್ಲ. ನನಗೆ ತಿಳಿದ ಮಟ್ಟಿಗೆ ಈ ರೀತಿಯ ಅಂಕಣ ಇರುವುದು ಹಿಂದೂ ಪತ್ರಿಕೆಯಲ್ಲಿ ಮಾತ್ರ. ಪ್ರತಿ ತಿಂಗಳಿಗೊಮ್ಮೆ ಪ್ರಕಟವಾಗುವ Classics Revisited ಅನ್ನುವ ಅಂಕಣದಲ್ಲಿ <span style="font-weight: bold;">ರವಿ</span><span style="font-weight: bold;"> </span><span style="font-weight: bold;">ವ್ಯಾಸ್</span> ಎನ್ನುವವರು ಹಳೆಯ ಪುಸ್ತಕಗಳ ಓದಿನ ಅನುಭವದಿಂದ ಸಿಗುವ ಸಂತೋಷವನ್ನು, ಆ ಪುಸ್ತಕಗಳು ನಮ್ಮ ಜೀವನಕ್ಕೆ ಹೇಗೆ ಪ್ರಸ್ತುತವೆಂಬುದನ್ನು ಪಂಡಿತ, ಪಾಮರರಿಬ್ಬರಿಗೂ ಪ್ರಿಯವಾಗುವಂತೆ ಸರಳ, ನೇರ, ವಿದ್ವತ್ಪೂರ್ಣ ಶೈಲಿಯಲ್ಲಿ ಹಂಚಿಕೊಳ್ಳುತ್ತಾರೆ. ಆ ಅಂಕಣವನ್ನು ಪ್ರತಿ ಸಲ ಓದುವಾಗಲೂ ಕನ್ನಡದಲ್ಲಿ ಇಂತಹದೊಂದು ಅಂಕಣವಿಲ್ಲದ್ದರ ಬಗ್ಗೆ ಬೇಸರವಾಗುತ್ತದೆ.<br /><br />ಲಕ್ಷಾಂತರ, ಕೋಟ್ಯಾಂತರ ಪುಸ್ತಕಗಳು ನಾವು ಹುಟ್ಟುವುದಕ್ಕೆ ಮುಂಚೆಯೆ ಪ್ರಕಟವಾಗಿ ಬಿಟ್ಟಿರುವುದರಿಂದ ಯಾವ ಪುಸ್ತಕಕ್ಕೆ ನಮ್ಮ ಮೂಲಕ ಪುನರ್ಜನ್ಮದ ಅದೃಷ್ಟ ಎಂಬುದನ್ನು ನಿರ್ಧರಿಸುವ ಸಂಗತಿ ಯಾವುದು? ಎಲ್ಲ ಹಳೆಯ ಪುಸ್ತಕಗಳಿಗೂ, ಪುರಾತನ ಹಸ್ತಪ್ರತಿಗಳಿಗೂ ಇಂತಹ ಅದೃಷ್ಟವಿರುವುದಿಲ್ಲ. ಗ್ರಂಥಾಲಯದಿಂದ ನಮ್ಮ ಮನೆಗೆ ಬರುತ್ತವೆ. ಅನಪೇಕ್ಷಿತ ಅತಿಥಿಗಳಂತೆ ನಮ್ಮೊಡನೆ ಇದ್ದು ಬಂದ ದಾರಿಗೆ ಸುಂಕವಿಲ್ಲದಂತೆ ಮತ್ತೆ ಗ್ರಂಥಾಲಯಕ್ಕೆ ವಾಪಸ್ಸಾಗುತ್ತವೆ. ಒಂದು ಕೃತಿ ನಮ್ಮಿಂದ ಪುನರ್ಜನ್ಮ ಪಡೆಯಬೇಕಾದರೆ, ಆ ಕೃತಿಯ ಆಕೃತಿಯಲ್ಲೋ, ಅನುಭವದಲ್ಲೋ, ಸನ್ನಿವೇಶ ವಿನ್ಯಾಸದಲ್ಲೋ, ಆ ಪುಸ್ತಕವನ್ನು ಎತ್ತಿಕೊಂಡ ಕ್ಷಣದಲ್ಲಿ ನಮ್ಮ ಮನಸ್ಸಿನ ಒಳತೋಟಿಗೆ, ಹಸಿವಿಗೆ ತಾಳೆಯಾಗುವಂತಹ ಸಂಗತಿ ಮತ್ತು ಕಾಂತಿಯಿರಬೇಕು. ಆವಾಗ ಮಾತ್ರ ಆ ಕೃತಿ ನಮ್ಮ ಒಳಗನ್ನು ಪ್ರವೇಶಿಸಿ ಕ್ಷಣಮಾತ್ರದಲ್ಲಿ ನವಮಾಸ ಧರಿಸಿ! ವ್ಯಾಸನ ಮಹಾಭಾರತವೋ, ಅದರ ಪ್ರಸಂಗಗಳೋ ನಮ್ಮದಾಗುವುದು ಹೀಗೆ. ಇವು ಪ್ರಸಿದ್ಧ ಕೃತಿಗಳ ಉದಾಹರಣೆಗಳು. ಹೀಗೆ ಪ್ರಸಿದ್ಧವಾಗದ ಎಷ್ಟೋ ಕೃತಿಗಳು ಕೂಡ ಒಬ್ಬ ಓದುಗನಿಂದ ಪುನರ್ಜನ್ಮ ಪಡೆಯಬಹುದು. ನಿಖರವಾಗಿ ಹೇಳಬೇಕೆಂದರೆ ಪ್ರಸಿದ್ಧವಾದ ಕೃತಿಗಳ ಪುನರ್ಜನ್ಮಕ್ಕೆ ಸಾಂಸ್ಕೃತಿಕ ವಾತಾವರಣದಲ್ಲೆ ನಾನಾ ರೀತಿಯ ಪರಿಕರಗಳಿರುತ್ತವೆ. ಪುರಾಣಗಳ ಪಾರಾಯಣವಾಗಬಹುದು, ಪಠ್ಯಪುಸ್ತಕಗಳ ಮೂಲಕವಾಗಬಹುದು. ಸಂಘ ಸಂಸ್ಥೆಗಳಿಂದ ಪುನರ್ಮುದ್ರಣದ ಅವಕಾಶವಾಗಬಹುದು, ಹೇಗೋ ಅವು ನಮ್ಮನ್ನು ತಲುಪಿಬಿಡುತ್ತವೆ. ನನ್ನ ಆಸಕ್ತಿಯಿರುವುದು ಅಂತಹ ಕೃತಿಗಳ ಪುನರ್ಜನ್ಮದಲ್ಲಲ್ಲ. ಮನುಷ್ಯರಾಗಿ, ಓದುಗರಾಗಿ ನಾವೇ ಖುದ್ದಾಗಿ ಆಯ್ಕೆ ಮಾಡಿ ಪುನರ್ಜನ್ಮ ಕೊಟ್ಟ ಕೃತಿಗಳಲ್ಲಿ.<br /><br />ಪುಸ್ತಕಕ್ಕೆ ಮಾತ್ರ ಪುನರ್ಜನ್ಮವೆಂದು ತಿಳಿದರೆ ತಪ್ಪಾಗುತ್ತದೆ. ಪುಸ್ತಕಕ್ಕೆ ಪುನರ್ಜನ್ಮ ಕೊಡುವ ಪ್ರಕ್ರಿಯೆಯಲ್ಲಿ, ನಾವೂ, ನಮ್ಮ ಅನುಭವ ಚಿಂತನೆಗಳು ಕೂಡ ಪುನರ್ಜನ್ಮ ಪಡೆಯುತ್ತವೆ. ಹೆಣ್ಣಿನ ಜೀವನ, ದೃಷ್ಟಿಕೋನ ಕುರಿತಂತೆ ನಮ್ಮಲ್ಲಿರುವ ಬಹುಪಾಲು ಕೃತಿಗಳು ಆಕೆಯನ್ನು ತಾಯಿಯಂತೆ ಮಾತ್ರ ನೋಡಿ ಆಕೆಯ ಪಾಲನಾ ಪ್ರವೃತ್ತಿಗೆ ಮಾತ್ರ ಒತ್ತು ನೀಡಿವೆ. ಕುವೆಂಪು, ಬೇಂದ್ರೆ, ಮಾಸ್ತಿ, ಕಾರಂತ ಎಲ್ಲರ ಬಹುತೇಕ ಸ್ತ್ರೀ ಪಾತ್ರಗಳು ಮಾತೃ ಕಲ್ಪನೆಗೆ, ಪಾಲನಾ ಪ್ರವೃತ್ತಿಗೆ ಹತ್ತಿರವಾದವು. ನಂತರದ ಲೇಖಕಿಯರು ಹೆಂಗಸರಲ್ಲಿರುವ ಪ್ರತಿಭಟನೆ, ಬಂಡಾಯ, ಜೀವಂತಿಕೆಯ ಅಂಶಕ್ಕೆ ಒತ್ತುಕೊಟ್ಟರು. ಹೀಗೆಲ್ಲ ಅಲ್ಲದೆ ಹೆಂಗಸನ್ನು ಬೇರೊಂದು ದೃಷ್ಟಿಯಿಂದ ಕೂದ ನೋಡಬಹುದೆಂಬುದನ್ನು ಮಹಾಶ್ವೇತಾದೇವಿಯವರ `<span style="font-weight: bold;">1084 </span><span style="font-weight: bold;">ತಾಯಿ</span>' ಕಾದಂಬರಿ ತೋರಿಸಿಕೊಡುತ್ತದೆ. ಸ್ವಂತ ಮಗನನ್ನೆ ರಾಜಕೀಯ ಕಾರಣಕ್ಕಾಗಿ ಕಳೆದುಕೊಂಡ ತಾಯಿ, ತನ್ನ ಮಗನಂತಹ ಬಂಡಾಯಗಾರರನ್ನು, ಅವರ ಮೂಲಕ ಸಮಾಜವನ್ನು ಪ್ರೀತಿಸುವುದು, ಅರ್ಥ ಮಾಡಿಕೊಳ್ಳುವುದು, ಈ ಕಾದಂಬರಿಯ ವಿನ್ಯಾಸದಲ್ಲಿದೆ. ಹೆಂಗಸಿನ ಎಲ್ಲ ಗುಣಗಳನ್ನು, ಮಾತೃ ಕಲ್ಪನೆಯನ್ನು, ಪಾಲನಾ ಪ್ರವೃತ್ತಿಯನ್ನು ಹೊಸ ದೃಷ್ಟಿಕೋನದಿಂದ ನೋಡಬಹುದೆಂಬುದನ್ನು, ತಾಯಿಯ ಕಲ್ಪನೆಯೇ ಸಾಮಾಜಿಕವಾದಾಗ ಆಧ್ಯಾತ್ಮಿಕ ಆಯಾಮವನ್ನು ಕೂಡ ಪಡೆಯಬಹುದೆಂಬುದನ್ನು ಈ ಕೃತಿ ತೋರಿಸಿಕೊಟ್ಟಿದೆ. ಈ ಕಾದಂಬರಿ ಓದಿ ಮುಗಿಸಿದ ಮೇಲೆ ಒಂದಷ್ಟು ದಿನ ನಾನು ಅದರ ಗುಂಗಿನಲ್ಲೇ ಇದ್ದೆ. <a onblur="try {parent.deselectBloggerImageGracefully();} catch(e) {}" href="http://4.bp.blogspot.com/_D9K0HARbkSE/Skdhjujs8FI/AAAAAAAAAG4/TtiIxnDCNOE/s1600-h/manOdharma0001.jpg"><img style="margin: 0pt 10px 10px 0pt; float: left; cursor: pointer; width: 214px; height: 320px;" src="http://4.bp.blogspot.com/_D9K0HARbkSE/Skdhjujs8FI/AAAAAAAAAG4/TtiIxnDCNOE/s320/manOdharma0001.jpg" alt="" id="BLOGGER_PHOTO_ID_5352353948574216274" border="0" /></a>ದಿನ ಕಳೆದಂತೆ ಈ ಗುಂಗು ಒಂದು ರೀತಿಯ ಅನುಮಾನಕ್ಕೆ ಕಾರಣವಾಯಿತು. ಇಷ್ಟೊಂದು ಉದಾತ್ತವಾದ ಪಾತ್ರವನ್ನು, ಕಲ್ಪನೆಯನ್ನು ಮಾತ್ರವೇ ನಾವೇಕೆ ಮೆಚ್ಚಿಕೊಳ್ಳಬೇಕು. ಹೆಂಗಸು ನಮ್ಮ ತಾಯಂದಿರಂತೆ, ಹೆಂಡತಿಯರಂತೆ, ಸೋದರಿಯರಂತೆ, ಒಂದೇ ಕಾಲದಲ್ಲಿ ಎಲ್ಲ ಆಯಾಮಗಳನ್ನೊಳಗೊಂಡಿರಬಹುದಲ್ಲವೆ? ಸಾಧಾರಣ ಹೆಂಗಸರಲ್ಲೂ ಪಾಲನಾ ಪ್ರವೃತ್ತಿ, ಕನಸುಗಾರಿಕೆ, ಬಂಡುಕೋರತನ, ಜೀವನ ಪ್ರೀತಿ, ವ್ಯಾವಹಾರಿಕತೆ, ಜಿಗುಟುತನ, ಸೌಂದರ್ಯಾರಾಧನೆ, ಎಲ್ಲವೂ ಇರುತ್ತದಲ್ಲ. ಹಾಗಾದರೆ ಮಹಾಶ್ವೇತಾದೇವಿಯವರ ಉದಾತ್ತ ಕಲ್ಪನೆ ಮತ್ತು ಅದನ್ನು ನಾನು ಇಷ್ಟಪಟ್ಟಿದ್ದು ಸುಳ್ಳೆ.<br /><br />ಈ ಗೊಂದಲದಲ್ಲಿರುವಾಗ ನನಗೆ ಆಕಸ್ಮಿಕವಾಗಿ ಸಿಕ್ಕಿದ್ದು ಹಿಂದಿ ಲೇಖಕಿ ಕೃಷ್ಣಾ ಸೋಬತಿಯವರ `<span style="font-weight: bold;">ವಾಯ್</span><span style="font-weight: bold;"> </span><span style="font-weight: bold;">ಲಡಕಿ</span>' ಕಿರುಕಾದಂಬರಿಯ ಇಂಗ್ಲೀಷ್ ಅನುವಾದ. ಈ ಕಾದಂಬರಿಯ ನಾಯಕಿ ನಮಗೆ ನಿಮಗೆ ಗೊತ್ತಿರುವ ಸಾಮಾನ್ಯ ಹೆಂಗಸಿನ ಎಲ್ಲ ಗುಣ ಸ್ವಭಾವಗಳನ್ನು ಒಳಗೊಂಡಿದ್ದಾಳೆ. ಹಾಗೆ ಸಾಮಾನ್ಯ ಹೆಂಗಸಾಗಿರುವುದರಲ್ಲೇ ವಿಶಿಷ್ಟವಾಗಿದ್ದಾಳೆ. ಈಕೆ ಸಾವನ್ನು ಸಮೀಪಿಸುತ್ತಿದ್ದು ತೀವ್ರವಾದ ಅನಾರೋಗ್ಯವನ್ನು ಅನುಭವಿಸುತ್ತಿದ್ದಾಳೆ. ಸಿಂಹಾವಲೋಕನದ ಕ್ರಮದಲ್ಲಿ ಅವಳ ಬಾಲ್ಯ, ಯೌವನ, ಕಾಮ ಜೀವನ, ಗಂಡನೊಡನೆ ಜೀವನ, ಅತೃಪ್ತಿ, ಕೌಟುಂಬಿಕ ಬಯಕೆ, ಮುಂದಿನ ಪೀಳಿಗೆಗೆ ಹೊಂದಿಕೊಳ್ಳುವ ಕಷ್ಟ, ಹೆಂಗಸರಿಗೆ ವಿಶಿಷ್ಟವಾಗಿರುವ ಜೀವನ ವಿವರಗಳ ಕಕ್ಕುಲಾತಿ, ಬಂಡಾಯದ ಆಸೆ, ಆತ್ಮಜ್ಞಾನ, ದೈವದ ಬಯಕೆ - ಏನುಂಟು, ಏನಿಲ್ಲ ಅನ್ನುವಂತೆ, ಎಲ್ಲವೂ ಸೇರಿಕೊಂಡಿವೆ. ಈ ಕಾದಂಬರಿಯನ್ನು ಓದಲು ಕೊಟ್ಟಿದ್ದ ಸ್ನೇಹಿತರು ಕೃತಿಯ ಬಗ್ಗೆ ಬಹಳ ಶಿಫಾರಸ್ ಮಾಡಿದ್ದರು. ಹಾಗಾಗಿ ಒಂದು ರೀತಿಯ ಅನುಮಾನದಿಂದ ನಾನು ಕೃತಿಯನ್ನು ಕೆಲದಿನ ತಡೆದೇ ಓದಿದೆ. ಒಂದು ಸಲ, ಎರಡು ಸಲ, ಮೂರು ಸಲ ಓದಿ, ಒಳಗಡೆ ಇಳಿದ ಮೇಲೆ ಒಂದು ರೀತಿಯ ರಿಲೀಸ್ ಭಾವನೆಯನ್ನು ಅನುಭವಿಸಿದೆ. ನನ್ನ ಇದುವರೆಗಿನ ಜೀವನದಲ್ಲಿ ನನ್ನ ಅನುಭವಕ್ಕೆ ಬಂದ ಹೆಂಗಸರೆಲ್ಲರೂ ತಾಯಿ, ತಂಗಿ, ಹೆಂಡತಿ, ಗೆಳತಿ, ಸಹೋದ್ಯೋಗಿಗಳು ತೀರಾ ಸಾಧಾರಣದವರು - ಎಲ್ಲರೂ ಹೊಸ ಪ್ರಭೆಯಲ್ಲಿ, ಹೊಸ ಸಾರ್ಥಕ ರೂಪದಲ್ಲಿ ಕಾಣತೊಡಗಿದರು. ಮಹಾಶ್ವೇತಾದೇವಿಯವರ ಉದಾತ್ತ ಪಾತ್ರದ ಕಲ್ಪನೆಯ ನೆರವಿಲ್ಲದೆಯೂ. ಕೃಷ್ಣಾ ಸೋಬತಿಯವರ ಕೃತಿ ನಾನು ಓದಿದ್ದರಿಂದ ಆ ಕೃತಿ ಅದರಿಂದ ಮೂಡಿದ ಉತ್ಸಾಹದಿಂದಾಗಿ ನನ್ನ ಮತ್ತು ಸ್ನೇಹಿತರ ವಲಯದಲ್ಲಿ ಪುನರ್ಜನ್ಮ ಪಡೆದದ್ದು ಮಾತ್ರವಲ್ಲ ಅದರ ಮೂಲಕ ನನ್ನ ಇದುವರೆಗಿನ ಅನುಭವ ಚಿಂತನೆಗಳು ಪುನರ್ಜನ್ಮ ಪಡೆದದ್ದು ಕೂಡ ಅಷ್ಟೇ ನಿಜ. ಹೀಗೆ ಪುಸ್ತಕಗಳಿಗೆ ಪುನರ್ಜನ್ಮ ಕೊಡಲು ಹೋಗಿ ನಾವೇ ಪುನರ್ಜನ್ಮ ಪಡೆಯುವುದು ಎಷ್ಟು ಅದೃಷ್ಟವಲ್ಲವೆ?<br /><br /><span style="font-weight: bold;">(`</span><span style="font-weight: bold;">ಬಿಸಿಲ</span><span style="font-weight: bold;"> </span><span style="font-weight: bold;">ಬದುಕು</span><span style="font-weight: bold;">' </span><span style="font-weight: bold;">ಮಾಸಿಕ</span><span style="font-weight: bold;"> </span><span style="font-weight: bold;">ಬೆಂಗಳೂರು</span><span style="font-weight: bold;">-</span><span style="font-weight: bold;">೨೦೦೦</span><span style="font-weight: bold;">)</span><br /><br /><span style="font-weight: bold;">("</span><span style="font-weight: bold;">ಮನೋಧರ್ಮ</span><span style="font-weight: bold;"> - </span><span style="font-weight: bold;">ವಿಮರ್ಶಾ</span><span style="font-weight: bold;"> </span><span style="font-weight: bold;">ಲೇಖನಗಳ</span><span style="font-weight: bold;"> </span><span style="font-weight: bold;">ಸಂಗ್ರಹ</span><span style="font-weight: bold;">" </span><span style="font-weight: bold;">ಕೃತಿಯಲ್ಲಿ</span><span style="font-weight: bold;"> </span><span style="font-weight: bold;">ಪ್ರಕಟಿತ</span><span style="font-weight: bold;">.)</span><br /><br /><span style="font-weight: bold;">(</span><span style="font-weight: bold;">ರೇಖಾಚಿತ್ರ</span><span style="font-weight: bold;">: </span><span style="font-weight: bold;">ನಾಡಿನ</span><span style="font-weight: bold;"> </span><span style="font-weight: bold;">ಖ್ಯಾತ</span><span style="font-weight: bold;"> </span><span style="font-weight: bold;">ಚಿತ್ರಕಲಾವಿದ</span><span style="font-weight: bold;"> </span><span style="font-weight: bold;">ಶ್ರೀ</span><span style="font-weight: bold;"> </span><span style="font-weight: bold;">ಬಿ</span><span style="font-weight: bold;">.</span><span style="font-weight: bold;">ಕೆ</span><span style="font-weight: bold;">.</span><span style="font-weight: bold;">ಎಸ್</span><span style="font-weight: bold;">.</span><span style="font-weight: bold;">ವರ್ಮಾ</span><span style="font-weight: bold;">, </span><span style="font-weight: bold;">ಮಾಸ್ತಿಯವರ</span><span style="font-weight: bold;"> `</span><span style="font-weight: bold;">ಹೇಮಕೂಟದಿಂದ</span><span style="font-weight: bold;"> </span><span style="font-weight: bold;">ಬಂದಮೇಲೆ</span><span style="font-weight: bold;">' </span><span style="font-weight: bold;">ಕತೆಗಾಗಿ</span> <span style="font-weight: bold;">ಬಿಡಿಸಿದ್ದನ್ನು</span><span style="font-weight: bold;"> </span><span style="font-weight: bold;">ಕೃತಜ್ಞತಾಪೂರ್ವಕ</span><span style="font-weight: bold;"> </span><span style="font-weight: bold;">ಬಳಸಿಕೊಳ್ಳಲಾಗಿದೆ</span><span style="font-weight: bold;">.)</span></span>ಕೆ. ಸತ್ಯನಾರಾಯಣhttp://www.blogger.com/profile/15167030166766836381noreply@blogger.com0tag:blogger.com,1999:blog-1964049159346480323.post-18134029310401451062009-05-26T01:50:00.001-07:002009-05-26T01:55:32.879-07:00ಆತಂಕ, ತಲ್ಲಣ, ಸೃಜನಶೀಲತೆ: ಉಸಿರಾಟದಷ್ಟೇ ನಿರಂತರಬರಹಗಾರನಾಗಿ ನನಗಿರುವ ಆತಂಕಗಳು-ತಲ್ಲಣಗಳು ಈ ಸಮಾಜದ ನಾಗರೀಕನಾಗಿ, ಗೃಹಸ್ಥನಾಗಿ ನನಗಿರುವ ಆತಂಕಗಳಿಗಿಂತ ಭಿನ್ನವಾಗೇನಿಲ್ಲ, ಇರಲೂ ಕೂಡದು. ಒಂದು ಕಾಲಘಟ್ಟದಲ್ಲಿ ಬದುಕುವ ಎಲ್ಲ ಮನುಷ್ಯರಿಗಿರುವ ಆತಂಕ ನೋವುಗಳು ಬರಹಗಾರನಿಗೂ ಇರುತ್ತವೆ. ಹೆಚ್ಚೆಂದರೆ ಇಂತಹ ತಲ್ಲಣಗಳ ಬಗ್ಗೆ ಬರಹಗಾರ ಕೊಂಚ ಹೆಚ್ಚು ಸಂವೇದನಾಶೀಲನಾಗಿರಬಹುದು; ಅಷ್ಟೇ. ಸಮಕಾಲೀನ ಜಗತ್ತಿನ ಬಗ್ಗೆ ಹೆಚ್ಚು ಬರೆಯುವ ನನ್ನ ವಿಷಯದಲ್ಲಂತೂ ಈ ಮಾತು, ನೋಟ ಇನ್ನೂ ಹೆಚ್ಚು ನಿಚ್ಚಳ. ಇಂತಹ ಆತಂಕಗಳಲ್ಲಿ ಒಂದೆರಡನ್ನು ಇಲ್ಲಿ ಚರ್ಚಿಸಬಯಸುತ್ತೇನೆ.<br /><br />ಈಗ ನನಗೆ 55 ವರ್ಷ. ನಾನು ವ್ಯಕ್ತಿಯಾಗಿ ಬರಹಗಾರನಾಗಿ ರೂಪುಗೊಳ್ಳಲು ಕಾರಣವಾದ ಸಂದರ್ಭದಲ್ಲಿ ಇದ್ದ ಜಗತ್ತಿಗೂ ಈವತ್ತಿಗೂ ತುಂಬಾ ವ್ಯತ್ಯಾಸವಿದೆ. ತಂತ್ರಜ್ಞಾನ, ಜಾಗತೀಕರಣ, ಮಾಧ್ಯಮದ ಆಕ್ರಮಣ ಇವುಗಳ ಜೊತೆಗೆ ಈವತ್ತಿನ ಸಂದರ್ಭದಲ್ಲಿ ಹಿಂದೆ ಇದ್ದದ್ದಕ್ಕಿಂತಲೂ ಹೆಚ್ಚು ಜನ ವರ್ಗಗಳು, ಸಮುದಾಯಗಳು ಕ್ರಿಯಾಶೀಲವಾಗಿವೆ. ಸಮಾಜದ ಅಧಿಕಾರದಲ್ಲಿ, ಅವಕಾಶಗಳಲ್ಲಿ, ಪ್ರಭಾವದಲ್ಲಿ ಹೆಚ್ಚು ಹೆಚ್ಚು ಸ್ಥಾನವನ್ನು ಪಡೆದಿವೆ, ಪಡೆಯುತ್ತಿವೆ. ಸಮಾಜದಲ್ಲಿ ಆದರ್ಶವಾದದ ನೊಗ ಹೊತ್ತು ಇಡೀ ಬದುಕನ್ನು ಅದಕ್ಕಾಗಿ ಮೀಸಲಿಡುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ನಮ್ಮ ನಮ್ಮ ಜಾತಿಗಳ ಸಮುದಾಯಗಳ ವಿಶಿಷ್ಟತೆಯನ್ನು ಸ್ಥಾಪಿಸುವುದರಲ್ಲಿರುವಷ್ಟು ನಮಗಿರುವ ಆಸಕ್ತಿ ಒಟ್ಟು ಸಮಾಜವನ್ನು ಕಾಡುವ ಸಮಸ್ಯೆಗಳ ಬಗ್ಗೆ ಇಲ್ಲ. ಹೀಗೆ ಹೇಳುತ್ತಾ ಹೋಗಬಹುದು. ಇದನ್ನೆಲ್ಲ ನಾವು ಹೇಗೆ ಗ್ರಹಿಸುತ್ತೇವೆ, ಅಭಿವ್ಯಕ್ತಗೊಳಿಸುತ್ತೇವೆ ಎಂಬುದೇ ಮುಖ್ಯ.<span class="fullpost"><br /><br />ಕಾಲಧರ್ಮಕ್ಕನುಗುಣವಾಗಿ ನಾವು ಗ್ರಹಿಸುವ ವಿವರಗಳು ಹೊಸದಾಗಿವೆ, ಭಿನ್ನವಾಗಿವೆ. ಆದರೆ ಈ ವಿವರಗಳ ಹಿಂದಿರುವ ಗ್ರಹಿಕೆಯ ಕ್ರಮ, ತಾತ್ವಿಕ ಭಿತ್ತಿ ಮಾತ್ರ ಎಪ್ಪತ್ತು-ಎಂಭತ್ತರ ದಶಕದಲ್ಲಿ ರೂಪುಗೊಂಡದ್ದೆ ಎನಿಸುತ್ತದೆ. ನಾಲಿಗೆ, ತಲೆ ನಮ್ಮದಾದರೂ ಮೆದುಳು ಹಿಂದಿನವರದು. ಚರ್ಮ ನಮ್ಮದಾದರೂ ಹೃದಯ ಹಿಂದಿನವರದು. ಗಾಂಧಿಯ ಉತ್ತರಗಳು, ಮಾರ್ಕ್ಸ್ನ ಪರಿಹಾರಗಳನ್ನು ಕುರಿತು ಇನ್ನೂ ಸಂಭ್ರಮಿಸುವ ನಾವು ಸಮಾಜದ ಆರೋಗ್ಯ-ನೆಮ್ಮದಿ ಕುರಿತಂತೆ ಈ ಮಹನೀಯರು ಕೇಳಿದ ಪ್ರಶ್ನೆಗಳನ್ನು, ಪ್ರಶ್ನೆಗಳ ಹಿಂದಿನ ತುರ್ತನ್ನು ಮರೆತು ಬಿಟ್ಟಿದ್ದೇವೆ. ಈ ಚಿಂತಕರ ಮಹತ್ವವಿರುವುದು ಅವರು ಕೇಳಿಕೊಂಡ ಪ್ರಶ್ನೆಗಳಲ್ಲಿ, ಪ್ರಶ್ನೆಗಳನ್ನು ಕೇಳುತ್ತಿದ್ದ ಧೀಮಂತಿಕೆಯಲ್ಲಿ. ಇದನ್ನೆಲ್ಲ ಹಿನ್ನೆಲೆಗೆ ಸರಿಸಿ ಈ ಮಾನ್ಯರ ಉತ್ತರಗಳ ಆಸರೆಯಲ್ಲೇ ಮಾತನಾಡುತ್ತಿದ್ದರೆ ನಮ್ಮ ಗ್ರಹಿಕೆ ಸ್ಥೂಲವಾಗಿರುತ್ತದೆ. ಆಗ ನಮಗೆ, ಮನಸ್ಸಿಗೆ, ಯೋಚಿಸಿದ ಸುಖ, ಸಮಾಧಾನ ಸಿಗಬಹುದೇ ಹೊರತು, ನಿಜವಾಗಿಯೂ ನಾವು ಯೋಚಿಸುತ್ತಿರುವುದಿಲ್ಲ, ಗಿಳಿಪಾಠ ಹೇಳುತ್ತಿರುತ್ತೇವೆ. ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೆ ಹೇಳುವುದಾದರೆ ನವ್ಯ ಚಳುವಳಿಯವರು ಚಿಂತನಾ ಕ್ರಮದಲ್ಲಿ ತಂದ ಹೊಸ ಪಲ್ಲಟ ನಂತರ ಕಂಡುಬರಲಿಲ್ಲ. ಕಂಡು ಬಂದದ್ದೇನಿದ್ದರೂ ಹೊಸ ವಿವರಗಳು, ಆಶಯಗಳು, ಆಕಾಂಕ್ಷೆಗಳು.<br /><br />ಈ ಬಿಕ್ಕಟ್ಟಿನಿಂದ ದೂರವುಳಿಯಲು ನಾನು ನನ್ನ ಪ್ರತಿಭೆ-ಸ್ವಭಾವಕ್ಕನುಗುಣವಾಗಿ ನನಗೆ ಗೊತ್ತಿಲ್ಲದೇ ಬೇರೆ ಮಾರ್ಗವನ್ನು ಕಂಡುಕೊಳ್ಳಬೇಕಾಯಿತು. ನವ್ಯ ಚಳುವಳಿಯಿಂದಾದ ಒಂದು ದೊಡ್ಡ ತಪ್ಪೆಂದರೆ ರೂಪಕ ಪ್ರತಿಭೆಯನ್ನು ಬರವಣಿಗೆಯ ಶಿಖರ ಸಾಧನೆ ಎಂಬ ನಂಬಿಕೆಯನ್ನು ಚಾಲ್ತಿಗೆ ತಂದದ್ದು. ಈ ನಂಬಿಕೆಗನುಗುಣವಾಗಿ ನವ್ಯರು ಇತರ ಸಾಹಿತ್ಯ ಮಾರ್ಗದಲ್ಲಿ ಬಂದ ಕೃತಿಗಳನ್ನು ಓದುತ್ತಾ ಹೋದರು, ಅರ್ಥೈಸುತ್ತಾ ಹೋದರು. ಎಲ್ಲ ಘಟನೆಗಳು, ವ್ಯಕ್ತಿಗಳು, ವಿದ್ಯಮಾನಗಳು ರೂಪಕಗಳೇ ಆಗಬೇಕೆ? ಪ್ರಾತಿನಿಧಿಕತೆ, ಸಾಂಕೇತಿಕತೆಯೆಂಬುದು ನಾವೆಲ್ಲ ನಂಬಿರುವಷ್ಟು ಅನಿವಾರ್ಯವೇ? ನಾವಾಗಲೀ, ನೀವಾಗಲೀ, ನನ್ನ ಬದುಕಾಗಲೀ ನಿಮ್ಮ ಬದುಕಾಗಲೀ ಇರುವುದು ಕೇವಲ ಅರ್ಥವಾಹಕವಾಗುವುದಕ್ಕೆ ಮತ್ತು ರೂಪಕವಾಗುವುದಕ್ಕೆ ಮಾತ್ರವೇ? ನಮಗೆ ನಾವೇ ವಿಶಿಷ್ಟ ಮಾನಸಿಕ ಘಟಕಗಳಾಗಿ, ಸ್ವತಂತ್ರ ಜೀವಗಳಾಗಿ ಬದುಕುವ ಸಾಧ್ಯತೆ, ಹಕ್ಕಿಲ್ಲವೇ? ಈ ಪ್ರಶ್ನೆಗಳನ್ನು ಕೇಳಿಕೊಳ್ಳುವಾಗ ನನಗಿರುವ ನಿಸ್ಸಹಾಯಕತೆಯಲ್ಲಿ ನಾನು ಸಾಹಿತ್ಯ-ಸಂಸ್ಕೃತಿ, ಚಿಂತನೆಯಲ್ಲಿ ಅಡಕವಾಗಿರುವ ಮೂಲ ಮಾದರಿ (Arche Types)ಗಳ ಅಗತ್ಯವನ್ನು ವಿರೋಧಿಸುತ್ತಿದ್ದೇನೆಂದು ತಪ್ಪು ತಿಳಿಯಬಾರದು.<br /><br />ಕತೆ-ಕಾದಂಬರಿಗಳನ್ನು ಬರೆಯುವ ಸಂದರ್ಭದಲ್ಲಿ ನಾನು ಕಾಣುವುದು, ಕಾಣಿಸಲು ಪ್ರಯತ್ನಿಸುವುದು ಆದಷ್ಟೂ ದಿಗಂಬರವಾದ ಮನುಷ್ಯರನ್ನು. ಎಲ್ಲರಿಗೂ ಸಾಮಾಜಿಕ ಕವಚಗಳಿರುತ್ತವೆ, ಮುಖವಾಡಗಳಿರುತ್ತವೆ, ಚಹರೆಗಳಿರುತ್ತವೆ. ಇದನ್ನೆಲ್ಲ ಹೊರ ತೆಗೆದು ಬೇರ್ಪಡಿಸಿದ ನಂತರ ನಮಗೆ ಸಿಗುವ ನಾವು ಮತ್ತು ಇತರರೇ ನಿಜವಾದ ವ್ಯಕ್ತಿಗಳು/ಮನುಷ್ಯರು. ಇದು "ಸಾಮಾಜಿಕತೆ"ಗೆ ವಿರೋಧವಾದ ನಿಲುವಲ್ಲ. ಸಾಮಾಜಿಕತೆಯ ಹೆಸರಿನಲ್ಲಿ ಕಾಣುವ ಸ್ಥೂಲ ಗ್ರಹಿಕೆ, ಮೇಲು ಮೇಲು ನೋಟಗಳನ್ನು ನಿರಾಕರಿಸಿ ಇನ್ನೂ ಅರ್ಥಪೂರ್ಣವಾಗಿ ಸಾಮಾಜಿಕವಾಗುವ ಕ್ರಮವಿದು. ಕೊನೆಗೂ ನಾವು ಸೃಜನಶೀಲ ಬರವಣಿಗೆಯಲ್ಲಿ ಮಾಡಬೇಕಾಗಿರುವುದು ಸಾಮಾಜಿಕ-ರಾಜಕೀಯ ಚರಿತ್ರೆಯ ನಿರ್ಮಾಣವನ್ನಲ್ಲ. ಈ ಚರಿತ್ರೆಗಳಿಗೆ, ಇಂತಹ ಚರಿತ್ರೆಗಳಿಗೆ ಕಿಂಚಿತ್ತೂ ಆಸಕ್ತಿಯಿಲ್ಲದ ಮನುಷ್ಯ ಚರಿತ್ರೆಯ ನಿರ್ಮಾಣವನ್ನು.<br /><br />ಕತೆಯ ಕೇಂದ್ರಶಿಲ್ಪಕ್ಕಿಂತ ಹೆಚ್ಚಾಗಿ ನನಗೆ ಆತ್ಮೀಯವಾಗುವುದು ಕತೆಯೇ ಇನ್ನೊಂದು ಕತೆಯಾಗಿ, ಇನ್ನೊಂದು ಕತೆಯೇ ಉಪಕತೆಯಾಗಿ ‘ಕಥಾಜಾಲ’ವು ವಿಸ್ತಾರವಾಗುತ್ತಾ ಹೋಗುವ ಕ್ರಮ. ಒಂದೇ ದೃಷ್ಟಿ ಕೋನದಿಂದ ಒಂದು ಕತೆ ಅಥವಾ ಅನುಭವವನ್ನು ನೋಡುವುದಕ್ಕಿಂತ, ಕಾಣಿಸುವುದಕ್ಕಿಂತ ‘ಕಥಾಜಾಲ’ದ ಮೂಲಕ ನನ್ನನ್ನು, ಓದುಗರನ್ನು ಹೆಚ್ಚು ಹೆಚ್ಚು ದೃಷ್ಟಿಕೋನದ ಸಾಧ್ಯತೆಗಳಿಗೆ ತೆರೆಯುವ ಕ್ರಮವನ್ನು ನಾನು ಹೆಚ್ಚು ಇಷ್ಟಪಡುತ್ತೇನೆ. ನನ್ನ ಸ್ವಭಾವ-ಪ್ರತಿಭೆಯ ಜಾಯಮಾನಕ್ಕೆ ಸಾಧ್ಯವಾಗುವುದು ಈ ರೀತಿಯ ಬರವಣಿಗೆಯೇ. ನವ್ಯರ ನಂತರದ ಅವರ ಹಿಂಬಾಲಕರು ತಂದ ವಿಮರ್ಶಾ ಕ್ರಮ ಕಥನದ ಬರವಣಿಗೆ ಮತ್ತು ಓದಿನಲ್ಲಿ ದೃಷ್ಟಿಕೋನವು ಸ್ಥಾಯಿಯಾಗಿರಬೇಕೆಂದು ಬಯಸುತ್ತದೆ, ಒತ್ತಾಯಿಸುತ್ತದೆ. ಇಂತಹ ಬಯಕೆ, ಒತ್ತಾಯಗಳನ್ನು ಪ್ರಶ್ನಿಸುವುದು, ನಿರಾಕರಿಸುವುದು ಕೂಡ ನನ್ನ ಬರವಣಿಗೆಯ ಉದ್ದೇಶಗಳಲ್ಲೊಂದು. ಕತೆಯೆಂಬುದು ಯಾವಾಗಲೂ ಒಂದೇ ಕತೆಯಾಗಿರುವುದಿಲ್ಲ. ಹಲವು ಕತೆಗಳನ್ನು ಏಕಕಾಲಕ್ಕೆ ಹೇಳುವ ಕಥನವಾಗಿರುತ್ತದೆ. ಬರೆಯುವಾಗ ಓದುವಾಗಲೇ ನಮ್ಮ ಗ್ರಹಿಕೆ ಮತ್ತು ದೃಷ್ಟಿಕೋನದಲ್ಲಿ ಚಲನಶೀಲತೆಯನ್ನು ತರಲಾರದ ಕತೆಗಳ ಬಗ್ಗೆ ನನಗೆ ಆದರವಿಲ್ಲ. ದೃಷ್ಟಿಕೋನದ ಎಷ್ಟು ಎಷ್ಟು ಪಲ್ಲಟಗಳಿಗೆ ಓದುವಾಗ ಕತೆ ಓದುಗನನ್ನು ತೆರೆಯುತ್ತದೋ ಅಷ್ಟರಮಟ್ಟಿಗೆ ಕತೆ ಹೆಚ್ಚು ಸಾರ್ಥಕವೆಂದು ನಾನು ನಂಬುತ್ತೇನೆ. ನಂಬಿ ಬರೆಯಲು ಪ್ರಯತ್ನಿಸಿದ್ದೇನೆ. ಈ ರೀತಿಯ ಭಿನ್ನ ಕತೆಗಾರಿಕೆಗೆ ಓದುಗರು ತೆರೆದ ಮನಸ್ಸಿನವರೇ ಆಗಿದ್ದಾರೆ ಎಂಬುದು ನನ್ನ ತಿಳುವಳಿಕೆ. ತೊಂದರೆಯಿರುವುದು ನವ್ಯರು ಚಾಲ್ತಿಗೆ ತಂದ ರೂಪಕಾರ್ಥ ಮತ್ತು ಆಕೃತಿ ಹಠದಿಂದ ಹೊರಬರಲಾರದ ಕತೆಗಾರರ ಗುಂಪಿನಿಂದ ಮತ್ತು ವಿಮರ್ಶಕರಿಂದ. ಇದು ಬರವಣಿಗೆಗೆ ಸಂಬಂಧಪಟ್ಟ ತೊಂದರೆಯಲ್ಲ. (not a writing problem) ಜೊತೆ ಬರಹಗಾರರು ವಿಮರ್ಶಕರು ಬೇರೆ ರೀತಿಯ ಬರವಣಿಗೆಯ ಕ್ರಮಗಳ ಬಗ್ಗೆ ಸಂವೇದನಾ ಶೂನ್ಯರಾಗಿದ್ದಾಗ ಅಥವಾ ಹಾಗೆ ನಟಿಸಿದಾಗ ಹುಟ್ಟು ಹಾಕುವ ಬರಹಗಾರರ ಸಮಸ್ಯೆಗಳು. (writers problem)<br /><br />ವೃತ್ತಿ ತಿರುಗಾಟ, ಹಿನ್ನೆಲೆಯೇ ಕಾರಣವಾಗಿ ಬರೆಯಲಿ, ಬರೆಯದೆ ಇರಲಿ ಯಾವಾಗಲೂ ನನ್ನನ್ನು ಕತೆಗಳ ಮಹಾಪೂರವೇ ಕಾಡುತ್ತಿರುತ್ತದೆ. ಯಾವ ಕತೆಗಾರನು ತನಗೆ ದಕ್ಕಿದ, ಕಂಡ ಎಲ್ಲ ಕತೆಗಳನ್ನು ಒಂದು ಜೀವಮಾನದಲ್ಲಿ ಬರೆದು ಪೂರೈಸಲು ಸಾಧ್ಯವಾಗುವುದಿಲ್ಲ. ಕತೆ ಬರೆಯಲಿ ಕಾದಂಬರಿ ಬರೆಯಲಿ, ಬರೆಯದೆ ಇರಲಿ ಕಥನಕಾರರಾದ ಮೇಲೆ ಕತೆಗಳನ್ನಂತೂ ನಾವು ಅನುಭವಿಸುತ್ತಲೇ ಇರಬೇಕು. ಕತೆಗಳಲ್ಲಿ ಭಾಗಿಯಾಗುತ್ತಲೇ ಇರಬೇಕು. ಕತೆಗಳ ಮಹಾಪೂರದ ದೆಸೆಯಿಂದಾಗಿಯೇ ನನ್ನಲ್ಲಿ ಹಲವು ದೃಷ್ಟಿಕೋನಗಳನ್ನು ಒಟ್ಟಿಗೆ ಮಂಡಿಸುವ ಸಾಧ್ಯತೆ, ದೃಷ್ಟಿಕೋನದಲ್ಲಿ ಪಲ್ಲಟಗಳನ್ನು ಓದಿನ ಹಂತದಲ್ಲಿ ಪ್ರಚೋದಿಸುವ ಕತೆಗಾರಿಕೆ ಅನಿವಾರ್ಯವಾಗಿರಬಹುದು. ಹೀಗಾಗಿ ನನ್ನದು ನಾನೇ ರೂಢಿಸಿಕೊಂಡ ಒಂಟಿ ದನಿ, ವಿಶಿಷ್ಟ ಧ್ವನಿ.<br /><br />ಯಾವುದೇ ಬರಹಗಾರನು ಬರೆಯುವುದರಿಂದ ಮಾತ್ರವೇ ಬರಹಗಾರನಾಗುವುದಿಲ್ಲ. ಹಾಗೆ ಬರಹಗಾರನಾಗುವುದೆಂದರೆ ಇನ್ನೊಬ್ಬರನ್ನು ಓದುವ ಕ್ರಮವನ್ನು ಹಾಗೆ ಓದುವುದರಿಂದ ಪಡೆಯುವ ಕ್ರಮವನ್ನು ಕೂಡ ಸೂಚಿಸುವುದಾಗಿರುತ್ತದೆ. ಮಾಸ್ತಿ, ಕಾರಂತ, ಕುವೆಂಪು ಇಂತಹ ಸಮೃದ್ಧ ಕಥನಕಾರರನ್ನು ನಿರಂತರವಾಗಿ ಮತ್ತೆ ಮತ್ತೆ ಎಂಬಂತೆ ಓದುವ ನನಗೆ ಈ ಲೇಖಕರ ಬರವಣಿಗೆಯ ಕ್ರಮದ ಬಗ್ಗೆ ಇನ್ನೂ ನಿಖರವಾದ ಅಧ್ಯಯನಗಳು ನಡೆದೇ ಇಲ್ಲವೆನ್ನಿಸುತ್ತದೆ. ಕತೆಗಾರರಿಂದಲೂ ವಿಮರ್ಶಕರಿಂದಲೂ, ಈ ಮಹಾನ್ ಕಥನಕಾರರು ಬರವಣಿಗೆಯ ವೈವಿಧ್ಯದಲ್ಲಿ, ಸಮೃದ್ಧಿಯಲ್ಲಿ ಎಷ್ಟೊಂದು ಭಿನ್ನ, ಎತ್ತರ. ನವ್ಯರು ಮತ್ತು ನವ್ಯೋತ್ತರ ಕತೆಗಾರರು, ನನ್ನ ಸಮಕಾಲೀನ ಕತೆಗಾರರೆಲ್ಲರನ್ನು ಒಟ್ಟಿಗೇ ಗಮನದಲ್ಲಿಟ್ಟುಕೊಂಡು ನೋಡಿದಾಗಲೂ ಈ ರೀತಿಯ ಸಮೃದ್ಧಿ ಮತ್ತು ವೈವಿಧ್ಯ ಕಂಡುಬರುವುದಿಲ್ಲ. ಕೆಲವು ಕತೆಗಾರರ ಬರವಣಿಗೆಯಲ್ಲಿ flourish ಇರಬಹುದು, ಮೋಹಕತೆ ಇರಬಹುದು. ಇದು ಸುಳ್ಳು ವೈವಿಧ್ಯ, ಸಮೃದ್ಧಿ. ಈ ರೀತಿಯ ವೈವಿಧ್ಯ ಮತ್ತು ಸಮೃದ್ಧಿಯನ್ನು ಸಾಧಿಸಲು ಎಲ್ಲ ಮುಖ್ಯ ಲೇಖಕರು ತಾವೇ ರೂಢಿಸಿಕೊಂಡ ರೂಪಕ ನಿಷ್ಠೆ, ಆಕೃತಿ ಇಕ್ಕಟ್ಟಿನ ಜತೆಗೆ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ತೇಜಸ್ವಿಯವರಿಗೆ ಅನುವಾದಗಳಿರಬಹುದು, ಲಂಕೇಶರಿಗೆ ಪತ್ರಿಕೋದ್ಯಮವಿರಬಹುದು, ಅನಂತಮೂರ್ತಿಯವರಿಗೆ ಭಾಷಣಗಳು, ಅಂಕಣಗಳು ಇರಬಹುದು. ಇಲ್ಲೆಲ್ಲಾ ಈ ಬರಹಗಾರರು ಪೂರೈಸಿಕೊಳ್ಳುತ್ತಿರುವುದು ತಮ್ಮ ಕಥನದ ಆಕಾಂಕ್ಷೆಗಳನ್ನು. ಹಾಗೆಂದು ಹೇಳುವುದಿಲ್ಲ ಅಷ್ಟೇ. ಆದರೆ ತಮಗಿಂತ ಭಿನ್ನ ಕ್ರಮದಲ್ಲಿ ಬರೆಯುವ ಕಥನಕಾರರನ್ನು ಬೆಲೆಕಟ್ಟುವಾಗ ಮಾತ್ರ ಒಂದು ಕಾಲದಲ್ಲಿ ತಮ್ಮದಾಗಿದ್ದ ಪುರಾತನ ಮಾನದಂಡಗಳನ್ನು ಬಳಸುತ್ತಾರೆ.<br /><br />ಕಾವ್ಯ ಕೇಂದ್ರಿತ ಮತ್ತು ರೂಪಕ ಪ್ರಣೀತ ಮಾನದಂಡಗಳು ಎಲ್ಲ ಪ್ರಕಾರಕ್ಕೂ ಅನ್ವಯಿಸುವುದಿಲ್ಲ. ಸಣ್ಣಕತೆಗೂ ಕೂಡ. ಹೀಗೆ ಅನ್ವಯಗೊಳಿಸಲು ಹೋಗಿದ್ದರಿಂದಲೇ ಮಾಸ್ತಿಯವರ ಕಥಾಲೋಕದಲ್ಲಿರುವ ಭಿನ್ನ ಭಿನ್ನ ಸ್ವರೂಪಗಳ ಪತ್ತೆ ನಮಗೆ ಸಿಗಲೇ ಇಲ್ಲ. ಕುವೆಂಪು ಸಮೃದ್ಧಿಯೂ, ಕಾರಂತ ವೈವಿಧ್ಯವೂ ಕೂಡ. ಪ್ರಬಂಧವೆಂಬ ಪ್ರಕಾರವಂತೂ ಸೊರಗೇ ಹೋಯಿತು. ಬರವಣಿಗೆಯಲ್ಲಿ ಮುಖ್ಯವಾಗಿ ಸಾಧಿತವಾಗಬೇಕಾದ್ದು ಸ್ವಚ್ಛಂದತೆ, ನಿರರ್ಗಳತೆ ಮತ್ತು ಜೀವಂತಿಕೆ. ಆಕೃತಿಯನ್ನು ಇದಕ್ಕಾಗಿ ಮುರಿಯುವುದೇ, ಮುರಿದು ಕಟ್ಟುವುದೇ ಸೃಜನಶೀಲತೆಯ ಲಕ್ಷಣ ಮತ್ತು ಮುರಿಯುವುದು-ಕಟ್ಟುವುದು ಬೇರೆ ಬೇರೆ ಅಲ್ಲ. ಇದನ್ನು ತಿಳಿಯದವರು ಪ್ರಬಂಧ ಪ್ರಕಾರವನ್ನು ಉಪೇಕ್ಷೆಗೆ ಅರ್ಹವಾದ ಬರವಣಿಗೆಯೆಂದು ತಿಳಿದು ಪ್ರತಿಕ್ರಿಯಿಸುವುದು ಕಂಡಾಗ ನಗೆ ಬರುತ್ತದೆ. ನನ್ನ ಮಟ್ಟಿಗಂತೂ ಕತೆಗಳಲ್ಲಿ ನಾನು ಸಾಧಿಸಲು ಯತ್ನಿಸುವ ಕಥಾಜಾಲ, ದೃಷ್ಟಿಕೋನಗಳ ಬಾಹುಳ್ಯತೆ, ತೆರೆದ ಧ್ವನಿ - ಈ ಎಲ್ಲ ಪ್ರಯತ್ನಗಳನ್ನು ಪ್ರಬಂಧದಲ್ಲೂ ಮಾಡಲು ಪ್ರಯತ್ನಿಸುತ್ತಿದ್ದೇನೆನಿಸುತ್ತದೆ. ಪ್ರಬಂಧ ಪ್ರಕಾರವೇ ತನ್ನ ಸ್ವಭಾವದಿಂದಾಗಿ ನವ್ಯರು ಚಾಲ್ತಿಗೆ ತಂದ ಕಾವ್ಯಾತಿ ನಿಷ್ಠೆ, ರೂಪಕ ಪ್ರಣೀತಿ ಇದೆಲ್ಲವನ್ನೂ ತನ್ನ ನಿರರ್ಗಳತೆ ಮತ್ತು ವೈವಿಧ್ಯಮಯತೆಯಿಂದ ಪ್ರಶ್ನಿಸುವಂತದು. ಕತೆ ಮತ್ತು ಪ್ರಬಂಧಗಳು ಮಾತ್ರವಲ್ಲ, ಪ್ರತಿಯೊಂದು ವಿವರಗಳಿಗೂ ಸಾಂಕೇತಿಕ ಮಹತ್ವ ಮಾತ್ರವಲ್ಲದೆ ತನ್ನದೇ ಆದ ಸ್ವತಂತ್ರ ವ್ಯಕ್ತಿತ್ವ, ಅಸ್ತಿತ್ವವೊಂದಿದೆಯೆಂಬುದನ್ನು ಮತ್ತೆ ಮತ್ತೆ ನೆನಪಿಸುವುದೇ ಬರವಣಿಗೆಯ ಉದ್ದೇಶವಾಗಬೇಕು.<br /><br />ಬರಹದ ಪ್ರಾರಂಭದಲ್ಲಿ ನಮ್ಮ ಕಾಲದ ಮಾನಸಿಕ ಬಿಕ್ಕಟ್ಟು ಇಕ್ಕಟ್ಟುಗಳ ಬಗ್ಗೆ ಹೇಳಿದೆ. ಇದೆಲ್ಲಕ್ಕೂ ಉತ್ತರವೆಂಬಂತೆ ನನ್ನ ಬರವಣಿಗೆಯಿದೆ ಎಂಬ ಧ್ವನಿ ಈ ಬರಹದಿಂದ ಮೂಡಿದ್ದರೆ ನನ್ನ ಉದ್ದೇಶವು ಖಂಡಿತ ಅದಲ್ಲ. ನಾನು ಬರವಣಿಗೆಯ ಮೂಲಕ ಈ ಬಿಕ್ಕಟ್ಟುಗಳಿಗೆ ಸ್ಪಂದಿಸಲು ನಾನು ಕಂಡುಕೊಂಡ ನನ್ನದೇ ಹಾದಿಯಿದು. ನಮ್ಮ ಕಾಲದ ಬಿಕ್ಕಟ್ಟುಗಳಿಗೇ ಕಾರಣವಾಗಿಯೋ ಇಲ್ಲ ಬಿಕ್ಕಟ್ಟೇ ಪರಿಣಾಮವಾಗಿಯೋ ನಮ್ಮಲ್ಲಿ ಪ್ರತಿಯೊಬ್ಬರಲ್ಲೂ ಪ್ರತಿ ಕುಟುಂಬದಲ್ಲೂ ಕಾರ್ಖಾನೆ, ಕಛೇರಿಗಳಲ್ಲೂ ಪ್ರೀತಿ ಸಹನೆ ಮತ್ತು ಇನ್ನೊಬ್ಬರ ತಿಳಿದುಕೊಳ್ಳುವ ತಾಳ್ಮೆ-ವ್ಯವಧಾನವೇ ಕಡಿಮೆಯಾಗುತ್ತಿದೆ. ನಮ್ಮನ್ನಲ್ಲದೆ ಇನ್ನೊಬ್ಬರನ್ನು ಪ್ರೀತಿಸುವುದು ಈ ಕಾಲದಲ್ಲಿ ತುಂಬಾ ಕಷ್ಟ. ನಾವು ಪ್ರೀತಿಸುತ್ತಿದ್ದೇವೆಂದು ತಿಳಿದುಕೊಂಡಿರುವವರು ಕೂಡ ನಮ್ಮ ವ್ಯಕ್ತಿತ್ವದ - ಸ್ವಾರ್ಥದ ಹೊರ ಚಾಚುಗಳೇ ಆಗಿರುತ್ತಾರೆ. ಇನ್ನೊಬ್ಬರ ಬಗ್ಗೆ ನಮಗಿರುವ ಪ್ರೇಮವೂ ಈಗ ಸ್ವಪ್ರೇಮದ ಒಂದು ಭಾಗವೇ ಆಗಿರುತ್ತದೆ. ಹೀಗಿರುವಾಗ ಬರಹಗಾರನೊಬ್ಬ ಏನನ್ನು ನಿರೀಕ್ಷಿಸಬಹುದು? ನನ್ನ ಬರವಣಿಗೆ ಓದುಗರ ಮನಸ್ಸಿಗೆ ಹೊರೆಯಾಗದಿರಲಿ, ಕಾಲಹರಣವಾಗದಿರಲಿ, ಮನಸ್ಸಿನ ನಿರಾಳತೆಗೆ ವಿರಾಮಕ್ಕೆ ಕಾರಣವಾಗಲಿ, ಬರವಣಿಗೆಯಲ್ಲಿ ಕಾಣುವವರ ಬಗ್ಗೆಯು, ಹಾಗೆ ಕಂಡವರ ಹಿಂದೆ ಇರುವವರ ಬಗ್ಗೆಯೂ ಸಹನೆ, ಪ್ರೀತಿಯನ್ನು ಕಿಂಚಿತ್ತಾದರೂ ಹೆಚ್ಚಿಸಲಿ. ಆತಂಕ, ತಲ್ಲಣ, ಸೃಜನಶೀಲ ಬರಹಗಾರನಿಗೆ ಉಸಿರಾಟದಷ್ಟೇ ನಿರಂತರ ಒಡನಾಡಿ. ಈ ಆತಂಕ - ತಲ್ಲಣ ಮುಖ ಮಾಡಿರುವುದು ಮಾತ್ರ ಇನ್ನೊಂದಿಷ್ಟು ಪ್ರೀತಿಯ ಕಡೆಗೇ!<br /><strong>(ಶೂದ್ರ ಪತ್ರಿಕೆಯ ವಿಶೇಷಾಂಕದಲ್ಲಿ (ಲೇಖಕನಾಗಿ ನನ್ನ ತಲ್ಲಣಗಳು) ಪ್ರಕಟಿತ ಲೇಖನ)</strong></span>ಕೆ. ಸತ್ಯನಾರಾಯಣhttp://www.blogger.com/profile/15167030166766836381noreply@blogger.com1tag:blogger.com,1999:blog-1964049159346480323.post-37302454908443315732009-04-27T00:19:00.000-07:002009-04-27T01:16:00.014-07:00ಗೋಕುಲಾಷ್ಟಮಿ - ಒಂದು ಮರು ಓದು<a href="http://2.bp.blogspot.com/_D9K0HARbkSE/SfVn8aBtT9I/AAAAAAAAAGI/Uep8RoqhuS4/s1600-h/putina-10001.jpg"><img id="BLOGGER_PHOTO_ID_5329280021539147730" style="FLOAT: left; MARGIN: 0px 10px 10px 0px; WIDTH: 245px; CURSOR: hand; HEIGHT: 320px" alt="" src="http://2.bp.blogspot.com/_D9K0HARbkSE/SfVn8aBtT9I/AAAAAAAAAGI/Uep8RoqhuS4/s320/putina-10001.jpg" border="0" /></a> <strong>ಜೀನ್ ಪಾಲ್ ಸಾತ್ರೆಯ "ನಿರಂತರವಾಗಿ ವಿಕಾಸಗೊಳ್ಳುತ್ತಲೇ ಇರುವ ದೇವರ ಕಲ್ಪನೆಯನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. - ಪುತಿನ.<br /></strong><br />"<strong>ಗೋಕುಲಾಷ್ಟಮಿ</strong>" ಪುತಿನರ ಮತ್ತು ಕನ್ನಡದ ಉತ್ತಮ ಪ್ರಬಂಧಗಳಲ್ಲೊಂದು. ಓದಿನ ಮತ್ತು ಬದುಕಿನ ಬೇರೆ ಬೇರೆ ಸನ್ನಿವೇಶಗಳಲ್ಲಿ ಈ ಪ್ರಬಂಧವನ್ನು ಮತ್ತೆ ಮತ್ತೆ ಓದುತ್ತಲೇ ಬಂದಿರುವ ನನಗೆ, ಪ್ರಬಂಧದ ಇತ್ತೀಚಿನ ಓದು ನಮ್ಮ ಕಾಲಮಾನದ ಮುಖ್ಯ ಸಾಂಸ್ಕೃತಿಕ ಪ್ರಶ್ನೆಗಳನ್ನು ಬೇರೊಂದು ರೀತಿಯಲ್ಲು ನೋಡಬಹುದಲ್ಲವೇ ಎಂಬ ಪ್ರಚೋದನೆಯನ್ನು, ನಿರಾಳವನ್ನು ನೀಡಿತು. ಮೊದಲಿಗೆ ಪ್ರಬಂಧದ ಸ್ವರೂಪದ ಬಗ್ಗೆ.<br /><span class=""></span><br />ಈ ಪ್ರಬಂಧದ ಚೌಕಟ್ಟನ್ನು ಇಂತಹದೇ ಎಂದು ಗುರುತಿಸಿ ಕಟ್ಟು ಹಾಕುವುದು ಕಷ್ಟ. ವರ್ಣನಾತ್ಮಕ, ಲಹರಿ, ಚಿಂತನಶೀಲ, ಆಧ್ಯಾತ್ಮಿಕ - ಇಂತಹ ಎಲ್ಲ ಗುಣಸ್ವಭಾವಗಳನ್ನು ಪ್ರಬಂಧ ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆ. ಈ ಗುಣವಿಶೇಷಗಳು ಒಂದರೊಡನೊಂದು ಪ್ರಬಂಧದ ಸಹಜ ಓಘದಲ್ಲಿ ನಿರಾಯಾಸವಾಗಿ ಬೆರೆಯುತ್ತ ಬರಹದ ಧ್ವನಿಶಕ್ತಿಯನ್ನು ಹೆಚ್ಚಿಸಿವೆ. ಹಾಗಾಗಿ ಈ ಪ್ರಬಂಧ ಇಂತದೇ ಜಾತಿಯದು ಎಂದು ವರ್ಗೀಕರಿಸುವುದು ಕಷ್ಟ ಮತ್ತು ತಪ್ಪು.<br /><br /><span class=""></span>ಎಲ್ಲ ಒಳ್ಳೆಯ ಪ್ರಬಂಧಗಳಲ್ಲು ಇರುವಂತೆ ಇಲ್ಲು ಒಂದು ಪ್ರಸಂಗ ಯಾ ವಿದ್ಯಮಾನವಿದೆ, ಸ್ವಾನುಭಾವವಿದೆ, ಕೀಟಲೆಯಿದೆ, ಚಿಂತನೆಯಿದೆ, ಮೀರುವಿಕೆಯಿದೆ. ಇದೆಲ್ಲವೂ ಮನೆ ಮತ್ತು ಕುಟುಂಬ ವಾತಾವರಣದಲ್ಲಿ ದಿನನಿತ್ಯದ ಆವರಣದಲ್ಲಿ ನಡೆಯುವುದರಿಂದ ಪ್ರಬಂಧವು ನಿರೂಪಿಸುವ ಅನುಭವ-ಚಿಂತನೆ-ಕಾಣ್ಕೆ ನಮ್ಮಂತಹ ಸಾಧಾರಣ ಗೃಹಸ್ಥರದು ಕೂಡ ಎಂದೆನಿಸಿಬಿಡುತ್ತದೆ.<br /><br />ಗೋಕುಲಾಷ್ಟಮಿಯ ಆಚರಣೆ ಶ್ರೀವೈಷ್ಣವ ಕುಟುಂಬದ ವಾತಾವರಣದಲ್ಲಿ ಹೇಗೆ ಜರುಗಿತು, ಜರುಗುತ್ತಿದೆ ಮತ್ತು ಜರುಗುತ್ತಲೇ ಇರುತ್ತದೆ ಎಂಬುದು ನಿರೂಪಣೆಯ ತಿರುಳು. ಶ್ರೀಕೃಷ್ಣ ಒಂದು ಭಾವವಾಗಿ ಹೇಗೆ ಹುಟ್ಟುತ್ತಾನೆ ಮತ್ತು ಏಕೆ ಹುಟ್ಟಬೇಕು ಎನ್ನುವುದು ನಿರೂಪಣೆಯ ಹೃದಯ.<br /><span class="fullpost">ನನ್ನ ಓದಿಗೆ ಭೂಮಿಕೆಯಾಗಿ ಪುತಿನರ ಕೆಲವು ಮಾತುಗಳನ್ನು ಉಲ್ಲೇಖಿಸುತ್ತೇನೆ:<br /><br />"ನಾನು ತಾತ್ವಿಕವಾಗಿಯಾಗಲೀ ಅಥವಾ ಭಾವನಾತ್ಮಕವಾಗಿಯಾಗಲೀ ಯಾವುದೋ ಒಂದು ವೈಯಕ್ತಿಕ ದೇವರೊಡನೆ ಅಥವಾ ಒಂದು ನಿರ್ದಿಷ್ಟ ಪರಂಪರೆಯೊಡನೆ ನನ್ನನ್ನು ಗುರುತಿಸಿಕೊಂಡಿಲ್ಲ. ನನಗೆ ಯಾವಾಗಲೂ ಒಬ್ಬ ಮುಕ್ತ ಮನುಷ್ಯನ ಪೂಜೆಯೇ ಮುಖ್ಯವೆನಿಸಿದೆ. (ನೋಡಿ: <strong>ಮಲೆ ದೇಗುಲ</strong>) ಒಬ್ಬ ವ್ಯಕ್ತಿ ಸಂಪೂರ್ಣ ಸ್ವಾತಂತ್ರ್ಯದ ಸ್ಥಿತಿಯಲ್ಲಿ ಪೂಜೆಗೈಯಬೇಕು ಎಂದು ನನಗನ್ನಿಸುತ್ತದೆ.<br /><br /><a href="http://4.bp.blogspot.com/_D9K0HARbkSE/SfVoVNvIebI/AAAAAAAAAGY/fAkiGWk4I5s/s1600-h/putina-20001.jpg"><img id="BLOGGER_PHOTO_ID_5329280447736740274" style="FLOAT: left; MARGIN: 0px 10px 10px 0px; WIDTH: 277px; CURSOR: hand; HEIGHT: 320px" alt="" src="http://4.bp.blogspot.com/_D9K0HARbkSE/SfVoVNvIebI/AAAAAAAAAGY/fAkiGWk4I5s/s320/putina-20001.jpg" border="0" /></a>ನಾನು ಪೂಜೆಯನ್ನೇನಾದರೂ ಮಾಡುವುದಾದರೆ ಅದು ನನ್ನದೇ ರೀತಿಯಲ್ಲಿ ಸ್ವಯಂ ಶುದ್ಧೀಕರಣಗೊಳ್ಳುವುದಕ್ಕೆ ಅಷ್ಟೆ. ನನ್ನನ್ನು ನಾನು ಶುದ್ಧಗೊಳಿಸಬೇಕೆಂಬ ತೀವ್ರವಾದ ಹಂಬಲ ನನಗೆ ಚಾಲನೆ ನೀಡುತ್ತದೆ. ನಾನು ಮಾಡುವ ಆಚರಣೆಗಳು ಆಳವಾದ ಸಾಂಕೇತಿಕತೆಯನ್ನು ಪಡೆದುಕೊಳ್ಳುತ್ತದೆ. ಆ ಆಚರಣೆಗಳು ಯಾವುದೇ ಸಾಂಪ್ರದಾಯಿಕ ಚೌಕಟ್ಟಿನಿಂದ ಬರುವುದಿಲ್ಲ. ನಾನವುಗಳಲ್ಲಿ ಅರ್ಥವನ್ನು ಹುಡುಕಿಕೊಳ್ಳುತ್ತೇನೆ." (ಶ್ರೀ ಎನ್.ಮನು ಚರ್ಕವರ್ತಿಯವರಿಗೆ ನೀಡಿದ ಸಂದರ್ಶನ, <strong>ಭೃಂಗಮಾರ್ಗ</strong> - ಪುಟ 450, ಸಂ.ಡಾಎಚ್.ಎಸ್.ರಾಘವೇಂದ್ರ ರಾವ್.)<br /><br />ಈ ದೃಷ್ಟಿಕೋನದಿಂದಾಗಿಯೇ ಪ್ರಬಂಧದ ಸ್ವರೂಪ ಮತ್ತು ಅದು ಕಾಣಿಸುವ ಭಾವಲೋಕ ಎರಡೂ ಹೊಸ ಎತ್ತರಕ್ಕೆ ತಲುಪುತ್ತವೆ. ನಿಜವಾದ ಆಧ್ಯಾತ್ಮಿಕ ಹುಡುಕಾಟದಲ್ಲಿರುವ ಎಲ್ಲ ಸಂವೇದನಾಶೀಲರಂತೆ ಪುತಿನರು ಕೂಡ ಒಂದು ವೈಯಕ್ತಿಕ ಧರ್ಮ (Personal Religion)ದ ಹುಡುಕಾಟದಲ್ಲಿದ್ದಾರೆ. ಇಂತಹ ಸಂವೇದನಾಶೀಲರಿಗೆ ಸಾಂಸ್ಥಿಕ ಧರ್ಮ ಮತ್ತು ಅದರ ಚೌಕಟ್ಟು ಆಶಯಗಳಲ್ಲಿ ನಂಬಿಕೆಯಿರುವುದಿಲ್ಲ, ಉತ್ಸಾಹವಿರುವುದಿಲ್ಲ. ತಾನು ಹುಟ್ಟಿದ ಧರ್ಮ, ಜಾತಿ ಮತ್ತು ಹಿನ್ನೆಲೆಯ ಬಗ್ಗೆ ಸಂಕೋಚವಿರುವುದಿಲ್ಲ, ಮುಜುಗರವಿರುವುದಿಲ್ಲ. ಆದರೆ ಅದನ್ನು ವೈಭವೀಕರಿಸುವುದು ಇಲ್ಲ. ಬದಲಾಗಿ ವಿಮರ್ಶಾತ್ಮಕ ಧೋರಣೆ ಹೊಂದಿದ್ದು ಉಳಿದ ಧರ್ಮಗಳ, ವಿಚಾರಗಳ ಮೂಲತಿರುಳನ್ನು, ಸದಾಶಯಗಳನ್ನು ತಮ್ಮ ವಿಚಾರದ, ನಂಬಿಕೆಗಳ, ಆಚರಣೆಗಳ ಚೌಕಟ್ಟಿನಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಮನೋಭಾವಕ್ಕೆ ಗಾಂಧಿ ನಮ್ಮ ಕಾಲದಲ್ಲಿ ಉತ್ತಮ ಉದಾಹರಣೆ. ಇದನ್ನೆಲ್ಲ ವಿವರಿಸಲು "ಆತ್ಮೀಕರಣ" ಎನ್ನುವ ಪದವನ್ನು ಪುತಿನ ಬಳಸುತ್ತಾರೆ.<br /><br />ಈ ಮನೋಧರ್ಮದಿಂದಾಗಿ ಪ್ರಬಂಧದ ವಿವರಗಳು ಒಂದು ಶ್ರೀವೈಷ್ಣವ ಮನೆಯ ವಿವರಗಳಾಗಿದ್ದು ನಮಗೆ ಬೇರೊಂದು ಬೆಳಕಿನಲ್ಲಿ ಕಾಣುತ್ತದೆ. ವಿವರಗಳ ಸಾಂಕೇತಿಕತೆ, ಧ್ವನಿಶಕ್ತಿ ಮತ್ತು ಜೀವಂತಿಕೆಯ ಕಡೆ ನಾವು ಗಮನ ನೀಡುವಂತೆ ಒತ್ತಾಯಿಸುತ್ತವೆ. ಇದಕ್ಕಾಗಿ ಪುತಿನ ಪುರಾಣದ ಕೃಷ್ಣನ ಕಡೆಗೆ ಗಮನ ಕೊಟ್ಟಷ್ಟೇ, ಪ್ರತಿ ಮನೆಯಲ್ಲೂ ಇರುವ ಬಾಲಕೃಷ್ಣನ ಕುರಿತಂತೆ ಕೂಡ ನಮ್ಮ ಗಮನ ಸೆಳೆಯುತ್ತಾರೆ. ಪುರಾಣದ ಕೃಷ್ಣ, ಮನೆಯ ಮಗು ಬಾಲಕೃಷ್ಣ ಇಬ್ಬರೂ ಒಟ್ಟಿಗೇ ಇರುವ ಪ್ರಬಂಧದಲ್ಲಿ ಇವರಿಬ್ಬರು ಬೇರೆಬೇರೆಯಲ್ಲ ಎಂಬ ಸೂಚನೆಯೂ ಇದೆ. ಮನೆಯ ಮಗು ಬಾಲಕೃಷ್ಣ, ಪುರಾಣದ ಕೃಷ್ಣನನ್ನು ನಮ್ಮವನನ್ನಾಗಿಸುತ್ತಾನೆ, ಸಜೀವಗೊಳಿಸುತ್ತಾನೆ. ಈ ಜೀವಂತಿಕೆಯನ್ನು ಓದುಗರಲ್ಲಿ ಉದ್ದೀಪುಸುವುದೇ ಮನೆಯೊಳಗೆ ಇರುವ ಹಬ್ಬದ ವಾತಾವರಣ, ಸಂಭ್ರಮ, ಸಲಿಗೆ, ಕಾಯುವಿಕೆ - ಇವೆಲ್ಲವೂ ಪ್ರಬಂಧದ ವಿವರಗಳಲ್ಲಿ ನಮಗೆ ಸಿಗುತ್ತದೆ.<br /><br />ಈ ಪ್ರಬಂಧವನ್ನು ಓದಿದಾಗ ನನ್ನಲ್ಲಿ ಹುಟ್ಟುವ ಮುಖ್ಯ ಪ್ರಶ್ನೆಯೆಂದರೆ "ಪಾವಿತ್ರ್ಯವನ್ನು ನಾಶಮಾಡುವುದು" ಹಾಗೆ ನಾಶಮಾಡುವುದರ ಮೂಲಕವೇ ಆಧುನಿಕರಾಗುವುದು ಮತ್ತು ಜಾತ್ಯಾತೀತವಾಗುವುದು ನಾವೆಲ್ಲ ತಿಳಿದುಕೊಂಡಷ್ಟು ಅನಿವಾರ್ಯವೇ ಎಂಬುದು. ಪುತಿನ ಪ್ರಬಂಧವನ್ನು ಓದಿದಾಗ ಆಧುನಿಕರಾದ ನಮ್ಮ ಚಿಂತನ ಕ್ರಮ ಎಲ್ಲೋ ಹಳಿತಪ್ಪಿದೆಯನ್ನಿಸಿತು. "ಪಾವಿತ್ರ್ಯ" ಎನ್ನುವುದನ್ನು ನಾವು ಧಾರ್ಮಿಕ, ಮತೀಯ ಪರಿಭಾಷೆಯಲ್ಲೇ ಗ್ರಹಿಸಬೇಕಿಲ್ಲ. ಧರ್ಮ ಮತ್ತು ಮತೀಯ ಚಹರೆಗಳನ್ನು ಮೀರಿದ "ಪಾವಿತ್ರ್ಯ" ಎನ್ನುವುದು ಕೂಡ ಬದುಕಿನಲ್ಲಿರುತ್ತದೆ. ಇಂತಹ ಪಾವಿತ್ರ್ಯದ ಕಲ್ಪನೆಯ ತಳಹದಿಯಿಲ್ಲದೆ ನಮ್ಮ ವೈಯಕ್ತಿಕ ಜೀವನವು ಸಾಮಾಜಿಕ ಜೀವನವು ನಡೆಯುವುದಿಲ್ಲ. ನಮ್ಮ ನಮ್ಮ ಅನುಭವ, ವೈಯಕ್ತಿಕ ಬದುಕಿನ ಹಿನ್ನೆಲೆಯಿಲ್ಲದೆ ಬರೆಯುವುದಾದರೆ, ಮಾತನಾಡುವುದಾದರೆ "ಪಾವಿತ್ರ್ಯ"ದ ಅಗತ್ಯ ನಮಗೆ ಕಾಣಲಾರದು. ಇದಲ್ಲದೆ ನಿಜವನ್ನೇ ಹೇಳಬೇಕಾದರೆ ನಾವೆಲ್ಲರೂ ನಮ್ಮ ನಮ್ಮ ಸ್ತರದಲ್ಲೇ "ಪಾವಿತ್ರ್ಯ"ದ ಹುಡುಕಾಟದಲ್ಲಿರುತ್ತೇವೆ. "ಪಾವಿತ್ರ್ಯ"ಕ್ಕಿರುವ ಇದ್ದ ನಿರ್ದಿಷ್ಟ ಮತ್ತು ಸೀಮಿತ ಅರ್ಥ, ಈ ಅರ್ಥಕ್ಕಿದ್ದ ಯಜಮಾನಿಕೆಯನ್ನು ಪ್ರಶ್ನಿಸುವುದು ಸರಿ. ಆದರೆ ಹೀಗೆ ಪ್ರಶ್ನಿಸುವ ಆತುರ ಮತ್ತು ಒರಟುತನದಲ್ಲಿ ಬದುಕಿನಲ್ಲಿ ಪಾವಿತ್ರ್ಯಕ್ಕಿರುವ ಮಹತ್ವವನ್ನು ಅಲ್ಲಗಳೆಯಬಾರದು. ಪಾವಿತ್ರ್ಯವನ್ನು ನಾಶಮಾಡಿ ಹೊಸ ಸಂಸ್ಕೃತಿಯನ್ನು ಕಟ್ಟುತ್ತೇನೆಂದು ಹೊರಟಿರುವವರು ಕೂಡ ಹುಡುಕಾಡುತ್ತಿರುವುದು ಪಾವಿತ್ರ್ಯದ ಪರ್ಯಾಯ ನೆಲೆಗಳನ್ನು ಮತ್ತು ಸ್ಥಾಪಿಸಲು ಪ್ರಯತ್ನಿಸುತ್ತಿರುವುದು ತಮ್ಮ "ಪಾವಿತ್ರ್ಯ"ದ ಕಲ್ಪನೆಯನ್ನು. ನಾಜೂಕಿಗೆಂದು, ಪ್ರಗತಿಪರರೆಂದು ಕಾಣಿಸಿಕೊಳ್ಳಲೆಂದು "ಪಾವಿತ್ರ್ಯ" ಪದವನ್ನು ಇಂತವರು ಬಳಸದೆ ಹೋಗಬಹುದು ಅಷ್ಟೇ.<br /><br />ಪಾವಿತ್ರ್ಯ ನಾಶ ಮಾಡುವವರು ಮೊದಲಿಗೆ ಮತ್ತು ಕೊನೆಯದಾಗಿ ಪ್ರಶ್ನಿಸುವುದು ವಿದ್ಯುಕ್ತ ಆಚರಣೆಗಳನ್ನೂ ಮತ್ತು ಇದನು ಪ್ರತಿನಿಧಿಸುವ ಮೂರ್ತಿಗಳನ್ನು (Rituals and Icons). ಇವರಿಗೆ ಕಾಣಿಸುವುದು ಆಚರಣೆಯ ಬಾಹ್ಯ ವಿವರಗಳು ಮತ್ತು ವಾಚ್ಯಾರ್ಥ ಮಾತ್ರ. ಗೋಕುಲಾಷ್ಟಮಿ ಕೂಡ ಒಂದು ಆಚರಣೆಯೇ, ಕೃಷ್ಣನು ಕೂಡ ಒಬ್ಬ ಮೂರ್ತಿಯೇ. ಇದನ್ನು ನೋಡುವ, ಒಳಗು ಮಾಡಿಕೊಳ್ಳುವ ಕ್ರಮ ಮಾತ್ರ ಈ ಪ್ರಬಂಧದಲ್ಲಿ ಬೇರೆ.<br /><br />ಪ್ರಬಂಧದ ಎರಡನೇ ವಾಕ್ಯದಲ್ಲೇ "ಪವಿತ್ರತಮ" ಎನ್ನುವ ಪದವಿದೆ. ನಂತರ ಕಾಲಮಾನದ ಯಾವುದೇ ದಿನವಾಗಬಹುದಾದ ದಿನವೊಂದರ ಪ್ರಕೃತಿಯ ಸಣ್ಣ ವಿವರವೊಂದಿದೆ. ಪುರಾಣದ ಕೃಷ್ಣನನ್ನು ಮನೆಯ ಕೃಷ್ಣ, ಇಲ್ಲೇ ಹೀಗೇ ಕೃಷ್ಣ ಎಂದು ತೋರಿಸಿ ನಿರ್ದಿಷ್ಟಗೊಳಿಸುತ್ತದೆ. ಹಣತೆಯ ಬೆಳಕು ಫಲವಸ್ತ್ರದ ನೆಳಲಿನೊಡನೆ ಹಾಸುಹೊಕ್ಕಾಗಿ ಬೆರೆತಿದ್ದ ವಿವರ. ನೆಳಲು-ಬೆಳಕಿನಾಟ, ಕೃಷ್ಣನ ಮೇಲೆ ಬೀಳುತ್ತಿರುವ ಹಣತೆಯ ಬೆಳಕಿನ ವಿವರ ಇದೆಲ್ಲವೂ ಪ್ರಬಂಧಕ್ಕೆ ಬೇಕಾದ ಸದ್ಯದ ಮತ್ತು ಪೌರಾಣಿಕದ ಎರಡೂ ಪ್ರಪಂಚಗಳನ್ನು ಒಟ್ಟಿಗೇ ಸೂಚಿಸುತ್ತವೆ. ಮುಂದಿನ ಪ್ಯಾರಾಗಳ ವಿವರಗಳು ಕೂಡ ಕಾಲಾತೀತವಾದ ಒಂದು ಆಚರಣೆಯನ್ನು, ನಿರ್ದಿಷ್ಟ ದೇಶ ಕಾಲದ ಚೌಕಟ್ಟಿನೊಳಗೆ, ಕುಟುಂಬದ ಆವರಣದೊಳಗೆ ತರುವ ಪ್ರಯತ್ನವೇ ಆಗಿರುತ್ತದೆ. ಕೃಷ್ಣ ಮತ್ತು ಗೋಕುಲಾಷ್ಟಮಿ ಮನೆವಾರ್ತೆಯ ಒಂದು ಭಾಗವೇ ಆಗುತ್ತಾನೆ/ದೆ.<br /><br /><a href="http://2.bp.blogspot.com/_D9K0HARbkSE/SfVoINuqfxI/AAAAAAAAAGQ/8raQVBKC-fw/s1600-h/putina-30001.jpg"><img id="BLOGGER_PHOTO_ID_5329280224396476178" style="FLOAT: left; MARGIN: 0px 10px 10px 0px; WIDTH: 211px; CURSOR: hand; HEIGHT: 320px" alt="" src="http://2.bp.blogspot.com/_D9K0HARbkSE/SfVoINuqfxI/AAAAAAAAAGQ/8raQVBKC-fw/s320/putina-30001.jpg" border="0" /></a>ಪ್ರಬಂಧಕಾರರ ತಂದೆಯ ಭಕ್ತಿಯಲ್ಲಿ ಪೂಜೆ ಮಾತ್ರವಿಲ್ಲ. ಪ್ರಾರ್ಥನೆ ಕೂಡ ಇದೆ. ಹಣತೆಯ ಬೆಳಕು ಇವರ ಮುಖದ ಮೇಲೆ ಕೂಡ ಬೀಳುವ ವಿವರವಿದೆ. ಪ್ರಾರ್ಥನೆಗೆ ಶಕ್ತಿ ಬರುವುದು, ತೇಜಸ್ಸು ಬರುವುದು ಏನನ್ನು ಪ್ರಾರ್ಥಿಸುತ್ತೇವೆ ಎಂಬುದರ ಮೇಲಲ್ಲ, ಪ್ರಾರ್ಥಿಸುವವನ ವ್ಯಕ್ತಿತ್ವ ಎಂತಹದೆಂಬುದರ ಮೇಲೆ ಇದು ಅವಲಂಬಿತವಾಗಿರುತ್ತದೆ. ಗಾಂಧಿಯ ಕೈಯಲ್ಲಿ ಪ್ರಾರ್ಥನೆ ಮತ್ತು ಉಪವಾಸಗಳು ಪಡೆದ ಅರ್ಥವನ್ನು ಇತರ ನಾಯಕರ ಕೈಯಲ್ಲಿ ಪಡೆಯಲಿಲ್ಲ. ಪ್ರಾರ್ಥನೆಗು ಆತ್ಮಶುದ್ಧಿಗು ಇರುವ ಅವಿನಾ ಸಂಬಂಧವನ್ನು ಸೂಚಿಸುವ ಈ ಸಾಲುಗಳನ್ನು ನೋಡಿ:<br /><br />"ಜ್ಞಾನದಿಂದ ಓಜಸ್ವಿಯಾದ, ವ್ರತನೇಮಗಳಿಂದ ತೇಜಸ್ವಿಯಾದ, ಶಮದಮ ದಯಾದಿ ಗುಣಗಳಿಂದ ಪ್ರಸನ್ನವಾದ, ವಯಸ್ಸಿನ ಆಧಿಕ್ಯದಿಂದ ಗೌರವಾಧಿಷ್ಠನರಾದ, ಅಂದಿನ ಉಪವಾಸದಿಂದ ಶುಷ್ಕವಾದ ಮುಖವದು.....ನನ್ನ ತಂದೆಯವರ ಧ್ಯಾನಾಸಕ್ತವಾದ, ಪುರಾತನ ಆರ್ಯ ಸಂಸ್ಕೃತಿಯ ಅಕಳಂಕಿತ ಪಕ್ವ ಫಲದಂತಿರುವ, ಮುಖದ ಮುದ್ರೆ ಆ ಸಂಸ್ಕೃತಿಯ ಪಾತ್ರದಲ್ಲಿ ಹರಿದು, ಶ್ರದ್ಧೆಯ ನೆಲೆಗೊಂಡು, ವೈದಿಕ ಧರ್ಮ, ಕರ್ಮಗಳ ಕೂಲಗಳಿಂದ ನಿಯಮಿತವಾಗಿ, ಜ್ಞಾನಾರ್ಜನೆಯ ವೇಗದಿಂದ ನಿಷ್ಕಲ್ಮಶವಾಗಿ ಹಾದಿ ಸಾಗುತ್ತಾ ಸಾಗುತ್ತಾ ಕ್ರಮೇಣ ತಿಳಿದು, ಅನಂತದಲ್ಲಿ ಆತ್ಮ ನಿವೇದನ ಮಾಡಲು ಅಣಿಯಾದ ಜೀವನದಿಯ ಚಿತ್ರವಿದು."<br /><br />ಪುರಾಣ ಶ್ರವಣ ಇಲ್ಲಿ ಯಾಂತ್ರಿಕ ವಿದ್ಯುಕ್ತ ಕ್ರಿಯೆಯಾಗುವ ಬದಲು ಅಂತರಂಗದ ಕೋಮಲತೆಗೆ, ಮನಸ್ಸಿನ ಮೃದುತ್ವಕ್ಕೆ ಪ್ರೇರಕವಾಗುತ್ತಿರುವುದು ಮುಖ್ಯ. ಪ್ರಬಂಧಕಾರನ ತಂದೆ-ತಾಯಿ ಇಬ್ಬರ ಹೃದಯದಲ್ಲೂ ನಚ್ಚಳಿದು ಇರುಳು ಮೂಡಿದೆ. ಪುರಾಣ ಶ್ರವಣದ ಸಂದರ್ಭದಲ್ಲೇ ಪ್ರಬಂಧಕಾರನ ತಂದೆಯ ಗೃಹಕೃತ್ಯದ ಜವಾಬ್ದಾರಿಯ ನೆನಪುಗಳಿಂದ ಪ್ರೇರಿತವಾಗುವ ಪ್ರಶ್ನೆಗಳು, ಮಧ್ಯಪ್ರವೇಶ, ಅಧಿಕಪ್ರಸಂಗದಂತೆ ಕಾಣುವ ಬದಲು ಕೃಷ್ಣ ಜನನದ ಕತೆಯ ಭಾವಕ್ಕೆ ಸಂಬಂಧ ಪಡೆದಿದೆ ಎನ್ನುವ ಸೂಚನೆ ಪ್ರಬಂಧಕಾರನ ಮಾಗಿದ ದೃಷ್ಟಿಕೋನಕ್ಕೆ ದ್ಯೋತಕ. ಸಾಮಾನ್ಯ ಮನೆಯೊಂದರ ಕೂಸೆ ತನ್ನ ಆಟ-ನೋಟಗಳಿಂದ ಇಷ್ಟೊಂದು ಮುದ್ದಾಗಿರ ಬಹುದಾದರೆ ದೇವಶಿಶು ಕೃಷ್ಣ ಇನ್ನು ಎಷ್ಟೊಂದು ಮುದ್ದಾಗಿರಬಹುದು, ಮೋಹಕವಾಗಿರಬಹುದು ಎಂಬ ಪ್ರಶ್ನೆ ಮನೆಯ ಹೊಸ ಪ್ರಭೆಯಲ್ಲಿ ಕಾಣಿಸುತ್ತದೆಂಬುದು ಗಮನಾರ್ಹ.<br /><br />ಕೃಷ್ಣನ ಹುಟ್ಟು ಕಾಲಪ್ರವಾಹದ ದೃಷ್ಟಿಯಿಂದ ನಿರಂತರ. ದೇಶದ ಚೌಕಟ್ಟಿನ ಹಿನ್ನೆಲೆಯಲ್ಲಿ ಸರ್ವಾಂತರ್ಯಾಮಿ. ಈತನ ಜನನ "ಭಾರತ ಧರ್ಮವು ಭಾರತ ವರ್ಷದಲ್ಲಿ ಉಳಿದಿರುವವರೆಗೂ" ನಿರಂತರವೆಂಬುದು ಪುತಿನರ ಮಾತು. ಇಲ್ಲಿ ಪುತಿನ ಬಳಸುವ "ಭಾರತಧರ್ಮ"ವೆಂಬ ಮಾತು ಕುತೂಹಲಕರವಾಗಿದೆ. ಓದುಗರೇ, ಇಲ್ಲಿ ನೋಡಿ ಪುತಿನ "ಹಿಂದೂ ಧರ್ಮ" ಎಂಬ ಪದವನ್ನು ಬಳಸುತ್ತಿಲ್ಲ. ಆದ್ದರಿಂದ ಅವರು ಪ್ರಗತಿಪರರು, ಜಾತ್ಯಾತೀತರು ಎಂಬ Politically correct ಆದ Stance Reading ಮಾಡುವ ದುರುಳತನ ನನ್ನಲ್ಲಿಲ್ಲ. ಮಹಾಭಾರತದ ಆಗುಹೋಗುಗಳ ಹಿನ್ನೆಲೆಯಲ್ಲೇ ಹುಟ್ಟುವ ತಾತ್ವಿಕತೆ, ವಿಷಾದ, ಜೀವನ ಧರ್ಮದ ಬಗ್ಗೆ ಪುತಿನ ಗಮನವಿರಬಹುದೆಂದು ನನ್ನ ಊಹೆ.<br /><br />ಈ ಪ್ರಬಂಧಕ್ಕೊಂದು ಬೆರಗಿದೆ, ಪ್ರಭೆಯಿದೆ (AURA). ಇದರ ಮೂಲವೇನು? ಪ್ರಬಂಧದ ವಿವರಗಳೇ, ಪೌರಾಣಿಕ ಪಾತ್ರವಾದ ಕೃಷ್ಣನೇ, ಪುತಿನರ ಗಮನ ಯಾವುದರ ಕಡೆಗಿದೆ? ಬದುಕಿನಲ್ಲಿ ಸೌಂದರ್ಯದ ನೆಲೆಗಳನ್ನು ಹುಡುಕುವ ಪುತಿನ ದೃಷ್ಟಿಕೋನದಿಂದ ಈ AURA ಸೃಷ್ಟಿಯಾಗಿದೆಯೆನಿಸುತ್ತದೆ. ಈ ಮಾತುಗಳನ್ನು ಗಮನಿಸಿ:<br /><br />"ನನ್ನ ಕಾವ್ಯದ ಮೂಲಕ ಮತ್ತು ನನ್ನ ಧಾರ್ಮಿಕ ಅನುಭವದ ಮೂಲಕ ನಾನು ಇಡೀ ಮಾನವ ಕುಲವನ್ನು ತಬ್ಬಿಕೊಳ್ಳಲು ಪ್ರಯತ್ನಿಸಿದ್ದೇನೆ. ಸೌಂದರ್ಯಾತ್ಮಕತೆಯ ಮೂಲಕ ನಾನು ಮಾನವತಾವಾದವನ್ನು ಕಂಡುಕೊಳ್ಳಲು ಶ್ರಮಿಸಿದ್ದೇನೆ. ರಾಮಾಯಣವನ್ನು ನೋಡುವ ಸಾಂಪ್ರದಾಯಿಕ ದೃಷ್ಟಿಕೋನವು ಭಕ್ತಿಭಾವಕ್ಕೆ ಕಿಂಕರವಾಗಿದೆ. ರಾಮಾಯಣ ಮತ್ತು ಭಗವದ್ಗೀತೆಗಳನ್ನು ಪವಿತ್ರ ಗ್ರಂಥಗಳಾಗಿಯಲ್ಲ, ಬದಲಾಗಿ ಅದ್ಭುತ ಕಲಾಕೃತಿಗಳು ಎಂಬಂತೆ ನೋಡುವುದನ್ನು ಪಶ್ಚಿಮವು ನನಗೆ ಕಲಿಸಿದೆ. ಅವುಗಳೆಡೆಗಿನ ನನ್ನ ಪ್ರತಿಕ್ರಿಯೆ ಸೌಂದರ್ಯಾತ್ಮಕವಾದುದು. ನಾನು ರಾಮಾಯಣವನ್ನು ಶೇಕ್ಸ್ಪಿಯರ್ ಅಥವಾ ಗಯಟೆಯನ್ನು ಓದಿದ ಹಾಗೆಯೇ ಓದುತ್ತೇನೆ. ಅದು ಒಬ್ಬ ಮಹಾಕವಿಯ ಮಹಾನ್ ಕಾವ್ಯ. ಒಂದು ಸಾಂಪ್ರದಾಯಿಕ ಮನಸ್ಸಿಗೆ ರಾಮಾಯಣವನ್ನು ಈ ರೀತಿ ನೋಡಲು ಸಾಧ್ಯವಾಗುವುದಿಲ್ಲ." (ಭೃಂಗಮಾರ್ಗ - ಪುಟಗಳು 450-452). ಒಂದು ಪುರಾಣ ಪ್ರಸಂಗವನ್ನು ಕಾಲಾತೀತವಾದ ಸೌಂದರ್ಯಾನುಭವವಾಗಿ ಸೃಷ್ಟಿಸಲು ಹೊರಟಿರುವುದರಿಂದಲೇ ಪ್ರಬಂಧದ ವಿವರಗಳು ಸ್ಥಾನಿಕ-ಕಾಲಬದ್ಧ ವಿವರಗಳಾಗಿದ್ದು ಕೂಡ ದೇಶಕಾಲದಿಂದ ಬಿಡುಗಡೆ ಪಡೆದಿವೆ, ಚಿಮ್ಮಿವೆ. ಪುರಾಣ ಪ್ರಸಂಗಗಳನ್ನು ಓದುವಾಗ ಸಾಮಾನ್ಯವಾಗಿ ನಮ್ಮ ಮನಸ್ಸಿನಲ್ಲಿ ಮೂಡುವ ಪಾವಿತ್ರ್ಯ-ದೈವಿಕ ಭಾವನೆಗಳ ಚೌಕಟ್ಟು ಮಾತ್ರವೇ ಈ ಪ್ರಬಂಧ ಓದುವಾಗ ನಮ್ಮಲ್ಲಿ ಜಾಗೃತವಾಗುವುದಿಲ್ಲ ಎಂಬುದು ಮುಖ್ಯ. ಈವತ್ತಿನ ಮತೀಯ ವಾತಾವರಣದಲ್ಲಿ ನಮ್ಮ ಪುರಾಣ ಪ್ರಸಂಗಗಳನ್ನು, ಮಹಾಕಾವ್ಯಗಳನ್ನು ಈ ದೃಷ್ಟಿಯಿಂದಲೂ ಓದಲು (ವ್ಯಾಖ್ಯಾನಿಸಲು ಮಾತ್ರವಲ್ಲ) ಅನುಭವಿಸಲು ಸಾಧ್ಯವಾಗಬೇಕೆಂಬ ಆಸೆ ನನ್ನ ಮರುಓದಿನ ಹಿಂದಿದೆ. ಆದರೆ ಹೀಗೆ ಓದುವಾಗ ನಮ್ಮ ಆಧುನಿಕ-ಪ್ರಗತಿಪರ ಓದಿನ ಮುಖ್ಯ ಶಾಪವಾದ Stance Reading (ನಿಲುವು ಪ್ರೇರಿತ ಓದು) ನ ಅಪಾಯಗಳ ಬಗ್ಗೆ ಕೂಡ ನಮಗೆ ಎಚ್ಚರವಿರಬೇಕು-ನಮ್ಮ ಬಗ್ಗೆಯೇ.<br /><br />ನಮ್ಮ ಕಾಲದಲ್ಲಿ ಗಾಂಧಿ ಮಾತ್ರ ನಮ್ಮ ಆಧ್ಯಾತ್ಮಿಕ ಪರಂಪರೆಯ ಮಹೋನ್ನತ ಅಂಶಗಳನ್ನು ಪ್ರತಿನಿಧಿಸುತ್ತಾರೆ ಎಂದು ತಿಳಿದಿದ್ದ ಪುತಿನರಿಗೆ ಪಶ್ಚಿಮದ ಬಗ್ಗೆ ಭಯವಿರಲಿಲ್ಲ, ಆತಂಕವಿರಲಿಲ್ಲ. ಪಶ್ಚಿಮ, ಆಧುನಿಕತೆ, ನವ್ಯತೆ ಕುರಿತಂತೆ ಪುತಿನರ ನಿಲುವು ಸ್ಥೂಲವಾಗಿರಲಿಲ್ಲ, ಏಕಮುಖವಾಗಿರಲಿಲ್ಲ.<br /><br />ಆದರೆ ಒಂದು ಸ್ತರದ ನವ್ಯತೆ ಮತ್ತು ಆಧುನಿಕತೆ ಮಾತ್ರ ಪಾವಿತ್ರ್ಯ ನಾಶವಾಗದೆ ಪರ್ಯಾಯ ಸಂಸ್ಕೃತಿಯೂ, ಹೊಸಕಾಲಕ್ಕೆ ಬೇಕಾದ ಆಧುನಿಕತೆಯೂ ನಮ್ಮ ಸಮಾಜದಲ್ಲಿ ಮೂಡಲಾರದೆಂದು ಖಚಿತವಾಗಿ ನಂಬಿತ್ತು. ಇಂತಹವರ ಸಾಹಿತ್ಯ ಕೃತಿಗಳಲ್ಲಿ ಧಾಂದಲೆಗೆ ಒಳಗಾಗಿದ್ದು Rituals. Ritualsಗಳ ಸಾಂಕೇತಿಕತೆಗೇ ಇವರೆಲ್ಲ ಹೆಚ್ಚು ಪ್ರತಿಕ್ರಿಯಿಸಿದರು ಎಂದು ಈಗ ಅನಿಸುತ್ತದೆ. Ritualsಗಳ ಸಾಂಸ್ಕೃತಿಕ ಆಯಾಮ, ಶ್ರೀಮಂತಿಕೆ ಮತ್ತು ಧ್ವನಿ ಇವರಿಗೆ ತಿಳಿಯಲೇ ಇಲ್ಲ. ರೂಪಕಗಳು, ಸಂಕೇತಗಳು ಎಂದು ನಾವು ಭಾವಿಸುವ Ritualsಗಳು ಸಂದೇಶ - ಅರ್ಥವಾಹಕಗಳು ಮಾತ್ರವಲ್ಲ ಅಥವಾ ಅಲ್ಲವೇ ಅಲ್ಲ. ಇದನ್ನೆಲ್ಲ ಆಚರಿಸುವವರ/ಪ್ರತಿಯೊಬ್ಬರ ನಡಾವಳಿ, ಉತ್ಸವ, ವ್ಯಕ್ತಿತ್ವಗಳ ಹಿನ್ನೆಲೆಯಲ್ಲಿ ಪ್ರತಿಸಲವೂ ಈ Ritualsಗಳು ನಿತ್ಯ ನೂತನವಾದ ಅರ್ಥ ಪಡೆಯುತ್ತವೆ ಎಂಬುದನ್ನು ಇವರು ಗ್ರಹಿಸಲಾರದೆ ಹೋದರು. ರೂಪಕ ಸಂಕೇತಗಳೇ ಕೊನೆಯ ಸತ್ಯವೆಂದು ತಿಳಿದವರ ದುರಂತವಿದು. "ಗೋಕುಲಾಷ್ಟಮಿ" ಪ್ರಬಂಧದ ಹಿಂದಿರುವ ತಾತ್ವಿಕತೆ ನನ್ನ ಮಾತನ್ನೇ ಸಮರ್ಥಿಸುತ್ತದೆಂದು ಭಾವಿಸುತ್ತೇನೆ. ಪಾವಿತ್ರ್ಯವೆನ್ನುವುದು ಕೊನೆಗೂ ಇರುವುದು ವಿಧ್ಯುಕ್ತ ಆಚರಣೆಗಳಲ್ಲೂ ಅಲ್ಲ, ಪ್ರತಿಮೆಗಳಲ್ಲೂ ಅಲ್ಲ. ಅದನ್ನು ಆಚರಿಸುತ್ತಿರುವವರ ಕೈಯಲ್ಲಿ. ಒಂದು ಕಾಲದಲ್ಲಿ Ritualsಗಳು ಗೊಡ್ಡುಗಳ ಕೈಯಲ್ಲಿ ಮತ್ತು ಶುಷ್ಕ ವಿಶ್ಲೇಷಕರ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದು ಈಗ ಸಮೂಹಸನ್ನಿಗಳ ಪುಂಡರ ಗುಂಪಿನ ಕೈಲಿ ಸಿಕ್ಕಿಹಾಕಿಕೊಂಡಿದೆ.<br /><br />"ಗೋಕುಲಾಷ್ಟಮಿ" ಪ್ರಬಂಧದಲ್ಲಿ ನನಗೆ ತುಂಬಾ ಇಷ್ಟವಾದ ಇನ್ನೊಂದು ಸಂಗತಿಯೆಂದರೆ ಪ್ರಬಂಧದೊಳಗೆ ಅಡಕವಾಗಿರುವ ಮೌನದ ಸೂಚನೆಗಳು. ಈ ಮೌನ ಕೂಡ ಪ್ರಬಂಧಕಾರ ನಿರೂಪಿಸದೆ ಹೋದ ಆದರೆ ಪ್ರಬಂಧದ ಭಾಗವೇ ಆಗಿರುವ ಜಗತ್ತಿನ ಇನ್ನೂ ಹಲವು ಕೋನಗಳ ಕಡೆ ನಮ್ಮ ಗಮನ ಸೆಳೆಯುತ್ತದೆ. ಎಲ್ಲ ಉತ್ತಮ ಸಾಹಿತ್ಯ ಕೃತಿಗಳು ಎಷ್ಟೇ ಮಾತನಾಡಿದರೂ ಕೊನೆಗೆ ಆಶ್ರಯಿಸುವುದು ಮೌನವನ್ನೇ. ಇಂತಹ ಮೌನದ ಕೆಲವು ಕೋನಗಳ ಬಗ್ಗೆಯಾದರೂ ನಮ್ಮ ಗಮನವು ಮರು ಓದಿನ ಸಂದರ್ಭದಲ್ಲಿ ಜಾಗೃತವಾಗಬಹುದೆಂದು ನನ್ನ ಭಾವನೆ.<br /><br />ಪುತಿನ ಸಮಕಾಲೀನರು ಬದುಕಿನಲ್ಲಿ ಪಾವಿತ್ರ್ಯದ ನೆಲೆಗಳನ್ನು ಹುಡುಕುವ ರೀತಿ ಕೂಡ ಒಬ್ಬರಿಂದ ಒಬ್ಬರಿಗೆ ಭಿನ್ನ. ನಾಸ್ತಿಕರು, ವಿಚಾರವಾದಿಗಳೂ ಆದ ಕಾರಂತರಂತವರ ಹುಡುಕಾಟ- ಎಲ್ಲಿ ಹೇಗೆ? ಪಾವಿತ್ರ್ಯವನ್ನು ಕಾರಂತರು ವ್ಯಕ್ತಿಯ ಚಾರಿತ್ರ್ಯ, ಮೌಲ್ಯನಿಷ್ಠೆ ಮತ್ತು ಪ್ರತಿಯೊಬ್ಬ ಮನುಷ್ಯನ ಸಮಾಜೋಪಯೋಗಿ ಆಯಾಮಗಳಲ್ಲಿ ಕಾಣುತ್ತಾರೆ. ವ್ಯಕ್ತಿಯ ಸಾಮಾಜಿಕ ಹಿನ್ನೆಲೆ, ಸ್ಥಾನಮಾನಗಳಿಗೆ ಕಾರಂತರು ಪ್ರಾಮುಖ್ಯತೆ ನೀಡುವುದಿಲ್ಲ. ಮಾಸ್ತಿಯಂತವರಿಗೆ ವೆಂಕಟಶಾಮಿಯ ಪ್ರಣಯದ ಕತೆ - ಪ್ರಸಂಗ ನಡೆಯುವ ಕುಗ್ರಾಮವೇ Spiritual Place ಆಗಿ ಕಾಣಿಸುತ್ತದೆ. ಕುವೆಂಪುಗೆ ಮದುಮಗಳು ಕಾದಂಬರಿಯ ಘೋಷವಾಕ್ಯದಲ್ಲಿ ಸೂಚಿಸುವಂತೆ ಪಾವಿತ್ರ್ಯವೆನ್ನುವುದು ಕಾಲ-ದೇಶ ಎರಡರ ದೃಷ್ಟಿಯಿಂದಲೂ ಸರ್ವವ್ಯಾಪಿ. ಇದನ್ನು ಹುಡುಕುವುದೇ ಕಲಾವಿದನ ಕರ್ತವ್ಯ. ಬೇಂದ್ರೆಯವರಿಗೆ ಬದುಕಿನ ಲೀಲಾ ಸ್ವಭಾವವೇ ಪಾವಿತ್ರ್ಯದ ಉಗಮ ಮತ್ತು ನಿತ್ಯ ನರ್ತನ. ಸಣ್ಣ ಸೋಮವಾರದಂತಹ ಪದ್ಯದಲ್ಲಿ ವ್ಯಕ್ತವಾಗುವ ಹಾಗೆ ಹಳಹಳಿಕೆಯಿಲ್ಲದಾಗ ಭೂತವು ವರ್ತಮಾನದಲ್ಲಿ ಪ್ರಕಟವಾಗುವ, ನಿಜವಾಗುವ ರೀತಿಯಲ್ಲೇ ಪಾವಿತ್ರ್ಯ ಉಂಟು.<br /><br />ನವ್ಯ ತಲೆಮಾರಿನ ಲೇಖಕರು ಸ್ವಘೋಷಿತ ಪಾವಿತ್ರ್ಯ ನಾಶದ ವಕ್ತಾರರು-ಬರವಣಿಗೆಯ ಒಂದು ಹಂತದಲ್ಲಿ ಬರವಣಿಗೆ, ಕಾಲಮಾಗಿದಂತೆ ಇವರು ಕೂಡ ಪಾವಿತ್ರ್ಯದ ನೆಲೆಗಳನ್ನು ಹುಡುಕಿದವರೇ. ನವ್ಯ ಲೇಖಕರ ಸಂದರ್ಭದಲ್ಲಿ ಪಾವಿತ್ರ್ಯದ ಹುಡುಕಾಟ-ಬರವಣಿಗೆಯ ಕೊನೆ ಕೊನೆ ಹಂತಗಳಲ್ಲಿ ಹೇಗೆ ಜರುಗಿತು ಎಂಬುದು ಪ್ರತ್ಯೇಕ ಲೇಖನ-ಚರ್ಚೆಗೆ ವಸ್ತುವಾಗಬಲ್ಲದು.<br /><br /><strong>(ಗಾಂಧಿಬಜಾರ್ ಸಾಹಿತ್ಯ ಪತ್ರಿಕೆಯ ಮಾರ್ಚ್ 2009ರ ಸಂಚಿಕೆಯಲ್ಲಿ ಪ್ರಕಟಿತ ಲೇಖನ)<br />(ಚಿತ್ರಗಳು: ವಿಜಯ ಕರ್ನಾಟಕ ಮತ್ತು ಉದಯವಾಣಿಯ ಸಾಪ್ತಾಹಿಕ ಪುರವಣಿಗಳಿಂದ ಕೃತಜ್ಞತಾಪೂರ್ವಕ )</strong></span>ಕೆ. ಸತ್ಯನಾರಾಯಣhttp://www.blogger.com/profile/15167030166766836381noreply@blogger.com0tag:blogger.com,1999:blog-1964049159346480323.post-39815077620190766942009-03-21T23:49:00.000-07:002009-03-22T00:16:57.279-07:00ತನಗೆ ತಾನೇ ಹೇಳಿಕೊಂಡ ಕತೆಗಳು<a onblur="try {parent.deselectBloggerImageGracefully();} catch(e) {}" href="http://2.bp.blogspot.com/_D9K0HARbkSE/ScXhTpRcfYI/AAAAAAAAAFg/u9gmxJYSQOM/s1600-h/manju.jpg"><img style="margin: 0pt 10px 10px 0pt; float: left; cursor: pointer; width: 203px; height: 320px;" src="http://2.bp.blogspot.com/_D9K0HARbkSE/ScXhTpRcfYI/AAAAAAAAAFg/u9gmxJYSQOM/s320/manju.jpg" alt="" id="BLOGGER_PHOTO_ID_5315902662793526658" border="0" /></a>ಪಿ. ಲಂಕೇಶ್ ಕೊನೆಯ ಕತೆಗಳ ಒಂದು ಸಾಂಸ್ಕೃತಿಕ ಓದು<br /><br /><span style="font-weight: bold;">Action is common to both reason and imagination. And in art each ougut to borrow from other. Technique is imagination aspiring to reason. Form is reason aspiring to imagination. </span><br /><span style="font-weight: bold;">- Edward Said</span><br /><br />ಈ ಸಂಕಲನದ ಕತೆಗಳ ಬಗ್ಗೆ ಮೊದಲಿಗೇ ಹೇಳಬೇಕಾದ ಮಾತೆಂದರೆ ಇದೆಲ್ಲವೂ ಲೇಖಕ ತನಗೆ ತಾನೇ ಹೇಳಿಕೊಂಡ, ಇನ್ನೂ ಹೇಳಿಕೊಳ್ಳುತ್ತಿರುವಂತೆ ಅನಿಸುವ ಕತೆಗಳು. ಸೃಜನಶೀಲ ಬರಹಗಾರನ ಜೀವನದಲ್ಲಿ ಇದೊಂದು ಅಪೂರ್ವ ಹಂತ. ಓದುಗರಿಗೆ, ಲೋಕಕ್ಕೆ, ಸಮಕಾಲೀನರಿಗೆ ಬರೆಯುವುದು ಎಂದಿಗೂ ಇದ್ದದ್ದೇ. ಕತೆಗಾರ ಕತೆಗಳನ್ನು ತನಗೆ ತಾನೇ ಹೇಳಿಕೊಳ್ಳುವುದಕ್ಕೆ ಇರುವ ಕಾರಣಗಳು ಪ್ರತಿಯೊಬ್ಬ ಲೇಖಕನ ಸಂದರ್ಭದಲ್ಲೂ ಭಿನ್ನವಾದ್ದು. ಈ ಕಾರಣಗಳ ಬಗ್ಗೆ ನಾವು ಊಹಿಸಬಹುದು ಮಾತ್ರ. ಹೀಗೆ ಊಹೆ ಮಾಡುವುದನ್ನು ಬಿಟ್ಟು ಇಲ್ಲಿಯ ಕತೆಗಳ ವಿಶಿಷ್ಟತೆಯನ್ನು ಗಮನಿಸಿದರೆ ಲಂಕೇಶರ ಬರವಣಿಗೆಯ ಬಗ್ಗೆ, ಕನ್ನಡ ಸಂಸ್ಕೃತಿಯ ಬಗ್ಗೆ ನಮಗೆ ತಿಳಿಯುವ ಸಂಗತಿಗಳಿಂದಾಗಿ, ಕತೆಗಾರ ತನಗೆ ತಾನೇ ಕತೆ ಹೇಳಿಕೊಳ್ಳುತ್ತಿರುವುದಕ್ಕೆ ಸತ್ಯಕ್ಕೆ ಹತ್ತಿರವಾದ ಕೆಲವು ಕಾರಣಗಳನ್ನಾದರೂ, ತಿಳಿಯಲು ನೆರವಾಗುತ್ತದೆಂದು ನನ್ನ ನಂಬಿಕೆ. <span class="fullpost"><br /><br />ಲೋಕದ ಕನ್ನಡಿಯಲ್ಲಿ ತನ್ನನ್ನು ಕಾಣುವುದು - ಪರಿಶೀಲಿಸಿಕೊಳ್ಳುವುದು, ತನ್ನ ಕನ್ನಡಿಯಲ್ಲಿ ಲೋಕವನ್ನು ಕಾಣುವುದು - ಪರಿಶೀಲಿಸುವುದು; ಈ ಎರಡು ರೀತಿಯ ನೋಡುವಿಕೆಗಳು ಬೇರೆಬೇರೆಯಲ್ಲ ಎನ್ನುವಂತೆ ಇಲ್ಲಿಯ ಕತೆಗಳಿವೆ. ಇಂತಹ ನೋಡುವಿಕೆ ಒಂದು ರೀತಿಯ ತಹತಹವನ್ನು ಒಳಗುದಿಯನ್ನು ಬರವಣಿಗೆಗೆ ನೀಡುತ್ತದೆ. ಈ ತಹತಹ ಒಳಗುದಿಯ ಅನುಭವ ಯಾವ ಸ್ಥರದ ಓದುಗನಿಗಾದರೂ ತಕ್ಷಣವೆ ತಟ್ಟುತ್ತದೆ. ತಕ್ಷಣವೇ ನೆನಪಿಗೆ ಬರುವುದು ಮಾಸ್ತಿಯವರ ಕೊನೆಯ ಕತೆ `<span style="font-weight: bold;">ಮಾಯಣ್ಣನ</span><span style="font-weight: bold;"> </span><span style="font-weight: bold;">ಕನ್ನಡಿ</span>'. ಆ ಕತೆಯಲ್ಲೂ ಕೂಡ ಲೇಖಕ ಮಾತ್ರವಲ್ಲ ಮನುಷ್ಯ ಕೂಡ ಎರಡೂ ಕನ್ನಡಿಗಳಲ್ಲಿ ಕಾಣುವುದನ್ನು ಒಟ್ಟಿಗೇ ನೋಡಬೇಕೆಂಬ ಸೂಚನೆಯಿದೆ. ಸೂಚಿಸುವ ಕ್ರಮ ಮಾತ್ರ ಉದ್ವಿಗ್ನತೆಯದಲ್ಲ. ವಿಷಾದ ಮತ್ತು ಅನಿವಾರ್ಯತೆಯ ಸ್ಥಾಯಿಯಲ್ಲಿ ಮಾಸ್ತಿ ಕತೆಯನ್ನು ನಡೆಸುತ್ತಾರೆ. ಲಂಕೇಶರ ಬರವಣಿಗೆಯಲ್ಲಿ ಈ ರೀತಿಯ ನೋಡುವಿಕೆ ತನಗೇ ವಿಶಿಷ್ಟವಾದದ್ದು ಎಂದು ಒತ್ತಾಯದಿಂದ ಸೂಚಿಸುವಷ್ಟು `ಸ್ವಪ್ರಜ್ಞೆ' ಮತ್ತು ತೀವ್ರತೆಯಿದ್ದರೆ ಮಾಸ್ತಿಯವರ ಬರವಣಿಗೆಯಲ್ಲಿ ಈ ಸೂಚನೆಯೆಂಬುದು ಲೋಕವು ಇರುವ, ಇರಬೇಕಾದ ರೀತಿಯ ಮನೆವಾರ್ತೆಯ ಧಾಟಿಯಲ್ಲಿ ಪ್ರಕಟವಾಗುತ್ತದೆ. ನನ್ನ ಒಲವು ಮತ್ತು ಆಯ್ಕೆ ಮಾಸ್ತಿಯವರ ಕ್ರಮದ ಪರವಾಗಿ ಇದ್ದರೂ ಲಂಕೇಶರ ಬರವಣಿಗೆಯ ಕ್ರಮವನ್ನು ಪರಿಶೀಲಿಸುವುದು ನಮ್ಮ ಸಾಂಸ್ಕೃತಿಕ ಸನ್ನಿವೇಶ ಮೂಡಿಸುವ ಜವಾಬ್ದಾರಿ. ಲಂಕೇಶರ ಕತೆಗಳ ಸದ್ಯತನ ಇಂತಹ ಒತ್ತಾಯವನ್ನು ಓದುಗರ ಮೇಲೆ ಹಾಕುತ್ತದೆ.<br /><br /></span><div style="text-align: center;"><span class="fullpost"><span style="font-weight: bold;">೨</span></span><br /></div><span class="fullpost"><br />`<span style="font-weight: bold;">ಡಿಸೋಜಾನ</span><span style="font-weight: bold;"> </span><span style="font-weight: bold;">ಊವಿನ</span><span style="font-weight: bold;"> </span><span style="font-weight: bold;">ವೃತ್ತಿ</span>' ಮತ್ತು `<span style="font-weight: bold;">ಒಂದು</span><span style="font-weight: bold;"> </span><span style="font-weight: bold;">ಸಂಬಂಧದ</span><span style="font-weight: bold;"> </span><span style="font-weight: bold;">ದಾಖಲೆ</span>' ಈ ಎರಡೂ ಕತೆಗಳನ್ನು ವಿವರವಾಗಿ ಪರಿಶೀಲಿಸಬಹುದು.<br /><br />ಡಿಸೋಜಾ ಕತೆಯ ಶೇಷಗಿರಿ ವೈಯಕ್ತಿಕವಾಗಿ ಒಳ್ಳೆಯವನೇ. ಶೇಷಗಿರಿಯ ಸಲಹೆಗಳನ್ನು ಒಪ್ಪುವುದರಿಂದ ಡಿಸೋಜಾಗು ಲಾಭವಿದೆ. ಆದರೆ ಇದರಿಂದಾಗಿ ಡಿಸೋಜಾನ ವ್ಯಕ್ತಿತ್ವ ಪ್ರಕಟವಾಗಲಾರದು, ಅರಳಲಾರದು. ಆತ್ಮವಿಶ್ವಾಸ ತುಂಬಲಾರದು. ಶೇಷಗಿರಿಯ ಮೊದಲ ಸಲಹೆ - ಆರೆಸೆಸ್ ತಂಡದವರಿಗೆ ವ್ಯಾಯಾಮ ಹೇಳಿಕೊಡುವುದನ್ನು ಡಿಸೋಜಾ ನೇರವಾಗಿಯೇ ಒಪ್ಪುವುದಿಲ್ಲ. ಡಿಸೋಜಾ ಕ್ರಿಶ್ಚಿಯನ್ ಆದದ್ದರಿಂದ ಹಿಂದೂ ಜಾತಿಗಳ ಸಾಂಪ್ರದಾಯಿಕ ವೃತ್ತಿಗಳ ಬಂಧನವೂ ಆತನಿಗಿಲ್ಲ. ಹೂವಿನ ಮಾರಾಟವನ್ನು ಆತ ನಾಗರೀಕತೆಯ, ಆಧುನಿಕ ಪರಿಭಾಷೆ, ಲಯದಲ್ಲಿ ಮಾಡಲು ಸಿದ್ಧನಿದ್ದಾನೆ, ಉತ್ಸಾಹದಿಂದ್ದಾನೆ. ಸಮಾಜ, ಜನ ಮಾತ್ರ ಹೂ ಮಾರಾಟದ ವೃತ್ತಿಯನ್ನು ಡಿಸೋಜಾನ ಆಧುನಿಕತೆಯ ಪರಿಭಾಷೆಯಲ್ಲಿ ಪರಿಭಾವಿಸಲಾರರು. ಡಿಸೋಜಾನ ಮಾರಾಟದ ಶೈಲಿ, ಪರಿಭಾಷೆ ಸಾರ್ವಜನಿಕರಿಗೆ ಹೇಗೆ ಗೇಲಿಯ ವಸ್ತುವೋ, ಡಿಸೋಜಾಗೆ ಒಳ್ಳೆಯದನ್ನು ಬಯಸುವ ಶೇಷಗಿರಿಗೆ ಕೂಡ ಕುತೂಹಲದ ವಸ್ತುವೇ. ಡಿಸೋಜಾ ಎರಡೂ ರೀತಿಯ ಪ್ರತಿಕ್ರಿಯೆಗಳಿಂದಲೂ ಕಂಗಾಲು. ಶೇಷಗಿರಿಯ ಸೂಚನೆ ಮಾತ್ರ ಜಾತಿಪದ್ಧತಿಗೆ ತಕ್ಕ ಹಾಗೆಯೇ ಇದೆ. ಈ ಸೂಚನೆ ತಕ್ಷಣದ ಹುಮ್ಮಸ್ಸಿಗೆ ಕಾರಣವಾದರೂ ಡಿಸೋಜಾಗೆ ಯಾವುದೋ ವಿಚಿತ್ರ ಯಂತ್ರಕ್ಕೆ ಸಿಕ್ಕಿಹಾಕಿಕೊಂಡ ನೋವು ಮೂಡುತ್ತದೆ.<br /><br />ಶೇಷಗಿರಿಯ ಗ್ರಹಿಕೆಯಲ್ಲಿರುವ ಮಿತಿಗಳನ್ನು ಈ ಕತೆ ವಿಶೇಷವಾದ ವ್ಯಂಗ್ಯವಿಲ್ಲದೆ ನಿರ್ಲಿಪ್ತ ಧಾಟಿಯಲ್ಲಿ ತಣ್ಣಗೆ ಹೇಳಲು ಪ್ರಯತ್ನಿಸುತ್ತದೆ ಎನ್ನುವುದಷ್ಟೇ ಈ ಕತೆಯ ವಿಶೇಷವಲ್ಲ. ದಲಿತರು, ಹಿಂದುಳಿದವರು ಜಾತಿಪದ್ಧತಿಗೆ ಸಂಬಂಧಿಸದ ವೃತ್ತಿಗಳನ್ನು ಯಾವ ಶೈಲಿಯಲ್ಲಿ, ಯಾವ ಪರಿಭಾಷೆ ಲಯದಲ್ಲಿ ಮಾಡಿದರೆ ಸಮಾಜವು ಅದನ್ನು ಒಪ್ಪಿಕೊಳ್ಳುತ್ತದೆ, ದಲಿತರು `ದಲಿತತನ'ದಿಂದ ಯಾವಾಗ ಸಮಾಜದ ಕಣ್ಣಲ್ಲಿ ಪಲ್ಲಟಗೊಳ್ಳುತ್ತಾರೆ, ಪಲ್ಲಟಗೊಳ್ಳಬೇಕು ಎಂಬ ಸಂದಿಗ್ಧದ ಕಡೆ ಕತೆ ನಮ್ಮ ಗಮನ ಸೆಳೆಯುತ್ತದೆ. ಕಲ್ಕತ್ತದ ಬಾಟಾ ಕಂಪನಿಗೆ ನಾನು ಹೋಗಿದ್ದಾಗ ಕಂಪನಿಯಲ್ಲಿ ಕೆಲಸ ಮಾಡುವವರಲ್ಲಿ ಮೇಲ್ವಿಚಾರಕರು ಮಾತ್ರವಲ್ಲ, ಚರ್ಮದ processing ಮುಂತಾದ ಕೆಲಸಗಳಲ್ಲೂ ಬ್ರಾಹ್ಮಣರು ಸೇರಿದಂತೆ ಮೇಲ್ಜಾತಿಯ ಹಿಂದೂಗಳು ನಿರತರಾಗಿದ್ದರು. ಹೀಗೆ ಮಾಡಿಯೂ ಕೂಡ ಅವರೆಲ್ಲ `ತಮ್ಮತನ'ದಿಂದ ಮನಸ್ಸಿನೊಳಗಡೆ ಪಲ್ಲಟಗೊಳ್ಳದೇ ಹೋಗಿರಬಹುದು. ಹಾಗೆ ಪಲ್ಲಟಗೊಳ್ಳಬೇಕೆಂಬ ಒತ್ತಾಯವನ್ನು ಕೂಡ ಸಮಾಜ ಹೇರದಿರಬಹುದು. ದಲಿತರು ಇದುವರೆಗೆ ಮುಂದುವರೆದ ವರ್ಗದವರು ಮಾಡುತ್ತಿದ್ದ ವೃತ್ತಿಗಳನ್ನು, ಹಿಂದಿನ ಶೈಲಿ, ಪರಿಭಾಷೆಯಲ್ಲಿ ಮಾತ್ರ ಮಾಡಿದಾಗಲೇ, ಸಮಾಜವು ಅವರನ್ನು `ಯಶಸ್ವಿ'ಯೆಂದು ಭಾವಿಸಬಹುದು. ಹಾಗಾದಾಗ ಅವರ `ದಲಿತತನ'ಕ್ಕೆ ಏನಾಗುತ್ತದೆ, ಏನಾಗಬೇಕು? ದಲಿತರಿಗೆ ಆಗಮಶಾಸ್ತ್ರದಲ್ಲಿ ತರಬೇತಿ ನೀಡಿ ಪೂಜಾರಿಗಳಾಗಿ ನೇಮಿಸಬೇಕೆಂಬ ಸರಕಾರದ ಯೋಜನೆಗಳೇ ಇವೆಯಲ್ಲ. ದಲಿತರಿಗೆ ಉದ್ಯೋಗಾವಕಾಶಗಳ, ಜೀವನಾವಕಾಶಗಳ ವಿಸ್ತರಣೆಯನ್ನು ಮಾತ್ರವೇ ಕುರಿತು ಯೋಚಿಸುವುದಿದ್ದರೆ ಈ ಕತೆಯ ಸಂದಿಗ್ಧಗಳು ಮುಖ್ಯವಲ್ಲ. ಇಂತಹ ಸನ್ನಿವೇಶವನ್ನು ಸಮಾಜಶಾಸ್ತ್ರಜ್ಞರು ಚರಿತ್ರಕಾರರು ಗಮನಿಸುವ ರೀತಿಯೇ ಬೇರೆ. `<span style="font-weight: bold;">ಸಂವಾದ</span>' ಮಾಸಿಕದಲ್ಲಿ ಪ್ರಕಟವಾದ ಚಂದ್ರಭಾನ್ ಪ್ರಸಾದ್ರ `<span style="font-weight: bold;">ದಲಿತ್</span><span style="font-weight: bold;"> </span><span style="font-weight: bold;">ಡೈರಿ</span>' ಯ ವಿಚಾರಗಳನ್ನು ಈ ಕತೆಯ ನಿಲುವು, ದಿಟ್ಟತನಗಳೊಂದಿಗೆ ಹೋಲಿಸಿ ನೋಡಬಹುದು. ಹೊಸ ಸನ್ನಿವೇಶದ ಸಂಕೀರ್ಣತೆಯನ್ನು ಚಂದ್ರಪ್ರಸಾದ್ ಗಮನಿಸುತ್ತಾರೆ. ಗಮನಿಸುವ ಸ್ತರ ಮಾತ್ರ ಬೇರೆ. ಆಗಸ್ಟ್ ೨೦೦೮ರ ಸಂಚಿಕೆಯಲ್ಲಿ ಬರೆದ ಈ ಮಾತುಗಳು ಈ ಕತೆಯ ಸಂದರ್ಭದಲ್ಲಿ ಗಮನಿಸಬೇಕಾದ್ದು. `ಎರಡು ಕಾರಣಗಳಿಗಾಗಿ ಈಗ ಸಮಯ ದಲಿತರ ಪರವಾಗಿದೆ. ಮೊದಲನೆಯದಾಗಿ ಅಭೂತಪೂರ್ವವಾದ ಆರ್ಥಿಕ ವಿಸ್ತರಣೆಯ ಪರಿಣಾಮವಾಗಿ ಜಾತಿಯ ಹಂಗಿಲ್ಲದ ಸಾವಿರಾರು ವೃತ್ತಿಗಳು ಅಸ್ತಿತ್ವಕ್ಕೆ ಬರುತ್ತಿವೆ. ಎರಡನೆಯದಾಗಿ ದಲಿತರಿಗೆ ಗ್ರಾಮೀಣ ಪ್ರದೇಶಗಳಲ್ಲಿ ಗಣನೀಯವಾಗಿ ಆಸ್ತಿಯ ಒಡೆತನ ಇಲ್ಲದಿರುವುದರಿಂದ ನಗರ ಪ್ರದೇಶಗಳಿಗೆ ಅವರು ಸುಲಭವಾಗಿ ವಲಸೆ ಬರಬಹುದಾಗಿದೆ.' (ಸಂವಾದ, ಆಗಸ್ಟ್ ೨೦೦೮, ಪುಟ ೪೬) ಈ ವಿಶ್ಲೇಷಣೆಯ ಭರದಲ್ಲಿ ನಾವು ಮರೆಯಬಾರದ ಇನ್ನೂ ಒಂದು ಸಂಗತಿಯಿದೆ. ಮನುಷ್ಯನ ಶ್ರಮವನ್ನು ಬೇಡುವ, ಒಪ್ಪಿಕೊಳ್ಳುವ ಎಲ್ಲ ರೀತಿಯ ವೃತ್ತಿಗಳಿಗೂ ತನ್ನದೇ ಆದ ಒಂದು ಸೌಂದರ್ಯ, ಘನತೆ ಇದೆ. ಈ ಸೌಂದರ್ಯ, ಘನತೆ, ಜಾತಿಪದ್ಧತಿ ಮತ್ತು ಸಂಸ್ಕೃತಿ ನಿರ್ದಿಷ್ಟತೆಯನ್ನು ಮೀರಿದ್ದು ಕೂಡ ಆಗಿರುತ್ತದೆ. ಸದ್ಯದ ವಾತಾವರಣದ ತಹತಹದಲ್ಲಿ ಇದನ್ನು ಗಮನಿಸುವ ವ್ಯವಧಾನ ನಮಗಿಲ್ಲದೆ ಇರಬಹುದು.<br /><br /><a onblur="try {parent.deselectBloggerImageGracefully();} catch(e) {}" href="http://1.bp.blogspot.com/_D9K0HARbkSE/ScXhv6SK8hI/AAAAAAAAAFo/5NnL1yKR4po/s1600-h/lankesh822.jpg"><img style="margin: 0pt 10px 10px 0pt; float: left; cursor: pointer; width: 417px; height: 389px;" src="http://1.bp.blogspot.com/_D9K0HARbkSE/ScXhv6SK8hI/AAAAAAAAAFo/5NnL1yKR4po/s320/lankesh822.jpg" alt="" id="BLOGGER_PHOTO_ID_5315903148396311058" border="0" /></a>`<span style="font-weight: bold;">ಒಂದು</span><span style="font-weight: bold;"> </span><span style="font-weight: bold;">ಸಂಬಂಧದ</span><span style="font-weight: bold;"> </span><span style="font-weight: bold;">ದಾಖಲೆ</span>' ಇನ್ನೊಂದು ರೀತಿಯ ಸಾಂಸ್ಕೃತಿಕ ಸಂದಿಗ್ಧವನ್ನು ಇನ್ನೂ ಸಂಕೀರ್ಣ ನೆಲೆಗಳಲ್ಲಿ ಪರಿಶೀಲಿಸುತ್ತದೆ. ಕೆಳವರ್ಗದ ಜನರ ಒಡನಾಟವನ್ನು, ಜೀವನಶೈಲಿಯನ್ನು, ಅವರ ಕತೆಗಳನ್ನು, ಅವರು ಹೇಳುವ ಕತೆಗಳನ್ನು ಮೇಲುವರ್ಗದವರು ತಮ್ಮ Psychological ಮತ್ತು Moral fillingಗಾಗಿ ಉಪಯೋಗಿಸಿಕೊಳ್ಳುವ ಸೂಕ್ಷ್ಮ ದುರಂತವನ್ನು ಮತ್ತು ಈ ರೀತಿಯ `ತುಂಬಿಕೊಳ್ಳುವಿಕೆ'ಯನ್ನು ಕೆಳವರ್ಗದವರು ಹಿಂತಿರುಗಿಸಿದಾಗ ಮೇಲುವರ್ಗದವರಲ್ಲಿ ಮೂಡುವ ಕಂಗಾಲುತನವನ್ನು ಈ ಕತೆ ಶೋಧಿಸುತ್ತದೆ. ಈ ತುಂಬಿಕೊಳ್ಳುವಿಕೆ ನಮ್ಮ ಸಾಮಾಜಿಕ ಸನ್ನಿವೇಶದ ಬೇರೆ ಬೇರೆ ಅವಸ್ಥೆಗಳಲ್ಲಿ ಯಾವ ರೀತಿ ನಡೆಯುತ್ತದೆ ಎಂಬುದರ ದಾಖಲೆ ಕೂಡ ಇಲ್ಲಿದೆ. ಮೊದಲನೆಯ ಪೀಳಿಗೆಯಲ್ಲಿ ಕೂಡ ಅನುಚರನಂತೆ ಕಾಣುವ ಕರಿಯಣ್ಣನ ತಂದೆ ನಿರೂಪಕನ ತಂದೆಗೆ ಆತ್ಮವಿಶ್ವಾಸ ತುಂಬುತ್ತಾನೆ. ಆದರೆ ಈ ತುಂಬುವಿಕೆ Psychological filling ಎಂದು ಗೊತ್ತಾಗದಷ್ಟು ಸರಳಗ್ರಹಿಕೆ ಆ ಕಾಲಮಾನದ್ದು. ಕರಿಯಣ್ಣ- ನಿರೂಪಕ - ರುದ್ರಮೂರ್ತಿಯ ಪೀಳಿಗೆಯಲ್ಲೂ ಕೂಡ ಕರಿಯಣ್ಣನ ವ್ಯಕ್ತಿತ್ವದ ಮಾತುಕತೆಯೇ ನಿರೂಪಕನಿಗೆ ಆಕರ್ಷಣೆ. `ತುಂಬಿತ್ತು, ಹಬ್ಬಿಹೋಗುತ್ತಿದ್ದ, ಆವರಿಸಿದ್ದಕ್ಕೆ' ಇಂತಹ ಪದಗಳ ಬಳಕೆಯನ್ನು ಗಮನಿಸಬಹುದು. ಈ ಸಾಲುಗಳನ್ನು ಗಮನಿಸಿ:<br /><br />`ಈ ಗಮಾರನನ್ನೇಕೆ ಇಷ್ಟೊಂದು ಇಷ್ಟಪಡ್ತಿದೇನೆ ಎಂದು ನಾನು ಚಿಂತಿಸಿದೆ. ಕರಿಯಣ್ಣನ ಮಾತು, ಕತೆ, ಕನ್ನಡ ಗಾದೆಗಳ, ನುಡಿಕಟ್ಟಿನ ಗತ್ತು ಎಲ್ಲವನ್ನು ಮೀರಿದ್ದು ಅವನ ಆಳದಲ್ಲಿದ್ದ ನೆಮ್ಮದಿಯ ಚೇತನ..... ನಮ್ಮ ಎಲ್ಲ ಉದ್ವಿಗ್ನತೆಯನ್ನು ನೇವರಿಸಿ ಇಲ್ಲವಾಗಿಸಿ ಪ್ರೀತಿಯನ್ನು ಸ್ಫುರಿಸುವ ಯಕ್ಷಿಣಿ.....ದಪ್ಪ ಮೂಗಿನ ಪಕ್ಕದ ಕೆನ್ನೆ, ಕತ್ತಿನ ಸುಕ್ಕು, ಕಣ್ಣಿನ ಹೊಳಪು.....ನಿರಿಗೆಯ ರೆಕ್ಕೆಗಳು.'<br /><br />`ಕರಿಯಣ್ಣನ ಕತೆಗಳಿಲ್ಲದೆ ನಾನು ಕಾಲ ಕಳೆಯುವುದೇ ಕಷ್ಟ ಎನಿಸಿತು.'<br /><br />ಕರಿಯಣ್ಣನ ಮಗನ ಬೆಳವಣಿಗೆಯಿಂದ ಕರಿಯಣ್ಣ ಮತ್ತು ನಿರೂಪಕ ಇಬ್ಬರೂ ಕಂಗಾಲು. ಮಗ ಸುರೇಶ ಈ `ತುಂಬಿಕೊಳ್ಳುವಿಕೆ'ಯನ್ನು Reverseಮಾಡುವಷ್ಟು ಸಮಾಜ ಬದಲಾಗುತ್ತದೆ. ಮೇಲುವರ್ಗದವರನ್ನು ಕೀಳಂದಾಜಿನಲ್ಲಿ ಕಾಣುವುದು, ಗೇಲಿ ಮಾಡುವುದು, ಹಿಂಸೆಗೆ ಒಳಪಡಿಸುವುದು, ಇದುವರೆಗೆ ಶೋಷಣೆಗೆ ಒಳಗಾಗಿದ್ದವರು moral and psychological filling ಮಾಡಿಕೊಳ್ಳುವ ರೀತಿ. ಈ ಸುರೇಶ ನಿರೂಪಕನಿಗೆ ಕಪ್ಪಗೆ, ಕ್ರೂರವಾಗಿ ಕಾಣುತ್ತಾನೆ. ಸುರೇಶ `ತುಂಬಿಕೊಳ್ಳುವಿಕೆ'ಯನ್ನು Reverse ಮಾಡುತ್ತಾನೆ ಮಾತ್ರವಲ್ಲ - ತಂದೆಯ ತುಂಬಿಕೊಳ್ಳುವಿಕೆಯ ಬಗ್ಗೆ ಅಸಹ್ಯ ಪಟ್ಟುಕೊಂಡು ಪ್ರತಿಭಟಿಸುತ್ತಾನೆ ಕೂಡ.<br /><br />ವಿಚಿತ್ರ ಸೆಳವುಗಳನ್ನುಳ್ಳ ಗಟ್ಟಿ ನಿಲುವಿನ ಕತೆಯಿದು. ಇಂತಹುದೇ ಸಂದರ್ಭವನ್ನು ಲಂಕೇಶ್ <span style="font-weight: bold;">ಕಲ್ಲು</span><span style="font-weight: bold;"> </span><span style="font-weight: bold;">ಕರಗುವ</span><span style="font-weight: bold;"> </span><span style="font-weight: bold;">ಸಮಯ</span> ಮತ್ತು <span><span style="font-weight: bold;">ಉಲ್ಲಂಘನೆ</span>ಯಂತಹ</span> ಕತೆಗಳಲ್ಲಿ ಗ್ರಹಿಸಲು ಪ್ರಯತ್ನಿಸಿದ್ದಿದೆ. ಗ್ರಹಿಕೆ ಮಾತ್ರ ಭಾವನಾತ್ಮಕ ಲಯಗಳಿಂದ ಕೂಡಿದ್ದು ಕತೆಗಳ ಆಶಯ ನಮ್ಮ ಕಾಲದ ಸಾಮಾಜಿಕ ಅಪೇಕ್ಷೆಗಳಿಗನುಗುಣವಾಗಿ ಇರುವುದರಿಂದ ನಾವು ಒಪ್ಪಿರಬಹುದು. ಈ ಎರಡೂ ಕತೆಗಳಲ್ಲೂ ಇರುವ wish fulfilment- ಓದುಗನದ್ದು ಮತ್ತು ಲೇಖಕನದ್ದು - ಗುಣವನ್ನು ಕೂಡ ಗಮನಿಸಬೇಕು. ಆದರೆ ಈ ಕತೆ ಇಂತಹ wish fulfilmentನ್ನು ಪ್ರಶ್ನಿಸುತ್ತದೆ. ಈ ಪ್ರಶ್ನಿಸುವ ಛಾತಿ ಕತೆಯ ಒಡಲಿನಿಂದಲೇ ಮೂಡಿ ಬಂದಿದೆ.<br /><br /><a onblur="try {parent.deselectBloggerImageGracefully();} catch(e) {}" href="http://4.bp.blogspot.com/_D9K0HARbkSE/ScXioxFhsBI/AAAAAAAAAF4/bQ_OYced8Pc/s1600-h/mAsti-new.bmp"><img style="margin: 0pt 10px 10px 0pt; float: left; cursor: pointer; width: 132px; height: 202px;" src="http://4.bp.blogspot.com/_D9K0HARbkSE/ScXioxFhsBI/AAAAAAAAAF4/bQ_OYced8Pc/s320/mAsti-new.bmp" alt="" id="BLOGGER_PHOTO_ID_5315904125179899922" border="0" /></a>ನಮ್ಮ ಕುತೂಹಲಕ್ಕಾಗಿ ಸಾಂಪ್ರದಾಯಿಕ ಸಂವೇದನೆಯವರೆಂದು ನಾನು ತಿಳಿದಿರುವ ಮಾಸ್ತಿಯಂತಹ ಲೇಖಕರು ಈ ಸನ್ನಿವೇಶವನ್ನು ಹೇಗೆ ಗ್ರಹಿಸುತ್ತಾರೆಂದು ನೋಡಬಹುದು. ಕರಿಯಣ್ಣನಂತವರ ಪಾತ್ರಗಳನ್ನು ಮಾಸ್ತಿ ಪ್ರತಿನಿಧೀಕರಣಕ್ಕೆ ಒಳಪಡಿಸುವುದೇ ಇಲ್ಲ. ವೆಂಕಟಿಗ, ವೆಂಕಟಶಾಮ, ಬೈಚೇಗೌಡ, ಜೋಗ್ಯೋರ ಅಂಜಪ್ಪ ಇವರೆಲ್ಲರನ್ನು ಮಾಸ್ತಿ ಒಂದು ವರ್ಗದ ಪ್ರತಿನಿಧಿಗಳಾಗಿ ಕಾಣುವುದಕ್ಕಿಂತ ಮನುಷ್ಯ ಮಾತ್ರರಾದವರು ಕಷ್ಟ ಸುಖವನ್ನು ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಎದುರಿಸುವ ವ್ಯಕ್ತಿಗಳನ್ನಾಗಿ ನೋಡುತ್ತಾರೆ. ನವ್ಯ ಚಳುವಳಿಯ ನಂತರ ಪಾತ್ರಗಳನ್ನು ಪ್ರಾತಿನಿಧಿಕವಾಗಿ, ಸಾಂಕೇತಿಕವಾಗಿ, ರೂಪಕವಾಗಿ ಗ್ರಹಿಸುವುದು ಪ್ರಾರಂಭವಾಯಿತು. `<span style="font-weight: bold;">ಭಾರತೀಪುರ</span>'ದಂತಹ ಕಾದಂಬರಿ ಹೊಸ ಸನ್ನಿವೇಶವನ್ನು ಪ್ರತಿನಿಧೀಕರಣವನ್ನು (representataion) ಗೃಹೀತವಾಗಿ ಸ್ವೀಕರಿಸಿ ಇದರಿಂದಾಗಿ ಪ್ರಜ್ಞೆಯ ಮೇಲಾಗುವ ಬೇರೆ ಬೇರೆ ರೀತಿಯ ಪರಿಣಾಮಗಳನ್ನು ಶೋಧಿಸಲು ಪ್ರಯತ್ನಿಸುತ್ತದೆ. ಇಂತಹ ಪ್ರಯತ್ನಗಳಿಗೆ ಅಪವಾದವಿಲ್ಲವೆಂದಲ್ಲ. ರಾಘವೇಂದ್ರ ಖಾಸನೀಸರ `<span style="font-weight: bold;">ತಬ್ಬಲಿಗಳು</span>' ಓದುವಾಗ ಅಪ್ಪಿತಪ್ಪಿ ಕೂಡ ನಮ್ಮ ಮನಸ್ಸಿನಲ್ಲಿ ಪ್ರತಿನಿಧೀಕರಣದ ಛಾಯೆ ಜಾಗೃತವಾಗುವುದಿಲ್ಲ. ನಮ್ಮಂತಹ ಸಾಂಸ್ಕೃತಿಕ ಸಂದಿಗ್ಧದಲ್ಲಿ ಬದುಕುತ್ತಿರುವ ದಕ್ಷಿಣ ಆಫ್ರಿಕಾದ ಬರಹಗಾರ ಕುತ್ಸೆಯ Disgrace ಕಾದಂಬರಿ ಕೂಡ ಪ್ರತಿನಿಧೀಕರಣದಿಂದಾಚೆ ಕೈ ಚಾಚುತ್ತದೆ. ಕನ್ನಡದ ಮಟ್ಟಿಗೆ ಈಗ ಇದೆಲ್ಲ ಹಳೆಯ ಸಮಾಚಾರ. ನಿಜಜೀವನದಲ್ಲೂ, ಸಾಹಿತ್ಯ ಕೃತಿಗಳ ಓದಿನಲ್ಲೂ ಮನುಷ್ಯರು ಈಗ ನಮಗೆ ಸಾಮಾಜಿಕ ಚಹರೆಗಳಾಚೆ ಕಾಣುವುದೇ ಇಲ್ಲ. ಬ್ರಿಟಿಷರನ್ನು ಕೂಡ ಬ್ರಿಟಿಷರನ್ನಾಗಿ ನೋಡಲು ನಿರಾಕರಿಸುತ್ತಿದ್ದ ಗಾಂಧಿ ವ್ಯಕ್ತಿತ್ವದ ಹಿನ್ನೆಲೆಯಲ್ಲಿ ಲಂಕೇಶರ ಈ ಕತೆಗೆ ಇನ್ನೂ ಹೆಚ್ಚಿನ ಓದಿನ ಸಾಧ್ಯತೆಗಳಿವೆಯೆಂದು ನಾನು ತಿಳಿದಿದ್ದೇನೆ.<br /><br />ಲಂಕೇಶರ ಜೀವನ ದೃಷ್ಟಿಕೋನದ ಬಗ್ಗೆ ಇಲ್ಲಿಯ ಎಲ್ಲಾ ಕತೆಗಳನ್ನು ಒಟ್ಟಾಗಿಯೇ ನೋಡುತ್ತಾ ಕೆಲವು ಪ್ರಶ್ನೆಗಳನ್ನು ಎತ್ತಬೇಕೆನಿಸುತ್ತದೆ. ಈ ಕತೆಗಳು ಲೇಖಕರ ಕೊನೆಯ ಕತೆಗಳಾಗಿರುವುದರಿಂದ, ಜೀವನದ ಕೊನೆ ಮತ್ತು ನಾವು ಬರಹದ ಹಿಂದೆ ಎಲ್ಲೋ ಹೊಂಚುಹಾಕುತ್ತಿರುವ ಭಾವವನ್ನು ಓದುಗರಲ್ಲಿ ಹುಟ್ಟಿಸುವುದರಿಂದ ಈ ಪ್ರಶ್ನೆಗಳನ್ನು ಕೇಳಲೇಬೇಕಾದ್ದು ಅನಿವಾರ್ಯ.<br /><br />ಇಲ್ಲಿಯ ಕತೆಗಳ ನಾಯಕರು, ನಿರೂಪಕರು - ಎಲ್ಲರೂ ನಿವೃತ್ತರು, ಇಳಿವಯಸ್ಸಿನವರು. ಪದೇ ಪದೇ ಇದರ ಪ್ರಸ್ತಾಪ ಬರುತ್ತದೆ. ಬದುಕಿನ ಸಂದಿಗ್ಧತೆಯ ತೀವ್ರ ಅರಿವು ಇರುವಂತೆಯೇ ಬದುಕಿನಿಂದ ಸುಸ್ತಾದ, ಖೇದಗೊಂಡ, ಹತಾಶೆಗೊಂಡ ಭಾವನಾವಿನ್ಯಾಸ ಎಲ್ಲ ಕತೆಗಳ ಹಿಂದೂ ಇದೆ. ದೇಹದ ವಿಹ್ವಲತೆ, ವಯಸ್ಸಾಗುವಿಕೆಯ ಬಗ್ಗೆ ಇಳಿವಯಸ್ಸಿಗೂ ಹೆಚ್ಚೆನ್ನುವಷ್ಟು ಹಚ್ಚಿಕೊಳ್ಳಲಾಗಿದೆ. ಶೋಧನೆಗೆ ಭೂಮಿಕೆಯನ್ನು ಸೃಷ್ಟಿಸಿಕೊಳ್ಳಲು ಈ ರೀತಿಯ ಭಾವವಿನ್ಯಾಸವನ್ನು ಲೇಖಕ ಪೂರ್ವಪಕ್ಷವಾಗಿ ಸೃಷ್ಟಿಸುತ್ತಿದ್ದಾನೆ ಎಂಬ ಮಾತನ್ನು ಒಪ್ಪುವುದು ಕಷ್ಟ. ಏಕೆಂದರೆ ಒಂದೇ ರೀತಿಯ ಗ್ರಹಿಕೆ ನಿಲುವು ಎಲ್ಲ ಕತೆಗಳಲ್ಲೂ ವ್ಯಕ್ತವಾಗುತ್ತದೆ. ಈ ಮಾತುಗಳನ್ನು ಗಮನಿಸಿ:<br /><br />ಎಲ್ಲ ಸಂಬಂಧಗಳು ಉಂಟು ಮಾಡುವ ವೇದನೆ (ಪುಟ ೬೧)<br /><br />ಆಲಿಂಗನದ ಮಹಾ ಕಿಚ್ಚಿನಲ್ಲಿ ಮಾತ್ರ ಸಂಸಾರದ ತಣ್ಣನೆಯ ಸ್ಪರ್ಶದ ನರಕ ತಿಳಿಯುತ್ತಿದೆ. ಹುಟ್ಟಿಸಲಾರದ, ರೂಪಿಸಲಾರದ ನಿಷ್ಠೆ ಮನುಕುಲದ ಅನೇಕಾನೇಕ ಅನಗತ್ಯ ಗಂಟೆಗಳಂತೆ ಕಾಣತೊಡಗುತ್ತದೆ. ಪ್ರೇಮ, ಕಾಮ, ಮಿಥುನ ಎಲ್ಲವೂ ಬರೀ ಮಾತುಗಳು (ಪುಟ ೫)<br /><br />ಹೆಸರು ಹಿನ್ನೆಲೆ ನೆನಪು ಎಲ್ಲವನ್ನೂ ತೊಳೆದು ಹಾಕಿ ದೇಹದ ಮಟ್ಟದಲ್ಲಿ ಬದುಕಿದರೆ.....(ಪುಟ ೧೮)<br /><br />ನಾಗರೀಕತೆಯ ಕ್ಲಿಷ್ಟ ಹಂದರ ವಿಸ್ಮಯಗೊಳಿಸುತ್ತಿತ್ತು (ಪುಟ ೩೭)<br /><br />ಎಲ್ಲದರಿಂದ ತಪ್ಪಿಸಿಕೊಳ್ಳಬೇಕೆಂದು ಮಾಡಿದ್ದ ನಿರ್ಧಾರ (ಪುಟ ೫೮)<br /><br />ಇಂಥ ಮಹಾವೃದ್ಧಾಪ್ಯ ಜಟಿಲವಾದ್ದು. ಅಲ್ಲಿ ಸುಸ್ತಿನಿಂದಾಗಿಯೇ ಬಂದ ಮಹಾ ವಸ್ತುನಿಷ್ಠೆ ಇರುವಂತೆಯೇ ಅಚ್ಚರಿಗೊಳಿಸುವ ಹೊಸ ವಿಷಯಗಳನ್ನು ಕೇಳಲು ಆಶಯವಿರುತ್ತದೆ. (ಪುಟ ೭೭)<br /><br />ಈ ಧೋರಣೆ ಮತ್ತೆ ಮತ್ತೆ ಎನ್ನುವಂತೆ ಮರುಕಳಿಸುವುದರಿಂದ ಬದುಕಿನ ಸಾರ್ಥಕತೆ ಮತ್ತು ಪೂರ್ಣತೆ ಬಗ್ಗೆ ಇದು ಏನನ್ನು ಸೂಚಿಸುತ್ತದೆ? ದೇಹ ಮನಸ್ಸು ತಾನು-ಅನ್ಯರು, ಸಾವು-ಬದುಕು, ಕ್ಷಣ-ಅನಂತ ಇವುಗಳ ನಡುವೆ ಇರುವ ವೈರುಧ್ಯವನ್ನು ಪ್ರತಿಯೊಬ್ಬ ಮನುಷ್ಯನೂ ತನ್ನ ಅನುಭವದ ಹಿನ್ನೆಲೆಯಲ್ಲಿ ಅರ್ಥೈಸಿಕೊಂಡು ಮಾಗುತ್ತಾ ಹೋಗುತ್ತಾನೆ. ಇಂತಹ ಮಾಗುವಿಕೆಯ ಬಗ್ಗೆ ಲಂಕೇಶರಿಗೆ ನಂಬಿಕೆಯಿಲ್ಲವೆನಿಸುತ್ತದೆ. ಈ ಮಾಗುವಿಕೆಗೆ ಅಗತ್ಯವಾದ ಒಂದು ನಿರ್ದಿಷ್ಟ ವ್ಯಕ್ತಿತ್ವವನ್ನು ಇವರ ಪಾತ್ರಗಳು ಇಳಿವಯಸ್ಸಾದರೂ ತಲುಪದೇ ಇರುವುದು, ಇನ್ನೂ ಇವರ ವ್ಯಕ್ತಿತ್ವಗಳು ನಿರ್ಮಾಣಗೊಳ್ಳುವ ಹಪಾಹಪಿಯಲ್ಲೇ ಇರುವುದು ಆಶ್ಚರ್ಯ ಹುಟ್ಟಿಸುತ್ತದೆ. ಇವರ ಪಾತ್ರಗಳಿಗೆ ಸೃಜನಶೀಲ ಮಾಗುವಿಕೆಯೆಂಬುದು ಇಲ್ಲ. ಒಟ್ಟು ಸಂಕಲನದಲ್ಲಿ ಮುಂದಿನ ಪೀಳಿಗೆಯೆಂಬುದೇ ಇಲ್ಲವೇನೋ ಅನಿಸುತ್ತದೆ. ತನ್ನ ಜೊತೆಯೂ, ಮುಂದಿನ ಪೀಳಿಗೆಯ ಜೊತೆಯೂ, ಸುತ್ತಲ ಬದುಕಿನ ಜೊತೆಗೂ ಆತ್ಮೀಯತೆಯನ್ನು ಅನುಭವಿಸಲಾಗದ ಸ್ಥಿತಿಯಲ್ಲಿ ಸ್ಥಾಯಿಯಾಗಿ ನಿಂತ ಪಾತ್ರಗಳು ಇವು. ಲೇಖಕನೊಬ್ಬನ ದೃಷ್ಟಿಕೋನ ಹೀಗೇ ಇರಬಹುದಾದರೆ ತಪ್ಪೇನು ಎಂಬ ಪ್ರಶ್ನೆ ಸರಿಯೇ. ಆದರೆ ಈ ದೃಷ್ಟಿಕೋನ ಬದುಕಿನ ಪೂರ್ಣತೆ, ಸಾರ್ಥಕತೆ ಮತ್ತು ಒಟ್ಟಾರೆ ಜೀವನ ಸಫಲತೆಯ ಬಗ್ಗೆ ಏನನ್ನು ಹೇಳುತ್ತದೆ ಎಂದು ಗಮನಿಸಬೇಕಾದ್ದು ಕೂಡ ವಿಮರ್ಶೆಯ ವ್ಯಾಪ್ತಿಯಲ್ಲಿ ಬರುತ್ತವೆಂದು ನಾನು ನಂಬಿದ್ದೇನೆ.<br /><br />ಮೇಲಿನ ಸಂಗತಿಗೂ ಲಂಕೇಶರಿಗೆ epiphancy(ಸತ್ಯದರ್ಶನ, ಸಾಕ್ಷಾತ್ಕಾರ)ಯ ಸ್ವರೂಪದ ಬಗ್ಗೆ ಇರುವ ನಂಬಿಕೆಗೂ ಸಂಬಂಧವಿದೆಯೆನಿಸುತ್ತದೆ. ಸತ್ಯದರ್ಶನವೆಂಬುದು ಲಂಕೇಶರಲ್ಲಿ <span>ಚಿಂತಾಮಣಿಯಲ್ಲಿ</span> ಯಾವುದೋ ಒಂದು ದಿವ್ಯ ಘಳಿಗೆಯಲ್ಲಿ ಕಾಣುವ ಮುಖವಲ್ಲ. ಕ್ರಮೇಣವಾಗಿ ಪ್ರಜ್ಞೆ ವಿಕಾಸವಾಗುವ ಹನುಮದ್ವಿಕಾಸವೂ ಅಲ್ಲ. ಒಂದು ಒತ್ತಡದಲ್ಲಿ, ಒಂದು ಒತ್ತಾಯದಲ್ಲಿ ಮನುಷ್ಯ ತನ್ನ ನಿಜಸ್ವಭಾವವನ್ನು, ವ್ಯಕ್ತಿತ್ವವನ್ನು ತಿಳಿಯುತ್ತಾನೆ. ಈ ರೀತಿಯ ಒತ್ತಡ, ಒತ್ತಾಯವನ್ನು ಸೃಷ್ಟಿಸಿ ಮನುಷ್ಯನನ್ನು ಅದಕ್ಕೆ ಮುಖಾಮುಖಿಯಾಗಿಸುವುದು ಅದಕ್ಕಾಗಿ ಅನಾವರಣಗೊಳಿಸುತ್ತಾ ಹೋಗಬೇಕಾದ್ದು ಲಂಕೇಶರ, ಅವರ ನಿರೂಪಕರ, ನಾಯಕರ ಗುರಿ. ಜೊತೆಗೆ ಇಂತಹ ವಾತಾವರಣವನ್ನು, ಒತ್ತಡವನ್ನು ಸೃಷ್ಟಿ ಮಾಡುವವನು ನೈತಿಕ ಉತ್ತಮಿಕೆಯಿಂದಲೂ ಕೂಡಿರುತ್ತಾನೆ. ಈ ಮಾದರಿ ಲಂಕೇಶರ `<span style="font-weight: bold;">ತೆರೆಗಳು</span>' ನಾಟಕದಿಂದ, ಪ್ರಾರಂಭದ ಕತೆಗಳಿಂದ, ಕೊನೆತನಕದ ಎಲ್ಲ ಬರಹಗಳಲ್ಲೂ ವ್ಯಕ್ತವಾಗುತ್ತದೆ. ಕತೆಗಳು ಹೀಗೆ ಸೃಷ್ಟಿಯಾಗುವ ಒತ್ತಡ-ಒತ್ತಾಯಗಳನ್ನು ನಿರೂಪಿಸುತ್ತಾ ಹೋಗಿ ಕೊನೆಯಲ್ಲಿ ಪಡೆಯುವ ತಿರುವಿನಲ್ಲಿ ಸತ್ಯದ ಕಡೆಗೆ ಮುಖ ಮಾಡುತ್ತವೆ. <span style="font-weight: bold;">ಜೊತೆಗಾರ</span>, <span style="font-weight: bold;">ಉಮಾಪತಿಯ</span><span style="font-weight: bold;"> </span><span style="font-weight: bold;">ಸ್ಕಾಲರ್</span><span style="font-weight: bold;">ಶಿಪ್</span><span style="font-weight: bold;"> </span><span style="font-weight: bold;">ಯಾತ್ರೆ</span> ಇಂತಹ ಕತೆಗಳಲ್ಲಿ ಈ ಅನಾವರಣ ವ್ಯವಧಾನದಲ್ಲಿ, ಧ್ವನಿಪೂರ್ಣವೂ ವಿವರವೂ ಆದ ನಿರೂಪಣೆಯಲ್ಲಿ ನಡೆದರೆ ಇಲ್ಲಿನ ಕತೆಗಳ ಓಘಕ್ಕೆ ಅಂತಹ ವ್ಯವಧಾನವಿಲ್ಲವೆನಿಸುತ್ತದೆ. ಲಂಕೇಶರ ಈ ಮಾದರಿಗೆ ನಾವು ಈಗಾಗಲೇ ಒಗ್ಗಿ ಹೋಗಿರುವುದರಿಂದ ಕತೆಯ ನಿರ್ದಿಷ್ಟ ರೀತಿಯ ಕೊನೆಗೆ ಕತೆಗಳು ರೂಢಿಯಿಂದ ಚಲಿಸುತ್ತಿವೆಯೇನೋ ಎಂಬ ಭಾವನೆ ಬರುತ್ತದೆ. ಸಂಕಲನದ ಕೊನೆಯಲ್ಲಿರುವ ಕ್ಷೀಜುವಿನ ಹಠ ಮತ್ತು ಪ್ರೇಮ ಎಂಬ ವಿಸ್ಮಯ - ಈ ಎರಡೂ ಪುನರ್ ಸೃಷ್ಟಿಸಿದ ಕತೆ/ಬರಹಗಳ epiphancyಯ ಸ್ವರೂಪಕ್ಕೆ ಕತೆಯ ವಿವರಗಳಲ್ಲೇ ಒಂದು ರೀತಿಯ ಸಾವಯವ ಸಿದ್ಧತೆಯಿದೆಯೆನಿಸುತ್ತದೆ. ಮತ್ತೆ ಇವೆರಡೂ ಬರಹಗಳು ಮಂಡಿಸುವ ದರ್ಶನ ಇತರ ಕತೆಗಳಿಗೆ ಹೋಲಿಸಿದರೆ open ended ಎನಿಸುತ್ತದೆ.<br /><br />ಒಂದು ಒತ್ತಡದಲ್ಲಿ ಒತ್ತಾಯದಲ್ಲಿ ಮಾತ್ರ ಮನುಷ್ಯ ಸತ್ಯಕ್ಕೆ ಹತ್ತಿರವಾಗಬಲ್ಲ ಎಂಬ ನಂಬಿಕೆಗೂ ಲಂಕೇಶರಿಗೆ ಪ್ರವೃತ್ತಿಯ ಬಗ್ಗೆ ಇರುವ ಒಲವಿಗೂ ಸಂಬಂಧವಿದೆಯೆನಿಸುತ್ತದೆ. ಈ ಕತೆಯ ಕಲಿತವರು, ನಾಗರೀಕರು ಯಾರೂ ಧ್ಯಾನದಲ್ಲಿ, ಏಕಾಂತದಲ್ಲಿ ಸಾಮಾಜಿಕ ಸಾಹಚರ್ಯದಲ್ಲಿ ಸತ್ಯಕ್ಕೆ ಹತ್ತಿರವಾಗಲಾರರು. ತಟಕ್ಕನೆ ಅವರನ್ನು ಸತ್ಯದ ಕಡೆಗೆ ಹೊರಳಿಸುವಂತಹ ಒತ್ತಾಯವನ್ನು ನಿರ್ಮಾಣ ಮಾಡಬೇಕು. ಮನುಷ್ಯ ತನ್ನ ಪ್ರವೃತ್ತಿಗಳಿಗೆ ಹತ್ತಿರವಾಗಿದ್ದಾಗ ಮಾತ್ರವೇ ಸತ್ಯವನ್ನು ಕಾಣಬಲ್ಲ ಎಂಬ ನಿಲುವಿದು. <span style="font-weight: bold;">ಮಂಜು</span><span style="font-weight: bold;"> </span><span style="font-weight: bold;">ಕವಿದ</span><span style="font-weight: bold;"> </span><span style="font-weight: bold;">ಸಂಜೆ</span> ಕತೆಯ ಮಂಜು ಪ್ರಭುದೇವರ ಕೂಡುವಿಕೆಯ ನಿರೂಪಣೆಯನ್ನು ಗಮನಿಸಿ.<span style="font-weight: bold;"> A Suicide Note</span> ಕತೆಯ ಈ ಮಾತುಗಳನ್ನು ನೋಡಿ: `ನಾನು ಮನುಷ್ಯಳಾಗಿ ನನ್ನಲ್ಲಿ ಪಶುವನ್ನು ಕಂಡದ್ದು ಆ ಕಾಲದಲ್ಲಿ ಮಾತ್ರ. ನನ್ನಲ್ಲಿನ ಪಶು ನನ್ನ ಹರೆಯದಲ್ಲಿ ಹುಮ್ಮಸ್ಸಿನಿಂದ ಕೂಡಿರುತ್ತದೆ. ನನ್ನ ದಾಹ ಸೂಚಿಸಿದ್ದನ್ನೆಲ್ಲ ಸ್ವೀಕರಿಸುತ್ತದೆ. ಅದಕ್ಕೆ ಪಾಪಪ್ರಜ್ಞೆ ಎನ್ನುವುದಿಲ್ಲ' ಕತೆಯ ಉದ್ದಕ್ಕೂ ಚಿರತೆಯ ಕಣ್ಣು, ಮೃಗ, ರಾಕ್ಷಸ ಇಂತಹ ಪದಗಳು ಸಿಗುತ್ತವೆ. ದೇಹದ ಮಟ್ಟದಲ್ಲಿ ಮಾತ್ರವೇ ಬದುಕುವ ಆಸೆ ವ್ಯಕ್ತವಾಗುತ್ತದೆ ಕತೆಯುದ್ದಕ್ಕೂ.<br /><br />ಲಂಕೇಶರಲ್ಲಿ ನಾಗರೀಕತೆಯ, ವಿದ್ಯೆಯ, ಹೊಸ ಕಾಲದ ಸಮಾಜದ ಹಂಬಲದ ಜೊತೆಗೇ ಪ್ರಜ್ಞಾವಂತಿಕೆಯ ಜೀವಂತಿಕೆಯ ಬಗ್ಗೆ ಇರುವ ಅನುಮಾನ, ಪ್ರವೃತ್ತಿಯ ಸ್ವಭಾವ ಮತ್ತು ಶಕ್ತಿಯ ಬಗ್ಗೆ ಇರುವ ಒಲವು ಇನ್ನೂ ವಿವರವಾದ ಅಧ್ಯಯನಕ್ಕೆ ವಸ್ತುವಾಗಬಲ್ಲದು. ಲೇಖಕರ ಸಮಗ್ರ ಬರವಣಿಗೆಯ ಹಿನ್ನೆಲೆಯಲ್ಲಿ ಈ ದ್ವಂದ್ವ, ಬಿಕ್ಕಟ್ಟಿನ ಸ್ಥಿತಿಯ ಅರಿವು ಲಂಕೇಶರಿಗೇ ಇರಲಿಲ್ಲವೆಂದಲ್ಲ.<br /><br />`ಯಾವುದೇ ಧ್ಯೇಯದ ಬಗ್ಗೆ ಮಹಾಏಕಾಗ್ರತೆಯನ್ನು ಅರ್ಪಣಾ ಭಾವವನ್ನು ಸಾಧಿಸಿದರೆ ಮಾತ್ರ ಒಬ್ಬಂಟಿತನ ಸಹ್ಯವಾಗುತ್ತದೆ.' (ಪುಟ ೬೯)<br /><br />ಆದರೆ ಈ ಅರಿವು ನಾಲ್ಕು ಕಾಲ ನಿಲ್ಲಬಲ್ಲ ಬಲವಾಗಲಾರದೆಂಬುದೇ ಅವರ ನಂಬಿಕೆ.<br /><br /><a onblur="try {parent.deselectBloggerImageGracefully();} catch(e) {}" href="http://4.bp.blogspot.com/_D9K0HARbkSE/ScXiT5npWuI/AAAAAAAAAFw/orb6QlbxXzE/s1600-h/P+Lankesh.JPG"><img style="margin: 0pt 0pt 10px 10px; float: right; cursor: pointer; width: 245px; height: 320px;" src="http://4.bp.blogspot.com/_D9K0HARbkSE/ScXiT5npWuI/AAAAAAAAAFw/orb6QlbxXzE/s320/P+Lankesh.JPG" alt="" id="BLOGGER_PHOTO_ID_5315903766693239522" border="0" /></a>ನಿರೂಪಿಸಿದ್ದೆಲ್ಲ ಕತೆ ಎಂದು ಭಾವಿಸಿರುವ ಈವತ್ತಿನ ಕಥನ ಸಂದರ್ಭದಲ್ಲಿ ಲಂಕೇಶರ ಕೊನೆಯ ಕತೆಗಳಿಗೆ ತುಂಬಾ ಮಹತ್ವವಿದೆ. ತಲ್ಲಣಗಳನ್ನು, ಹೊಸ ರೀತಿಯ ಅನುಭವಗಳನ್ನು ಎದುರು ಹಾಕಿಕೊಳ್ಳುವ, ಮೇಲೆ ಎಳೆದುಕೊಳ್ಳುವ, ಹಾಗೆ ಮಾಡುವುದರ ಮೂಲಕ ಜೀವನಾನುಭವವನ್ನು ಮೌಲ್ಯಮಾಪನ ಮಾಡುವುದಕ್ಕೆ ಮಾತ್ರ, ಅಂತಹ ಶಕ್ತಿ-ಛಾತಿಯಿದ್ದರೆ ಮಾತ್ರ ಕತೆ ಬರೆಯಬೇಕೆಂಬ ಅವರ ನಂಬಿಕೆಯಿಂದ ಈವತ್ತಿನ ಕತೆಗಾರರು ಕಲಿಯುವುದು ಬಹಳವಿದೆ. ನಿರೂಪಣೆ, ವರ್ಣನೆಯಲ್ಲಿ ಶೋಧನೆಯೂ ಹಾಸು ಹೊಕ್ಕಾಗಿರುತ್ತದಲ್ಲವೇ ಎಂಬ ಪೆದ್ದ ಪ್ರಶ್ನೆ ಕೇಳುವವರಿಗೆ ಇಲ್ಲಿಯ ಕತೆಗಳ ಮಹತ್ವ ದಕ್ಕುವುದಿಲ್ಲ.<br /><br /><span style="font-weight: bold;">(</span><span style="font-weight: bold;">ದೇಶಕಾಲ</span><span style="font-weight: bold;"> </span><span style="font-weight: bold;">ತ್ರೈಮಾಸಿಕ</span><span style="font-weight: bold;"> </span><span style="font-weight: bold;">ಪತ್ರಿಕೆಯ</span><span style="font-weight: bold;"> </span><span style="font-weight: bold;">ಹದಿಮೂರನೆಯ</span><span style="font-weight: bold;"> </span><span style="font-weight: bold;">ಸಂಚಿಕೆ</span><span style="font-weight: bold;"> (</span><span style="font-weight: bold;">ಅಕ್ಟೋಬರ್</span><span style="font-weight: bold;">-</span><span style="font-weight: bold;">ಡಿಸೆಂಬರ್</span><span style="font-weight: bold;"> </span><span style="font-weight: bold;">೨೦೦೮</span><span style="font-weight: bold;">)</span><span style="font-weight: bold;">ಯಲ್ಲಿ</span><span style="font-weight: bold;"> </span><span style="font-weight: bold;">ಪ್ರಕಟಿತ</span><span style="font-weight: bold;"> </span><span style="font-weight: bold;">ಲೇಖನ</span><span style="font-weight: bold;">)</span><br /><span style="font-style: italic;">ಚಿತ್ರಗಳು</span><span style="font-style: italic;">: </span><span style="font-style: italic;">ಅವಧಿ</span><span style="font-style: italic;"> </span><span style="font-style: italic;">ಅಂತರ್ಜಾಲ</span><span style="font-style: italic;"> </span><span style="font-style: italic;">ತಾಣ</span><span style="font-style: italic;"> </span><span style="font-style: italic;">ಮತ್ತು</span><span style="font-style: italic;"> </span><span style="font-style: italic;">ವಿಕ್ರಾಂತ</span><span style="font-style: italic;"> </span><span style="font-style: italic;">ಕರ್ನಾಟಕ</span> <span style="font-style: italic;">ವಾರಪತ್ರಿಕೆಗಳ</span><span style="font-style: italic;"> </span><span style="font-style: italic;">ಕೃಪೆ</span><span style="font-style: italic;">.</span><br /></span>ಕೆ. ಸತ್ಯನಾರಾಯಣhttp://www.blogger.com/profile/15167030166766836381noreply@blogger.com0tag:blogger.com,1999:blog-1964049159346480323.post-81870081282676511962009-02-22T00:27:00.001-08:002009-02-22T00:46:32.951-08:00ಕುವೆಂಪು ಮತ್ತು ಮತಾಂತರ<a onblur="try {parent.deselectBloggerImageGracefully();} catch(e) {}" href="http://2.bp.blogspot.com/_D9K0HARbkSE/SaENDpwMiFI/AAAAAAAAAEg/eiPBc0IHT7A/s1600-h/malegalalli.bmp"><img style="margin: 0pt 10px 10px 0pt; float: left; cursor: pointer; width: 150px; height: 251px;" src="http://2.bp.blogspot.com/_D9K0HARbkSE/SaENDpwMiFI/AAAAAAAAAEg/eiPBc0IHT7A/s320/malegalalli.bmp" alt="" id="BLOGGER_PHOTO_ID_5305536192417925202" border="0" /></a>ಡಾ||ಎಸ್.ಎಲ್.ಭೈರಪ್ಪನವರಿಂದ ಪ್ರಣೀತಗೊಂಡ ಮತಾಂತರದ ಚರ್ಚೆಯನ್ನು ಈಚೆಗೆ ನಾವೆಲ್ಲ ಗಮನಿಸಿದ್ದಾಯಿತು. ಪ್ರಸಿದ್ಧರು, ಪಂಡಿತರು, ಪ್ರಗತಿಪರರೂ ಭಾಗವಹಿಸಿದ್ದ ಈ ಚರ್ಚೆ ತುಂಬಾ ತೆಳುವಾದ ಪರ-ವಿರೋಧಗಳ ನೆಲೆಯಲ್ಲಿ ನಡೆಯಿತು. ಭಾರತದಲ್ಲಿ ಮಾತ್ರ ಮತಾಂತರ ನಡೆಯುತ್ತಿಲ್ಲ, ನಡೆದಿಲ್ಲ. ಇದೊಂದು ಜಾಗತಿಕ ವಿದ್ಯಮಾನ. ಏಷ್ಯಾ, ಆಫ್ರಿಕಾದ ದೇಶಗಳು ಇತಿಹಾಸದ ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಮತಾಂತರದ ಪ್ರಭಾವಕ್ಕೆ ಒಳಗಾಗಿವೆ. ವಸಾಹತುಶಾಹಿ ವಾಣಿಜ್ಯ ನೀತಿ, ವಿಜ್ಞಾನ ಇವುಗಳ ಮೂಲಕ ಮಾತ್ರವಲ್ಲದೆ ಪಶ್ಚಿಮವು ಮತಾಂತರದ ಮೂಲಕವೂ ಈ ದೇಶಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸಿದೆ. ಹಾಗಾಗಿ ಇಂತಹ ವಿದ್ಯಮಾನವೊಂದನ್ನು ಪರ-ವಿರೋಧಗಳ ಸರಳೀಕೃತ ನೆಲೆಯಲ್ಲಿ ಗ್ರಹಿಸಲಾಗುವುದಿಲ್ಲ. ಪಶ್ಚಿಮದ ಪ್ರಯತ್ನ-ಪ್ರಯೋಗಗಳನ್ನು ಬದಿಗಿಟ್ಟರೂ ಈ ದೇಶದ ಇತಿಹಾಸದಲ್ಲೇ ಬೇರೆ ಬೇರೆ ಧರ್ಮ-ಮತ-ಜಾತಿಗಳ ನಡುವೆ ಮತಾಂತರ, ಕಿತ್ತಾಟ ನಡೆದಿವೆ. ಈ ಪ್ರಕ್ರಿಯೆಗೆ ಆಧುನಿಕತೆಯ ಸಂದರ್ಭದಲ್ಲಿ ಬೇರೆ ಬೇರೆ ಆಯಾಮಗಳು ಪ್ರಾಪ್ತವಾಗಿವೆ. ಇದನ್ನೆಲ್ಲ ಭೈರಪ್ಪ ಪ್ರಣೀತ ಚರ್ಚೆ ಗಮನಿಸಲೇ ಇಲ್ಲ.<span class="fullpost"><br /><br />ಈ ಹಿನ್ನೆಲೆಯಲ್ಲಿ ನಮ್ಮ ಕುವೆಂಪು ಈ ಸಮಸ್ಯೆಯನ್ನು ಹೇಗೆ ಗ್ರಹಿಸಿದರು ಎಂಬ ಕುತೂಹಲಕ್ಕಾಗಿ ನಾನು "ಮದುಮಗಳು" ಕಾದಂಬರಿಯನ್ನು ಮತ್ತೆ ಓದಿದೆ. ಕುವೆಂಪು ಬ್ರಾಹ್ಮಣ್ಯದ ಬಗ್ಗೆ, ಜಾತಿಪದ್ಧತಿಯ ಬಗ್ಗೆ, ಹಿಂದೂಧರ್ಮದ ಬಗ್ಗೆ ಇದ್ದ ನಿಲುವು ನಮಗೆಲ್ಲ ಗೊತ್ತೇ ಇದೆ. ಆದರೂ ಕುವೆಂಪು ರೀತಿಯ ಕಲಾವಿದರೊಬ್ಬರು ಸೃಜನಶೀಲ ಒತ್ತಡ-ಚೌಕಟ್ಟಿನಲ್ಲಿ ಈ ವಿದ್ಯಮಾನವನ್ನು ಗ್ರಹಿಸುವ ರೀತಿಯನ್ನು ಓದುಗರ ಗಮನಕ್ಕೆ ತರಬೇಕೆಂದು ನನಗನ್ನಿಸಿತು.<br /><br />ಕುವೆಂಪುಗೆ ಮತಾಂತರ ಕುರಿತಂತೆ ಪರ-ವಿರೋಧದ ಸರಳೀಕೃತ ನೆಲೆಗಳಿಲ್ಲ. ಈ ವಿದ್ಯಮಾನದ ಸಂಕೀರ್ಣತೆಯನ್ನು ಕುವೆಂಪು ಎಲ್ಲ ಸ್ತರಗಳಲ್ಲೂ ಗಮನಿಸಲು ಪ್ರಯತ್ನಿಸುತ್ತಾರೆ. ಆಮಿಷಗಳ ಮೂಲಕ ದುರ್ಬಲ ಮನಸ್ಸಿನ ಜನರನ್ನು ಮತಾಂತರಗೊಳಿಸುವುದನ್ನು ಕುವೆಂಪು ಒಪ್ಪುವುದಿಲ್ಲ. ಆದರೆ ಮತಾಂತರದಿಂದ ಮೂಡಿಬರುವ ಸಾಮಾಜಿಕ ಚಲನೆ-ತಿಳುವಳಿಕೆ, ಹೊಸ ರೀತಿಯ ಜ್ಞಾನದ ಪ್ರವೇಶ ಇವುಗಳನ್ನು ಸ್ವಾಗತಿಸುತ್ತಾರೆ. ರಾಮಕೃಷ್ಣ-ವಿವೇಕಾನಂದರ ದರ್ಶನವನ್ನು ಒಪ್ಪುವ ಕುವೆಂಪು ಮೂಢನಂಬಿಕೆ, ಜಾತಿಪದ್ಧತಿಯನ್ನು ವಿರೋಧಿಸುತ್ತಾರೆ. ಮತಾಂತರದ ಪ್ರಯತ್ನಗಳು ಇತಿಹಾಸದ<br /><a onblur="try {parent.deselectBloggerImageGracefully();} catch(e) {}" href="http://2.bp.blogspot.com/_D9K0HARbkSE/SaEOh38_6CI/AAAAAAAAAE4/sRjnMXcbLLE/s1600-h/vivek.bmp"><img style="margin: 0pt 10px 10px 0pt; float: left; cursor: pointer; width: 247px; height: 320px;" src="http://2.bp.blogspot.com/_D9K0HARbkSE/SaEOh38_6CI/AAAAAAAAAE4/sRjnMXcbLLE/s320/vivek.bmp" alt="" id="BLOGGER_PHOTO_ID_5305537811137423394" border="0" /></a>ಒಂದು ಘಟ್ಟದಲ್ಲಿ ಅನಿವಾರ್ಯವೂ, ಅಪೇಕ್ಷಣೀಯವೂ ಆದಂತಹ ಒಂದು ಪ್ರಕ್ರಿಯೆ ಎಂಬುದನ್ನು ಕೂಡ ಸೂಚಿಸುತ್ತಾರೆ. ಇಂತಹ ಸಂಕೀರ್ಣ ನಿಲುವುಗಳನ್ನು ಕಾದಂಬರಿಯ ವಿವರಗಳಿಂದಲೂ ತಿಳಿಯಬಹುದು. ಈ ವಿವರಗಳ ವಿಶೇಹವೆಂದರೆ ಮತಾಂತರದ ಮೌಲಿಕತೆ-ಅನಿವಾರ್ಯತೆಯ ಕಡೆಗೇ ಗಮನ ಕೊಡದೆ ಒಂದು ಕಾಲದ ದೈನಿಕ ಬದುಕಿನ ವಿವರಗಳು, ಆ ಕಾಲದ ಮನುಷ್ಯರ ಆಸೆ-ಆಕಾಂಕ್ಷೆಗಳ ಬಗ್ಗೆ ಕೂಡ ಕಾದಂಬರಿ ಗುಟ್ಟುಗಳನ್ನು ಬಿಟ್ಟುಕೊಡುತ್ತದೆ. ಮತಾಂತರಕ್ಕೆ ಪ್ರಯತ್ನಿಸುವವರ ಆತಂಕ, ಕಷ್ಟಗಳನ್ನು ಕೂಡ ಕುವೆಂಪು ಗಮನಿಸುತ್ತಾರೆ. ಮನುಷ್ಯರ ಚರಿತ್ರೆಗಳಿಂದ ತಪ್ಪಿಸಿಕೊಂಡಾಗ ಇಲ್ಲ ಮನುಷ್ಯರ ಚರಿತ್ರೆಯನ್ನು ಗಮನಿಸದೆ ಹೋದಾಗ ಮಾತ್ರ ನಾವು ಪರ-ವಿರೋಧದ ಸರಳೀಕೃತ ನೆಲೆಗಳಲ್ಲಿ ಮಾತನಾಡುತ್ತೇವೆ. ನಮಗೆ ಇರುವ ತೊಂದರೆಯೆಂದರೆ, ಮನುಷ್ಯ ಚರಿತ್ರೆಯ ಬಗ್ಗೆ ನಮ್ಮ ಗಮನಸೆಳೆಯುವಂತಹ ವೈಯಕ್ತಿಕ ಚರಿತ್ರೆಗಳು ನಮ್ಮಲ್ಲಿ ಇಲ್ಲದೆ ಇರುವುದು. ಕುವೆಂಪು ಕಾದಂಬರಿ, ಕಾರಂತರ `ಚೋಮನ ದುಡಿ' ಯಂತಹ ಕೃತಿಗಳ ಮೂಲಕ ಮಾತ್ರವೇ ನಾವು ಇಂತಹ ವೈಯಕ್ತಿಕ ಚರಿತ್ರೆಗಳನ್ನು ನಮ್ಮದನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ.<br /><br /></span><div style="text-align: center;"><span class="fullpost"><span style="font-weight: bold;">****</span></span><br /></div><span class="fullpost"><br />ಕ್ರೈಸ್ತಧರ್ಮದ ಪ್ರವೇಶ-ಪ್ರಭಾವವು ಈ ಕಾದಂಬರಿಯ ಒಟ್ಟು ವಿನ್ಯಾಸದೊಂದಿಗೆ ಬೇರೆ ಬೇರೆ ಸ್ತರಗಳಲ್ಲಿ ಹಾಸುಹೊಕ್ಕಾಗಿದೆ. ಸುಮಾರು ೧೮ನೇ ಅಧ್ಯಾಯದಿಂದ ಇದರ ವಿವರಗಳು ನಮಗೆ ಸಿಗುತ್ತವೆ. ಪಾದ್ರಿ ಜೀವರತ್ನಯ್ಯನ ಬೈಸಿಕಲ್ ಸವಾರಿಯ ಬಗ್ಗೆ ಗುತ್ತಿಯೂ ಸೇರಿದಂತೆ ಕೆಳಸ್ತರದ ಜನರಿಗೆ ಕುತೂಹಲ, ವ್ಯಂಗ್ಯ, ತಮಾಷೆ ತುಂಬಿದ ನಿಲುವುಗಳಿವೆ. ಸೈಕಲ್ನ ವಿವರಗಳು, ನಾನಾ ಭಾಗವು ಹುಟ್ಟಿಸುವ ಕೌತುಕ, ಸವಾರಿ ಮಾಡುವ ರೀತಿ ಎಲ್ಲವನ್ನೂ ಕುತೂಹಲ-ಅನುಮಾನದಿಂದ ನೋಡುತ್ತಾರೆ. ದೇವಯ್ಯಗೌಡನಿಗೆ "ಕುಡಿಸಿ, ಕುಣಿಸಿ, ಬುದ್ಧಿ ಕೆಡಿಸಿರುವುದು" ಕೂಡ ಇವರಿಗೆ ಗೊತ್ತಿದೆ. ಈ ಪಾದ್ರಿಯ ಪ್ರಭಾವದಿಂದಾಗಿ ಗೌಡನೊಬ್ಬ ಹೊಲೆಯನನ್ನು ಗಾಡಿ ಹೊಡೆಯುವುದಕ್ಕೆ ಇಟ್ಟುಕೊಳ್ಳುವುದು, ಹೊಲೆಯನನ್ನು ಮುಟ್ಟುವುದು ಕೂಡ ಸಾಧ್ಯವಾಗಿರುವುದು ಕೂಡ ಗೊತ್ತಾಗಿದೆ. ಈ ವಿದ್ಯಮಾನದ ಬಗ್ಗೆ ಗುತ್ತಿಯಂಥವರಿಗೆ ಖಚಿತವಾದ ನಿಲುವಿಲ್ಲ ಅಷ್ಟೇ. ದೇವಯ್ಯ ಗೌಡ ಪಾದ್ರಿಯ "ಮಂಕುಬೂದಿ"ಗೆ ಒಳಗಾಗಿರುವುದು, ಪಾದ್ರಿಯ ಮಗಳ ಜೊತೆ ಸಖ್ಯ ಬೆಳೆಸಿ ಲಂಪಟನಾಗಿರುವುದು ಕೂಡ ಇವರ ಚರ್ಚೆಗಳಲ್ಲಿ ಬರುತ್ತದೆ.<br /><br />ಪಾದ್ರಿ ತರುವ ಬೀಸೋಕಲ್ಲು ನಾಗರಿಕತೆ ತರುವ ಒಂದು ಹೊಸ ವಿವರ-ದೃಷ್ಟಿಕೋನ. ಹಾಗೆಯೇ ಪಾದ್ರಿಯ ವ್ಯಕ್ತಿತ್ವ ಕೂಡ. ಕುವೆಂಪು ಪಾದ್ರಿಯನ್ನು ಇದ್ದಲಿನಷ್ಟು ಕಪ್ಪಗಿದ್ದವನು, ನೇಟಿವ್ ಪಾದ್ರಿಯೆಂದೆಲ್ಲಾ ವಿವರಿಸುತ್ತಾರೆ. ಆತನ ವೇಷ-ಭೂಷಣ, ಚಹರೆಯೆಲ್ಲವೂ ಮೇಲುಜಾತಿಯ ಗೌಡರದ್ದಕ್ಕಿಂತಲೂ ವಿಭಿನ್ನವಾಗಿರುವುದರ ಜೊತೆಗೆ ಆಕರ್ಷಣೀಯವೂ ಕೂಡ ಆಗಿದೆ. ಹೊಲೆಯರ ಬಚ್ಚ ಈಗಾಗಲೇ ಹೊಸ ವ್ಯಕ್ತಿತ್ವ ಪಡೆದ ಸಂಭ್ರಮದಲ್ಲಿದ್ದಾನೆ. ತಮ್ಮ ಜೊತೆ ವಾಸಿಸುವ ಮನುಷ್ಯರನ್ನು ಮುಟ್ಟಲಾಗದವರು ಬೈಸಿಕಲ್ಅನ್ನು "ಮುಟ್ಟುತ್ತಾರೆ". ಈ "ಮುಟ್ಟುವ" ಪ್ರಸಂಗ ಮುಂದಿನ ದಿನಗಳಲ್ಲಿ ಕನ್ನಡದ ಬಹುತೇಕ ಕಥನಕಾರರು, ಕವಿಗಳು ಬಹುವಾಗಿ ಹಚ್ಚಿಕೊಂಡ ಒಂದು ವಿದ್ಯಮಾನದ ಆಗಮನವನ್ನು ಮುನ್ನೋಟದಿಂದ ಸೂಚಿಸುತ್ತದೆ. ದೇವರ ವಿಗ್ರಹವನ್ನು, ಸಾಲಿಗ್ರಾಮವನ್ನು ಮುಟ್ಟುವುದು, ಮೇಲುಜಾತಿಯವರನ್ನು ಮೊದಲು ಮುಟ್ಟುವುದು, ನಂತರ ಲೈಂಗಿಕವಾಗಿ, ವೈವಾಹಿಕವಾಗಿ ಒಳಗೊಳ್ಳುವುದು - ಆಕ್ರಮಿಸುವುದು. ಇದೆಲ್ಲಕ್ಕಿಂತ ಮುಂಚೆ ಕೆಳಸ್ತರದವರು ಈ ಕಾದಂಬರಿಯಲ್ಲಿ ಒಂದು "ಯಂತ್ರ"ವನ್ನು ಮುಟ್ಟುವುದು ಕುತೂಹಲಕರವಾಗಿದೆ. ಈ ಬೈಸಿಕಲ್ ಸವಾರಿಯನ್ನು ಹೊಲಗೇರಿಯ ಮುಕ್ಕಾಲುಮೂರುವಾಸಿ ಜನ-ಹೆಂಗಸರೂ-ಮಕ್ಕಳೂ ಸೇರಿದಂತೆ - ನೋಡುತ್ತಾರೆ. ಇಡೀ ಪ್ರಕರಣವನ್ನು ಕುವೆಂಪು, ವ್ಯಂಗ್ಯ, ತಮಾಷೆಯ ಜೊತೆಗೆ ವಸ್ತುನಿಷ್ಠತೆಯಿಂದ ಗಮನಿಸುತ್ತಾರೆ. ವ್ಯಂಗ್ಯ ತಮಾಷೆ ಪಾದ್ರಿಯನ್ನು ಕುರಿತಂತೆ ಮಾತ್ರವಲ್ಲ, ಅದನ್ನು ನೋಡುತ್ತಿರುವವರನ್ನು ಕುರಿತಂತೆಯೂ ಇದೆ. ಪಾದ್ರಿಯನ್ನೂ, ಆತನ ಜೀವನ ದೃಷ್ಟಿಯನ್ನೂ ಕೂಡ ಈ ಹೊಲೆಯರು ಮೌಲ್ಯಮಾಪನ ಮಾಡುತ್ತಾರೆ.<br /><br />"ಇದು ಎಂಥಾದ್ದೋ ಇವರು ಹೇಳುವುದು? ಕಾಡಿಗೆ ಕೈ ಮುಗಿದು! ಒಂದು ದೇವರಿಲ್ಲ! ಗುಡಿಯಿಲ್ಲ! ನಮ್ಮ ಪೆರಡೂರು ಮೇಳದವರು ಇದಕ್ಕಿಂತಲೂ ಚೆನ್ನಾಗಿ ಹೇಳುತ್ತಾರಲ್ಲ ಭಾಗವತರಾಟದಲ್ಲಿ?" (ಪುಟ ೧೫೯)<br /><br /><br /><a onblur="try {parent.deselectBloggerImageGracefully();} catch(e) {}" href="http://3.bp.blogspot.com/_D9K0HARbkSE/SaENmAt_elI/AAAAAAAAAEo/Lqu0OWv6OQ4/s1600-h/New+Picture+%281%29.bmp"><img style="margin: 0pt 0pt 10px 10px; float: right; cursor: pointer; width: 150px; height: 165px;" src="http://3.bp.blogspot.com/_D9K0HARbkSE/SaENmAt_elI/AAAAAAAAAEo/Lqu0OWv6OQ4/s320/New+Picture+%281%29.bmp" alt="" id="BLOGGER_PHOTO_ID_5305536782698248786" border="0" /></a>೨೨ನೇ ಅಧ್ಯಾಯದಲ್ಲಿ ಕುವೆಂಪು ಕ್ರೈಸ್ತಧರ್ಮದ ಆಗಮನವನ್ನು ಇತಿಹಾಸದ ಒಂದು ನಿರ್ದಿಷ್ಟ ಸಂದರ್ಭದಲ್ಲಿ ಇಟ್ಟು ನೋಡಲು ಪ್ರಯತ್ನಿಸುತ್ತಾರೆ. ಪಾದ್ರಿಯ ಚಟುವಟಿಕೆಗಳು-ವಿವೇಕಾನಂದರ ಧಾರ್ಮಿಕ ಪುನರ್ಜೀವನದ ಕನಸು-ಇವುಗಳ ನಡುವೆ ಒಂದು ಅಸಮ ಸ್ಪರ್ಧೆಯಿದೆಯೆಂಬುದು ಕುವೆಂಪು ಮಂಡಿಸುವ ಚೌಕಟ್ಟು. ಮತಾಂತರವೆನ್ನುವುದು ಒಂದು ಸ್ಪರ್ಧೆಯೆನ್ನುವ ಭಾವನೆ ಓದುಗರಲ್ಲಿ ಮೂಡುವಂತೆ ಪ್ರತಿಸ್ಪರ್ಧಿ, ಸಿಂಹಕಂಠ, ಖೆಡ್ಡಾ, ಬೇಟೆ - ಇಂತಹ ಪದಗಳನ್ನು ಬಳಸುತ್ತಾರೆ. ಆದರೆ ಇದಕ್ಕೆಲ್ಲ ಕಾರಣವಾಗಿರುವುದು ಇಲ್ಲಿಯ ಬ್ರಾಹ್ಮಣರ ಜೀವನ ರೀತಿ, ಸನಾತನ ಧರ್ಮದ ತಪ್ಪುಗ್ರಹಿಕೆ, ಮೂಢನಂಬಿಕೆ, ಕಂದಾಚಾರವೆಂಬುದನ್ನು ಗುರುತಿಸಿ ಭರ್ತ್ಸನಾಮಯವಾದ ಭಾಷೆಯಲ್ಲಿ ಟೀಕಿಸುತ್ತಾರೆ. ಆದರೆ ಪಾದ್ರಿಯ "ಉಪಯೋಗ" ಮತ್ತು "ಪ್ರಭಾವ" ಚಿನ್ನಪ್ಪ ಗೌಡ, ದೇವಯ್ಯ ಗೌಡರಂತಹ ಹೊಸಕಾಲದ ತರುಣರ ಕ್ರಾಪು, ಬಟ್ಟೆ, ವೇಷಭೂಷಣಗಳಷ್ಟಕ್ಕೆ ಸೀಮಿತವಾಗಿಲ್ಲ. ಪಾದ್ರಿಯ ಇಂಗ್ಲೀಷ್ ಜ್ಞಾನದಿಂದಾಗಿ ಕೂಡ ಆತ ಗೌಡರ ಮನೆಗಳಲ್ಲಿ ಸ್ವಾಗತಾರ್ಹ. ತಕ್ಕಮಟ್ಟಿಗೆ ಇಂಗ್ಲೀಷ್ ಬಲ್ಲ ಪಾದ್ರಿ ಹೊಸ ಕಾನೂನು, ಸರ್ಕಾರದ ವಿವರಗಳನ್ನು ಸಹ್ಯಗೊಳಿಸಬಲ್ಲ, ಪರಿಚಯ ಮಾಡಿಕೊಡಬಲ್ಲ ಏಜೆಂಟ್ ಕೂಡ. ಈ ಅಧ್ಯಾಯದಲ್ಲಿ ಬರುವ ಪಾದ್ರಿಯನ್ನು ಎಲ್ಲಿ, ಯಾರ ಜೊತೆ ಊಟಕ್ಕೆ ಕೂರಿಸಬೇಕು, ಹೇಗೆ ಆತಿಥ್ಯ ನೀಡಬೇಕು ಎಂಬ ಪ್ರಶ್ನೆ ಜಾತಿಪದ್ಧತಿಯಿಂದ ಹೊರಗಿರುವವರನ್ನು ಕೂಡ ಮುಟ್ಟಲು, ಒಳಗು ಮಾಡಿಕೊಳ್ಳಲು ಇರುವ್ ಆಯಾಮಗಗಳ ಕಡೆ ಗಮನ ಸೆಳೆಯುತ್ತದೆ. ಈ ವಿವರಗಳೆಲ್ಲವೂ ತಮ್ಮಷ್ಟಕ್ಕೆ ತಾವೇ ಮತನಾಡುವುದರಿಂದ ಹೆಚ್ಚು ಬರೆಯುವ ಅಗತ್ಯವಿಲ್ಲ.<br /><br />ಈ ಅಧ್ಯಾಯದ ವಿಶೇಷವೆಂದರೆ ನಮಗೆ ಸಿಗುವ ದೇವಯ್ಯಗೌಡನ ಒಂದು ದಿನದ ವೈಯಕ್ತಿಕ ಇತಿಹಾಸ ಕಾದಂಬರಿ ಪ್ರಕಾರದಲ್ಲಿ ಮಾತ್ರ ಸಾಧ್ಯವಾಗುವಂತಹದು. ಪಾದ್ರಿಯ ಪ್ರಭಾವದಿಂದಾಗಿ ದೇವಯ್ಯನಿಗೆ ತನ್ನ ಜಾತಿಯವರ ರೀತಿ ನೀತಿ ಆಚರಣೆಗಳ ಬಗ್ಗೆ ತಿರಸ್ಕಾರ ಮೂಡಿದೆ. ಆದರೆ ಇಡೀ ಕುಟುಂಬವನ್ನು ಹೊಸ ವಿಚಾರಗಳ ಕಡೆ ಒಲಿಸುವಷ್ಟು ಬೌದ್ಧಿಕ ಸಾಮರ್ಥ್ಯ, ಪ್ರೀತಿ, ವಿವೇಚನೆ ಅವನಿಗಿಲ್ಲ. ಇತರರನ್ನು ಆತ ಕೀಳಾಗಿ ನೋಡಬಲ್ಲ ಮಾತ್ರವಷ್ಟೇ. ಇಂತಹ ದೇವಯ್ಯ ಚೆಲುವು ತುಂಬಿದ ತನ್ನ ಮೋಹದ ಹೆಂಡತಿಯ ಜೊತೆ ಹೇಗೆ ಸೆಟೆದುಕೊಂಡ, ಸೋತ, ಪ್ರೀತಿ ಮಾಡಿದ, ಇಂತಹ ಗಂಡನನ್ನು ಒಲಿಸಿಕೊಳ್ಳಲು ದೇವಮ್ಮ ಯಾವ ರೀತಿ ಆತಂಕಕ್ಕೊಳಗಾದಳು ಎಂಬುದನ್ನು ಸೂಚಿಸುವ ವಿವರಗಳು ಮನೋಜ್ಞವಾಗಿವೆ. ನಮ್ಮ ವೈಚಾರಿಕತೆ-ಆದರ್ಶ ಎಲ್ಲವೂ ಒಂದು ಆಪ್ತ ಭಾವನಾತ್ಮಕ ಸನ್ನಿವೇಶದಲ್ಲಿ ಹೇಗೆ ಪರೀಕ್ಷೆಗೊಳಗಾಗುತ್ತದೆ ಎಂಬುದು ಮುಖ್ಯ. ಎಲ್ಲ ವೈಚಾರಿಕತೆಗಳಿಂದಾಚೆಗೂ ಉಳಿಯುವ ಮನುಷ್ಯ ಪ್ರೀತಿಯ ಸಂಬಂಧದ ಲಯಗಳನ್ನು, ಧ್ವನಿಗಳನ್ನು ಈ ವಿವರಗಳು ಸೂಚಿಸುತ್ತವೆ.<br /><br />ಇಂತಹ ವಲಯವೊಂದನ್ನು ಪ್ರವೇಶಿಸುವುದಕ್ಕೆ ಕಾದಂಬರಿಕಾರರಿಗೆ ಸಾಧ್ಯವಾಗಿರುವುದರಿಂದಲೇ ಮತಾಂತರದ ವ್ಯಾಪ್ತಿ, ಪ್ರಭಾವ, ಸಾರ್ಥಕತೆ ಬಗ್ಗೆ ಇದಮಿತ್ಥಂ, ಇದು ಸರಿ, ಅದೇ ತಪ್ಪು ಎನ್ನುವ ಧೋರಣೆ ತಳೆಯುವುದು ಸಾಧ್ಯವಾಗುವುದಿಲ್ಲ. ಆಸಕ್ತ ಓದುಗರು ಇಂತಹದೇ ಸಂದರ್ಭಗಳನ್ನು ಕಾರಂತರು ತಮ್ಮ `ಮೈಮನಗಳ ಸುಳಿಯಲ್ಲಿ' , ಭೈರಪ್ಪನವರು `ಆವರಣ' ಕಾದಂಬರಿಯಲ್ಲಿ ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಗಮನಿಸಬಹುದು. ನನ್ನ ಸೀಮಿತ ಓದನ್ನೇ ಆಧಾರವಾಗಿಟ್ಟುಕೊಂಡು ಸ್ವಲ್ಪ ಧೈರ್ಯ ಮಾಡಿ ಹೇಳಬಹುದಾದರೆ ಹೊಸ ತಲೆಮಾರಿನ ಬರಹಗಾರರಿಗೆ ಇಂತಹ ಆಪ್ತ ಸನ್ನಿವೇಶಗಳ ನಿರ್ವಹಣೆ ಇಷ್ಟೊಂದು ಧ್ವನಿಪೂರ್ಣವಾಗಿ ಇನ್ನೂ ಸಾಧ್ಯವಾಗಿಲ್ಲ. ಬೇರೆ ಬೇರೆ ಹಿನ್ನೆಲೆಗಳ-ಸಂಸ್ಕೃತಿಗಳ ಗಂಡು ಹೆಣ್ಣುಗಳ ಸಂಬಂಧವನ್ನು ಬಹುಪಾಲು ನಮ್ಮಲ್ಲಿ ಆಶಯಗಳ ಮಟ್ಟದಲ್ಲಿ ಇಲ್ಲ, ಆಸೆಯ ಪೂರೈಕೆ ನೆಲೆಗಳಲ್ಲೇ ಗ್ರಹಿಸಲಾಗುತ್ತದೆ. `ಕುಸುಮಬಾಲೆ' ಕೂಡ ಇದಕ್ಕೆ ಅಪವಾದವೇನಲ್ಲ.<br /><br />೨೮ನೇ ಅಧ್ಯಾಯವು ಮತಾಂತರಕ್ಕೆ ಸಂಬಂಧಿಸಿದ ಹಾಗೆ ಇನ್ನೊಂದು ನೆಲೆಯನ್ನು ನಮಗೆ ಪರಿಚಯಿಸುತ್ತದೆ. ಕ್ರೈಸ್ತಧರ್ಮೀಯರಿಗೆ ಇಲ್ಲಿಯ ಸಂಸ್ಕೃತಿಯ, ಸ್ಥಾನಿಕ ಜೀವನ ಶೈಲಿ-ಮೌಲ್ಯ ಪದ್ಧತಿಗಳ ಪರಿಚಯವಿರಲಿಲ್ಲ. ಮೇಲು ಜಾತಿಯವರಿಗೆ ಮಾತ್ರ ಸಂಸ್ಕೃತಿ-ನಾಗರಿಕತೆಯಿದೆ, ಉಳಿದವರಿಗೆ ಇಲ್ಲ. ಹಾಗಾಗಿ ಅವರನ್ನೂ ತಮ್ಮ ಪ್ರಭಾವದ ತೆಕ್ಕೆಗೆ ತೆಗೆದುಕೊಳ್ಳಬಹುದು ಎಂಬುದು ಮತಪರಿವರ್ತನಕಾರರಿಗೆಲ್ಲ ಇರುವ ಒಂದು ಗ್ರಹೀತ. ಆದರೆ ಈ ವರ್ಗದ ಜನರಲ್ಲೂ ಇರುವ ಲೋಕದೃಷ್ಟಿ, ಆಚರಣೆಗಳನ್ನು ಕೂಡ ಗಮನಿಸಿ ಮುಖಮುಖಿಯಾಗಬೇಕಾಗುತ್ತದೆ. ಆಫ್ರಿಕಾದ ದೇಶಗಳ ಉದಾಹರಣೆಯನ್ನು ಗಮನಿಸುವುದಾದರೆ ಕ್ರೈಸ್ತಧರ್ಮಕ್ಕೆ ಪರಿವರ್ತನೆಗೊಂಡೂ ಕೂಡ ಜನಾಂಗಗಳು, ಬುಡಕಟ್ಟುಗಳು ತಮ್ಮ ತಮ್ಮ ವಿಶಿಷ್ಟತೆಯನ್ನು ಉಳಿಸಿಕೊಂಡಿವೆ. ನಮ್ಮಲ್ಲು ಇಸ್ಲಾಂ, ಬೌದ್ಧ, ಕ್ರೈಸ್ತಧರ್ಮಕ್ಕೆ ಪರಿವರ್ತನೆಗೊಂಡವರೆಲ್ಲರೂ ತಮ್ಮ ತಮ್ಮ ಸಾಂಸ್ಕೃತಿಕ ವಿಶಿಷ್ಟತೆಯನ್ನು ಉಳಿಸಿಕೊಂಡೇ ಇದ್ದಾರೆ. ಇದೊಂದು ಸಂಕೀರ್ಣವಾದ ಪ್ರಕ್ರಿಯೆ. ಹೊಸದನ್ನು "ಪಡೆಯುವ" "ಒಪ್ಪಿಕೊಳ್ಳುವ" "ಒಳಗೊಳ್ಳುವ" ರೀತಿನೀತಿಗಳು ಒಂದೇ ರೀತಿಯಿರಬೇಕಾಗಿಲ್ಲ. ಮತಾಂತರಗೊಳ್ಳದವರೂ ಕೂಡ ತಮ್ಮ ದಿನನಿತ್ಯದ ಬದುಕಿನಲ್ಲಿ, ಜೀವನಶೈಲಿಯಲ್ಲಿ ಇತರ ಧರ್ಮ-ಸಂಸ್ಕೃತಿಗಳ ವಿವರಗಳನ್ನು ರೂಢಿಸಿಕೊಂಡಿರಬಹುದಲ್ಲವೇ! ಈ ಕುರಿತು ರೊವೆನಾ ರಾಬಿನ್ಸನ್ ಎಂಬ ಲೇಖಕಿ: Conversion-Continuity and Change ಎನ್ನುವ ಕೃತಿಯಲ್ಲಿ ವಿಶಿಷ್ಟವಾದ ಒಳನೋಟಗಳನ್ನು ನೀಡಿದ್ದಾರೆ.<br /><br /><br /><a onblur="try {parent.deselectBloggerImageGracefully();} catch(e) {}" href="http://2.bp.blogspot.com/_D9K0HARbkSE/SaEN9D2aleI/AAAAAAAAAEw/fV0ZfDPPRwU/s1600-h/cross.bmp"><img style="margin: 0pt 10px 10px 0pt; float: left; cursor: pointer; width: 300px; height: 200px;" src="http://2.bp.blogspot.com/_D9K0HARbkSE/SaEN9D2aleI/AAAAAAAAAEw/fV0ZfDPPRwU/s320/cross.bmp" alt="" id="BLOGGER_PHOTO_ID_5305537178675877346" border="0" /></a>ಹಿಂಸೆ, ಬಲವಂತದಿಂದ ಮಾತ್ರವೇ ಜನ ಮತಾಂತರಗೊಳ್ಳುತ್ತಾರೆ ಎಂದು ಭಾವಿಸುವುದು ತಪ್ಪು. ಇದು ಒಂದು ಕಾರಣವಾಗಿರಬಹುದು ಮಾತ್ರವಷ್ಟೇ. ಮತಾಂತರಗೊಳಿಸುವವರು ನೀಡುವ ಸೇವೆ, ಪ್ರಲೋಭನೆಗಳೆಲ್ಲವನ್ನು ಇವರು ನಿಸ್ಸಹಾಯಕತೆಯಿಂದಲೇ ನಿಷ್ಕ್ರಿಯವಾಗಿಯೇ ಸ್ವೀಕರಿಸುತ್ತಾರೆ ಎಂದು ಭಾವಿಸುವುದು ಕೂಡ ತಪ್ಪು. ಏನೇ ಆದರೂ ಮತಾಂತರಗೊಳ್ಳುವವರದು ಕೂಡ ಒಂದಲ್ಲ ಒಂದು ಹಂತದಲ್ಲಿ "ಆಯ್ಕೆ" ಇದ್ದೇ ಇರುತ್ತದೆ. ಮತಾಂತರಕ್ಕೆ ಬೇಕಾದ ಲೌಕಿಕ/ಸಾಂದರ್ಭಿಕ ಒತ್ತಡಗಳನ್ನು ಪರಿವರ್ತನಕಾರರು ಸೃಷ್ಟಿಸುತ್ತಾರೆ ಎಂಬುದನ್ನು ಗಮನಿಸಿಯೂ ಮತಾಂತರದ ಹಿಂದಿರುವ ಆಯ್ಕೆ, ಸಾಮಾಜಿಕ-ಸಾಂಸ್ಕೃತಿಕ ಅಭೀಪ್ಸೆಗಳನ್ನು ಗಮನಿಸಬೇಕಾಗುತ್ತದೆ. ಮಿಷನರಿಗಳ ಉದ್ದೇಶವೂ ಕೂಡ ಹೀಗೇ ಸಂಕೀರ್ಣವಾಗಿರುತ್ತದೆ. ಇವರ ಯೋಜನೆ-ಕಾರ್ಯಕ್ರಮಗಳಲ್ಲಿ ಕೂಡ ಧಾರ್ಮಿಕ, ಆರ್ಥಿಕ, ಸಾಮಾಜಿಕ ಆಯಾಮಗಳ ಕಲಸುಮೇಲೋಗರವಿರುತ್ತದೆ. ಇದನ್ನೆಲ್ಲ ಹಿನ್ನೆಲೆಯಾಗಿಟ್ಟುಕೊಂಡು ಮತಾಂತರದ ಇತಿಹಾಸವನ್ನು ಗಮನಿಸಿದಾಗ ಮಾತ್ರ ನಮಗೆ ಸತ್ಯಕ್ಕೆ ಹತ್ತಿರವಾದ ಚಿತ್ರ ಸಿಗುತ್ತದೆ. ( ಈ ಒಳನೋಟಗಳನ್ನು ಗಮನಿಸಿ ಗೋವಾದ ಸಾಂಸ್ಕೃತಿಕ ಇತಿಹಾಸವನ್ನು ಕುರಿತು ಬರೆದ ಪುಸ್ತಕ -A Daughter's Story-Maria Aurorra Couto ವನ್ನು ಓದುಗರು ಗಮನಿಸಬಹುದು.)<br /><br />ಈ ಅಧ್ಯಾಯದಲ್ಲಿ ಕುವೆಂಪು ಪಾದ್ರಿಗೆ ಸ್ಥಾನಿಕ ವೈಶಿಷ್ಟ್ಯ ವಿವರಗಳ ಬಗ್ಗೆ ಇರುವ ಮೇಲುಸ್ತರದ ತಿಳುವಳಿಕೆಯನ್ನು ಕೆಳವರ್ಗದವರ ತಿಳುವಳಿಕೆಯೊಡನೆ ಮುಖಾಮುಖಿ ಮಾಡಿ ಗೇಲಿ ಮಾಡುತ್ತಾರೆ. ಈ ಗೇಲಿಯನ್ನು ಮೀರಿದ ಇನ್ನೊಂದು ಆಯಾಮವೆಂದರೆ ಪಾದ್ರಿಗೂ ಇರುವ ಕಷ್ಟ ಮತ್ತು ಹೆಣಗಾಟದ ಸೂಚನೆಗಳು ಇಲ್ಲಿ ನಮಗೆ ಸಿಗುವುದು. ದೇವಯ್ಯ ಪಾದ್ರಿಯನ್ನು ಒಪ್ಪುವುದು, ಮತಾಂತರಗೊಳ್ಳಲು ಸಿದ್ಧವಾಗುವುದು ಇದರ ಹಿಂದಿರುವ ಉದ್ದೇಶಗಳು ಕೂಡ ಪ್ರಾಮಾಣಿಕವಾದುದಲ್ಲ, ಘನವಾದುದಲ್ಲ. ದೇವಯ್ಯ ಕೂಡ ಪಾದ್ರಿಯನ್ನು "ಉಪಯೋಗಿಸಿ"ಕೊಳ್ಳುತ್ತಿರುತ್ತಾನೆ. ನಾವೆಲ್ಲರೂ ಸಮಾನ್ಯವಾಗಿ ಪರಿವರ್ತನಕಾರರ ಉದ್ದೇಶ, ಉಪಾಯ ತಂತ್ರಗಾರಿಕೆಯನ್ನು ಕುರಿತು ಮಾತನಾಡುತ್ತೇವೆ, ಮತಾಂತರಗೊಳ್ಳುವವರೆಲ್ಲ ಮುಗ್ಧರು ಅಮಾಯಕರು ಎಂಬಂತೆ. ಇಂತಹ ತಪ್ಪು ಕಲ್ಪನೆಯನ್ನು ಕೂಡ ಈ ವಿವರಗಳು ಒಡೆದು ಹಾಕುತ್ತವೆ. ಇತಿಹಾಸದಲ್ಲಿ ಮುನ್ನುಗ್ಗುವ, ಮೇಲೆ ಬರುವ ಆಸೆಯಲ್ಲಿ, ಯೋಜನೆಯಲ್ಲಿ ಮತಾಂತರವು ಕೂಡ ಮತಾಂತರಗೊಳ್ಳುವವರಿಗೆ ಒಂದು ಸಾಧನವಾಗಿರಬಹುದು, ಅಸ್ತ್ರವಾಗಿರಬಹುದು.<br /><br />ನೇಟಿವ್ ಪಾದ್ರಿ, ಕರಿಪಾದ್ರಿಯೆಂದೆಲ್ಲ ಕುವೆಂಪುವಿನಿಂದ ಕರೆಸಿಕೊಳ್ಳುವ ಪಾದ್ರಿಯ ನಿತ್ಯ ಜೀವನದ ಕಷ್ಟಗಳು ಕೂಡ ಕಡಮೆಯೇನಲ್ಲ. ಈತನ ಬಗ್ಗೆ ಕಾದಂಬರಿಕಾರರ ವ್ಯಂಗ್ಯವೇನಿದ್ದರೂ, ಕೃತಿಯ ವಿವರಗಳು ಆತನ ಕಷ್ಟಗಳನ್ನು ಕೂಡ ಗಮನಿಸುತ್ತದೆ. ನೇಟಿವ್ ಪಾದ್ರಿಯಾದ್ದರಿಂದ ಜನರಿಗೆ ಆತನ ಬಗ್ಗೆ ವಿಶೇಷ ಗೌರವಾದರಗಳಿಲ್ಲ. ಅದೆಲ್ಲವೂ `ದೊಡ್ಡಪಾದ್ರಿ', `ಬಿಳಿಪಾದ್ರಿ'ಗೆ ಮೀಸಲು. ಉಪದೇಶಿಯಿಂದ ರೆವರೆಂಡ್ ಸ್ಥಾನಕ್ಕೆ ಬಡ್ತಿ ಪಡೆಯಲು ಹಳ್ಳಿಗರ ಜೊತೆ ಆತ (ಜೀವರತ್ನಯ್ಯ) ಏಗಬೇಕು. ಎಲ್ಲಕ್ಕಿಂತ ಆತನೂ ಮುಖ್ಯವಾಗಿ ಹೆಣ್ಣುಮಗಳೊಬ್ಬಳ ತಂದೆ. ದೇವಯ್ಯನಿಗೆ ಪಾದ್ರಿಯ ಮಗಳೊಡನೆ ಒಡನಾಟ ಆತನ ಲಂಪಟತನದ ಇನ್ನೊಂದು ಭಾಗ. ಮಗಳನ್ನೂ, ಅವಳ ದೇಹವನ್ನೂ, ಪಾದ್ರಿ ತನ್ನ ತಂದೆಯ ಕರ್ತವ್ಯ ನಿರ್ವಹಿಸಲು, ವೃತ್ತಿಯಲ್ಲಿ ಮುಂದೆ ಬರಲು ಮತ ಪರಿವರ್ತನೆಯ ಪುಣ್ಯ ಸಂಪಾದನೆ ಮಾಡಲು ಉಪಯೋಗಿಸಿಕೊಳ್ಳಬೇಕಾದ ಸಂಕಟದಲ್ಲಿದ್ದಾನೆ. ಲೇಖಕರ ಪ್ರಕಾರವೇ "ಆ ಜಾತಿಗೆ ಸೇರಿಸೋ ಹುಚ್ಚು ಬಿಡಿಸದೆ ಇದ್ರೆ ಆಗೋದಿಲ್ಲ ಆ ಪಾದ್ರಿಗೆ! ಬಾಕಿ ಎಲ್ಲ ಒಳ್ಳೆ ಮನುಷ್ಯನೇ!" (ಪುಟ ೪೮೨).<br /><br />ಕಾದಂಬರಿಯ ಕೊನೆ ಕೊನೆಯ ಅಧ್ಯಾಯದ ವಿವರಗಳು ಕಲಾವಿದ ಕುವೆಂಪುಗಿಂತಲೂ ಹೆಚ್ಚಾಗಿ ವೈಚಾರಿಕ ಕುವೆಂಪುವನ್ನೇ ಮುನ್ನೆಲೆಗೆ ತರುತ್ತವೆ. ಜೊತೆಗೆ ಕತೆಯನ್ನೂ, ಕೃತಿಯನ್ನು ಮುಗಿಸುವ ಒತ್ತಾಯವು ಸೇರಿಕೊಂಡು ಕುವೆಂಪುರವರು ತಮ್ಮ ದರ್ಶನ-ಸಂದೇಶವನ್ನು ನೀಡುವ ಕಡೆಗೇ ಗಮನಕೊಟ್ಟಂತಿದೆ. ರೆವರೆಂಡ್ ಲೇಕ್ಹಿಲ್ ಹೇಳುವ ಮಾತುಗಳೆಲ್ಲ ಅಕ್ಷರಶಃ ಕುವೆಂಪು ಮಾತುಗಳೇ. ಲೇಕ್ಹಿಲ್ ಬಗ್ಗೆ ಅವರು ಹೇಳುವ ಮಾತುಗಳು ಹೀಗಿವೆ:<br /><br />"ಕರೀ ಪಾದ್ರಿಯಂತಲ್ಲೋ; ನಿಜವಾಗಿಯೂ ದೊಡ್ಡ ಮನುಷ್ಯನೇ ಕಣೋ ಈ ಬಿಳಿ ಪಾದ್ರಿ" (ಪುಟ ೬೯೮). ಪುಟ ೬೯೭-೬೯೮ರಲ್ಲಿ ರೆವ್ರೆಂಡ್ ನೀಡುವ ಪುಟ ಪೂರ್ಣ ಉಪದೇಶ ಕುವೆಂಪು ವಿಚಾರಗಳೇ. ಇಷ್ಟೇ ಅಲ್ಲ ರೆವರೆಂಡ್ಗೆ ಮುಕುಂದಯ್ಯ ಕಾಣಿಸಿಕೊಳ್ಳುವ ರೀತಿ ಕೂಡ ಕಾದಂಬರಿಕಾರರ ಪಕ್ಷಪಾತವನ್ನು ಓದುಗರಿಗೆ ನಿವೇದಿಸುತ್ತದೆ:<br /><br />"ಆದರೆ ಅವನ ಮುಖದಲ್ಲಿ ಅಲ್ಲಿದ್ದವರಾರಲ್ಲಿಯೂ ಇಲ್ಲದಿದ್ದ ಒಂದು ಸತ್ವಪೂರ್ಣ ತೇಜಸ್ಸನ್ನೂ ಸರಳ ಸುಂದರ ಪ್ರಸನ್ನತೆಯನ್ನೂ ದರ್ಶಿಸಿದ "ಲೇಕ್ಹಿಲ್"ರಿಗೆ (ಪುಟ ೬೯೬).<br /><br />ಕುವೆಂಪು ಕಾದಂಬರಿಯ ಓದು ಮತಾಂತರದ ಸಂಕೀರ್ಣ ನೆಲೆಗಳನ್ನು ಗ್ರಹಿಸಲು ನಮಗೆ ನೆರವಾಗಬಹುದೆಂದು ನನ್ನ ಇಂಗಿತ. ಪರ-ವಿರೋಧದ ಸರಳ ನೆಲೆಗಳಲ್ಲಿ ನಾವು ಮಾತನಾಡುತ್ತಿದ್ದರೆ ಪರಿವರ್ತನಕಾರರ-ಮತಾಂತರಗೊಳ್ಳುವವರ - ಇಬ್ಬರ ಮನೋಭೂಮಿಕೆಗಳು ನಮಗೆ ತಿಳಿಯುವುದೇ ಇಲ್ಲ. ಸರಿಯಾಗಿ ಹೇಳಬೇಕಾದರೆ, ಕುವೆಂಪು ಮಲೆನಾಡಿನಲ್ಲಿ, ಕಾರಂತ ಕರಾವಳಿಯಲ್ಲಿ ಕಂಡು ಕೃತಿಯಲ್ಲಿ ಶೋಧಿಸಿದ ನೆಲೆಗಳಿಗಿಂತಲೂ ಈವತ್ತು ಮತಾಂತರ ಇನ್ನೂ ಸಂಕೀರ್ಣವಾಗಿದೆ. ಪರಿವರ್ತನಕಾರರು ಮತ್ತು ಮತಾಂತರಗೊಳ್ಳುವವರು - ಎರಡು ದೃಷ್ಟಿಯಿಂದಲೂ ಪರಿವರ್ತನಕಾರರಿಗೆ ಹಿಂದೆಂದೂ ಇಲ್ಲದಷ್ಟು ಹಣ-ಪ್ರಭಾವ- ಸಂಪನ್ಮೂಲಗಳಿವೆ. ಮತಾಂತರಗೊಳ್ಳುವವರಿಗೆ ಮತಾಂತರದ ಜೊತೆಗೆ ಹೆಚ್ಚಿನ ಶಿಕ್ಷಣ-ಉದ್ಯೋಗಾವಕಾಶಗಳ ಆಯ್ಕೆ ಮತ್ತು ಸ್ವಾತಂತ್ರ್ಯವಿದೆ, ಪ್ರಗತಿಯ ಆಸೆಯಿದೆ, ಪ್ರಜಾತಾಂತ್ರಿಕ ಚೌಕಟ್ಟಿದೆ.<br /><br />ಇಷ್ಟೇ ಮುಖ್ಯವಾಗಿ ಮತಾಂತರವನ್ನು ವಿರೋಧಿಸುವ ಜನರೇ ಪುನರ್ಮತಾಂತರ, ಹಿಂಮತಾಂತರ (Reconversion)ದ ಪರವಾಗಿದ್ದಾರೆ. ಪುನರ್ಮತಾಂತರವೂ ಕೂಡ ಮತಾಂತರವೇ. ಮತಾಂತರ ತಪ್ಪೆನ್ನುವುದಾದರೆ ಪುನರ್ ಮತಾಂತರ ಕೂಡ ತಪ್ಪೇ ಎಂದು ವಾದಿಸಿ ತೃಪ್ತಿ ಪಡುವಹಾಗಿಲ್ಲ. ಪುನರ್ ಮತಾಂತರದ ವಕ್ತಾರರು ಉಪಯೋಗಿಸುವ ತಂತ್ರ-ಕಾರ್ಯಕ್ರಮಗಳು ಹೆಚ್ಚು ಕಡಮೆ ಮತಾಂತರದ ವಕ್ತಾರರ ಕ್ರಮಗಳಂತೆಯೇ ಇರುತ್ತವೆ. ಇಬ್ಬರಿಗೂ ಮತಾಂತರಗೊಳಿಸಬೇಕಾದ ಜನ ಒಂದು ರೀತಿಯ "ವಸ್ತು".<br /><br /><a onblur="try {parent.deselectBloggerImageGracefully();} catch(e) {}" href="http://4.bp.blogspot.com/_D9K0HARbkSE/SaEPf4gdCHI/AAAAAAAAAFI/T43jvmHP0qg/s1600-h/gandhi.bmp"><img style="margin: 0pt 10px 10px 0pt; float: left; cursor: pointer; width: 307px; height: 320px;" src="http://4.bp.blogspot.com/_D9K0HARbkSE/SaEPf4gdCHI/AAAAAAAAAFI/T43jvmHP0qg/s320/gandhi.bmp" alt="" id="BLOGGER_PHOTO_ID_5305538876438022258" border="0" /></a>ಮತಾಂತರವನ್ನು ಗಾಂಧಿ ಕೂಡ ವಿರೋಧಿಸಿದ್ದರು. ರಾಮಕೃಷ್ಣ-ವಿವೇಕಾನಂದರು ಕೂಡ. ಇವರೆಲ್ಲ ಪ್ರಶ್ನಿಸಿದ್ದು ಮತಾಂತರದ ಉದ್ದೇಶಗಳನ್ನು, ನಿರರ್ಥಕತೆಯನ್ನು, ಮತಾಂತರದ ಹಕ್ಕನ್ನಲ್ಲ. ಆಧ್ಯಾತ್ಮಿಕ ಸಾಕ್ಷಾತ್ಕಾರದಲ್ಲಿ, ಮತ ಪರಿವರ್ತನೆಯಿಂದ ಪಡೆಯುವಂತಹದ್ದು ಏನೂ ಇಲ್ಲ ಎಂಬುದು ಇವರ ನಿಲುವಾಗಿತ್ತು. ಇಂಗ್ಲೆಂಡಿನಲ್ಲಿದ್ದಾಗ ಪ್ರೊಫೆಸರ್ ಮೈಟ್ಲ್ಯಾಂಡ್ರ ಸಂಪರ್ಕಕ್ಕೆ ಬಂದ ಗಾಂಧಿಗೆ ಹೊಸ ಧರ್ಮಗಳ, ಮತಾಂತರದ ನಿರರ್ಥಕತೆ ಗೊತ್ತಾಗಿತ್ತು. ಎಲ್ಲ ಧರ್ಮಗಳ ಮೂಲ ತಿರುಳನ್ನು ಹೊಸ ಕಾಲಕ್ಕೆ ಹೊಂದಿಸುವುದರ ಬಗ್ಗೆ ಅವರಿಗಿದ್ದ ಕಾಳಜಿಯ ಮುಂದೆ ಮತಾಂತರ ದೊಡ್ಡ ಸಮಸ್ಯೆಯಾಗಿ ಕಂಡಿರಲಾರದು. ಧರ್ಮದ, ಸಂಸ್ಕೃತಿಯ ಮೂಲಬೇರುಗಳಿಗೆ, ಆಶಯಗಳಿಗೆ ಹಿಂದಿರುಗುವುದು-ಸಮಾಜವನ್ನು ಮೂಢನಂಬಿಕೆ, ಜಾತಿಪದ್ಧತಿಯಿಂದ ಬಿಡುಗಡೆಗೊಳಿಸುವುದು - ಎರಡೂ ಕನಸನ್ನು ಒಟ್ಟಿಗೇ ಕಂಡಿದ್ದ ವಿವೇಕಾನಂದರಿಗೆ ಕೂಡ ಮತಾಂತರದ ಬಗ್ಗೆ ಕಡು ವಿರೋಧವಿತ್ತು. ಈವತ್ತು ಮತಾಂತರವನ್ನು ವಿರೋಧಿಸುತ್ತಿರುವವರ ನೆಲೆಗಳನ್ನು ಈ ಹಿನ್ನೆಲೆಯಲ್ಲಿ ಪರಿಶೀಲಿಸಬೇಕು. ಧಾರ್ಮಿಕ-ಸಾಂಸ್ಕೃತಿಕ ಕಾರಣಗಳಿಗಿಂತಲೂ ಹೆಚ್ಚಾಗಿ ಮತಾಂತರಗೊಳ್ಳುತ್ತಿರುವವರ "ಆಯ್ಕೆ"ಯ ಹಕ್ಕಿನ ಬಗ್ಗೆಯೇ ಒಂದು ಪ್ರಮಾಣದ ಅಸಹನೆ ಈವತ್ತಿನ ವಿರೋಧದಲ್ಲಿ ಎದ್ದು ಕಾಣುತ್ತದೆ. ಮತಾಂತರಗೊಳ್ಳುತ್ತಿರುವವರಲ್ಲಿ ಸೂಕ್ಷ್ಮರಾದವರು ಕೂಡ ತಮ್ಮ ತಮ್ಮ ಮನೋಲೋಕದ ಆಧ್ಯಾತ್ಮಿಕ ಲೌಕಿಕ ಪ್ರೇರಣೆಗಳ ಬಗ್ಗೆ ಬಿಚ್ಚು ಮನಸ್ಸಿನಿಂದ ಹೇಳಿಕೊಳ್ಳುವುದಿಲ್ಲ. ಹೇಳಿಕೊಳ್ಳುವಂತಹ ಸಾಂಸ್ಕೃತಿಕ ವಾತಾವರಣವೂ ಇಲ್ಲ. ಮತಾಂತರದಿಂದ ಮೇಲುಜಾತಿ ಹಿಂದೂಗಳ ಮನಸ್ಸಿನ ಮೆಲುಂಟಾಗುವ ಗಾಯವನ್ನು ಕಂಡು ಸಂತೋಷಪಡುವುದು ಮಾತ್ರವೇ ಇವರ ಉದ್ದೇಶವಾಗಿರಲಾರದು.<br /><br /><br /><a onblur="try {parent.deselectBloggerImageGracefully();} catch(e) {}" href="http://3.bp.blogspot.com/_D9K0HARbkSE/SaEPH-G09vI/AAAAAAAAAFA/euWJYlzmwE4/s1600-h/buddha.bmp"><img style="margin: 0pt 0pt 10px 10px; float: right; cursor: pointer; width: 250px; height: 320px;" src="http://3.bp.blogspot.com/_D9K0HARbkSE/SaEPH-G09vI/AAAAAAAAAFA/euWJYlzmwE4/s320/buddha.bmp" alt="" id="BLOGGER_PHOTO_ID_5305538465624291058" border="0" /></a>ಒಂದಲ್ಲ ಒಂದು ಕಾರಣಕ್ಕಾಗಿ ಇತಿಹಾಸದಲ್ಲಿ ಮೇಲುಜಾತಿಯವರು ಕೂಡ ಬೇರೆ ಬೇರೆ ಸಂದರ್ಭಗಳಲ್ಲಿ `ಮತಾಂತರ'ಗೊಂಡಿದ್ದಾರೆ. ಜೈನರು, ಕ್ರೈಸ್ತರು, ಸಾರಸ್ವತರು, ವೀರಶೈವರು, ವೈಷ್ಣವರು, ರಜಪೂತರು - ಹೀಗೇ. ಈವತ್ತು ನಾವು ಕೆಳಸ್ತರದ, ದಲಿತರ ಬಗ್ಗೆ ಏನು ಹೇಳುತ್ತೇವೋ ಅಂತಹ ಆ ಲೌಕಿಕ ಪ್ರಯೋಜನಗಳನ್ನೆಲ್ಲ ಮತಾಂತರದಿಂದ ಮೇಲುಜಾತಿಯವರು ಕೂಡ ಪಡೆದಿದ್ದಾರೆ. ಮಿಷನರಿಗಳ, ಪರಿವರ್ತನಕಾರರ ಗಮನವೂ ಮೊದಮೊದಲು ಇದ್ದದ್ದು ಮೇಲುಜಾತಿಗಳ ಕಡೆಗೇ. ಹೀಗೆಲ್ಲ ಇರುವಾಗ ಕೆಳಜಾತಿಗಳು-ವರ್ಗಗಳ ಮತಾಂತರದ ಬಗ್ಗೆ ಮಾತ್ರ ಹುಯಿಲೆಬ್ಬಿಸುವುದು ವಿಚಿತ್ರವಾಗಿ ಕಾಣುತ್ತದೆ.<br /><br />ಭೈರಪ್ಪ ಪ್ರಣೀತ ಚರ್ಚೆಯನ್ನು ಕಾರಣವಾಗಿಟ್ಟುಕೊಂಡು ಈ ಲೇಖನವನ್ನು ರಚಿಸಿದ್ದರೂ ಪ್ರಗತಿಪರರು, ಜಾತ್ಯತೀತವಾದಿಗಳು ಮತಾಂತರದ ಸಂಕೀರ್ಣ ನೆಲೆಗಳನ್ನು ಗ್ರಹಿಸಿದ್ದಾರೆಂದು ನನ್ನ ಇಂಗಿತವಲ್ಲ. ಇವರ ಆಶಯಗಳು, ಉದ್ದೇಶಗಳ ಪ್ರಾಮಾಣಿಕತೆ-ಜನಪ್ರೀತಿಯಿಂದಲೇ ಕೂಡಿರಬಹುದಾದರೂ ಸಾರ್ವಜನಿಕರ ವಿಶ್ವಾಸಾರ್ಹತೆಯನ್ನು ಇವರಿಗೇಕೆ ಪಡೆಯಲು ಸಾಧ್ಯವಾಗುತ್ತಿಲ್ಲ, ಜಾತಿವಾದಿಗಳು-ಕೋಮುವಾದಿಗಳಲ್ಲದವರು ಕೂಡ ಇವರನ್ನೇಕೆ ಒಪ್ಪುವುದಿಲ್ಲ ಎಂಬುದು ಯೋಚಿಸಬೇಕಾದ ವಿಚಾರ.<br /><br />ಮತಾಂತರ ಕುರಿತಂತೆ ಚರ್ಚೆಯನ್ನು ನಾವು ಸಾಹಿತಿಗಳಿಗೆ - ಸಾಹಿತ್ಯ ಕೃತಿಗಳಿಗೇ ಮೀಸಲಾಗಿಟ್ಟರೆ ಕೆಲವು ತೊಂದರೆಗಳಾಗುತ್ತವೆ. ಕುವೆಂಪು ಅವರಾಗಲೀ, ಭೈರಪ್ಪನವರಾಗಲೀ ಒಂದು ಐತಿಹಾಸಿಕ ಸಂದರ್ಭದಲ್ಲಿ ಬರೆಯುವ ಲೇಖಕರಷ್ಟೇ. ಇಂತಹ ಸಂದರ್ಭದ ಒತ್ತಾಯಗಳನ್ನು ಮೀರಿ ಕೂಡ ಕೆಲವು ಪ್ರಶ್ನೆಗಳಿರುತ್ತವೆ. ತಾತ್ವಿಕವಗಿ ಮತಾಂತರ ಕುರಿತಂತೆ ಹಿಂದೂಧರ್ಮದ ನಿಲುವೇನು? ಹಿಂದೂಧರ್ಮ ಮತಾಂತರವನ್ನು ಒಪ್ಪುವುದಿಲ್ಲ, ಆಧ್ಯಾತ್ಮಿಕ ಹುಡುಕಾಟದಲ್ಲಿ ಅಗತ್ಯವೆಂದು ಭಾವಿಸುವುದೂ ಇಲ್ಲ. ಇದಕ್ಕೆ ಹಿಂದೂ ಧರ್ಮದ ಲೋಕದೃಷ್ಟಿಯೇ ಕಾರಣ. ಈ ನೋಟವನ್ನು ತತ್ವಶಾಸ್ತ್ರದ ಹಿನ್ನೆಲೆ-ಪರಿಭಾಷೆಯಲ್ಲಿ ಸಮರ್ಥವಾಗಿ ವಿವರಿಸುವ ಉತ್ತಮ ಲೇಖನವೊಂದು ಕನ್ನಡದಲ್ಲಿದೆ. ಶ್ರೀ ಜಿ.ಹನುಮಂತರಾವ್ರ ಈ ಬರಹವನ್ನು `ಪುಸ್ತಕ ಮನೆ' ಮಾಸಿಕವು ತನ್ನ ನವೆಂಬರ್ ಸಂಚಿಕೆಯಲ್ಲಿ ಪುನರ್ಮುದ್ರಿಸಿದೆ (ಪುಟ ೫-೧೮). ಈ ಬರಹದಲ್ಲೂ ಶ್ರೀ ಹನುಮಂತರಾವ್ ಗಾಂಧಿ ನಿಲುವುಗಳನ್ನು, ಪ್ರೊ||ಮೈಟ್ಲ್ಯಾಂಡ್ರ ಗಾಂಧಿ ಮೇಲಿನ ಪ್ರಭಾವವನ್ನು ಗಮನಿಸುತ್ತಾರೆ. ಇಂತಹದೊಂದು ಉತ್ತಮ ಲೇಖನ ಓದುಗರ ಗಮನಕ್ಕೆ - ಪುನರ್ ಓದಿಗೆ ಅರ್ಹವಾಗಿದೆ.<br /><br />ಕರಾವಳಿ ಸೀಮೆಯಲ್ಲಿರುವ ಗೋವಾ ಪ್ರದೇಶವೂ ನಾಲ್ಕೈದು ಶತಮಾನಗಳಿಂದ ಮತಾಂತರವನ್ನು ಬೇರೆ ಬೇರೆ ಸ್ತರಗಳಲ್ಲಿ ಎದುರಿಸಿ ಈವತ್ತಿಗೆ ವಿಶಿಷ್ಟವಾದ ಸಾಂಸ್ಕೃತಿಕ ಚಹರೆಯನ್ನು ರೂಢಿಸಿಕೊಂಡು ಆಧುನಿಕವಾಗಿದೆ. ಈ ಇತಿಹಾಸವನ್ನು ಹೇಗೆ ನೋಡಬೇಕು? ಮಿಷನರಿಗಳ ದೃಷ್ಟಿಯಿಂದಲೇ, ಮತಾಂತರಗೊಂಡವರ ದೃಷ್ಟಿಯಿಂದಲೇ, ಗಮನಿಸಬೇಕಾದ ದಾಖಲೆಗಳು ಯಾವುವು, ಯಾವ ರೀತಿಯ ಅಧ್ಯಯನ ಕ್ರಮದಿಂದ ಸತ್ಯಕ್ಕೆ ಹತ್ತಿರವಾಗಬಹುದು - ಇಂತಹ ಸಮಸ್ಯೆಗಳನ್ನೆಲ್ಲ ತಮ್ಮೆದುರಿಗಿಟ್ಟುಕೊಂಡು Maria Aurora Coutoಬರೆದಿರುವ ಕೃತಿ "A Daughter's Story" ಕೂಡ ಮತಾಂತರ ಕುರಿತ ನಮ್ಮ ತಿಳುವಳಿಕೆಯನ್ನು ಇನ್ನಷ್ಟು ಸೂಕ್ಷ್ಮಗೊಳಿಸಬಹುದು, ಮಾನವೀಯಗೊಳಿಸಬಹುದು. ಈ ಪುಸ್ತಕವನ್ನು ಓದಲು ಕಾರಣರಾದ ಶ್ರೀ ಜಿ.ರಾಜಶೇಖರ್ರವರ ಪ್ರೀತಿ-ಪ್ರೋತ್ಸಾಹವನ್ನು ಇಲ್ಲಿ ನೆನೆಯುತ್ತೇನೆ.<br /><span style="font-weight: bold;">(</span><span style="font-weight: bold;">ಫೆಬ್ರವರಿ</span><span style="font-weight: bold;"> </span><span style="font-weight: bold;">ತಿಂಗಳ</span><span style="font-weight: bold;"> </span><span style="font-weight: bold;">ಹೊಸತು</span><span style="font-weight: bold;"> </span><span style="font-weight: bold;">ಪತ್ರಿಕೆಯಲ್ಲಿ</span><span style="font-weight: bold;"> </span><span style="font-weight: bold;">ಪ್ರಕಟಿತ</span><span style="font-weight: bold;"> </span><span style="font-weight: bold;">ಲೇಖನ</span><span style="font-weight: bold;">)</span><br /><span style="font-weight: bold;">(</span><span style="font-weight: bold;">ಚಿತ್ರಗಳು</span><span style="font-weight: bold;">: </span><span style="font-weight: bold;">ವಿಕ್ರಾಂತ</span><span style="font-weight: bold;"> </span><span style="font-weight: bold;">ಕರ್ನಾಟಕ</span><span style="font-weight: bold;"> - </span><span style="font-weight: bold;">ಕನ್ನಡ</span><span style="font-weight: bold;"> </span><span style="font-weight: bold;">ವಾರಪತ್ರಿಕೆಯ</span><span style="font-weight: bold;"> </span><span style="font-weight: bold;">ಕೃಪೆ</span><span style="font-weight: bold;">)</span></span>ಕೆ. ಸತ್ಯನಾರಾಯಣhttp://www.blogger.com/profile/15167030166766836381noreply@blogger.com1tag:blogger.com,1999:blog-1964049159346480323.post-43974708191779202312009-01-25T04:25:00.000-08:002009-01-25T04:37:15.080-08:00ಗಾಂಧಿ ಓದಿದ್ದು ಬರೆದಿದ್ದು<a onblur="try {parent.deselectBloggerImageGracefully();} catch(e) {}" href="http://4.bp.blogspot.com/_D9K0HARbkSE/SXxaukC_2BI/AAAAAAAAAC4/KVk8AsiWUa4/s1600-h/gandhi+side.bmp"><img style="margin: 0pt 10px 10px 0pt; float: left; cursor: pointer; width: 81px; height: 300px;" src="http://4.bp.blogspot.com/_D9K0HARbkSE/SXxaukC_2BI/AAAAAAAAAC4/KVk8AsiWUa4/s320/gandhi+side.bmp" alt="" id="BLOGGER_PHOTO_ID_5295207017877592082" border="0" /></a><br />ಗಾಂಧಿಯವರ ವ್ಯಕ್ತಿತ್ವಕ್ಕೆ ನಾನಾ ಆಯಾಮಗಳು. ಸಂತ, ರಾಜಕಾರಣಿ, ಸಂಘಟನಾ ಚತುರ, ಪಟ್ಟುಬಿಡದ ಮೌಲ್ಯಾನ್ವೇಷಕ, ರಾಜಕಾರಣದಲ್ಲಿದ್ದೂ ಅಧ್ಯಾತ್ಮದ ಹುಡುಕಾಟದಲ್ಲಿ ನಿರತನಾದವ - ಹೀಗೆ ಪಟ್ಟಿ ಬೆಳೆಸುತ್ತಲೇ ಹೋಗಬಹುದು. ಈ ಎಲ್ಲ ಆಯಾಮಗಳನ್ನು ಬಂಧಿಸಿದ್ದ ಏಕಸೂತ್ರವೆಂದರೆ ಗಾಂಧಿಯವರ ವ್ಯಕ್ತಿತ್ವದ ನಿರಂತರ ವಿಕಾಸ. ಈ ವಿಕಾಸಕ್ಕೆ ಬೆನ್ನೆಲುಬಾಗಿದ್ದುದು ಗಾಂಧಿಯವರಿಗೆ ವಿಶಿಷ್ಟವಾಗಿದ್ದ ನಿರಂತರ ಓದು ಮತ್ತು ಬರವಣಿಗೆ. ನಾವು ಗಾಂಧಿ ಕುರಿತ ಚರ್ಚೆಯಲ್ಲಿ ಅವರಿಗೆ ವಿಶಿಷ್ಟವಾಗಿದ್ದ, ಅವರೇ ರೂಪಿಸಿಕೊಂಡಿದ್ದ ಓದು ಮತ್ತು ಬರವಣಿಗೆಯ ರೀತಿಯ ಬಗ್ಗೆ ಹೆಚ್ಚು ಗಮನ ಕೊಟ್ಟಂತಿಲ್ಲ.<span class="fullpost"><br /><br />ನಿಜ, ಗಾಂಧಿ ಸಾಹಿತಿಯಲ್ಲ, ಕವಿಯಲ್ಲ, ಬರೆದಿರುವುದು ಕೂಡ ಎರಡೇ ಪುಸ್ತಕಗಳು - ಮೊದಲನೆಯದು ಹಿಂದ್ ಸ್ವರಾಜ್ ಮತ್ತು ಎರಡನೆಯದು ಆತ್ಮ ಚರಿತ್ರೆ. ಆದರೆ ಅವರ ಪತ್ರಿಕಾ ಬರಹಗಳು, ಕರಪತ್ರ, ಪತ್ರಸಾಹಿತ್ಯ - ಇವೆಲ್ಲವನ್ನೂ ಸೇರಿಸಿದರೆ ಸುಮಾರು 55 ಸಾವಿರ ಪುಟಗಳಾಗುತ್ತವೆ. ಈ ಕಾರಣಕ್ಕೆ ಮಾತ್ರವಲ್ಲದೆ ಇನ್ನೂ ಎರಡು ಮುಖ್ಯ ಕಾರಣಗಳಿಗಾಗಿ ಗಾಂಧಿಯವರ ಓದುಗಾರಿಕೆ-ಬರವಣಿಗೆಯ ರೀತಿಯನ್ನು ಗಮನಿಸಬೇಕಾಗಿದೆ. ಗಾಂಧಿಯವರ ಹಿಂದ್ ಸ್ವರಾಜ್ ಗೆ ಮುಂದಿನ ವರ್ಷ ನೂರು ವರ್ಷ ತುಂಬುತ್ತದೆ. ಶತಮಾನೋತ್ಸವಕ್ಕೆ ಸಿದ್ಧತೆಗಳಾಗುತ್ತಿವೆ. ಸಮೂಹ ಮಾಧ್ಯಮಗಳ ಪ್ರಭಾವದ ದೆಸೆಯಿಂದಾಗಿ ಓದುವ, ಬರೆಯುವ ಆಸಕ್ತಿ ಕಡಿಮೆಯಾಗುತ್ತಿದೆ. ಜತೆಗೆ ಸಾಹಿತ್ಯ-ಸಾಂಸ್ಕೃತಿಕ ವಲಯಗಳಲ್ಲಿ ನಡೆಯುತ್ತಿರುವ ಓದು, ಬರವಣಿಗೆಯು ಬಹುಪಾಲು ವೃತ್ತಿಪರ ವ್ಯಸನವಾಗಿಯೋ, ಹಾಗಲ್ಲದೆ ಹೋದಾಗ ಹವ್ಯಾಸಿಶೀಲರ ವಾರಾಂತ್ಯದ ಮನರಂಜನೆ-ಸಮಾರಂಭಗಳ ಶೋಕಿಯಾಗಿಯೋ ಆಗುವ ಹಂತಕ್ಕೆ ಬಂದು ನಿಂತಿದೆ. ತಾನೊಬ್ಬ ಸಾಹಿತಿ-ಪಂಡಿತನೆಂದು ತಿಳಿಯದ ಒಬ್ಬ ಮನುಷ್ಯ, ತನ್ನ ಅಂತರಂಗದ ವಿಕಾಸಕ್ಕೆ ಪೂರಕವಾಗಿ ಓದಲು-ಬರೆಯಲು ಹೊರಟಾಗ ಹೇಗಿರುತ್ತದೆ ಎಂಬುದನ್ನು ಗಾಂಧಿಯವರ ವ್ಯಕ್ತಿತ್ವದಿಂದ ತಿಳಿಯಬಹುದು. ಹೀಗೆ ತಿಳಿಯುವ ಮೂಲಕ ಶಿಥಿಲವಾಗುತ್ತಿರುವ ಓದು ಸಂಸ್ಕೃತಿಗೆ ಹೊಸ ಚಾಲನೆ ಕೊಡಬಹುದು.<br /><br /><span style="font-weight: bold;">ಟ್ಯಾಗೋರರಂತೆ</span><span style="font-weight: bold;"> </span><span style="font-weight: bold;">ನಾನು</span><span style="font-weight: bold;"> </span><span style="font-weight: bold;">ಕವಿಯಲ್ಲ</span><span style="font-weight: bold;">!</span><br />ಗಾಂಧಿ ಹೆಚ್ಚು ಪುಸ್ತಕಗಳನ್ನು ಓದಿದವರಲ್ಲ. ಓದಲು ಆಸೆಪಟ್ಟವರೂ ಅಲ್ಲ. ಕವಿ, ಸಾಹಿತಿಯಾಗಬೇಕೆಂಬ ಹುಚ್ಚು ಕೂಡ ಇರಲಿಲ್ಲ. ರವೀಂದ್ರರಂತೆ ತಾನೇನು ಕವಿಯಲ್ಲ. ಹೊಸದೇನನ್ನೂ ಸೃಷ್ಟಿಸಲಾರೆ. ಹಾಗಾಗಿ ಸತ್ಯ, ಅಹಿಂಸೆಯಂತಹ ಪುರಾತನ ಕಲ್ಪನೆಗಳನ್ನು ತಾನು ಮತ್ತೆ ಮತ್ತೆ ಶೋಧಿಸಬೇಕೆಂದು ಗಾಂಧಿ ಪದೇ ಪದೆ ಹೇಳಿಕೊಳ್ಳುತ್ತಿದ್ದರು - ಸ್ವಲ್ಪ ತಮಾಷೆಯಿಂದ, ಸ್ವಲ್ಪ ಗಾಂಭೀರ್ಯದಿಂದ. ಶಾಲಾ ವಿದ್ಯಾರ್ಥಿಯಾಗಿದ್ದಾಗ ಓದಿದ್ದು ಕೂಡ ಕೆಲವೇ ಪುಸ್ತಕಗಳು. ರಾಮಾಯಣವನ್ನು ಓದಲು ಪ್ರಾರಂಭಿಸಿದ್ದು - ಭೂತ, ಪಿಶಾಚಿಗಳ ಭಯದಿಂದ ಪಾರಾಗಲು ಪಾರಾಯಣವೊಂದೇ ದಾರಿಯೆಂದು ಬಂಧುಗಳೊಬ್ಬರು ಹೇಳಿಕೊಟ್ಟಿದ್ದರಿಂದ! ವಿದ್ಯಾಭ್ಯಾಸದ ದಿನಗಳಲ್ಲಿ ಪಠ್ಯಪುಸ್ತಕಗಳಿಂದಾಚೆಗೆ ಓದಲಿಲ್ಲ. ಸಕ್ರಿಯವಾಗಿ ಸಾರ್ವಜನಿಕ ಜೀವನದಲ್ಲಿ ತೊಡಗಿದ ಮೇಲೆ ಓದಲು ಸಮಯವೇ ಸಿಗಲಿಲ್ಲ. ಹಾಗಾಗಿ ನನ್ನ ಪುಸ್ತಕ ಜ್ಞಾನ ತುಂಬಾ ಕಡಿಮೆಯಾಯಿತು. ಆದರೆ ಇದರಿಂದಾಗಿ ತನಗೇನೂ ನಷ್ಟವಾಗಲಿಲ್ಲ. ಸೀಮಿತ ಓದಿನಿಂದಾಗಿ ಓದಿದ ಪುಸ್ತಕಗಳನ್ನೆಲ್ಲ ಚೆನ್ನಾಗಿ ಮನನಮಾಡಲು ಸಾಧ್ಯವಾಯಿತು ಎಂದೇ ಆತ್ಮಚರಿತ್ರೆಯಲ್ಲಿ ಗಾಂಧಿ ಬರೆದುಕೊಂಡಿದ್ದಾರೆ. ಇಂಗ್ಲೆಂಡಿಗೆ ಓದುವುದಕ್ಕೆ ಹೋದ ಮೇಲೆ ತಾಯಿಗೆ ವಚನಕೊಟ್ಟಿದ್ದಂತೆ ಸಸ್ಯಾಹಾರಿಯಾಗಿ ಉಳಿಯಲು ಸಸ್ಯಾಹಾರಿ ಸಂಘಟನೆಯವರು ಪ್ರಕಟಿಸುತ್ತಿದ್ದ ಪುಸ್ತಕಗಳನ್ನೇ, ಕರಪತ್ರಗಳನ್ನೇ ಓದುತ್ತಿದ್ದುದು. ಬರೆಯುತ್ತಿದ್ದುದು ಕೂಡ ಸಂಘಟನೆಯ ಪತ್ರಿಕೆಗಳಿಗೇ. ಒಳಮನಸ್ಸಿನ, ಒಳಹಸಿವಿನ ತೀವ್ರತೆಗೆ, ಅಗತ್ಯಕ್ಕೆ ಬೇಕಾದಷ್ಟು ಓದುವುದನ್ನು, ಬರೆಯುವುದನ್ನು ಗಾಂಧಿ ಇಲ್ಲಿಂದಲೇ ಪ್ರಾರಂಭಿಸಿದಂತೆ ಕಾಣುತ್ತದೆ. 19ನೇ ವರ್ಷದಲ್ಲಿ ದಿನಚರಿ ಬರೆಯಲು ಶುರುವಿಟ್ಟುಕೊಂಡ ಗಾಂಧಿಯ ಆ ದಿನದ ದಿನಚರಿಗಳಲ್ಲೂ ಕಾಣುವುದು ಒಳಮನಸ್ಸಿನ ತಾಕಲಾಟದ ದಾಖಲೆಯೆ. ಜೀವನದಲ್ಲಿ ಯಾರನ್ನೂ ಯಾರೂ ಆಕಸ್ಮಿಕವಾಗಿ ಭೇಟಿ ಮಾಡುವುದಿಲ್ಲ ಎಂಬ ಗಾದೆ ಮಾತಿನಂತೆ ಸಸ್ಯಾಹಾರಿಗಳ ಸಂಘಟನೆಯ ಮೂಲಕವೇ ಗಾಂಧಿ ಬುದ್ಧ-ಭಗವದ್ಗೀತೆಯ ಬಗ್ಗೆ ಬರೆದಿದ್ದ ಎಡ್ವಿನ್ ಆರ್ನಾಲ್ಡ್, ಭಾರತೀಯ ತತ್ತ್ವಶಾಸ್ತ್ರದಲ್ಲಿ ಆಸಕ್ತಿಯಿದ್ದ ಆನಿಬೆಸೆಂಟ್ - ಇಂಥವರೊಡನೆ ಸಂಪರ್ಕಕ್ಕೆ ಬಂದುದು.<br /><br /><span style="font-weight: bold;">ಓದಬೇಕು</span><span style="font-weight: bold;"> </span><span style="font-weight: bold;">ಮೂಲಪಠ್ಯ</span><br />ಯಾವುದೇ ಸಂಗತಿ, ವಿದ್ಯಮಾನ ಕುರಿತಂತೆ ಮೂಲಪಠ್ಯವನ್ನೇ ಓದಬೇಕು. ಎರಡನೆ ಮೂರನೆ ದರ್ಜೆಯ ಪುಸ್ತಕಗಳನ್ನು ಓದಬಾರದು ಎಂಬುದು ಗಾಂಧಿ ಈ ಹಂತದಲ್ಲಿ ರೂಢಿಸಿಕೊಂಡ ಇನ್ನೊಂದು ನಿಯಮ. ಗಾಂಧಿಯನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಲು ಕೆಲವು ಮಿತ್ರರು ಪ್ರಯತ್ನಿಸಿದಾಗ ಓದಿದ್ದು ಕ್ರಿಶ್ಚಿಯನ್ ಧರ್ಮದ ಇತಿಹಾಸವನ್ನು, ಬೈಬಲ್ನ ಮೂಲಪಠ್ಯವನ್ನು. ಎಲ್ಲ ಧರ್ಮಗಳ ಮೂಲತಿರುಳು ಒಂದೆ ಎಂಬ ನಂಬಿಕೆ ಜಾಗೃತವಾದದ್ದು ಇಂತಹ ಮೂಲ ಪಠ್ಯಗಳ ಓದಿನಿಂದಲೇ. ಎಡ್ವರ್ಡ್ ಮೈಟ್ಲ್ಯಾಂಡ್ ಎಂಬ ಕ್ರಿಶ್ಚಿಯನ್ ಗುರುವೊಬ್ಬನ ಚಿಂತನೆ ಮಾತ್ರ ಗಾಂಧಿಯ ಮೇಲೆ ತುಂಬಾ ಪರಿಣಾಮ ಬೀರಿತು. ಈಗ ನಮಗೆ ಬೇಕಾಗಿರುವುದು ಇನ್ನೊಂದು ಧರ್ಮವಲ್ಲ. ಈಗಾಗಲೇ ಇರುವ ಧರ್ಮಗಳ ಸರಿಯಾದ ಮತ್ತು ಪ್ರಾಮಾಣಿಕ ವ್ಯಾಖ್ಯಾನ ಎಂಬ ಮೈಟ್ಲ್ಯಾಂಡ್ ಚಿಂತನೆ ಮತ್ತು ಯಾವ ಧಾರ್ಮಿಕ ಗ್ರಂಥಗಳನ್ನೂ ಚಾರಿತ್ರಿಕ ದಾಖಲೆಗಳೆಂದು ಓದಬಾರದೆಂಬ ಆತನ ಸೂಚನೆ, ಧರ್ಮ ಮತ್ತು ಧಾರ್ಮಿಕ ಗ್ರಂಥಗಳನ್ನು ಕುರಿತಂತೆ ಗಾಂಧಿ ಯೋಚಿಸುವ ದಿಕ್ಕನ್ನೇ ಬದಲಾಯಿಸಿತು. ಇಲ್ಲೂ ಕೂಡ ನಾವು ಕಾಣುವುದು ಓದಿದ್ದನ್ನ ತನ್ನ ಅಂತರಂಗದ ಆಳಕ್ಕೆ ತೆಗೆದುಕೊಂಡು ತನ್ನ ನಂಬಿಕೆಗಳನ್ನೇ ಪರಿಶೀಲಿಸಿಕೊಳ್ಳುವ ಪ್ರವೃತ್ತಿಯನ್ನು.<br /><br /><a onblur="try {parent.deselectBloggerImageGracefully();} catch(e) {}" href="http://2.bp.blogspot.com/_D9K0HARbkSE/SXxb-7eEVtI/AAAAAAAAADI/BrNGiYcAYL0/s1600-h/gandhi+esu+rama.bmp"><img style="margin: 0pt 10px 10px 0pt; float: left; cursor: pointer; width: 320px; height: 247px;" src="http://2.bp.blogspot.com/_D9K0HARbkSE/SXxb-7eEVtI/AAAAAAAAADI/BrNGiYcAYL0/s320/gandhi+esu+rama.bmp" alt="" id="BLOGGER_PHOTO_ID_5295208398554683090" border="0" /></a>ರಾಮಾಯಣ ಮಹಾಭಾರತಗಳು ಚಾರಿತ್ರಿಕ ಕೃತಿಗಳಲ್ಲ. ಆ ಕೃತಿಗಳಲ್ಲಿ ಚಾರಿತ್ರಿಕ ಸತ್ಯಗಳನ್ನು ಹುಡುಕುವುದು ತಪ್ಪು. ಬದಲಾಗಿ ಈ ಕೃತಿಗಳು ಮುಖ್ಯವಾಗಿ ತಾತ್ತ್ವಿಕ ಕಾವ್ಯ. ಇಂತಹ ಕಾವ್ಯಕ್ಕೊಂದು ಸುಮ್ಮನೆ ನಿರ್ದಿಷ್ಟ ಸನ್ನಿವೇಶ ಎಂಬ ನಂಬಿಕೆಗನುಗುಣವಾಗಿ ಈ ಮಹಾಕಾವ್ಯಗಳ ಮೂಲ ಆಶಯದ ಕಡೆಗೇ ನಾವು ಮನಸ್ಸು ಕೊಡಬೇಕೆಂದು ಗಾಂಧಿ ಪರಿಭಾವಿಸಿದರು. ಈ ನಂಬಿಕೆಗನುಗುಣವಾಗಿಯೇ ಗಾಂಧಿಗೆ ಚಾರಿತ್ರಿಕ ರಾಮನಲ್ಲಿ ಯಾವತ್ತೂ ಆಸಕ್ತಿಯಿರಲಿಲ್ಲ. ನಿರಂತರ ರಾಮ, ಇನ್ನೂ ಆಗುತ್ತಿರುವ ರಾಮನ ಬಗ್ಗೆಯೇ ಗಮನ. ಮಹಾಭಾರತವನ್ನು ಕೂಡ ಗಾಂಧಿ ಇದೇ ರೀತಿ ವ್ಯಾಖ್ಯಾನಿಸಿದರು. ಪಶ್ಚಿಮದವರ ಚರಿತ್ರೆಯ ಕಲ್ಪನೆಯೇ ಮೂಲಭೂತವಾಗಿ ತಪ್ಪು. ದಿನನಿತ್ಯದ ಬದುಕಿನ ಸಣ್ಣಪುಟ್ಟ ಘಟನೆಗಳು- ಬೆಳವಣಿಗೆಯ ಆಧಾರದ ಮೇಲೆಯೇ ತತ್ತ್ವಶಾಸ್ತ್ರವನ್ನು ನಿರ್ಮಿಸಬೇಕೆಂಬ ಮಹಾಭಾರತದ ತಿಳಿವಳಿಕೆಯೇ ರೋಮನ್ ಇತಿಹಾಸ ಬರೆದ ಗಿಬ್ಬನ್ ಪುಸ್ತಕಗಳ ಒಳನೋಟಕ್ಕಿಂತ ದೊಡ್ಡದು ಎಂದು ಗಾಂಧಿ ವಾದಿಸಿದರು. ಈ ರೀತಿಯ ಖಚಿತ ಮತ್ತು ವಿನೂತನ ನಿಲುವುಗಳಿಗೆ ಇವತ್ತಿನ ಚಿಂತನಕಾರರು ಬರುವುದು ಎಷ್ಟು ಕಷ್ಟ ಮತ್ತು ಯಾಕೆ ಇವರಿಗೆಲ್ಲ ಇಂತಹ ಕಷ್ಟವಾಗುತ್ತಿದೆ ಎಂದು ಯೋಚಿಸಿದಾಗ ಗಾಂಧಿ ತಮ್ಮ ಸೀಮಿತ ಓದನ್ನು ಸ್ವಂತಕ್ಕೆ ಅನ್ವಯಿಸಿಕೊಂಡು ಓದಿ-ಬರೆದು-ಚಿಂತಿಸುತ್ತಿದ್ದ ರೀತಿಯ ಮಹತ್ವ ಅರ್ಥವಾಗುತ್ತದೆ.<br /><br /><span style="font-weight: bold;">ರಸ್ಕಿನ್</span><span style="font-weight: bold;"> </span><span style="font-weight: bold;">ತಂದಿತ್ತ</span><span style="font-weight: bold;"> </span><span style="font-weight: bold;">ಪ್ರೇರಣೆ</span><br />ಗಾಂಧಿ ಓದುತ್ತಿದ್ದ ಪುಸ್ತಕಗಳೇ ಹಾಗಿರುತ್ತಿದ್ದವೋ, ಇಲ್ಲ ಅವರು ಓದುತ್ತಿದ್ದ ರೀತಿಯಿಂದಾಗಿ ಪುಸ್ತಕಗಳು ಹಾಗೆ ಪ್ರಭಾವ ಬೀರುತ್ತಿದ್ದವೋ? ಈ ಪ್ರಶ್ನೆ ಗಾಂಧಿಯ ವ್ಯಕ್ತಿತ್ವದ ದೃಷ್ಟಿಯಿಂದ ಮಾತ್ರವಲ್ಲ, ಓದುಗನ ಸ್ಪಂದನಶೀಲತೆ ಕುರಿತಂತೆ ಇರುವ ನೂರಾರು ನವ್ಯೋತ್ತರ ಚಿಂತನೆಗಳ ದೃಷ್ಟಿಯಿಂದಲೂ ಮುಖ್ಯವಾದದ್ದು. ಸರ್ವೋದಯದ ಕಲ್ಪನೆ, ದೈಹಿಕ ಶ್ರಮದ ಮಹತ್ವ, ಜೀವರಾಶಿಗಳಲ್ಲೆಲ್ಲ ಅಂತರ್ಗತವಾಗಿರುವ ಆಧ್ಯಾತ್ಮಿಕ ಸಮಾನತೆ - ಇವನ್ನೆಲ್ಲ ಗಾಂಧಿ ತಮಗೆ ತಾವೇ ಸ್ಪಷ್ಟಗೊಳಿಸಿಕೊಂಡದ್ದು ಜಾನ್ ರಸ್ಕಿನ್ನ Unto this last ಎಂಬ ಕೃತಿಯ ಒಂದೇ ದಿನದ ಒಂದೇ ಪಟ್ಟಿನ ಓದಿನಿಂದ. ಹೆನ್ರಿ ಪೊಲಾಕ್ ಎಂಬ ಗೆಳೆಯ ಕೊಟ್ಟ ಈ ಪುಸ್ತಕವನ್ನು ಜೊಹಾನ್ಸ್ಬರ್ಗ್ನಿಂದ ದರ್ಬಾನ್ಗೆ ರೈಲಿನಲ್ಲಿ ಪ್ರಯಾಣಿಸುವಾಗ ಇಪ್ಪತ್ತನಾಲ್ಕು ಗಂಟೆಗಳಲ್ಲೇ ಓದಿ ಪುಸ್ತಕ ಮುಗಿಸುವ ಹೊತ್ತಿಗೇ ತಮ್ಮ ಜೀವನ ಶೈಲಿಯನ್ನು ಕೃತಿಗನುಗುಣವಾಗಿ ಪರಿವರ್ತಿಸಿಕೊಳ್ಳಲು ನಿರ್ಧರಿಸಿಬಿಟ್ಟರು. ಫೀನಿಕ್ಸ್ ಆಶ್ರಮದ ಸ್ಥಾಪನೆ, ಈ ಓದಿನ ಹಿನ್ನೆಲೆಯಲ್ಲೇ ಜರುಗಿದ್ದು. ಗಾಂಧಿ ಮತ್ತು ಮಿತ್ರರು ಸರಳ ಮತ್ತು ಋಜು ಜೀವನ ಪ್ರಾರಂಭಿಸಿದ್ದು ಇಲ್ಲೇ.<br /><br />ಗಾಂಧಿಯ ಚರಿತ್ರೆ ಬರೆದ ಲೂಯಿ ಫಿಶರ್ ಈ ಬಗ್ಗೆ ಹೇಳುವ ಮಾತು ಕುತೂಹಲಕರವಾಗಿದೆ. ಗಾಂಧಿ ತಮ್ಮ ಇಡೀ ಜೀವನವನ್ನೆ ಪರಿವರ್ತಿಸಿಕೊಳ್ಳುವಂತದ್ದು ಜಾನ್ ರಸ್ಕಿನ್ನ ಪುಸ್ತಕದಲ್ಲಿ ಇದ್ದಿರಲಾರದು. ಮುಖ್ಯವಾದ ಮಾತೆಂದರೆ ಪ್ರಕೃತಿಯ ನಿಯಮ ಮತ್ತು ಲಯಕ್ಕನುಗುಣವಾಗಿ ಬದುಕಲು ಗಾಂಧಿಯಲ್ಲೇ ತುಡಿತ ಈಗಾಗಲೇ ಪ್ರಾರಂಭವಾಗಿದ್ದು ರಸ್ಕಿನ್ನ ಪುಸ್ತಕದ ಓದು ಗಾಂಧಿಯನ್ನು ಆ ಕಡೆ ಚಲಿಸುವಂತೆ ಮಾಡಿತಷ್ಟೆ. ಫಿಶರ್ ಹೀಗೆ ಹೇಳುತ್ತಾರೆ `ಪಠ್ಯಗಳು ತನಗೆ ಏನು ಹೇಳಬೇಕೆಂದು ಬಯಸುತ್ತಿದ್ದವೋ ಅದನ್ನೇ ಪಠ್ಯಕ್ಕೆ, ಪಠ್ಯದಿಂದ ಗಾಂಧಿ ಓದಿ ಬಿಡುತ್ತಿದ್ದರು. ಸೃಜನಶೀಲ ಓದುಗರಾಗಿದ್ದ ಗಾಂಧಿ ತಾವು ಓದುತ್ತಿದ್ದ ಪುಸ್ತಕದ ಸಹಲೇಖಕನಾಗಿ ಬಿಡುತ್ತಿದ್ದರು. ಪಠ್ಯಕ್ಕೆ ತಾನು ಕೊಡುವುದನ್ನೆಲ್ಲ ಕೊಟ್ಟು ತನಗೆ ಬೇಕಾದ್ದನ್ನು ಬಡ್ಡಿಯ ಸಮೇತ ವಾಪಾಸ್ ಪಡೆಯುತ್ತಿದ್ದರು.' ಸೆರೆಮನೆಯಲ್ಲಿ ಓದಿದ ಹೆನ್ರಿ ಡೇವಿಡ್ ಡೋರೋನ ನಾಗರಿಕ ಅಸಹಕಾರ ಕುರಿತ ಪ್ರಬಂಧಕ್ಕೆ ಕೂಡ ಗಾಂಧಿ ತೆರೆದುಕೊಂಡದ್ದು ಈ ರೀತಿಯಲ್ಲೇ. ಈ ಎರಡೂ ಕೃತಿಗಳನ್ನು ಗಾಂಧಿ ನಂತರದ ದಿನಗಳಲ್ಲಿ ಗುಜರಾತಿ ಭಾಷೆಗೆ ತರ್ಜುಮೆ ಮಾಡಿದರು.<br /><br /><span style="font-weight: bold;">ಛೆ</span><span style="font-weight: bold;"> </span><span style="font-weight: bold;">ಛೆ</span><span style="font-weight: bold;">, </span><span style="font-weight: bold;">ಕತೆ</span><span style="font-weight: bold;">, </span><span style="font-weight: bold;">ಕಾದಂಬರಿ</span><span style="font-weight: bold;"> </span><span style="font-weight: bold;">ಓದೋದೇ</span><span style="font-weight: bold;">?!</span><br /><br />ಗಾಂಧಿ ಓದುಗಾರಿಕೆಯ ಇನ್ನೊಂದು ವೈಶಿಷ್ಟ್ಯವೆಂದರೆ ಲಲಿತ ಬರವಣಿಗೆ ಅಥವಾ ಸೃಜನಶೀಲ ಬರವಣಿಗೆಯ ಬಗ್ಗೆ ಇದ್ದ ಕಡಿಮೆಯೆನ್ನುವಷ್ಟು ಒಲವು. ಹಿಂದ್ ಸ್ವರಾಜ್ ಪುಸ್ತಕದ ಕೊನೆಯಲ್ಲಿ ಕೊಟ್ಟಿರುವ ಒಂದು ಪಟ್ಟಿಯಲ್ಲಿ ಯಾವುದೇ ಕತೆ-ಕಾದಂಬರಿ ನಾಟಕಗಳಿಲ್ಲ. ಟಾಲ್ಸ್ಟಾಯ್ಯ ಆರು ಕೃತಿಗಳಿವೆ. ಆತನ ಪ್ರಸಿದ್ಧ ಕಾದಂಬರಿಗಳಿಲ್ಲ. ಆತ್ಮಕತೆ ಮತ್ತು ಸ್ವೇಚ್ಛಾ ಮನೋಭಾವವನ್ನು ಪ್ರೇರೇಪಿಸುವ ಪಶ್ಚಿಮದ ಸಾಹಿತ್ಯವನ್ನು ಯುವಕರು ಓದಬಾರದು, ಸಂಯಮ ಮತ್ತು ಚಾರಿತ್ರ್ಯವನ್ನು ಬೋಧಿಸುವ ಟಾಲ್ಸ್ಟಾಯ್ನ ನೀತಿಪರ, ಧಾರ್ಮಿಕ ಸಾಹಿತ್ಯವನ್ನು ಓದಬೇಕೆಂದು ಗಾಂಧಿ ಕರೆಕೊಟ್ಟಿದ್ದರು. ಕವಿಗಳಿಗೆ, ಲೇಖಕರಿಗೆ ತಮ್ಮ ವಾದವನ್ನು ಮಂಡಿಸಲು ಉತ್ಪ್ರೇಕ್ಷೆಯ, ಅಲಂಕಾರಗಳ ಹಕ್ಕು ಮತ್ತು ಅಗತ್ಯವಿದೆ ನಿಜ, ಹಾಗೆಂದು ನಾನು ಅವರ ವಾದವನ್ನು ಯಾವಾಗಲೂ ಒಪ್ಪಬೇಕಿಲ್ಲ ಎಂದು ರವೀಂದ್ರರನ್ನು ಕುರಿತು ತಮಾಷೆ ಮಾಡಿದ್ದರು. `ಗಗನದಲ್ಲಿ ಹಾಡುತ್ತಾ ಹಾರಾಡುತ್ತಾ ಸಂತಸದಿಂದಿರುವ ಹಕ್ಕಿಗಳ ಸುಂದರ ಚಿತ್ರವನ್ನು ಕವಿಗಳು ನೀಡುತ್ತಾರೆ. ಈ ಹಕ್ಕಿಗಳು ಈಗಾಗಲೇ ದಿನದ ಊಟ ಮುಗಿಸಿವೆ. ಹಿಂದಿನ ರಾತ್ರಿ ನಿದ್ರಿಸುವಾಗ ಧಮನಿಗಳಲ್ಲಿ ಹೊಸ ರಕ್ತ ಹರಿದಿದೆ. ಚೈತನ್ಯವೇ ಇಲ್ಲದ ಮಾನವ ಹಕ್ಕಿಗಳು ರೆಕ್ಕೆಗಳನ್ನು ಪಟಪಟ ಬಡಿಯಲು ಕೂಡ ಕಷ್ಟಪಡುವುದನ್ನು ನಾನು ನೋಡಿದ್ದೇನೆ, ನರಳುತ್ತಿರುವ ರೋಗಿಗಳಿಗೆ ಕಬೀರನ ಪದ್ಯದಿಂದೇನಾಗಬೇಕು? ಹಸಿದವರಿಗೆ ಬೇಕಾಗಿರುವುದು ಚೈತನ್ಯ ತುಂಬಲು ಬೇಕಾದ ಶಕ್ತಿಯುತ ಆಹಾರವೆಂಬ ಒಂದೇ ಒಂದು ಕವನ. ಹಸಿದವರೇ ಅದನ್ನು ಸಂಪಾದಿಸಬೇಕು. ತಮ್ಮ ಶ್ರಮದಿಂದಲೇ ಸಂಪಾದಿಸಬೇಕು.'<br /><br />ಬ್ರಿಟಿಷರ ಓದುಗಾರಿಕೆಯ ರೀತಿಯ ಬಗ್ಗೆ ಗಾಂಧಿ ಗೇಲಿ ಮಾಡುತ್ತಿದ್ದರು. ದಿನಪತ್ರಿಕೆಯ ಓದೇ ಬ್ರಿಟಿಷರ ಪರಮಗುರಿ, ದಿನಪತ್ರಿಕೆಯೇ ಬ್ರಿಟಿಷರಿಗೆ ಬೈಬಲ್ ಇದ್ದಂತೆ ಎಂದೆಲ್ಲ ತಮಾಷೆ ಮಾಡುತ್ತಿದ್ದ ಗಾಂಧಿ ಶಿಸ್ತುಬದ್ಧವಾಗಿ ಓದಿದ್ದು ಯರವಾಡ ಸೆರೆಮನೆಯಲ್ಲಿ ಇದ್ದಾಗ ಮಾತ್ರ. ಎರಡು ವರ್ಷಗಳ ಕಾಲ. ಸೆರೆಮನೆಯ ಗ್ರಂಥಾಲಯದಲ್ಲಿ ಸಿಕ್ಕ ಸುಮಾರು ನೂರೈವತ್ತು ಪುಸ್ತಕಗಳಲ್ಲಿ ತತ್ತ್ವಶಾಸ್ತ್ರ, ಬೇರೆ ಬೇರೆ ಧರ್ಮದ ಗ್ರಂಥಗಳು, ನಾಗರಿಕತೆಯ ಇತಿಹಾಸ ಕುರಿತ ಪುಸ್ತಕಗಳು ಈ ಓದಿನಲ್ಲಿ ಸೇರಿವೆ. ರವೀಂದ್ರರು, ಗಯಟೆ, ಬರ್ನಾಡ್ ಶಾ, ಕಿಪ್ಲಿಂಗ್ರ ಕೆಲವು ಸಾಹಿತ್ಯ ಕೃತಿಗಳು ಈ ಓದಿನಲ್ಲಿ ಸೇರಿವೆ. ಗಾಂಧಿ ಯಾವ ಪುಸ್ತಕವನ್ನೂ ಕೇವಲ ಓದುತ್ತಿರಲಿಲ್ಲವಂತೆ. ಪ್ರತಿ ಪುಸ್ತಕವನ್ನು `ಅಧ್ಯಯನ' ಮಾಡುತ್ತಿದ್ದರಂತೆ. ಪ್ರತಿ ಪುಟವೂ, ಪ್ರತಿ ವಿಚಾರವೂ ಮನಸ್ಸಿನ ಆಳವನ್ನು ಪ್ರವೇಶಿಸಿ, ಮೌಲ್ಯಮಾಪನಗೊಂಡು ಸ್ವೀಕೃತವಾಗಿಯೋ, ತಿರಸ್ಕೃತವಾಗಿಯೋ, ಹೊಸದಾಗಿಯೋ ಪರಿವರ್ತನೆಗೊಂಡು ಗಾಂಧಿ ಮುದ್ರೆಯೊಡನೆ ಹೊರಬರುತ್ತಿದ್ದುವಂತೆ. ಹೀಗೆ ಹೊರಬಂದ ಸಂಗತಿಗಳಲ್ಲಿ ತನ್ನದೇನಿದೆ, ತಾನೇನಿದ್ದರೂ ಕೇವಲ ಪುಸ್ತಕದ ಪ್ರತಿಧ್ವನಿ-ಪ್ರತಿಬಿಂಬ ಎಂದು ಗಾಂಧಿ ತೇಲಿಸಿಬಿಡುತ್ತಿದ್ದರಂತೆ.<br /><br />ಗಾಂಧಿ ವಿವರವಾಗಿ ಬರೆದ ಒಂದೇ ಒಂದು ಪುಸ್ತಕ ವಿಮರ್ಶೆ ಕೂಡ ಓದು-ಬರವಣಿಗೆ ಬಗ್ಗೆ ನಿರ್ದಿಷ್ಟ ಒಳನೋಟಗಳನ್ನು ನೀಡುತ್ತದೆ. ಕ್ಯಾಥರೀನ್ ಮೇಯೋ ಭಾರತದ ಸ್ಥಿತಿ ಕೊಳಕಾಗಿದೆಯೆಂದು ದರಿದ್ರವಾಗಿದೆಯೆಂದು ಆರೋಪಿಸಿ ಬರೆದ ಪುಸ್ತಕ Mother India. Young India ಪತ್ರಿಕೆಯಲ್ಲಿ ಇದನ್ನು ವಿಮರ್ಶಿಸಿ ಗಾಂಧಿ ಪುಸ್ತಕವನ್ನು ಚರಂಡಿ ಇನ್ಸ್ಪೆಕ್ಟರ್ನ ವರದಿಯಂತಿದೆಯೆಂದು ಬರೆದರು. ಪುಸ್ತಕದಲ್ಲಿರುವ ವಿಷಯ-ಮಾಹಿತಿ, ಸಂಖ್ಯಾ ವಿವರಣೆ ಎಲ್ಲವೂ ನಿಜವಾದವು, ಆದರೆ ಪುಸ್ತಕ ಮಾತ್ರ ಒಟ್ಟಾರೆಯಾಗಿ ಅಪ್ರಾಮಾಣಿಕವಾದ್ದು, ಏಕೆಂದರೆ ಭಾರತದ ಪರವಾಗಿರುವ ಒಂದೇ ಒಂದು ಸಂಗತಿಯ ಕಡೆ ಕೂಡ ಲೇಖಕಿ ಗಮನ ಕೊಟ್ಟಿಲ್ಲವೆಂದು ಸೂಚಿಸಿದರು. ಕೃತಿಯೊಂದು ವಿವರಗಳಲ್ಲಿ ಪ್ರಾಮಾಣಿಕವಾಗಿದ್ದರೂ ಒಟ್ಟಾರೆಯಾಗಿ ಅಪ್ರಾಮಾಣಿಕ ಧ್ವನಿ ಹೊಂದಿರಬಹುದೆಂಬುದು ಮಹತ್ವದ ಒಳನೋಟ.<br /><br /><span style="font-weight: bold;">ದಿವ್ಯ</span><span style="font-weight: bold;"> </span><span style="font-weight: bold;">ಗದ್ಯ</span><br />ತಾನು ತನ್ನ ಒಳಚೈತನ್ಯ ಸೂಚಿಸಿದಂತೆ ಅದರ ನಿರ್ದೇಶನದಂತೆ ಬರೆಯುತ್ತಾ ಹೋಗುತ್ತೇನೆ ಎಂದು ಗಾಂಧಿ ಬರೆದುಕೊಂಡಿದ್ದರೂ, ಬರವಣಿಗೆಯಲ್ಲಿ ಕಂಡು ಬರುವ ಇನ್ನಿಲ್ಲದ ಸಂಯಮ, ಕರಾರುವಾಕ್ ಪದಗಳ ಬಳಕೆ, ಭಾಷೆಯ ನೇರ ಸ್ಪಷ್ಟ ಗುಣದ ಕಾರಣಗಳನ್ನು ಕುರಿತು ಗಾಂಧಿ ಚಿಂತಕರು ವಿಶ್ಲೇಷಿಸುತ್ತ ಬಂದಿದ್ದಾರೆ.<br /><br /><a onblur="try {parent.deselectBloggerImageGracefully();} catch(e) {}" href="http://4.bp.blogspot.com/_D9K0HARbkSE/SXxbPj4TdFI/AAAAAAAAADA/CxDZ7EkRDdM/s1600-h/gandhi+wide.bmp"><img style="margin: 0px auto 10px; display: block; text-align: center; cursor: pointer; width: 320px; height: 190px;" src="http://4.bp.blogspot.com/_D9K0HARbkSE/SXxbPj4TdFI/AAAAAAAAADA/CxDZ7EkRDdM/s320/gandhi+wide.bmp" alt="" id="BLOGGER_PHOTO_ID_5295207584768422994" border="0" /></a>ಸತ್ಯ ಮತ್ತು ಅಹಿಂಸೆಯ ಶೋಧಕರು, ಆರಾಧಕರೂ ಆಗಿದ್ದ ಗಾಂಧಿಯ ಒಳ ಜೀವನ ತುಂಬಾ ತಳಮಳದಿಂದ ಕೂಡಿದುದಾಗಿತ್ತು. ಈ ತಳಮಳವನ್ನು ನಿಯಂತ್ರಿಸಲು ಆತ್ಮ ಸಂಯಮವನ್ನು ಸಾಧಿಸಲು ಗಾಂಧಿ ಮಾಡುತ್ತಿದ್ದ ನಿರಂತರ ಪ್ರಯೋಗ-ಪ್ರಯತ್ನಗಳ ಇನ್ನೊಂದು ರೂಪವೇ ಬರವಣಿಗೆಯಲ್ಲೂ ಕಾಣುತ್ತಿದ್ದ ಸಂಯಮ, ನಿಗ್ರಹ, ಸ್ಪಷ್ಟತೆ. ಸೃಜನಶೀಲ ಕಲಾವಿದರಲ್ಲಾದರೆ ಪರಿವರ್ತನೆಗೊಳ್ಳುತ್ತದೆ. `ಸತ್ಯಶೋಧನೆ'ಯೆಂಬ ಆತ್ಮಚರಿತ್ರೆ ಬರೆದಾಗಲೂ ಗಾಂಧಿ ತಮ್ಮ ಎಲ್ಲ ಅನುಭವಗಳನ್ನು ಓದುಗರ ಮೇಲೆ ಹೇರಲಿಲ್ಲ. ಯಾವ ಯಾವ ಘಟನೆಗಳನ್ನು ಹೇಗೆ, ಎಷ್ಟು ಹೇಳಬೇಕು ಎಂಬ ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಕೃತಿಯುದ್ದಕ್ಕೂ ನಾವು ಕಾಣುತ್ತೇವೆ. ತನ್ನೊಳಗಿರುವುದನ್ನೆಲ್ಲ ಹೇಳಿಬಿಡುತ್ತೇನೆಂದು ಹೊರಟು ಓದುಗನನ್ನು ಸೆಳೆಯುವ, ರಂಜಿಸುವ ಪ್ರಯತ್ನ ತನ್ನ ಬರವಣಿಗೆಯಾಗಬಾರದೆಂಬ ಎಚ್ಚರ ಗಾಂಧಿಯವರಲ್ಲಿ ನಿರಂತರವಾಗಿತ್ತು. ಹೀಗೆಯೇ ಆತ್ಮಚರಿತ್ರೆಯ ಬರವಣಿಗೆ ಬೇರೆ, ಆತ್ಮರತಿ-ಸ್ವಪ್ರೇಮ ಪ್ರದರ್ಶನ ಬೇರೆ ಎಂಬ ಖಚಿತ ತಿಳಿವಳಿಕೆ ಕೂಡ. ಒಳ ಮನಸ್ಸಿನ ಕ್ಷೋಭೆ, ಒತ್ತಾಯ, ತೀವ್ರತೆ ಮತ್ತು ಸಂದೇಶಕ್ಕನುಗುಣವಾಗಿ ಮಾತ್ರವೇ ಗಾಂಧಿ ಬರೆಯುತ್ತಿದ್ದುದು. ಲಂಡನ್ನಿಂದ ದಕ್ಷಿಣ ಆಫ್ರಿಕಾಕ್ಕೆ ಹಡಗಿನಲ್ಲಿ ಹಿಂದಿರುಗುತಿದ್ದಾಗ ಕೇವಲ ಹತ್ತೇ ದಿನಗಳಲ್ಲಿ `ಹಿಂದ್ ಸ್ವರಾಜ್' ನಂತಹ ಮಹತ್ವದ ಕೃತಿಯನ್ನು (15ನವೆಂಬರ್ನಿಂದ 22ನವೆಂಬರ್1990) ಬರೆದರು - ಹಡಗಿನಲ್ಲಿ ಸಿಕ್ಕ ಕಾಗದದ ಮೇಲೆಯೇ. ಇದಕ್ಕೆ ಮುಂಚೆ ಲಂಡನ್ನಲ್ಲಿ ಗಾಂಧಿ ಸಾವರ್ಕರ್ರನ್ನು ಭೇಟಿ ಮಾಡಿದ್ದರು. ಇತರ ಹಿಂದೂ ರಾಷ್ಟ್ರೀಯವಾದಿ ಮತ್ತು ಉಗ್ರಗಾಮಿಗಳನ್ನು ಕೂಡ. ಗಾಂಧಿಯ ಮನಪರಿವರ್ತನೆಗೆ ಇವರೆಲ್ಲ ಪ್ರಯತ್ನಿಸಿದ್ದರು. ವಾದ ವಿವಾದ ನಡೆದಿತ್ತು. ಮದನ್ಲಾಲ್ ಧಿಂಗ್ರಾ ಉನ್ನತ ಬ್ರಿಟಿಷ್ ಆಧಿಕಾರಿಯೊಬ್ಬನನ್ನು ಗುಂಡಿಕ್ಕಿ ಕೊಂದಿದ್ದ. ತನ್ನಷ್ಟೇ ಪ್ರಾಮಾಣಿಕರೂ, ದೇಶಪ್ರೇಮಿಗಳೂ ಆದವರಾದರೂ ಹಿಂಸೆಯಲ್ಲಿ ನಂಬಿಕೆ ಇಟ್ಟವರನ್ನು ಹೇಗೆ ತನ್ನೆಡೆಗೆ ಒಲಿಸಿಕೊಳ್ಳಬೇಕೆಂಬ ಒಳತೋಟಿಯಲ್ಲಿ ಇದನ್ನು ಬರೆದರು ಗಾಂಧಿ.<br /><br />ತನ್ನೊಡನೆ ವಾದ ಮಾಡುತ್ತಿರುವವರು, ತನ್ನನ್ನು ಓದುತ್ತಿರುವವನು ಕೂಡ ತನಗೆ ಸಮಾನ ಮತ್ತು ತನ್ನಷ್ಟೇ ಪ್ರಾಮಾಣಿಕ ಎನ್ನುವುದು ಬಹುತೇಕ ಕಲಾವಿದರಿಗೆ, ಬರಹಗಾರರಿಗೆ ಗೊತ್ತಿರುವುದಿಲ್ಲ. ಪ್ರತಿಯೊಬ್ಬ ಓದುಗನನ್ನು ಹೀಗೆ ಆಧ್ಯಾತ್ಮಿಕವಾಗಿ ಸಮಾನವಾಗಿ ಬಗೆಯುವ ಒಳನೋಟವು ಈವತ್ತಿನ ನಿರಚನಾವಾದಿಗಳು ಮತ್ತು ನವ್ಯೋತ್ತರ ಚಿಂತಕರು ಹೇಳುವ ಪಠ್ಯದ ತೆರೆದ ಗುಣ ಮತ್ತು ಓದುಗನ ಸ್ವಾಯತ್ತತೆಯೆ ಕಲ್ಪನೆಗಿಂತ ಎಷ್ಟೋ ಮುಂದಿದೆಯೆಂಬುದನ್ನು ಇಲ್ಲಿ ಹೇಳಲೇ ಬೇಕು.<br /><br />ಚರಿತ್ರೆಗಿಂತ ನಾಗರಿಕತೆಯ ಕಲ್ಪನೆಗೆ ಹೆಚ್ಚು ಒತ್ತು ಕೊಡುತ್ತಿದ್ದ ಗಾಂಧಿ ಕ್ಷಣಕ್ಷಣವೂ ಬದುಕಿದವರು, ಬದಲಾದವರು. ಇಂಥವರ ಒಳ ಜೀವನದ ವಿವರಗಳು ಯಾವುದೇ ರೀತಿಯ ಓದು ಮತ್ತು ಬರವಣಿಗೆಯಲ್ಲೂ ಸಮಗ್ರವಾಗಿ ದಾಖಲಾಗುವುದು ಕಷ್ಟವೇ ಸರಿ. ಏಕೆಂದರೆ ಗಾಂಧಿಗೆ ಬದುಕಿನಲ್ಲಿ ನಿರರ್ಥಕ ಕ್ಷಣವೆಂಬುದೆ ಇರಲಿಲ್ಲ. 1905ರ ಮಾರ್ಚ್ 25ರ ಇಂಡಿಯನ್ ಒಪೀನಿಯನ್ ಪತ್ರಿಕೆಯ ಸಂಚಿಕೆಯಲ್ಲಿ The value of stray moments ಎಂಬ ಟಿಪ್ಪಣಿಯಲ್ಲಿ ಗಾಂಧಿ ಯಾವುದೇ ಕೆಲಸ ಮಾಡದೆ, ಕೆಲಸವನ್ನು ಪ್ರಾರಂಭಿಸುವುದಕ್ಕಿಂತ ಮುಂಚೆ ಕೆಲಸದ ಬಗ್ಗೆಯೇ ಸುಮ್ಮನೆ ಯೋಚಿಸುತ್ತಾ ಕಳೆದುಹೋಗುವ ನಿರರ್ಥಕ ಸಮಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಬದುಕು ಮತ್ತು ಸಮಯ ಹೀಗೆ ಸುಮ್ಮನೆ ಕಳೆದು ಹೋಗಬಾರದೆಂಬ ನಿಲುವು ಕೂಡಾ ಗಾಂಧಿಯ ಓದು ಮತ್ತು ಬರವಣಿಗೆಯ ಸ್ವರೂಪವನ್ನು ನಿರ್ಧರಿಸಿದಂತಿದೆ.<br /><br />ಗ್ರಂಥ ಋಣ: Gandhi - The Writer ಭವಾನಿ ಭಟ್ಟಾಚಾರ್ಯ<br />The Mahatma and the poet ಸವ್ಯಸಾಚಿ ಭಟ್ಟಾಚಾರ್ಯ<br />Gandhi's Truth ಏರಿಕ್ ಏರಿಕ್ಸನ್<br />Content and Communication in Hind Swaraj ಡಾ.ಕೆ.ರಾಘವೇಂದ್ರ ರಾವ್ ಪ್ರಬಂಧ.<br /><br /><span style="font-weight: bold;">(</span><span style="font-weight: bold;">ವಿಜಯಕರ್ನಾಟಕ</span><span style="font-weight: bold;"> </span><span style="font-weight: bold;">ಸಾಪ್ತಾಹಿಕದ</span><span style="font-weight: bold;"> </span><span style="font-weight: bold;">ಅಕ್ಟೋಬರ್</span><span style="font-weight: bold;"> </span><span style="font-weight: bold;">ಐದರ</span><span style="font-weight: bold;"> </span><span style="font-weight: bold;">ಸಂಚಿಕೆಯಲ್ಲಿ</span><span style="font-weight: bold;"> </span><span style="font-weight: bold;">ಪ್ರಕಟಿತ</span><span style="font-weight: bold;"> </span><span style="font-weight: bold;">ಲೇಖನ</span><span style="font-weight: bold;">)<br />ಚಿತ್ರಗಳು: ವಿಕ್ರಾಂತ ಕರ್ನಾಟಕ ಕನ್ನಡ ವಾರಪತ್ರಿಕೆಯ ಕೃಪೆ. <br /></span></span>ಕೆ. ಸತ್ಯನಾರಾಯಣhttp://www.blogger.com/profile/15167030166766836381noreply@blogger.com1tag:blogger.com,1999:blog-1964049159346480323.post-42144666847013146932008-12-25T03:02:00.000-08:002008-12-25T03:12:25.734-08:00ಒಳನೋಟ, ಕಳಕಳಿ, ಬುದ್ಧಿವಾದ, ಪುನರುಕ್ತಿ...<a onblur="try {parent.deselectBloggerImageGracefully();} catch(e) {}" href="http://3.bp.blogspot.com/_D9K0HARbkSE/SVNo4B7daXI/AAAAAAAAACg/_D-eVSHHGJ0/s1600-h/New+Picture+%281%29.bmp"><img style="margin: 0pt 10px 10px 0pt; float: left; cursor: pointer; width: 119px; height: 169px;" src="http://3.bp.blogspot.com/_D9K0HARbkSE/SVNo4B7daXI/AAAAAAAAACg/_D-eVSHHGJ0/s320/New+Picture+%281%29.bmp" alt="" id="BLOGGER_PHOTO_ID_5283682099635513714" border="0" /></a><br />ನಾಗಭೂಷಣರ ಈ ಸಮಾಜವಾದಿ ಸಂಕಥನಗಳು ಉದ್ದೇಶದಲ್ಲಿ ಸಮಾಜವೈದ್ಯನೊಬ್ಬನು ರೋಗಿಯ ನಿರಂತರ ಕಾಯಿಲೆ-ಕಸಾಲೆಯಿಂದ ಕೊಂಚವೂ ವಿಚಲಿತಗೊಳ್ಳದೆ ಪ್ರತಿದಿನವೂ ನೀಡುವ ಔಷಧಿ ಮತ್ತು ಕಷಾಯದ ಟಿಪ್ಪಣಿಗಳಂತಿವೆ. ಸಮಕಾಲೀನ ಕರ್ನಾಟಕಕ್ಕೆ, ಭಾರತಕ್ಕೆ, ಜಾಗತಿಕ ವಿದ್ಯಮಾನಗಳಿಗೆ ಗಾಂಧಿ-ಲೋಹಿಯಾ ವೈಚಾರಿಕತೆಯ ಚೌಕಟ್ಟಿನಲ್ಲಿ ಸಂವೇದನಾಶೀಲ ಬರಹಗಾರನೊಬ್ಬ ನೀಡಿದ ಕಳಕಳಿಯ ಪ್ರತಿಕ್ರಿಯೆಯಾಗಿ ಈ ಬರಹಗಳನ್ನು ಗಮನಿಸಬೇಕು.<br /><br />`ಇದು ಭಾರತ! ಇದು ಭಾರತ!!' ಎಂಬ ಬರಹದಲ್ಲಿ ನಾಗಭೂಷಣ ಸಮಕಾಲೀನ ಕರ್ನಾಟಕದ ಸಮಾಜದ ಬಹುಪಾಲು ವಿಸಂಗತಿಗಳನ್ನು ಕರಾರುವಾಕ್ಕಾಗಿ ನಮೂದಿಸುತ್ತಾರೆ. ಈ ಬರಹದಲ್ಲಿ ನಮೂದಿಸಿರುವ ವಿಸಂಗತಿಗಳ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ. ಇವೆಲ್ಲ ವಿಸಂಗತಿಯನ್ನು ಸೂಚಿಸುವುದರ ಜೊತೆಗೆ ಸದ್ಯದ ತಳಮಳ, ಬದಲಾವಣೆಯ ದಿಕ್ಕನ್ನು ಕೂಡ ಸೂಚಿಸುತ್ತದೆಂಬುದು ಮುಖ್ಯ. ಹೆಚ್ಚಾಗಿ ಸಾಮಾಜಿಕ-ರಾಜಕೀಯ ಜೀವನಕ್ಕೆ, ವಿದ್ಯಮಾನಗಳಿಗೆ ಪ್ರತಿಕ್ರಿಯಿಸುವುದೇ ನಾಗಭೂಷಣರ ಉದ್ದೇಶದಂತಿದೆ. ಇದು ಬರಹದ ವ್ಯಾಪ್ತಿಗೆ-ಹರವಿಗೆ ನಾಗಭೂಷಣ ಹಾಕಿಕೊಂಡಿರುವ ಚೌಕಟ್ಟು. ಆದರೆ ಅಂಕಣಕಾರನೊಬ್ಬ ಬದುಕಿನ ವೈವಿಧ್ಯಗಳಿಗೂ ಸ್ಪಂದಿಸಬೇಕಾಗುತ್ತದೆ. ಡಿವಿಜಿ, ಪಿ.ಲಂಕೇಶ್-ಇಂತಹವರ ಬರಹಗಳಲ್ಲಿ ಈ ವೈವಿಧ್ಯವನ್ನೂ ನಾವು ಕಾಣುತ್ತೇವೆ. ನಾಗಭೂಷಣ್ಗೆ ಇದು ಗೊತ್ತಿಲ್ಲವೆಂದಲ್ಲ. ಈ ಸಂಗ್ರಹದಲ್ಲಿಲ್ಲದ, ಆದರೆ ನಂತರದ ಪತ್ರಿಕೆಯ ಸಂಚಿಕೆಗಳಲ್ಲಿ ನಾಗಭೂಷಣರೇ ತಮ್ಮ ತಂದೆ ಮತ್ತು ಬೆಕ್ಕನ್ನು ಕುರಿತ ಬರಹಗಳಲ್ಲಿ ತೀರಾ ಸಾರ್ವಜನಿಕ ವಿಷಯಗಳಾಚೆಗೂ ಕೈಚಾಚುವುದನ್ನು ಕಾಣಬಹುದು. ಇಂತಹ ಬರಹಗಳು ಹೆಚ್ಚಾದಷ್ಟು ಓದುಗ ನಾಗಭೂಷಣರ ಸಾಮಾಜಿಕ-ರಾಜಕೀಯ ವಿಶ್ಲೇಷಣೆಯನ್ನು ಇನ್ನೂ ವಿಶ್ವಾಸದಿಂದ, ಸಾವಧಾನದಿಂದ ಗಮನಿಸುತ್ತಾನೆ. ಸ್ವತಃ ಲೋಹಿಯಾರ ಬರಹಗಳಲ್ಲಿರುವ ಸಾಂಸ್ಕೃತಿಕ ವೈವಿಧ್ಯ-ಶ್ರೀಮಂತಿಕೆ ಮತ್ತು ನಾಗಭೂಷಣ ಮೂಲಭೂತವಾಗಿ ವಿಜ್ಞಾನ-ಗಣಿತಶಾಸ್ತ್ರದ ಹಿನ್ನೆಲೆಯಿಂದ ಬಂದವರಾದ್ದರಿಂದ ಈ ಮಾತು.<br /><br />ಇಲ್ಲಿಯ ಬರಹಗಳನ್ನು ಓದುತ್ತಿದ್ದರೆ ನಾಗಭೂಷಣ ನಮ್ಮ ಸಮಕಾಲೀನ ಜೀವನದಲ್ಲಿ ನಿರಾಶೆ, ಹತಾಶೆ, ಕ್ಷುದ್ರತೆಗಳನ್ನು ಮಾತ್ರ ಗಮನಿಸುತ್ತಿರುವರೇನೋ ಎಂಬ ಭಾವ ಓದುಗರಲ್ಲಿ ಮೂಡಬಹುದು. ರಾಮದಾಸರನ್ನು ಕುರಿತ ಎರಡು ಬರಹಗಳು, ಬಿಹಾರದ ಕಾರ್ಮಿಕ-ಚಿಂತಕ ದಶರಥರನ್ನು ಕುರಿತ ಬರಹದಲ್ಲಿ ನಾಗಭೂಷಣ ಈ ಕಾಲದಲ್ಲಿ ನಿರೀಕ್ಷಿಸುವ ಕ್ರಿಯಾಶೀಲತೆಯ, ವ್ಯಕ್ತಿಚಾರಿತ್ರ್ಯದ ಸ್ವರೂಪದ ರೀತಿ ಯಾವುದಿರಬೇಕೆಂಬ ಸೂಚನೆ ನಮಗೆ ಸಿಗುತ್ತದೆ. ಇದೇ ರೀತಿಯ ಕ್ರಿಯಾಶೀಲತೆ-ಸಾಧನೆಯ ಸ್ವರೂಪವನ್ನು ನಾಗಭೂಷಣ, ಕ್ರೀಡೆ, ಉದ್ಯಮ, ಸಂಗೀತ, ವಿಜ್ಞಾನ ಕ್ಷೇತ್ರಗಳಲ್ಲೂ ಗುರುತಿಸುವುದಾದರೆ, ಎನ್.ಎಸ್.ಶಂಕರ್ ಹಿನ್ನುಡಿಯಲ್ಲಿ ಪರೋಕ್ಷವಾಗಿ ಸೂಚಿಸಿರುವಂತೆ ಓದುಗನ ವೈವಿಧ್ಯಮಯ ಭಾವಸ್ತರಗಳನ್ನು ಮೀಟಲು ಸಾಧ್ಯವಾಗಬಹುದು.<br /><br /><a onblur="try {parent.deselectBloggerImageGracefully();} catch(e) {}" href="http://3.bp.blogspot.com/_D9K0HARbkSE/SVNpDgX323I/AAAAAAAAACo/qEc9x125LdM/s1600-h/New+Picture+%282%29.bmp"><img style="margin: 0pt 0pt 10px 10px; float: right; cursor: pointer; width: 103px; height: 153px;" src="http://3.bp.blogspot.com/_D9K0HARbkSE/SVNpDgX323I/AAAAAAAAACo/qEc9x125LdM/s320/New+Picture+%282%29.bmp" alt="" id="BLOGGER_PHOTO_ID_5283682296786312050" border="0" /></a>ಬರಹದುದ್ದಕ್ಕೂ ನಾಗಭೂಷಣ ಸೂಚಿಸುವ ಔಷಧಿ-ಕಷಾಯ ಒಂದೇ ರೀತಿಯದು, ಸಮಾಜವಾದಿ ಹಿನ್ನೆಲೆಯದು ಎಂಬ ಕಾರಣಕ್ಕೆ ಬರವಣಿಗೆಯ ಮಹತ್ವ ಕಡಿಮೆಯಾಗುವುದಿಲ್ಲ. ಗಾಂಧಿ-ಲೋಹಿಯಾರ ನಿರ್ದಿಷ್ಟ ತಾತ್ವಿಕ ಹಿನ್ನೆಲೆಯಲ್ಲಿಯೇ ವಿಶ್ಲೇಷಣೆ ನಡೆಯುವುದರಿಂದ ಹೀಗನ್ನಿಸಬಹುದು. ಸೂಚನೆಗಳ ಪುನರಾವರ್ತನೆಯಿದೆ ಎನ್ನಿಸಬಹುದು. ಆದರೆ ತಾತ್ವಿಕ ನಿರ್ದಿಷ್ಟತೆಯನ್ನು ಭಿತ್ತಿಯಾಗಿಟ್ಟುಕೊಂಡ ಎಲ್ಲ ಬರಹಗಳಲ್ಲೂ ಈ ಮಿತಿ ಇದ್ದೇ ಇರುತ್ತದೆ. ಈ ಮಿತಿಯ ಹೊರತಾಗಿಯೂ ನಾವು ಈ ಬರಹಗಳಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಪುಸ್ತಕದುದ್ದಕ್ಕೂ ಸ್ಥಾಯಿಯಾಗಿರುವ ನೈತಿಕ ತೀವ್ರತೆ, ಸಾತ್ವಿಕ ಸಿಟ್ಟು ಮತ್ತು ಮನಸ್ಸಿನ ಆರ್ದ್ರತೆ.<br /><br />ಸಂವಾದ-ವಾಗ್ವಾದ ಸಂಸ್ಕೃತಿಯೆ ನಮ್ಮಲ್ಲಿ ಕ್ಷೀಣಿಸುತ್ತಿರುವುದನ್ನು ಖೇದದಿಂದ ಗುರುತಿಸುವ ನಾಗಭೂಷಣ ನೇರವಾಗಿಯೇ, ಆದರೆ ಪ್ರಚೋದಕವಾಗಿಯೇ ಬರೆಯುತ್ತಾರೆ. ತನ್ನ ವಿಚಾರ ಕುರಿತಂತೆ ಇನ್ನೊಬ್ಬರು ಎತ್ತುವ ಪ್ರಶ್ನೆಗಳನ್ನು ಕ್ಷುಲ್ಲಕವಾಗಿ ಪರಿಗಣಿಸದೆ ಉತ್ತರ, ಸ್ಪಷ್ಟನೆ ನೀಡುತ್ತಾರೆ. ಈ ಮನೋಭಾವ ಸುಪ್ರೀತ್ ಎಂಬ ಓದುಗರೊಬ್ಬರಿಗೆ ಹೆಚ್ಚಿನ ಓದಿಗೆ ಸೂಚನೆಗಳನ್ನು ಮಾತ್ರ ನೀಡುವುದಿಲ್ಲ, ತಾನು ಬರಹ ಮಾಡುತ್ತಿರುವ ಪತ್ರಿಕೆಯ ಸಂಪಾದಕರೊಡನೆ ಕೂಡ ಭಿನ್ನಮತವನ್ನು ಸೂಚಿಸುತ್ತದೆ. ಇದನ್ನು ಮೆಚ್ಚುತ್ತಲೇ ನಾಗಭೂಷಣ್ಗೆ ಇರುವ ಬುದ್ಧಿವಾದವನ್ನು ಮತ್ತೆ ಮತ್ತೆ ಹೇಳುತ್ತಲೇ ಹೋಗುವ ಪ್ರವೃತ್ತಿಯನ್ನು ಕೂಡ ಸೂಚಿಸಬೇಕು. ಪುಟ 97-99ರಲ್ಲಿ ಬಂಜಗೆರೆ ಜಯಪ್ರಕಾಶರಿಗೆ ಬರಹದುದ್ದಕ್ಕೂ ನೀಡುತ್ತಲೇ ಹೋಗುವ ಸೂಚನೆ-ಬುದ್ಧಿವಾದದಲ್ಲಿರುವ ಪುನರುಕ್ತಿಯನ್ನು ಓದುವಾಗ ಯಾರಿಗಾದರೂ ಬೇಸರವಾಗುತ್ತದೆ. ಬುದ್ಧಿವಾದ ಹೇಳುವುದು ಸಂವಾದ-ವಾಗ್ವಾದವನ್ನು ಬೆಳೆಸುವ ಸರಿಯಾದ ಕ್ರಮವಲ್ಲ.<br /><br />ನಾಗಭೂಷಣರ ಕಾಳಜಿಯ ಸ್ವರೂಪ ಮತ್ತು ಅಧ್ಯಯನದ ಹರವು ಅಂಕಣ ಬರಹದ ವ್ಯಾಪ್ತಿಯನ್ನು ಮೀರಿದ್ದು. ಇಂತಹ ಕಡೆ ನಾಗಭೂಷಣರ ಶಕ್ತಿ ಚೆನ್ನಾಗಿ ಗೊತ್ತಾಗುತ್ತದೆ. ಮುಖ್ಯವಾಗಿ ನಾಗಭೂಷಣ್ ಅಕಾಡೆಮಿಕ್ ಸ್ವಭಾವದವರಲ್ಲವಾದ್ದರಿಂದ ಒಂದು ವಿದ್ಯಮಾನ, ಒಂದು ವಿಚಾರ-ಇವೆಲ್ಲವೂ ಸಮಾಜ ಜೀವನದಲ್ಲಿ ಹೇಗೆ ವ್ಯಕ್ತವಾಗುತ್ತವೆ ಎಂಬುದನ್ನೇ ಗಮನಿಸುತ್ತಾರೆ. ಸಾಮಾಜಿಕ ಚಳುವಳಿಗಳನ್ನು ಕುರಿತಂತೆ ಹೇಳುವ `ಒಂದು ಚಳುವಳಿ ಸಾಮಾಜಿಕ ಚಳುವಳಿ ಅನ್ನಿಸಿಕೊಳ್ಳಬೇಕಾದರೆ ಅದು ಜಾತಿ-ವರ್ಗಗಳನ್ನು ಮೀರಿ ಇಡೀ ಸಮಾಜವನ್ನು ದೃಷ್ಟಿಯಲ್ಲಿರಿಸಿಕೊಂಡು ತನ್ನ ತಾತ್ವಿಕತೆಯನ್ನು ರೂಪಿಸಿಕೊಳ್ಳಬೇಕಾಗುತ್ತದೆ ಹಾಗೂ ಅದರ ಆಧಾರದ ಮೇಲೆ ತನ್ನ ಹೋರಾಟವನ್ನು ಕಟ್ಟಿಕೊಳ್ಳಬೇಕಾಗುತ್ತದೆ' (ಪು.19) ಮಾತಿನಲ್ಲಿ ಸದ್ಯದ ಎಲ್ಲ ಚಳುವಳಿಗಳ ಮಿತಿಗಳನ್ನು ಗುರುತಿಸುವ ನೋಟವಿದೆ, ನೋವಿದೆ.<br /><br />ಹೆಸರು ಹೇಳಿದರೆ ಸಾಕು. ಯಾರು ಏನು ಹೇಳುತ್ತಾರೆಂದು, ಬರೆಯುತ್ತಾರೆಂದು ಊಹಿಸಬಹುದು. ಈ ಹಿನ್ನೆಲೆಯಲ್ಲಿ ಈ ಸಂಪುಟದ ಉತ್ತಮ ಲೇಖನಗಳಲ್ಲೊಂದಾದ "ಬುದ್ಧ ಮತ್ತು ಹಿಂದೂ ಧರ್ಮ" ವನ್ನು ಗಮನಿಸಬೇಕು.<br /><br /><a onblur="try {parent.deselectBloggerImageGracefully();} catch(e) {}" href="http://2.bp.blogspot.com/_D9K0HARbkSE/SVNpRl8GXVI/AAAAAAAAACw/kpu1Z2yZlVM/s1600-h/New+Picture+%283%29.bmp"><img style="margin: 0pt 10px 10px 0pt; float: left; cursor: pointer; width: 175px; height: 146px;" src="http://2.bp.blogspot.com/_D9K0HARbkSE/SVNpRl8GXVI/AAAAAAAAACw/kpu1Z2yZlVM/s320/New+Picture+%283%29.bmp" alt="" id="BLOGGER_PHOTO_ID_5283682538798603602" border="0" /></a>ಇದೇ ಸ್ವರೂಪದ ಇನ್ನೆರಡು ಬರಹಗಳು: `ಮೈ ಮರೆತಂತಿರುವ ನಮ್ಮ ಸೆಕ್ಯುಲರ್ ರಾಜಕಾರಣ' ಮತ್ತು `ಹಿಂದೂ ಕೋಮುವಾದ ಮತ್ತು ಬುದ್ಧಿಜೀವಿಗಳ ಪೀಕಲಾಟ'. ಕೋಮುವಾದಿಗಳ ಹಿಂಸೆ ಮತ್ತು ದುರುದ್ದೇಶ ಮತ್ತು ಸೆಕ್ಯುಲರ್ವಾದಿಗಳ ಸೀಮಿತ ಸಾಂಸ್ಕೃತಿಕ ಗ್ರಹಿಕೆ ಎರಡನ್ನೂ ಒಟ್ಟಿಗೇ ತರಾಟೆಗೆ ತೆಗೆದುಕೊಳ್ಳುವ ಬರಹಗಳು ಇವು. ಈ ಬರಹಗಳಲ್ಲಿ ವ್ಯಕ್ತವಾಗಿರುವ ವಿಚಾರಗಳ ಹಿನ್ನೆಲೆಯಲ್ಲಿ ಧರ್ಮ-ಸಂಸ್ಕೃತಿ-ರಾಜಕಾರಣಕ್ಕಿರುವ -ಇರಲೇಬೇಕಾದ ಸಂಬಂಧ, ಒತ್ತಾಸೆಗಳನ್ನು ಕುರಿತು ಮುಕ್ತಮನಸ್ಸಿನ ಚರ್ಚೆ ನಡೆಯುವುದಾದರೆ ಮತಾಂತರ ಕುರಿತಂತೆ ಈವತ್ತು ನಡೆಯುತ್ತಿರುವ ರೂಕ್ಷ ಸಂವಾದಕ್ಕೆ ಹೊಸ ದಿಕ್ಕು ತೋರಿದಂತಾಗುತ್ತದೆ.<br /><br />ಸಂವಾದ ಪತ್ರಿಕೆ, ಆಕಾಶವಾಣಿಯಲ್ಲೆಲ್ಲ ಕ್ರಿಯಾಶೀಲರಾಗಿದ್ದಾಗ, ಸಾಹಿತ್ಯ ವಿಮರ್ಶೆ ನಾಗಭೂಷಣರ ಮುಕ್ತ ಆಸಕ್ತಿಗಳಲ್ಲೊಂದಾಗಿತ್ತು. ಇಲ್ಲಿಯ ಬರಹಗಳನ್ನು ಗಮನಿಸಿದರೆ ಅದು ಪ್ರಾಸಂಗಿಕವಾದಂತಿದೆ. ಈ ಬದಲಾವಣೆ ನಾಗಭೂಷಣರ ಬಗ್ಗೆಯೂ, ನಮ್ಮ ಸಾಂಸ್ಕೃತಿಕ ವಾತಾವರಣದ ಬಗ್ಗೆಯೂ ಏನನ್ನು ಹೇಳುತ್ತದೆ!?<br /><span style="font-weight: bold;">(</span><span style="font-weight: bold;">ವಾರಪತ್ರಿಕೆ</span><span style="font-weight: bold;"> `</span><span style="font-weight: bold;">ವಿಕ್ರಾಂತ</span><span style="font-weight: bold;"> </span><span style="font-weight: bold;">ಕರ್ನಾಟಕ</span><span style="font-weight: bold;">'</span><span style="font-weight: bold;">ದ</span><span style="font-weight: bold;"> </span><span style="font-weight: bold;">ಡಿಸೆಂಬರ್</span><span style="font-weight: bold;"> 26</span><span style="font-weight: bold;">ರ</span><span style="font-weight: bold;"> </span><span style="font-weight: bold;">ಸಂಚಿಕೆಯಲ್ಲಿ</span><span style="font-weight: bold;"> </span><span style="font-weight: bold;">ಪ್ರಕಟಿತ</span><span style="font-weight: bold;">. ಚಿತ್ರಗಳು ಪತ್ರಿಕೆಯ ಕೃಪೆ.)</span><br /><br /><span style="font-weight: bold;">ಇದು</span><span style="font-weight: bold;"> </span><span style="font-weight: bold;">ಭಾರತ</span><span style="font-weight: bold;">! </span><span style="font-weight: bold;">ಇದು</span><span style="font-weight: bold;"> </span><span style="font-weight: bold;">ಭಾರತ</span><span style="font-weight: bold;">!! (</span><span style="font-weight: bold;">ಸಮಾಜವಾದಿ</span><span style="font-weight: bold;"> </span><span style="font-weight: bold;">ಸಂಕಥನಗಳು</span><span style="font-weight: bold;">-2)</span><br /><span style="font-weight: bold;">ಲೇ</span><span style="font-weight: bold;">: </span><span style="font-weight: bold;">ಡಿ</span><span style="font-weight: bold;">.</span><span style="font-weight: bold;">ಎಸ್</span><span style="font-weight: bold;">.</span><span style="font-weight: bold;">ನಾಗಭೂಷಣ</span><br /><span style="font-weight: bold;">ಪುಟ</span><span style="font-weight: bold;">:296, </span><span style="font-weight: bold;">ಬೆಲೆ</span><span style="font-weight: bold;">:150 </span><span style="font-weight: bold;">ರೂ</span><span style="font-weight: bold;">.</span><br /><span style="font-weight: bold;">ಪ್ರ</span><span style="font-weight: bold;">: </span><span style="font-weight: bold;">ರೂಪ</span><span style="font-weight: bold;"> </span><span style="font-weight: bold;">ಪ್ರಕಾಶನ</span><span style="font-weight: bold;">, </span><span style="font-weight: bold;">ಮೈಸೂರು</span>ಕೆ. ಸತ್ಯನಾರಾಯಣhttp://www.blogger.com/profile/15167030166766836381noreply@blogger.com0tag:blogger.com,1999:blog-1964049159346480323.post-88580373631419113302008-11-30T03:58:00.000-08:002008-11-30T04:13:18.991-08:00ಇವಾನ್ ಇಲಿಚ್ ಮತ್ತು ಮಂತ್ರೋದಯ - ಒಂದು ಜೊತೆ ಓದು<a onblur="try {parent.deselectBloggerImageGracefully();} catch(e) {}" href="http://1.bp.blogspot.com/_D9K0HARbkSE/STKBoruekzI/AAAAAAAAACQ/Rl8OFq44wzU/s1600-h/New+Picture+%282%29.bmp"><img style="margin: 0pt 10px 10px 0pt; float: left; cursor: pointer; width: 152px; height: 171px;" src="http://1.bp.blogspot.com/_D9K0HARbkSE/STKBoruekzI/AAAAAAAAACQ/Rl8OFq44wzU/s320/New+Picture+%282%29.bmp" alt="" id="BLOGGER_PHOTO_ID_5274420649536688946" border="0" /></a><span>ನಮಗೆ</span> <span>ಗೊತ್ತಿಲ್ಲದೆ</span> <span>ನಾವು</span> <span>ಕೆಲವು</span> <span>ಕತೆಗಳನ್ನು</span> <span>ಒಟ್ಟಿಗೇ</span> <span>ಓದುತ್ತಿರುತ್ತೇವೆ</span>. <span>ಮಾಸ್ತಿಯವರ</span> <span style="font-weight: bold;">ಮಂತ್ರೋದಯ</span><span style="font-weight: bold;"> </span><span>ಮತ್ತು</span> <span>ಟಾಲ್</span><span>ಸ್ಟಾಯ್</span><span>ರ</span> <span style="font-weight: bold;">Death of Ivan Ilyich </span><span>ಕತೆಗಳನ್ನು</span> <span>ನಾನು</span> <span>ಹೀಗೇ</span> <span>ಬಹಳ</span> <span>ವರ್ಷಗಳಿಂದ</span> <span>ಒಟ್ಟೋಟ್ಟಿಗೇ</span> <span>ಓದಿಕೊಂಡು</span> <span>ಬಂದಿದ್ದೇನೆ</span>. <span>ಸ್ನೇಹಿತರಿಗೂ</span> <span>ಓದಲು</span> <span>ಸೂಚಿಸುತ್ತಿರುತ್ತೇನೆ</span>. <span>ಕನ್ನಡ</span> <span>ಬಾರದ</span> <span>ಗೆಳೆಯರಿಗೆ</span> <span>ಮಾಸ್ತಿಯವರ</span> <span>ಕತೆಯ</span> <span>ಸಾರಾಂಶ</span> <span>ಮತ್ತು</span> <span>ದರ್ಶನವನ್ನು</span> <span>ನಾನೇ</span> <span>ಹೇಳುತ್ತೇನೆ</span>. <span>ಕಾಲಾಂತರದಲ್ಲಿ</span> <span>ಕೂಡ</span> <span>ನನಗೆ</span> <span>ಈ</span> <span>ಎರಡು</span> <span>ಕತೆಗಳ</span> <span>ಜೊತೆ</span> <span>ಓದಿನಲ್ಲಿ</span> <span>ಶ್ರದ್ಧೆ</span>-<span>ಆಸಕ್ತಿ</span> <span>ಕಡಿಮೆಯಾಗಿಲ್ಲ</span>. <span>ಈ</span> <span>ಅನುಭವವನ್ನು</span> <span>ಓದುಗರೊಂದಿಗೆ</span> <span>ಹಂಚಿಕೊಳ್ಳುವುದು</span> <span>ಈ</span> <span>ಟಿಪ್ಪಣಿಗಳ</span> <span>ಉದ್ದೇಶ</span>. <span>ಇವೆರಡು</span> <span>ಕತೆಗಳನ್ನು</span> <span>ಹೋಲಿಸುವ</span>, <span>ಮೌಲ್ಯಮಾಪನ</span> <span>ಮಾಡುವ</span> <span>ವಿಮರ್ಶಾತ್ಮಕ</span> <span>ಉದ್ದೇಶ</span> <span>ನನ್ನದಲ್ಲವೆಂದು</span> <span>ಮೊದಲೇ</span> <span>ಸ್ಪಷ್ಟಪಡಿಸಿಬಿಡುತ್ತೇನೆ</span>.<br /><br /><span>ಕನ್ನಡದ</span> <span>ಓದು</span> <span>ಬಹಳ</span> <span>ವರ್ಷಗಳಿಂದ</span> <span>ಟಾಲ್</span><span>ಸ್ಟಾಯ್</span><span>ನನ್ನ</span> <span>ಸಂಸ್ಕೃತಿಯ</span> <span>ಒಳಗಿನವನನ್ನಾಗಿಯೇ</span> <span>ಸ್ವೀಕರಿಸಿದ</span>. <span>ಈ</span> <span>ಸ್ವೀಕಾರ</span> 1934<span>ರಲ್ಲಿ</span> <span>ಎಲ್</span>.<span>ಗುಂಡಪ್ಪನವರ</span> <span>ಟಾಲ್</span><span>ಸ್ಟಾಯ್</span> <span>ಕಥೆಗಳ</span> <span>ಕನ್ನಡಾನುವಾದದಿಂದ</span> <span>ಪ್ರಾರಂಭವಾಗುತ್ತದೆ</span>. <span>ಕುವೆಂಪು</span> <span>ಮಹಾ</span> <span>ಕಾದಂಬರಿಗಳ</span> <span>ಸ್ವರೂಪದ</span> <span>ಹಿಂದೆ</span> <span>ಟಾಲ್</span><span>ಸ್ಟಾಯ್</span> <span>ಎರಡೂ</span> <span>ಕಾದಂಬರಿಗಳ</span> <span>ಸ್ವರೂಪದ</span> <span>ಪ್ರಭಾವವಿದೆ</span>. <span>ಕುವೆಂಪುವಿನಲ್ಲಿ</span> <span>ಕಾಣುವ</span> <span>ಬೇಟೆ</span> <span>ಪ್ರಸಂಗಗಳು</span>, <span>ಮಗುವಿಗೆ</span> <span>ಮೊಲೆಯ</span> <span>ಹಾಲೂಡಿಸುವ</span> <span>ಪ್ರಸಂಗಗಳು</span> <span>ಟಾಲ್</span><span>ಸ್ಟಾಯ್</span> <span>ಕಾದಂಬರಿಗಳಲ್ಲೂ</span> <span>ಇವೆ</span>. <span>ಮಾಸ್ತಿ</span> <span>ತಮ್ಮ</span> <span>ಚಿಕವೀರ</span> <span>ರಾಜೇಂದ್ರ</span> <span>ಕಾದಂಬರಿ</span> <span>ಬರವಣಿಗೆಯ</span> <span>ಗುಣಮಟ್ಟದ</span> <span>ದೃಷ್ಟಿಯಿಂದ</span> <span>ಟಾಲ್</span><span>ಸ್ಟಾಯ್</span><span>ನ</span> War and Peace<span>ಗಿಂತ</span> <span>ಉತ್ತಮವೆಂದು</span> <span>ನಂಬಿದ್ದರು</span>. "<span>ಟಾಲ್</span><span>ಸ್ಟಾಯ್</span> <span>ಮಹರ್ಷಿಯ</span> <span>ಭೂರ್ಜ</span> <span>ವೃಕ್ಷಗಳು</span>" <span>ಎಂಬ</span> <span>ಪ್ರಸಿದ್ಧ</span> <span>ಕತೆಯೂ</span> <span>ಇದೆ</span>. <span>ಭೀಮಸೇನ</span> <span>ಜೋಶಿಯವರ</span> <span>ತಂದೆ</span> <span>ಗುರುರಾಜ</span> <span>ಜೋಶಿಯವರು</span> "Anna Karenina" <span>ಕಾದಂಬರಿಯನ್ನು</span> "<span>ಪ್ರೇಮಾಹುತಿ</span>" <span>ಎಂದು</span> <span>ಕನ್ನಡೀಕರಿಸಿದ್ದರು</span>. <span>ಕುವೆಂಪು</span> - <span>ಸೂಚನೆ</span> - <span>ಮಾರ್ಗದರ್ಶನದ</span> <span>ಮೇಲೆ</span> <span>ದೇಜಗೌ</span> <span>ಟಾಲ್</span><span>ಸ್ಟಾಯ್</span><span>ರ</span> <span>ಎರಡೂ</span> <span>ಕಾದಂಬರಿಗಳನ್ನು</span> <span>ಕುವೆಂಪು</span> <span>ನುಡಿಗಟ್ಟಿನಲ್ಲೇ</span> <span>ಅನುವಾದಿಸಿದರು</span>. <span>ಟಿ</span>.<span>ಪಿ</span>. <span>ಅಶೋಕ</span> "<span>ಫಾದರ್</span> <span>ಸೆರ್ಗಿಯಸ್</span>", <span>ಜಿ</span>.<span>ಎನ್</span>.<span>ರಂಗನಾಥರಾವ್</span> <span>ಟಾಲ್</span><span>ಸ್ಟಾಯ್</span> <span>ನೀಳ್ಗತೆಗಳು</span>, <span>ಓ</span>.<span>ಎಲ್</span>.<span>ನಾಗಭೂಷಣಸ್ವಾಮಿ</span> - <span>ಟಾಲ್</span><span>ಸ್ಟಾಯ್</span> <span>ನೀಳ್ಗತೆಗಳು</span> - <span>ಹೀಗೇ</span> <span>ಈ</span> <span>ಪರಂಪರೆ</span> <span>ಮುಂದುವರೆಯುತ್ತಲೇ</span> <span>ಇದೆ</span>. <span>ಓ</span>.<span>ಎಲ್</span>.<span>ಎನ್</span>. War and Peace <span>ಅನುವಾದ</span> <span>ಮುಗಿಸಿದ್ದರೆ</span>, <span>ಎಚ್</span>.<span>ಎಸ್</span>.<span>ರಾಘವೇಂದ್ರರಾವ್</span> "Anna Karenina"<span>ದ</span> <span>ಅನುವಾದವನ್ನು</span> <span>ಮುಗಿಸುತ್ತಿದ್ದಾರೆ</span>. <span>ಪಿ</span>.<span>ಲಂಕೇಶ್</span> <span>ಕೆಲವು</span> <span>ಕತೆಗಳನ್ನು</span> <span>ರೂಪಾಂತರಿಸಿದ್ದಾರೆ</span>. <span>ಬಹು</span> <span>ಹಿಂದೆಯೇ</span> <span>ಕತೆಗಾರ</span> <span>ಆನಂದರು</span> <span>ಟಾಲ್</span><span>ಸ್ಟಾಯ್</span><span>ನ</span> <span>ಆತ್ಮಕತೆಯನ್ನು</span> <span>ಕನ್ನಡಕ್ಕೆ</span> <span>ತಂದಿದ್ದರು</span>. <span>ಈ</span> <span>ಎಲ್ಲ</span> <span>ಬರವಣಿಗೆಗಳಿಂದಾಗಿಯೂ</span> <span>ಟಾಲ್</span><span>ಸ್ಟಾಯ್</span><span>ನ</span> <span>ಪ್ರಸಿದ್ಧ</span> <span>ಕತೆಯನ್ನು</span> <span>ಮಾಸ್ತಿಯವರ</span> <span>ಕತೆಯೊಡನೆ</span> <span>ಒಟ್ಟಾಗಿ</span> <span>ಓದಲು</span> <span>ನನಗೆ</span> <span>ಪ್ರೇರಣೆ</span> <span>ಸಿಕ್ಕಿರಬಹುದು</span>.<br /><br /><span>ಎರಡೂ</span> <span>ಕತೆಗಳು</span> <span>ಸಾವನ್ನು</span> <span>ಕುರಿತದ್ದೇ</span>. <span>ಆ</span> <span>ಕಾರಣಕ್ಕೇ</span> <span>ಬದುಕನ್ನು</span> <span>ಕುರಿತದ್ದು</span> <span>ಕೂಡ</span>. <span>ಸಾವನ್ನು</span> <span>ಒಪ್ಪಿಕೊಳ್ಳುವ</span>, <span>ಗೆಲ್ಲುವ</span>, <span>ವಿವರಿಸಿಕೊಳ್ಳುವ</span> <span>ಪ್ರಯತ್ನದಲ್ಲಿ</span> <span>ಎರಡು</span> <span>ಕತೆಗಳಲ್ಲಿ</span> <span>ಬದುಕನ್ನು</span> <span>ಕುರಿತ</span> <span>ದರ್ಶನವಿದೆ</span>. <span>ಹೀಗಾಗಿ</span> <span>ಇವುಗಳ</span> <span>ಜೊತೆ</span> <span>ಓದು</span> <span>ತಪ್ಪಿಲ್ಲದೆ</span> <span>ಇರಬಹುದೆಂದು</span> <span>ನನ್ನ</span> <span>ಭಾವನೆ</span>.<br /><br /><span>ಇವಾನ್</span> <span>ಇಲಿಚ್</span> <span>ಕತೆಯನ್ನು</span> <span>ಟಾಲ್</span><span>ಸ್ಟಾಯ್</span> 1884-1886<span>ರ</span> <span>ಕಾಲಾವಧಿಯಲ್ಲಿ</span> <span>ಬರೆದರು</span>. <span>ಈ</span> <span>ಹೊತ್ತಿಗಾಗಲೇ</span> <span>ಇವರ</span> <span>ಎರಡು</span> <span>ಮಹಾ</span> <span>ಕಾದಂಬರಿಗಳು</span> <span>ಪ್ರಕಟವಾಗಿದ್ದವು</span>. Anna <span>ಕಾದಂಬರಿ</span> <span>ಬರೆದ</span> <span>ಏಳೆಂಟು</span> <span>ವರ್ಷಗಳ</span> <span>ನಂತರವೂ</span> <span>ಅವರು</span> <span>ಮತ್ತೆ</span> <span>ಸೃಜನಶೀಲ</span> <span>ಕಾದಂಬರಿ</span> <span>ರಚನೆಗೆ</span> <span>ಕೈಹಾಕಿರಲಿಲ್ಲ</span>. <span>ಮೇಲಾಗಿ</span> <span>ಟಾಲ್</span><span>ಸ್ಟಾಯ್</span> <span>ತಮ್ಮ</span> <span>ಬದುಕಿನ</span> <span>ಈ</span> <span>ಘಟ್ಟದಲ್ಲಿ</span> <span>ಸಾಹಿತ್ಯ</span> - <span>ಕಲೆಯ</span> <span>ಉದ್ದೇಶಗಳ</span> <span>ಕುರಿತಂತೆ</span> <span>ಬೇರೆಯೆ</span> <span>ರೀತಿಯಲ್ಲಿ</span> <span>ಯೋಚಿಸುತ್ತಿದ್ದರು</span>. <span>ಜೀವನದಲ್ಲಿ</span> <span>ಧರ್ಮ</span>, <span>ನೀತಿ</span>, <span>ಪ್ರೀತಿ</span>, <span>ದೈವಿಕತೆ</span> <span>ಇವುಗಳ</span> <span>ಸ್ಥಾನಮಾನವನ್ನು</span> <span>ಕುರಿತು</span> <span>ಚರ್ಚಿಸುವಂತಹ</span> <span>ನೀತಿ</span>-<span>ಧಾರ್ಮಿಕ</span> <span>ಕತೆಗಳು</span>, <span>ಲೇಖನಗಳ</span> <span>ಕಡೆಗೇ</span> <span>ಹೆಚ್ಚಾಗುತ್ತಿತ್ತು</span>. <span>ಆತ್ಮ</span> <span>ಜಿಜ್ಞಾಸೆ</span>, <span>ಒಳತೋಟಿ</span>, <span>ಆತ್ಮಪರೀಕ್ಷೆಗಳು</span> <span>ತೀವ್ರವಾಗಿದ್ದ</span> <span>ಬದುಕಿನ</span> <span>ಸಂದರ್ಭದಲ್ಲಿ</span> <span>ತನ್ನ</span> <span>ಜೀವನದ</span> <span>ಪರಮೋದ್ದೇಶವೇನು</span>, <span>ತನ್ನ</span> <span>ಜೀವನ</span> <span>ಸಾರ್ಥಕವಾಗಿದೆಯೇ</span> <span>ಇಲ್ಲವೇ</span> <span>ಎಂಬ</span> <span>ತಹತಹದಲ್ಲಿ</span> <span>ಬರೆದ</span> <span>ಘಟ್ಟದ</span> <span>ನೀಳ್ಗತೆಯಲ್ಲಿ</span> <span>ಮುಖ್ಯವಾದದ್ದು</span> - <span>ಇವಾನ್</span> <span>ಇಲಿಚ್</span>.<br /><br /><span>ಸಾಮಾಜಿಕವಾಗಿ</span>, <span>ಸಾಂಸಾರಿಕವಾಗಿ</span> <span>ಯಶಸ್ಸನ್ನು</span> <span>ಕಂಡಿದ್ದೇನೆಂದು</span> <span>ಭಾವಿಸಿದ್ದ</span> <span>ನ್ಯಾಯಾಂಗ</span> <span>ಇಲಾಖೆಯ</span> <span>ಅಧಿಕಾರಿಯೊಬ್ಬನ</span> <span>ಕೊನೆಯ</span> <span>ದಿನಗಳ</span> <span>ಕತೆ</span> <span>ಇಲಿಚ್</span>. <span>ಒಟ್ಟಾರೆಯಾಗಿ</span> <span>ಇಲಿಚ್</span><span>ನ</span> <span>ಜೀವನ</span> <span>ವಿಫಲವಾಗಿತ್ತೆಂಬ</span> <span>ಧ್ವನಿಯಿಂದಲೇ</span> <span>ಕತೆ</span> <span>ಪ್ರಾರಂಭವಾಗುತ್ತದೆ</span>. Appalling <span>ಎಂಬ</span> <span>ಪದದಿಂದಲೇ</span> <span>ಕತೆ</span> <span>ಪ್ರಾರಂಭ</span>. <span>ಈ</span> <span>ಪದ</span> <span>ಈ</span> <span>ಕತೆಯಲ್ಲು</span> Father Sergius <span>ಕತೆಯಲ್ಲು</span> <span>ಮತ್ತೆ</span> <span>ಮತ್ತೆ</span> <span>ಎದುರಾಗುತ್ತದೆ</span>. <span>ಈ</span> <span>ಪದದ</span> <span>ಅರ್ಥವನ್ನು</span> <span>ಮೂಡಿಸುವಂತಹ</span> Befell, Dismal, Aggravated <span>ಇಂತಹ</span> <span>ಪದಗಳು</span> <span>ಕತೆಯುದ್ದಕ್ಕೂ</span> <span>ಎದುರಾಗುತ್ತವೆ</span>. <span>ಇಂತಹ</span> <span>ಪದಗಳಿಂದ</span> <span>ಮಾತ್ರ</span> <span>ವರ್ಣಿಸಲು</span> <span>ಸಾಧ್ಯವಿರುವ</span> <span>ಜೀವನ</span> <span>ನಡೆಸಿರುವ</span> <span>ಇಲಿಚ್</span> <span>ತನ್ನ</span> <span>ದೇಹದ</span> <span>ಮಿತಿಯನ್ನು</span>, <span>ಕಾಯಿಲೆಯನ್ನು</span>, <span>ರೋಗರುಜಿನವನ್ನು</span> <span>ಕೂಡ</span> <span>ಪ್ರಾಮಾಣಿಕವಾಗಿ</span> <span>ಒಪ್ಪಲಾರ</span>, <span>ಎದುರಿಸಲಾರ</span>. <span>ತನ್ನ</span> <span>ದೇಹ</span>, <span>ತನ್ನ</span> <span>ರೋಗದ</span> <span>ಬಗ್ಗೆ</span> <span>ಕೂಡ</span> <span>ಆತನದು</span> <span>ಭಯಭೀತ</span>, <span>ಭ್ರಮಾದಿತ</span> <span>ಸ್ಥಿತಿ</span>. <span>ಸೋರಿಹೋಗುತ್ತಿರುವ</span> <span>ಜೀವನ</span>, <span>ಆರಿಹೋಗುತ್ತಿರುವ</span> <span>ಸಾಂಸಾರಿಕ</span>-<span>ಸಾಮಾಜಿಕ</span> <span>ಸಂಬಂಧಗಳನ್ನು</span> <span>ಕಂಡು</span>, <span>ತಿಳಿದು</span> <span>ಕೂಡ</span> <span>ಆತ</span> <span>ಭಯಭೀತ</span>. <span>ಸಾವಿನ</span> <span>ಭಯವಿದೆ</span> <span>ಆತನಿಗೆ</span>. <span>ಆದರೆ</span> <span>ಮೃತ್ಯುಪ್ರಜ್ಞೆಯ</span> <span>ಅರಿವಿನಿಂದ</span> <span>ಮೂಡಿಬರುವ</span> <span>ತಿಳುವಳಿಕೆ</span>, <span>ಸಮಾಧನವಿಲ್ಲ</span>. <span>ಇಡೀ</span> <span>ಬದುಕೆ</span> `<span>ನಿಜ</span>'<span>ದಿಂದ</span> <span>ದೂರ</span> <span>ಬಂದು</span> <span>ನಡೆಸಿದ</span> <span>ಘಟನಾವಳಿಗಳ</span> <span>ಸರಮಾಲೆಯಾಗಿ</span> <span>ಕಾಣುತ್ತದೆ</span>. <span>ಬಾಲ್ಯಜೀವನದ</span> <span>ದಿನಗಳು</span>, <span>ಸಂಬಂಧಗಳು</span> <span>ಮಾತ್ರ</span> <span>ನಿಜವಾಗಿದ್ದವು</span> <span>ಎನಿಸುತ್ತದೆ</span>. <span>ಟಾಲ್</span><span>ಸ್ಟಾಯ್</span> <span>ಪ್ರಕಾರ</span> <span>ಇದಕ್ಕೆಲ್ಲ</span> <span>ಇಲಿಚ್</span><span>ನ</span> <span>ಜೀವನ</span> <span>ಶೈಲಿಯ</span> <span>ಜೊತೆಗೆ</span> <span>ಆತನಲ್ಲಿ</span> <span>ದೈವದ</span> <span>ಅಸ್ತಿತ್ವದಲ್ಲಿ</span> <span>ನಂಬುಗೆ</span> <span>ಇಲ್ಲದೆ</span> <span>ಹೋದದ್ದು</span> <span>ಕೂಡ</span> <span>ಕಾರಣ</span>. <span>ಇದಕ್ಕಿಂತ</span> <span>ಮುಖ್ಯವಾಗಿ</span> <span>ಇಲಿಚ್</span> <span>ಬದುಕಿನುದ್ದಕ್ಕು</span> <span>ಮಾತಿನ</span> <span>ಧ್ವನಿ</span> (Voice of Speaking)<span>ಯನ್ನ</span> <span>ಕೇಳಿಸಿಕೊಳ್ಳುತ್ತಾ</span> <span>ಬಂದವನು</span>, <span>ಆತ್ಮದ</span> <span>ಧ್ವನಿ</span> (Voice of Soul)<span>ಯನ್ನಲ್ಲ</span>. <span>ಇಂತಹ</span> <span>ಇಲಿಚ್</span> <span>ನಿಜದಿಂದ</span> <span>ದೂರಾಗಿ</span> <span>ತಾನು</span> <span>ನಡೆಸಿದ</span> <span>ತನ್ನ</span> <span>ಜೀವನದ</span> <span>ಬಗ್ಗೆ</span> <span>ನಿಜವನ್ನು</span> <span>ತಿಳಿದುಕೊಳ್ಳುವುದು</span>, <span>ಒಪ್ಪಿಕೊಳ್ಳುವುದು</span>, <span>ಸಾವನ್ನು</span> <span>ಕೂಡ</span> <span>ಸಾವಿನ</span> <span>ಭಯದಿಂದ</span> <span>ಗೆಲ್ಲುವುದು</span> - <span>ಈ</span> <span>ದಿಕ್ಕಿನಲ್ಲಿ</span> <span>ನಡೆಸಿದ</span> <span>ಪಯಣವನ್ನು</span> <span>ಕತೆ</span> <span>ನಮ್ಮದೆ</span> <span>ಪಯಣವೆನ್ನುವಂತೆ</span> <span>ನಮಗೆ</span> <span>ಸಾಕ್ಷಾತ್ಕಾರ</span> <span>ಮಾಡಿಕೊಡುತ್ತದೆ</span>. <span>ಸಾರ್ಥಕ</span> <span>ಜೀವನವೆಂದರೇನು</span> <span>ಎಂಬುದರ</span> <span>ಕಲ್ಪನೆ</span>, <span>ವಿಫಲ</span> <span>ಜೀವನದ</span> <span>ಚಿತ್ರಣವನ್ನು</span> <span>ಓದುವುದರ</span> <span>ಮೂಲಕ</span> <span>ನಮಗೆ</span> <span>ತಿಳಿಯುತ್ತದೆ</span>. <span>ತನ್ನ</span> <span>ಒಳತೋಟಿಯನ್ನು</span> <span>ಬರವಣಿಗೆಯನ್ನಾಗಿ</span> <span>ಪರಿವರ್ತಿಸುತ್ತಿದ್ದ</span> <span>ಟಾಲ್</span><span>ಸ್ಟಾಯ್</span> <span>ಈ</span> <span>ಕತೆಯ</span> <span>ನಂತರ</span> <span>ಬರೆದ</span> <span>ಕತೆ</span> <span>ಬರವಣಿಗೆಗಳಲ್ಲೆಲ್ಲ</span> <span>ಜೀವನದ</span> <span>ಸಾರ್ಥಕತೆಯ</span> <span>ಬಗ್ಗೆ</span> <span>ಜಿಜ್ಞಾಸೆ</span> <span>ಮುಂದುವರಿಯುತ್ತದೆ</span>. <span>ಒಟ್ಟಾರೆಯಾಗಿ</span> <span>ಆತನ</span> <span>ನಿಲುವು</span> <span>ನೀತಿಪರ</span>-<span>ಧಾರ್ಮಿಕ</span> <span>ಬರವಣಿಗೆ</span>, <span>ಸಸ್ಯಾಹಾರ</span>, <span>ಅಹಿಂಸೆ</span>, <span>ರಾಜ್ಯಾಧಿಕಾರವನ್ನು</span> <span>ವಿರೋಧಿಸುವುದು</span> - <span>ಈ</span> <span>ದಿಕ್ಕಿನಲ್ಲೇ</span> <span>ಸಾಗುತ್ತದೆ</span>. <span>ಮೊದಲೇ</span> <span>ಹೇಳಿದ</span> <span>ಹಾಗೆ</span> Anna <span>ಕಾದಂಬರಿ</span> <span>ಬರೆದ</span> <span>ಏಳೆಂಟು</span> <span>ವರ್ಷಗಳ</span> <span>ನಂತರ</span> <span>ಬರೆದ</span> <span>ನೀಳ್ಗತೆ</span> <span>ಇದು</span>. <span>ಈ</span> <span>ಕಾಲಾವಧಿಯಲ್ಲಿ</span> <span>ತತ್ವಶಾಸ್ತ್ರವನ್ನು</span> <span>ಬಹಳವಾಗಿ</span> <span>ಓದುತ್ತಿದ್ದ</span> <span>ಟಾಲ್</span><span>ಸ್ಟಾಯ್</span><span>ನ</span> <span>ದಿನಚರಿಯ</span> <span>ನೆರವಿನಿಂದ</span> <span>ಕೆಲವು</span> <span>ಉಲ್ಲೇಖಗಳನ್ನು</span>, <span>ಟಾಲ್</span><span>ಸ್ಟಾಯ್</span><span>ನ</span> <span>ಜೀವನ</span> <span>ಚರಿತ್ರಕಾರರು</span> <span>ಗುರುತಿಸಿದ್ದಾರೆ</span>. <span>ಇಲಿಚ್</span> <span>ಕತೆಯ</span> <span>ಹಿಂದಿರುವ</span> <span>ಒಳತೋಟಿಯನ್ನು</span> <span>ಸ್ಪಷ್ಟ</span> <span>ಮಾಡಿಕೊಳ್ಳಲು</span> <span>ಇವು</span> <span>ನೆರವಾಗುವುದರಿಂದ</span> <span>ಕೆಲವನ್ನು</span> <span>ಇಲ್ಲಿ</span> <span>ಸೂಚಿಸುತ್ತಿದ್ದೇನೆ</span>.<br /><br /><span style="font-style: italic;">The life of body is an Evil and lie. And that is why we should desire its destruction as a blessiing.</span><br /><div style="text-align: right;"><span style="font-style: italic; font-weight: bold;">- Socrates</span><br /></div><span style="font-style: italic;">Man will die and nothing will remain of him</span><br /><div style="text-align: right;"><span style="font-style: italic; font-weight: bold;">-Solomon</span><br /></div><span style="font-style: italic;">We must free ourselves from life, from all possibilities of life</span><br /><div style="text-align: right;"><span style="font-style: italic; font-weight: bold;">-Buddha</span><br /></div><br />ಮಾಸ್ತಿಯವರ "ಮಂತ್ರೋದಯ" ಕತೆ ಈಶಾವ್ಯಾಸ ಉಪನಿಷತ್ನ ರಚನೆಗೆ ಕಾರಣನಾದ ವಾಮದೇವ ದ್ವೈಪಾಯನನ ಜೀವನ ಶೈಲಿ-ದರ್ಶನವನ್ನು ಕುರಿತದ್ದು. ಕತೆಯ ಶೀರ್ಷಿಕೆಯ ಜೊತೆಯೇ ಆವರಣದಲ್ಲಿ "ಕರ್ಮಯೋಗದ ಕೊನೆಯ ದಿನ" ಎಂದು ಸೂಚಿಸಲಾಗಿದೆ. ಕತೆಯ ಮೊದಲ ವಾಕ್ಯವೇ ಹೀಗಿದೆ.<br /><br />"ಮಹರ್ಷಿ ವಾಮದೇವ ದ್ವೈಪಾಯನ ಅರುಣೇಯ ಆ ದಿನ ನೂರು ವರ್ಷದ <span style="font-weight: bold;">ಬಾಳನ್ನು ಪೂರ್ಣ</span> ಮಾಡುವರೆಂದು"<br /><br /><a onblur="try {parent.deselectBloggerImageGracefully();} catch(e) {}" href="http://3.bp.blogspot.com/_D9K0HARbkSE/STKB-5vjpeI/AAAAAAAAACY/Zf3N22xI5iA/s1600-h/mAsti-new.bmp"><img style="margin: 0pt 0pt 10px 10px; float: right; cursor: pointer; width: 132px; height: 202px;" src="http://3.bp.blogspot.com/_D9K0HARbkSE/STKB-5vjpeI/AAAAAAAAACY/Zf3N22xI5iA/s320/mAsti-new.bmp" alt="" id="BLOGGER_PHOTO_ID_5274421031256434146" border="0" /></a>ಸೇವೆ, ತ್ಯಾಗ, ಆತ್ಮಜ್ಞಾನ, ಪ್ರಕೃತಿಯೊಡನೆ ತಾದ್ಯಾತ್ಮ-ಇದೆಲ್ಲವನ್ನು ತುಂಬಿಕೊಂಡವನು ಜೀವನವನ್ನು, ಹಾಗಾಗಿ ಸಾವನ್ನೂ ಹೀಗೆ ಸ್ವೀಕರಿಸುತ್ತಾನೆಯೆಂಬುದು ಕತೆಯ ತಿರುಳು. ಈ ಕತೆಯಲ್ಲಿ ಬರುವ ಪ್ರಕೃತಿಯ ಉಲ್ಲಾಸ ತುಂಬಿದ ವಿವರಗಳಾಗಲೀ, ಸಸ್ಯಲೋಕದ, ಸಣ್ಣ ಪುಟ್ಟ ಪ್ರಾಣಿಗಳ ವಿವರಗಳಾಗಲೀ ಆತ್ಮ ಜಿಜ್ಞಾಸೆಯಿಂದ ತುಂಬಿದ ಇಲಿಚ್ ಕತೆಯಲ್ಲಿ ಇಲ್ಲವೆಂಬುದನ್ನು ಗಮನಿಸಬೇಕು. ಸೂರ್ಯ, ಚಂದ್ರರು ಕೂಡ ಈ ಕತೆಯ ಭಾಗ. ತುಂಬಿದ ಸಾರ್ಥಕ ಜೀವನ ನಡೆಸಿದ ದ್ವೈಪಾಯನಿಗೆ ಸಾವಿನ ಭಯವೇ ಇಲ್ಲ. ತಾನು ಕಂಡದ್ದನ್ನೂ, ಬದುಕಿದ್ದನ್ನೂ ಸ್ಮರಿಸುತ್ತಲೇ ಜೀವನದ ಕೊನೆಯನ್ನು ಒಪ್ಪುವ ಈ ದರ್ಶನದಲ್ಲಿ ದ್ವೈಪಾಯನನ ಕೊನೆ ಕೊನೆಯ ಮಾತುಗಳು ಹೀಗಿವೆ.<br /><br />"ಕೃತುವನ್ನು ಸ್ಮರಿಸು, ಕೃತವನ್ನು <span>ಸ್ಮರಿಸು</span>, ಧ್ಯೇಯವನ್ನು ಸ್ಮರಿಸು. ಸಾಧಿಸಿದ್ದನ್ನು ಸ್ಮರಿಸು"<br /><br />"ಕೃತು ಯಾವುದು"<br /><br />"ನೆಲವೆಲ್ಲ ನಂದನವನವಾಗಬೇಕು, ಇದರಂತೆ ಒಳಬಾಳು ಸುಂದರ ಸಫಲ ಆಗಬೇಕು"<br /><br />ಸಾವನ್ನು ಒಪ್ಪುವ, ಗೆಲ್ಲುವ, ಸ್ವೀಕರಿಸುವ ಈ ದರ್ಶನದಲ್ಲಿ ಜೀವನದ ಸೃಷ್ಟಿಯ ನಿತ್ಯನೂತನತೆಯನ್ನೂ ಚರಾಚರ ಸ್ವಭಾವವನ್ನು ನಂಬಿದ ಧೋರಣೆಯು ತುಂಬಿದೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.<br /><br />ಉಪನಿಷತ್ಗಳಲ್ಲೇ ತುಂಬ ಕಿರಿದಾದ, ಕೇವಲ ಹದಿನೆಂಟು ಶ್ಲೋಕಗಳನ್ನು ಮಾತ್ರ ಹೊಂದಿದ ಈ ಉಪನಿಷತ್ ದರ್ಶನವನ್ನೇ ಏಕೆ ತಮ್ಮ ಕತೆಯಲ್ಲಿ ಮತ್ತೆ ಪೃಥಕ್ಕರಿಸಲು ಮಾಸ್ತಿ ಆಯ್ಕೆ ಮಾಡಿಕೊಂಡರು? ಕತೆಯ ವಿವರಗಳು ಸೂಚಿಸುವಂತೆ ಉಪನಿಷತ್ನ ಈ ದರ್ಶನವೆಲ್ಲ ದ್ವೈಪಾಯನನ ಜೀವನ ಶೈಲಿಯಲ್ಲಿ ಹಾಸುಹೊಕ್ಕಾಗಿದೆ.<br /><br />1. ಪೂರ್ಣತೆಯನ್ನು ಒಪ್ಪಿಕೊಳ್ಳುವುದು, ಪೂರ್ಣವಾಗಿ ಬಾಳುವುದೆಂದರೆ ಜಗತ್ತೆಂಬ ವಸ್ತು ಮತ್ತು ಬದುಕೆಂಬುದರ ಹಿಂದಿರುವ ತತ್ವವನ್ನು ಒಪ್ಪಿಕೊಳ್ಳುವುದು.<br /><br />2. ಜಗತ್ತನ್ನು, ಬದುಕನ್ನು, ತ್ಯಾಗದಿಂದ, ಸೇವೆಯಿಂದ ಒಳಗು ಮಾಡಿಕೊಳ್ಳಲು ಪ್ರಯತ್ನಿಸುವುದು. ("ತೇನ ತ್ಯಕ್ತೇನ ಭುಂಜೀಥಾ')<br /><br />3. ತಿಳಿಯುವುದು ಎಂದರೆ ಬೌದ್ಧಿಕವಾಗಿ ತಿಳಿಯುವುದಲ್ಲ. ಅನುಭವದಿಂದ ತಿಳಿಯುವುದು. ಎಲ್ಲ ಜೀವರಾಶಿಗಳಲ್ಲಿಯೂ ಜೀವನದ ಹಿಂದಿರುವ, ಸತ್ಯವನ್ನು ತಿಳಿದಾಗ ಅನುಭವ ಅನುಭಾವವಾಗುತ್ತದೆ. ಕೇವಲ ಅನುಭವದಿಂದ ಏನೂ ಪ್ರಯೋಜನವಾಗದು.<br /><br />ಈ ಉಪನಿಷತ್ನ ವಿಶೇಷವೆಂದರೆ ಬದುಕಿನ ವಿಸರ್ಜನೆಗೆ ನಡೆಸುವ ಪ್ರಾರ್ಥನೆ, ಅಮೃತತ್ವಕ್ಕೆ ನಡೆಸುವ ಪ್ರಾರ್ಥನೆ, ಜೀವನದ ಸಾರ್ಥಕತೆಯ ಬಗ್ಗೆ ನಂಬುಗೆ, ಇವೆಲ್ಲ ಬೇರೆ ಬೇರೆಯಲ್ಲವೆಂದು ಸೃಷ್ಟಿಯನ್ನೇ ಪ್ರಾರ್ಥಿಸುವುದು.<br /><br />17ನೆಯ ಶ್ಲೋಕದ ಕನ್ನಡಾನುವಾದವನ್ನು ನೋಡಿ.<br /><br /><span style="font-weight: bold;">"ನನ್ನ ಪ್ರಾಣ ಸರ್ವವ್ಯಾಪಿಯಾದ ಅಮೃತಾತ್ಮವನ್ನು ಸೇರಲಿ. ಈ ದೇಹ ಬೂದಿಯಾಗಲಿ. ಓಂ ಮನಸ್ಸೆ ಸ್ಮರಿಸು. ಮಾಡಿರುವುದನ್ನು ಸ್ಮರಿಸು. ಓಂ ಮನಸ್ಸೆ ಸ್ಮರಿಸು. ಮಾಡಿರುವುದನ್ನು ಸ್ಮರಿಸು"</span><br /><br />ಪ್ರಾಸಂಗಿಕವಾಗಿ ಇಲ್ಲಿ ಹೇಳಬಹುದಾದ ಒಂದು ಮಾತೆಂದರೆ ಗಾಂಧಿಯ ದಿನನಿತ್ಯದ ಪ್ರಾರ್ಥನೆಯಲ್ಲಿ ಈ ಉಪನಿಷತ್ ಕೂಡ ಒಂದು ಭಾಗವಾಗಿತ್ತೆಂಬುದು. ಟಾಲ್ಸ್ಟಾಯ್ ಕತೆಯಲ್ಲಿ ಜಿಜ್ಞಾಸೆಯಿದೆ, ಪ್ರಾರ್ಥನೆಯಿಲ್ಲ. ತೀವ್ರತೆಯಿದೆ, ಸಮಾಧಾನವಿಲ್ಲ. ಶಾಂತಿಯಿಲ್ಲ, ಭರವಸೆಯಿಲ್ಲ.<br /><br />ಎಲ್ಲ ಶ್ರೇಷ್ಠ ಲೇಖಕರು ಸಾವು, ದೈವ, ಕಾಮವನ್ನು ಕುರಿತು ತಮ್ಮದೇ ಆದ ದರ್ಶನವನ್ನು ಮಂಡಿಸುತ್ತಾರೆ. ಈ ಮೂರಂಶಗಳಲ್ಲಿ ಯಾವುದಾದರೂ ಒಂದಂಶದ ಗೈರುಹಾಜರಿಯಾದರೂ ಲೇಖಕನ ದರ್ಶನದಲ್ಲೇ ಏನೋ ಚ್ಯುತಿಯಿದೆಯೆಂದೇ ಲೆಕ್ಕ ಎಂಬುದೊಂದು ಈವತ್ತಿನ ಸಾಹಿತ್ಯಿಕ ನಂಬಿಕೆ. ಯಾವ ದರ್ಶನ ನಮಗೆ ಹೆಚ್ಚು ಪ್ರಸ್ತುತ, ಆತ್ಮೀಯವೆಂಬ ಪ್ರಶ್ನೆ ಈ ಎರಡೂ ಕತೆಗಳ ಜೊತೆ ಓದಿನಿಂದ ಜಾಗೃತವಾಗುತ್ತಲೇ ಇರುತ್ತದೆ.<br /><br />ಆಧುನಿಕ ಸಾಹಿತ್ಯ ಚಿಂತನೆ, ಬಹುಪಾಲು ಮನುಷ್ಯ ಕೇಂದ್ರಿತ. ಹಾಗಾಗಿ ಸಾವಿನ ಅನುಭವ, ತಿಳುವಳಿಕೆಯೆಲ್ಲ ನಮಗೆ ನೆರವಾಗುವುದು ನಮ್ಮ ಮತ್ತು ಬದುಕಿನ ಸೀಮಿತತೆಯನ್ನು ಸೂಚಿಸಲು, ಬದುಕಿನ ಅಸಾಂಗತ್ಯವನ್ನು, ಅಪೂರ್ಣತೆಯನ್ನು ತಿಳಿಯಲು ಮಾತ್ರ. ನವ್ಯ ಸಾಹಿತ್ಯದ ಸಂದರ್ಭದಲ್ಲಿ ಬಂದ ಬಹುತೇಕ ಕಥನಗಳು ನಾಟಕಗಳಲ್ಲಿ ಈ ನೋಟವೇ ಪ್ರಧಾನ. ಓದುಗನಾಗಿ ಮಾಸ್ತಿ ಕತೆಯ ದರ್ಶನವನ್ನು ಒಪ್ಪುವ ನನಗೂ ಸಾವನ್ನು ಕುರಿತು ಬರೆಯುವಾಗಲೆಲ್ಲ, ಚಿಂತಿಸುವಾಗಲೆಲ್ಲ ಹೆಚ್ಚು ಹತ್ತಿರವೆನಿಸುವುದು ಟಾಲ್ಸ್ಟಾಯ್ನ ಒಳತೋಟಿಯೇ. ಈ ವಿಪರ್ಯಾಸಕ್ಕೆ ನಮ್ಮ ತಲೆಮಾರಿನಲ್ಲಿ ಬದುಕಿನ ನಿರಂತರತೆ ಮತ್ತು ದೈವಿಕತೆಯ ಬಗ್ಗೆ ನಂಬಿಕೆ ಕಡಿಮೆಯಾಗಿರುವುದು ಕಾರಣವಿರಬಹುದು. ದೈವಿಕತೆ ಕುರಿತಂತೆ ನಾವು ಸ್ವತಂತ್ರವಾಗಿ ಯೋಚಿಸಿ, ತೀರ್ಮಾನಕ್ಕೆ ಬರುವುದಕ್ಕಿಂತಲೂ ಹೆಚ್ಚಾಗಿ ಇತರರು ಹೇಳಿದ್ದನ್ನು, ಬರೆದದ್ದನ್ನು ಓದಿ ಹಾಗೆ ಬಂದ ತಿಳುವಳಿಕೆಯನ್ನೆಲ್ಲ ಗೃಹೀತ ಸತ್ವವೆಂದು ನಂಬಿಬಿಟ್ಟಿದ್ದೇವೆ. ಧರ್ಮವೆಂದರೆ ಸಂಸ್ಕೃತಿ ಮಾತ್ರ, ಸಂಸ್ಕೃತಿಯೆಂದರೆ ಧಾರ್ಮಿಕ ಆಚರಣೆಗಳು ಮಾತ್ರ ಎಂಬ ತೆಳುನಂಬುಗೆ ಕೂಡ ನಮ್ಮನ್ನು ದಾರಿ ತಪ್ಪಿಸಿರಬಹುದು.<br /><br />ಈ ಎರಡೂ ಕತೆಗಳನ್ನು ಕುರಿತು ಹೊಸ ಕಾಲದ ಹೊಸ ಸಂವೇದನೆಯ ಮಿತ್ರರೊಡನೆ ಚರ್ಚಿಸುವಾಗಲೆಲ್ಲ ಮಾಸ್ತಿಯವರ ಕತೆಯನ್ನು ಒಪ್ಪದವರೇ ಹೆಚ್ಚು. ಇಂತಹ ಮಿತ್ರರ ಪ್ರಕಾರ ಈ ಕತೆಯಲ್ಲಿ ವೈಯಕ್ತಿಕ ದರ್ಶನವಿಲ್ಲ, ಕತೆಯ ದರ್ಶನ ಲೇಖಕನ ಅನುಭವ, ವೈಯಕ್ತಿಕತೆಯಿಂದ ಒಡಮೂಡಿದ್ದಲ್ಲ. ಕಡ ಪಡೆದದ್ದು, ಆರೋಪಿಸಿಕೊಂಡದ್ದು. "ಮಂತ್ರೋದಯ" ರಾಚನಿಕವಾಗಿ ಕೂಡ ಕತೆಯೆನಿಸಿಕೊಳ್ಳಲಾಗದು. ಉಪನಿಷತ್ ವಾಕ್ಯಗಳ ಕನ್ನಡೀಕರಣದ ಸರಣಿಯದು. ಇದು ಓದುಗರಲ್ಲಿ ಸ್ವೀಕೃತವಾಗಲೆಂದು ದ್ವೈಪಾಯನನ ಜೀವನದ ವಿವರಗಳು ಕತೆಯಲ್ಲಿ ತುಂಬಿವೆಯಷ್ಟೆ. ಈ ಆಪಾದನೆಗಳು ಕೇಳುವಾಗ ನಿಜವೆನ್ನಿಸುವ ಭಾವನೆಯನ್ನು ಹುಟ್ಟಿಸಿದರೂ, ಕತೆ ಓದುವಾಗ ಮಾತ್ರ ನಿಜವೆನ್ನಿಸುವುದಿಲ್ಲ. ನಮ್ಮ ಮನಸ್ಸಿನ ಒಳಗಡೆ ಈ ದರ್ಶನದ ಬಗ್ಗೆ ಇರುವ ಗೌರವದಿಂದ ಹೀಗಾಗುತ್ತದೆಯೇ? ಎಲ್ಲ ಕತೆಗಳು ವೈಯಕ್ತಿಕ ತೀವ್ರತೆಯಿಂದಲೇ ಹುಟ್ಟಬೇಕು ಎಂಬ ನಿರೀಕ್ಷೆ ಸರಿಯೇ? ಈ ಕತೆಯ ದರ್ಶನ ಮಾಸ್ತಿಯವರು ಆರೋಪಿಸಿಕೊಂಡದ್ದು ಎಂಬುದು ನಿಜವಾದರೆ, ಮಾಸ್ತಿಯವರ ಇತರ ಕತೆಗಳ ದರ್ಶನಕ್ಕಿಂತ ಈ ಕತೆ ನೀಡುವ ದರ್ಶನ ನಿಜವಾಗಲೂ ತುಂಬ ಭಿನ್ನವಾಗಿದೆಯೇ? ಕತೆಯೊಂದು ನಮಗೆ ನಿಜವೆನ್ನಿಸಿ - ಪ್ರಸ್ತುತವಾಗಬೇಕಾದರೆ ಕತೆಯು ಆಧುನಿಕ-ನವ್ಯ-ಪರಿಭಾಷೆ-ಸ್ವರೂಪದಲ್ಲಿರುವುದು ಅನಿವಾರ್ಯವೇ! ಮಾನಸಿಕವಾಗಿ ಆಧುನಿಕ ಸಂವೇದನೆಯ ಹೊರಗಿರುವ ಓದುಗನ ಸ್ಪಂದನಕ್ಕೆ ಯಾವ ಬೆಲೆಯೂ ಇಲ್ಲವೇ? ಸಾಮಾಜಿಕ ಅಸ್ಮಿತೆ ಮತ್ತು ಇತಿಹಾಸದ ಚಲನೆ - ಇದೇ ಮುಖ್ಯವಾದ ಈವತ್ತಿನ ಸಾಂಸ್ಕೃತಿಕ ಸಂದರ್ಭದಲ್ಲಿ "ಮಂತ್ರೋದಯ"ದಂತಹ ಕತೆಗಳು ಕೇವಲ ದಾರ್ಶನಿಕ luxuryಯಲ್ಲವೇ?<br /><br />ಮೇಲಿನ ಯಾವ ಪ್ರಶ್ನೆಗಳಿಗೂ ನನಗೆ ಉತ್ತರ ಗೊತ್ತಿಲ್ಲ. ಪ್ರಶ್ನೆಗಳಲ್ಲಿ ಸತ್ಯವಿದೆಯೆಂಬುದಕ್ಕೂ ಕೂಡ ಉತ್ತರವಿಲ್ಲ? ಅಭಿಪ್ರಾಯವಿಲ್ಲ. ಹೀಗಾಗಿ ಮತ್ತೆ ನಾನು ಎರಡೂ ಕತೆಗಳ ಜೊತೆ ಓದಿಗೇ ಹಿಂದಿರುಗುತ್ತೇನೆ. ಓದುಗರನ್ನು ಕೂಡ ಇಂತಹ ಓದಿಗೆ ಆಹ್ವಾನಿಸುತ್ತಾ. ಯಾವ ಪ್ರಶ್ನೆಗಳಿಗೂ ಉತ್ತರ ಸಿಗುವುದಿಲ್ಲವೆಂಬ ಆಶ್ವಾಸನೆಯೊಡನೆ.<br /><br />(ಮೇಲಿನ ಚರ್ಚೆಗೆ ಪೂರಕವಾಗಿ ಈ ಎರಡೂ ಪುಸ್ತಕಗಳನ್ನು ಓದುಗರು ಗಮನಿಸಬಹುದು: ಎ.ಎನ್.ವಿಲ್ಸನ್ರ ಟಾಲ್ಸ್ಟಾಯ್ ಜೀವನಚರಿತ್ರೆ ಮತ್ತು ಸೋಮನಾಥಾನಂದರ ಉಪನಿಷತ್ ಭಾವಧಾರೆ (ರಾಮಕೃಷ್ಣ ಆಶ್ರಮದ ಪ್ರಕಟಣೆ). ನನ್ನ ಟಿಪ್ಪಣಿಯಲ್ಲಿ ನಮೂದಿಸಿರುವ ಬಹುತೇಕ ವಿಚಾರಗಳು ಈ ಎರಡೂ ಪುಸ್ತಕಗಳಿಂದ ಪಡೆದದ್ದು.)<br /><br /><span style="font-weight: bold;">(</span><span style="font-weight: bold;">ಈ</span><span style="font-weight: bold;"> </span><span style="font-weight: bold;">ಲೇಖನ</span><span style="font-weight: bold;"> </span><span style="font-weight: bold;">ಶ್ರೀ</span><span style="font-weight: bold;"> </span><span style="font-weight: bold;">ಮಹಾಬಲಮೂರ್ತಿ</span><span style="font-weight: bold;"> </span><span style="font-weight: bold;">ಕೂಡ್ಲೆಕೆರೆಯವರ</span><span style="font-weight: bold;"> "</span><span style="font-weight: bold;">ಒಂದಲ್ಲಾ</span><span style="font-weight: bold;"> </span><span style="font-weight: bold;">ಒಂದೂರಿನಲ್ಲಿ</span><span style="font-weight: bold;">" </span><span style="font-weight: bold;">ತ್ರೈಮಾಸಿಕದ</span><span style="font-weight: bold;"> </span><span style="font-weight: bold;">ನಾಲ್ಕನೇ</span><span style="font-weight: bold;"> </span><span style="font-weight: bold;">ಸಂಚಿಕೆ</span> (<span style="font-weight: bold;">ನವೆಂಬರ್</span><span style="font-weight: bold;">'</span><span style="font-weight: bold;">೦೮</span><span style="font-weight: bold;">-</span><span style="font-weight: bold;">ಜನವರಿ</span><span style="font-weight: bold;">'</span><span style="font-weight: bold;">೦೯</span><span style="font-weight: bold;">)</span><span style="font-weight: bold;">ಯಲ್ಲಿ</span><span style="font-weight: bold;"> </span><span style="font-weight: bold;">ಪ್ರಕಟಿತ</span><span style="font-weight: bold;">.)</span>ಕೆ. ಸತ್ಯನಾರಾಯಣhttp://www.blogger.com/profile/15167030166766836381noreply@blogger.com0tag:blogger.com,1999:blog-1964049159346480323.post-39233707713739747522008-10-05T07:15:00.000-07:002008-10-05T21:46:34.843-07:00ಲೋಹೀಯಾರ ಪುಸ್ತಕ ಸಮೀಕ್ಷೆಯ ಒಂದು ಮಾದರಿ<a href="http://3.bp.blogspot.com/_D9K0HARbkSE/SOjSsse6gII/AAAAAAAAAB4/4juchClQIpI/s1600-h/New+Picture+(7).bmp"><img id="BLOGGER_PHOTO_ID_5253680630624583810" style="FLOAT: right; MARGIN: 0px 0px 10px 10px; CURSOR: hand" alt="" src="http://3.bp.blogspot.com/_D9K0HARbkSE/SOjSsse6gII/AAAAAAAAAB4/4juchClQIpI/s320/New+Picture+(7).bmp" border="0" /></a> <strong><span style="font-size:130%;">ಸರ್ ಎಂ.ವಿ.ಅವರ ವೃತ್ತಿಜೀವನ - ಲೋಹಿಯಾ</span></strong> <div><div><strong>ಪುಸ್ತಕ:Memories of my working life:</strong></div><div><strong>ನನ್ನ ವೃತ್ತಿ ಜೀವನದ ನೆನಪುಗಳು</strong></div><div><strong>ಲೇ:ಸರ್. ಎಂ.ವಿಶ್ವೇಶ್ವರಯ್ಯ</strong></div><div><strong>ಪ್ರ: ಲೇಖಕರು, ಅಪ್ಲ್ಯಾಂಡ್ಸ್, ಹೈಗ್ರೌಂಡ್ಸ್, ಬೆಂಗಳೂರು</strong></div><div><strong>ಬೆಲೆ: ಆರು ರೂ.</strong></div><br /><div>ಶ್ರೀ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರಿಗೆ ಈಗ ತೊಂಬತ್ತಾರು ವರ್ಷ. ಅವರು ಈ ಕಾಲದಲ್ಲಿ ದೇಶದಲ್ಲೇ ಅತ್ಯುನ್ನತರಾದ ಯಂತ್ರಶಿಲ್ಪಿಯಾಗಿದ್ದಾರೆ. ಕೊಂಚ ಬೇರೆ ರೀತಿಯಲ್ಲಿ ಪಾಲಿತವಾಗಿದ್ದರೆ, ಮಹಾತ್ಮಗಾಂಧಿಯವರ ಅನಂತರ ದೇಶದಲ್ಲಿ ಎರಡನೆಯ ಮಹಾವ್ಯಕ್ತಿಯಾಗಿ ಪರಿಗಣಿಸಲ್ಪಡಬಹುದಾಗಿದ್ದಂಥ ವ್ಯಕ್ತಿದ್ರವ್ಯ ಪಡೆದಿದ್ದವರು ಇವರು. ಕೆಲವೇ ವಾರಗಳ ಹಿಂದೆ ನಾವು ಅವರ ಜೊತೆ ಸುಮಾರು ನೂರು ನಿಮಿಷಗಳಷ್ಟು ದೀರ್ಘ ಮಾತನಾಡಿದ್ದೆವು. ಆ ಸುದೀರ್ಘ ಮಾತುಕತೆಯಲ್ಲಿ ಅವರು ಒಮ್ಮೆಯಾದರೂ ನೆನಪು ಸೋತು ವಾಕ್ಯವನ್ನು ಅರ್ಧಕ್ಕೆ ಮುರಿದದ್ದಿಲ್ಲ. ಮಾತಿನಲ್ಲಿ ಅನೇಕ ವಿಷಯಗಳು ಹೆಣೆದು ಬಂದಾಗ ಮಾತ್ರ ಒಂದಕ್ಕೊಂದಕ್ಕೆ ಸಂಬಂಧ ತಪ್ಪಿದಂತಾಗುತ್ತಿತ್ತು. ಆದರೆ ಅವರಿಗಿಂತ ಎಷ್ಟೋ ಎಳಸೆನ್ನುವ ಪ್ರಾಯದಲ್ಲೇ ನಮಗೆ ಹಾಗಾಗುತ್ತದಲ್ಲ. ಅಂಥ ಹರಿತವಾದ ಬುದ್ಧಿಮತ್ತೆ, ಅಂಥ ಅಸಾಧ್ಯ ಶ್ರಮದ ಬದುಕು, ಅಂಥ ಸುದೀರ್ಘವಾದ ಜೀವನ ಇವುಗಳನ್ನು ಪಡೆದು ನಮ್ಮೆದುರಿದ್ದ ಒಬ್ಬ ಮನುಷ್ಯನ ಜೀವನ ಸ್ಮೃತಿಗಳು, ಈ ವಿಶಿಷ್ಟಕಾಲದ ಪರಿಚಯ ಅಷ್ಟಿಷ್ಟಾದರೂ ಇರುವಂಥ ಓದುಗರಿಗೆ ನಿಜವಾಗಿ ರೋಮಾಂಚಕವಾಗಬಲ್ಲವು.<br /></div><br /><div>1886ರಲ್ಲಿ ಅವರು ಖಾನ್ ದೇಶದ ಧುಲಿಯಾ ಎಂಬಲ್ಲಿಗೆ ನೀರು ಸರಬರಾಜು ಯೋಜನೆಯನ್ನು ತಯಾರಿಸಿ ಕೊಟ್ಟಾಗಿನಿಂದ ಮೊದಲು ಮಾಡಿ, 1908ರಲ್ಲಿ ಪೂನಾ ನಗರಕ್ಕೆ ಕೊಳಚೆ ನೀರನ್ನು ನಳಿಕೆಗಳಲ್ಲಿ ಪಂಪ್ ಮಾಡಿ ಹೊರ ಸಾಗಿಸುವ ಆಧುನಿಕ ಒಳಚರಂಡಿ ಯೋಜನೆಯನ್ನು ನಿರ್ಮಿಸಿಕೊಡುವಲ್ಲಿನ ತನಕ, ಪಶ್ಚಿಮ ಹಾಗೂ ದಕ್ಷಿಣ ಇಂಡಿಯಾದ ಹೆಚ್ಚು ಕಡಿಮೆ ಎಲ್ಲಾ ನೀರು ಸರಬರಾಜು ಮತ್ತು ಚರಂಡಿ ಯೋಜನೆಗಳಲ್ಲಿಯೂ ಶ್ರೀ ವಿಶ್ವೇಶ್ವರಯ್ಯ ಭಾಗವಹಿಸಿದ್ದಾರೆ. ಇಷ್ಟೇ ಅಲ್ಲ, ತನ್ನ ಕಾಲದ ಎಂಜಿನಿಯರ್ಗಳಲ್ಲೆ ಪ್ರಪ್ರಥಮ ಗಣ್ಯರಾಗಿದ್ದ ಈತ ದೇಶದ ಪ್ರತಿಯೊಂದು ಎಂಜಿನಿಯರಿಂಗ್ ಸಮಸ್ಯೆಗಳಲ್ಲೂ ತೀವ್ರ ಆಸಕ್ತಿ ತಾಳಿದ್ದರು. 1925ರಲ್ಲೇ ಅವರು ಒಂದು ಅಟೊಮೊಬಾಯಿಲ್ (ಮೋಟಾರು ವಾಹನ) ಕಾರ್ಖಾನೆಯ ಯೋಜನೆಯನ್ನು ಸಿದ್ಧಗೊಳಿಸಿದ್ದರು ಮತ್ತು ಈ ಉದ್ಯಮದ ನಿರ್ಮಾಣದಲ್ಲಿ ಪಾಲುಗೊಳ್ಳುವಂತೆ ಅಮೆರಿಕಾದ ಕ್ರಿಸ್ಲರ್ ಕಾರ್ಪೊರೇಶನ್ನನ್ನು ಒಪ್ಪಿಸಿದ್ದರು. ಆದರೆ ಬ್ರಿಟಿಷರು ಮೈಸೂರಿನ ಮಹರಾಜರನ್ನು ಒತ್ತಾಯಿಸಿ ಈ ಯೋಜನೆಯನ್ನು ರದ್ದುಗೊಳಿಸಿದರು. ಅದೇ 1935ರಲ್ಲಿ ನಡೆದ ಒಂದು ಕಥೆಯನ್ನು ಶ್ರೀ ವಿಶ್ವೇಶ್ವರಯ್ಯ ಹೇಳಿದ್ದಾರೆ: ಆ ಕಾಲದಲ್ಲೆ ನ್ಯೂಯಾರ್ಕಿನಲ್ಲಿ ಅವರಿಗೆ ಒಬ್ಬ ರಷ್ಯನ್ ಇಂಜಿನಿಯರ್ ಭೇಟಿಯಾಗಿದ್ದನಂತೆ. ಅಮೆರಿಕದ ಮಾದರಿಯಲ್ಲೇ ರಷ್ಯಾದಲ್ಲೂ ಆಟೋಮೊಬೈಲ್ ವಾಹನಗಳನ್ನು ಇಡೀ ಉತ್ಪಾದಿಸುವ ದೃಷ್ಟಿಯಿಂದ ಅಗತ್ಯವಾದ ತಾಂತ್ರಿಕ ಹಾಗೂ ಇನ್ನಿತರ ಮಾಹಿತಿಗಳನ್ನು ತಾನು ಮತ್ತು ಇತರ ನಲ್ವತ್ತು ರಷ್ಯನ್ ಎಂಜಿನಿಯರ್ಗಳು ಇಲ್ಲೂ ಸಂಗ್ರಹಿಸುತ್ತಿರುವುದಾಗಿ ಆತ ಹೇಳಿದ್ದನಂತೆ. ಕುಶಲತೆ, ಸಂಪನ್ಮೂಲ ಮತ್ತು ಸಾಹಸ ಇವೇ ಒಂದು ದೇಶವನ್ನು ಕಟ್ಟುವಂಥವಾಗಿದ್ದರೆ, ನಮಗೂ ಇವೆಲ್ಲ ಇತ್ತು; ನಾವು ರಷ್ಯಾದ ಜೊತೆಯಲ್ಲೇ ಅದೇ ಸಾಮರ್ಥ್ಯ ಹಾಗೂ ಅದೇ ಸ್ಥಾಪತ್ಯವಿರುವ ಆಟೋಮೊಬೈಲ್ ಉದ್ಯಮವನ್ನು ಮತ್ತು ಅದಕ್ಕೆ ಸಂಬಂಧಿಸಿದ ಮತ್ತೆಲ್ಲವನ್ನೂ ಪಡೆದುಕೊಂಡಿರಬಹುದಿತ್ತು. ರಷ್ಯಾಕ್ಕೆ ಸಮಸಮವಾಗಿರಬಹುದಿತ್ತು. ಮತ್ತೆ ಅಲ್ಲಿ ವಾಷಿಂಗ್ಟನ್ನಲ್ಲಿನ ಫೆಡರಲ್ ರಿಸರ್ವ್ ಬೋರ್ಡ್ನ ಪ್ರಧಾನಾಧಿಕಾರಿಯನ್ನು ಭೇಟಿಮಾಡಿದ್ದರ ಬಗ್ಗೆ ಅವರು ಹೇಳುತ್ತಾರೆ. ವಿಶ್ವೇಶ್ವರಯ್ಯ ಭಾರತದ ಆರ್ಥಿಕತೆಯ ಬಗ್ಗೆ ಆತನ ಸಲಹೆ ಕೇಳಿದಾಗ ಆತ ಆ ಪ್ರಶ್ನೆಯನ್ನೇ ತಪ್ಪಿಸಿಕೊಂಡು ಬಿಟ್ಟರಂತೆ; ಆ ಬಗ್ಗೆ ಆತನಿಗೆ ಮಾತಾಡಲು ಇಚ್ಛೆಯೇ ಇಲ್ಲದ ಹಾಗೆ ಕಾಣಿಸಿತು ಎಂದು ದೂರಿಕೊಂಡಿದ್ದಾರೆ. ಅಮೆರಿಕದ ಅರ್ಥ ಕ್ಷೇತ್ರದ ಅಂಥ ಪರಮಾಧಿಕಾರಿಗೆ ಕೂಡಾ ಇಷ್ಟು ದೊಡ್ಡ ದೇಶವಾದ ಭಾರತದ ಆರ್ಥಿಕತೆಯನ್ನು ತಿಳಿದುಕೊಳ್ಳುವುದು ಸಾಧ್ಯವಿರಲಿಲ್ಲ. ಶ್ರೀ ವಿಶ್ವೇಶ್ವರಯ್ಯನವರು ಹೀಗೆ ಬರೆಯುತ್ತಾರೆ: "ನನ್ನ ಜೊತೆ ಬುದ್ಧಿವಂತನಾದ ಒಬ್ಬ ಮಾರ್ಗದರ್ಶಿ ಇದ್ದ. ಆ ಆರ್ಥಿಕ ತಜ್ಞ ಈ ನನ್ನ ಮಾರ್ಗದರ್ಶಿಯನ್ನು ಪಕ್ಕಕ್ಕೆ ಕರೆದು ಹೇಳಿದರಂತೆ, `ಈ ಮನುಷ್ಯನಿಗೆ ತನ್ನ ದೇಶಕ್ಕೆ ಹಿಂತಿರುಗಿ ಅಲ್ಲಿನ ಆಡಳಿತ ರಾಷ್ಟ್ರೀಯ ಸರಕಾರದ ಕೈಗೆ ಸಿಕ್ಕಿದ ಮೇಲೆ ಇಲ್ಲಿಗೆ ಬರುವುದಕ್ಕೆ ಹೇಳು. ಆಗ ನಾನು ಏನಾದರೂ ಸೂಚನೆಗಳನ್ನು ಕೊಟ್ಟೇನು ಎಂದು'. ಆಗ ಅಲ್ಲಿನ ಉದ್ಯಮ ಕಾರ್ಯದರ್ಶಿಯಾಗಿದ್ದ ಹೆರ್ಬರ್ಟ್ ಹೂವರ್ ಕೂಡಾ " ನಿಮ್ಮ ಜನರಲ್ಲಿ ನುಗ್ಗುವ ಸಾಹಸವೇ ಇಲ್ಲ. ಎಂದರಂತೆ.<br /><a href="http://3.bp.blogspot.com/_D9K0HARbkSE/SOjPcRIzbKI/AAAAAAAAABw/cP2pYb7aBJ4/s1600-h/vishwesh.JPG"><img id="BLOGGER_PHOTO_ID_5253677049871297698" style="FLOAT: left; MARGIN: 0px 10px 10px 0px; CURSOR: hand" alt="" src="http://3.bp.blogspot.com/_D9K0HARbkSE/SOjPcRIzbKI/AAAAAAAAABw/cP2pYb7aBJ4/s320/vishwesh.JPG" border="0" /></a><br />ಇವೊತ್ತಿಗೆ ಕೂಡಾ ರಾಜಕೀಯ ಪರಿಸ್ಥಿತಿ ಬದಲಾಗದೆ ಉಳಿದುಬಿಟ್ಟಿದೆ. "ಮುಂಬೈ ಸರಕಾರಕ್ಕೆ ಆ ಪ್ರಾಂತ್ಯದಲ್ಲಿ ಉನ್ನತ ತಾಂತ್ರಿಕ ಶಿಕ್ಷಣವನ್ನು ರೂಪಿಸಬೇಕೆಂಬ ಇಚ್ಛೆಯೇ ಕಾಣುವುದಿಲ್ಲ" ಎಂದು ವಿಶ್ವೇಶ್ವರಯ್ಯ ಆಗಿನ ಗೌರ್ನರ್ ಲಾರ್ಡ್ ಲಾಯ್ಡ್ರನ್ನು ಆಕ್ಷೇಪಿಸುತ್ತಾರೆ. ಆ ಮಾತು ಇವತ್ತಿಗೂ ಅನ್ವಯಿಸುತ್ತದೆ. ಪ್ರಾಯಶಃ ನಿರುದ್ಯೋಗದ ಹೆದರಿಕೆಯಿಂದ ಇರಬಹುದು, ಅಂತೂ ರಾಷ್ಟ್ರೀಯ ಸರಕಾರ ಕೂಡ ಉನ್ನತ ತಾಂತ್ರಿಕ ಶಿಕ್ಷಣಕ್ಕೆ ತಡೆ ಹಾಕುತ್ತಿದೆ ಎಂಬ ಮಾತನ್ನು ಅವರು ಮುಖತಃ ಹೇಳುತ್ತಾರೆ, ಕಾಗದದ ಮೇಲೆ ಬರೆದಿಲ್ಲ ಅಷ್ಟೆ. ಅಲ್ಲದೆ, ನಮ್ಮದೇ ರಾಷ್ಟ್ರೀಯ ಸರಕಾರವು ಜನರು ತಮ್ಮ ತಮ್ಮ ವ್ಯಕ್ತಿತ್ವದ ಪರಮೋನ್ನತಿಗೆ ಏರುವುದಕ್ಕೆ ಅವಕಾಶ ಕೊಡುತ್ತಿಲ್ಲ; ಬದುಕಿನ ಬೇರೆ ಬೇರೆ ಕ್ಷೇತ್ರಗಳಲ್ಲಿ ಜನಪ್ರಸಿದ್ಧಿ ಪಡೆದು ತಮ್ಮ ಪ್ರಸಿದ್ಧಿಗೇ ಮುಳುವಾಗಿ ಬಿಟ್ಟಾರು ಎಂದು ನಮ್ಮ ಆಡಳಿತಗಾರರಿಗೆ ಹೆದರಿಕೆಯೋ ಎನ್ನಿಸುತ್ತದೆ. ಭಧ್ರಾವತಿಯ ಕಬ್ಬಿಣ ಕಾರ್ಖಾನೆ ವಿಶ್ವೇಶ್ವರಯ್ಯನವರ ಎಂಜಿನಿಯರಿಂಗ್ ಕೌಶಲ್ಯದ, ಅದಕ್ಕಿಂತ ಹೆಚ್ಚಾಗಿ ಸಾಹಸಬುದ್ಧಿಯ ಫಲ. ಮೈಸೂರಿನ ಗಣ್ಯ ನಾಗರಿಕರೊಬ್ಬರು 1925 ಮೇ 22ರಂದು ರಾಯಲ್ ಸೊಸೈಟಿ ಆಫ್ ಆರ್ಟ್ಸ್ನಲ್ಲಿ ಈ ಸಾಹಸದ ಬಗ್ಗೆ ಮಾತನಾಡುತ್ತ, "ಈ ಅದೃಷ್ಟಹೀನ ಸಾಹಸಕ್ಕೆ ಈಗ ಮುಚ್ಚಬೇಕಾದ ಕಾಲ ಬಂದಿದೆ" ಎಂದು ವಿಷಾದಿಸಿದ್ದರು. ಇಂಡಿಯಾಕ್ಕೆ ಆ ಕಾಲದಲ್ಲಿ ಅಂಥ ಸಾಹಸ ಪ್ರವೃತ್ತಿಯ ಅಗತ್ಯ ಎಷ್ಟಿತ್ತು ಎಂಬುದನ್ನು ಮೇಲಿನ ಗಣ್ಯರ ಮಾತು ಸ್ಪಷ್ಟಗೊಳಿಸುತ್ತದೆ. 1927 ಫೆಬ್ರವರಿ 12ರಂದು ಮೈಸೂರು ಮಹಾರಾಜರು ವಿಶ್ವೇಶ್ವರಯ್ಯನವರಿಗೆ ಹೀಗೆ ಬರೆದಿದ್ದರು: "ನೀವು ಅಮೆರಿಕನ್ ಸಿಬ್ಬಂದಿಯೆಲ್ಲವನ್ನೂ ಕೈಬಿಟ್ಟು ಕಾರ್ಖಾನೆಯನ್ನು ಪೂರಾ ನಮ್ಮ ಜನಗಳಿಂದಲೇ ನಡೆಸಿಕೊಂಡು ಹೋಗುತ್ತಿದ್ದೀರಿ. ಈ ಸಂಸ್ಥಾನವೇ ಹೆಮ್ಮೆಪಟ್ಟುಕೊಳ್ಳಬೇಕಾದ ಸಾಧನೆ ಇದು." ಯಾವುದೇ ಒಂದು ಅವಕಾಶ ಪ್ರಾಪ್ತವಾಯಿತೆಂದರೆ ಅದೇ ತನ್ನ ಪೂರೈಕೆಗೆ ಬೇಕಾದ ಜನಗಳನ್ನು ಸೃಷ್ಟಿಸಿಕೊಳ್ಳುತ್ತದೆ. ಇಂಡಿಯಾದ ಎಂಜಿನಿಯರ್ಗಳು ಮೂವತ್ತು ವರ್ಷಗಳ ಹಿಂದೆ ಎಂಥದೇ ಸಾಹಸಕ್ಕೂ ಸಾಕಷ್ಟು ಸಮರ್ಥರಿದ್ದರು, ಮತ್ತು ಈಗ ಕೂಡಾ ಅವರು ಸಮರ್ಥರೇ ಇದ್ದಾರೆ. ಅವರಲ್ಲಿ ವಿಶ್ವಾಸವಿಡಬೇಕಾದ್ದು ಮುಖ್ಯ. ಒಮ್ಮೊಮ್ಮೆ ತೀರಾ ವಿಶೇಷ ಸಂದರ್ಭಗಳಲ್ಲಿ ಸಮಾಲೋಚನೆಗಾಗಿ ಹೊರದೇಶದ ಕೆಲವರು ಬೇಕಾದೀತು. ಇವೊತ್ತಿನ ಸರಕಾರ ಅಸಾಮಾನ್ಯ ಸಾಹಸ ಎಂದು ತಾನು ನಂಬುವಂಥ ಯೋಜನೆಗಳಲ್ಲಿ ಇವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ವಿದೇಶಿ ಎಂಜಿನಿಯರುಗಳನ್ನು ಅವಲಂಬಿಸಿದರೆ, ಯಾವ ಅವಕಾಶ ನಮ್ಮ ಎಂಜಿನಿಯರುಗಳಿಗೆ ಸಿಕ್ಕು ಅವರು ಅದಕ್ಕೆ ತಕ್ಕುದಾಗಿ ಬೆಳೆಯಬಹುದಿತ್ತೋ ಅದು ತಪ್ಪಿ ನಮ್ಮ ಜನ ತಮ್ಮ ಸಹಜ ಔನ್ನತ್ಯಕ್ಕೆ ಏರಿಕೊಳ್ಳಲು ಸಾಧ್ಯವಾಗದೇ ಹೋಗುತ್ತದೆ. ಅಷ್ಟೇ ಅಲ್ಲದೆ, ಎಂಜಿನಿಯರುಗಳೂ ಮನುಷ್ಯರೇ ತಾನೇ. ರಾಜಕಾರಣಿಗಳು ಯಾವಾಗಲೂ ತಮ್ಮ ಗೂಡಿಗೇ ಗರಿ ಸಿಕ್ಕಿಸಿಕೊಳ್ಳುತ್ತ ಕೂತರೆ ಇವರೂ ಅವರನ್ನೆ ಅನುಕರಿಸಲು ತೊಡಗುತ್ತಾರೆ.<br /><span class=""></span></div><br /><div>ಸುಮಾರು ನೂರುವರ್ಷಗಳ ಹಿಂದೆ ಇಂಡಿಯಾದ ಉಕ್ಕು ಗ್ಲಾಸ್ಗೋದಲ್ಲಿ ಮಾರಾಟವಾಗುತ್ತಿದ್ದುದನ್ನು ವಿಶ್ವೇಶ್ವರಯ್ಯನವರು ನಮಗೆ ತಿಳಿಸಿದರು. ಇದನ್ನು ಅವರು ತಮ್ಮ ಪುಸ್ತಕದಲ್ಲಿ ಹೇಳಿಲ್ಲ. ಆದರೆ ಈ ಸಂಗತಿ ತುಂಬಾ ಕುತೂಹಲದ್ದಾಗಿದೆ. ಅತ್ಯುನ್ನತ ದರ್ಜೆಯ ಅಥವಾ ಯಾವುದೇ ದರ್ಜೆಯ ಉಕ್ಕನ್ನಾಗಲೀ ಕಬ್ಬಿಣವನ್ನಾಗಲೀ ಗೃಹಕೈಗಾರಿಕೆಯ ಮಟ್ಟದ ಸಾಧನ ವ್ಯವಸ್ಥೆಗಳಲ್ಲೇ ತಯಾರಿಸಲು ಸಾಧ್ಯ. ಡೆಲ್ಲಿಯ ರಾಯ್ ಪೀಠೋರಾದಲ್ಲಿರುವ ಮೌರ್ಯರ ಕಾಲದ ಕಬ್ಬಿಣದ ಸ್ತಂಭಗಳೇ ಅದನ್ನು ಸ್ಪಷ್ಟಗೊಳಿಸುತ್ತವೆ. ಗೃಹಕೈಗಾರಿಕೆ-ಬೃಹತ್ ಉದ್ಯಮಗಳ ನಡುವಣ ಸಮಸ್ಯೆಯನ್ನು ಚರ್ಚೆಗೆತ್ತಿಕೊಳ್ಳುವುದು ನನ್ನ ಪ್ರಸ್ತುತ ಉದ್ದೇಶವಲ್ಲ. ಆದರೆ ವಾಸ್ತವ ಸಂಗತಿ ಹೀಗಿದೆ - ಭಾರತಕ್ಕೆ ವಿದೇಶೀ ಉಕ್ಕನ್ನು ಆಮದು ಮಾಡಿಕೊಳ್ಳಲಾಗುತ್ತಿದೆ, ಸ್ಥಳೀಯವಾದ ಬೆಲೆಗಿಂತ ಹೊರಗಿನ ಬೆಲೆ ಟನ್ನಿಗೆ ಸುಮಾರು ನೂರು ರೂಪಾಯಿಗಳಷ್ಟು ಹೆಚ್ಚಿದ್ದರೂ ಈ ದುಬಾರಿ ಬೆಲೆ ತೆರುತ್ತಿದ್ದೇವೆ. ಸ್ಥಳೀಯ ಕ್ರಮಗಳಲ್ಲಿ ಅದೇ ಮಾಲನ್ನು ಅದಕ್ಕಿಂತ ಕಡಿಮೆ ಬೆಲೆಗೆ ಅಥವಾ ಕನಿಷ್ಠ ಅದೇ ಬೆಲೆಗೆ ಉತ್ಪಾದಿಸುವುದು ಸಾಧ್ಯವಿರುವಾಗಲೂ ದುಬಾರಿಯಲ್ಲಿ ಆಮದು ಮಾಡುವುದನ್ನೇ ಮುಂದುವರಿಸುತ್ತಿರುವವರನ್ನು ಏನೆನ್ನಬೇಕು?<br /><a href="http://3.bp.blogspot.com/_D9K0HARbkSE/SOjNsN4k-aI/AAAAAAAAABo/_uErvxKTBRE/s1600-h/New+Picture+(10).bmp"><img id="BLOGGER_PHOTO_ID_5253675124852586914" style="FLOAT: right; MARGIN: 0px 0px 10px 10px; CURSOR: hand" alt="" src="http://3.bp.blogspot.com/_D9K0HARbkSE/SOjNsN4k-aI/AAAAAAAAABo/_uErvxKTBRE/s320/New+Picture+(10).bmp" border="0" /></a><br />ಇದೇ ಈಗ ಈಜಿಪ್ಟ್ ಕೈಗೊಂಡ ಸೂಯೆಜ್ ಕಾಲುವೆಯ ರಾಷ್ಟ್ರೀಕರಣ ವರ್ಣೀಯ ಜನರೆಲ್ಲರ ಕಾರ್ಪಣ್ಯರಾಶಿಯನ್ನೂ ಅವರ ಐಕ್ಯಮತ್ಯದ ಅಗತ್ಯವನ್ನೂ ಅನಿವಾರ್ಯವೆನ್ನಿಸುವಂತೆ ಎದುರೆತ್ತಿ ತೋರಿಸಿಕೊಟ್ಟಿದೆ. ಸುಮಾರು ನಲವತ್ತು ವರ್ಷಗಳಿಗೂ ಹಿಂದೆ ಕೂಡ ಇಂಥ ಕ್ರಿಯಾತ್ಮಕ ಐಕ್ಯಮತ್ಯ ತನ್ನ ಹೊಳಹು ಕಾಣಿಸಿತ್ತು ಎಂಬುದು ಕುತೂಹಲಕರವಾದ ಅಂಶ. ಶ್ರೀವಿಶ್ವೇಶ್ವರಯ್ಯನವರು ಬರೆದಿದ್ದಾರೆ: "ನಾನು ಈಜಿಪ್ಟ್ನಲ್ಲಿನ ಆಸ್ವಾನ್ನಂಥ ಬೃಹತ್ ನೀರಾವರಿ ಆಣೆಕಟ್ಟುಗಳನ್ನು ನೋಡಿಕೊಂಡು ಬಂದಿದ್ದೇನಾದ್ದರಿಂದ ಮೈಸೂರಿನ ಕಾವೇರಿ ಕಣಿವೆಯ ಅಗತ್ಯಗಳಿಗೆ ತಕ್ಕ ನಕ್ಷೆ ಸಿದ್ಧಮಾಡಲು ಹೆಚ್ಚು ಕಾಲ ಬೇಕಾಗಲಿಲ್ಲ."<br />ಹಿಂದುಳಿದ ಜಾತಿಗಳನ್ನು ಓಲೈಸುವ ಬಗ್ಗೆ ಮೈಸೂರು ಮಹಾರಾಜರಿಗಿದ್ದ ತವಕದ ವಿಷಯದಲ್ಲಿ ತಾವು ಅವರ ಜೊತೆ ವಾದ ವಿವಾದ ಮಾಡಿದ್ದನ್ನು ಕೂಡಾ ಶ್ರೀ ವಿಶ್ವೇಶ್ವರಯ್ಯನವರು ತುಂಬ ಸೂಕ್ಷ್ಮನಯವಂತಿಕೆಯಿಂದ ನಿರೂಪಿಸಿದ್ದಾರೆ. ಮುಂದುವರಿದು ಜಾತಿಯನ್ನು ಎತ್ತಿಕಟ್ಟುವುದು ಆಮೇಲೆ ಆ ಜಾತಿ ತಮ್ಮ ಹತೋಟಿ ಮೀರಿ ಹೋಗಿಬಿಟ್ಟಂಥ ಸಂದರ್ಭದಲ್ಲಿ ಅದಕ್ಕಿಂತ ಕೊಂಚ ಕಡಿಮೆ ಜಾತಿಯ ಜನರನ್ನು ಎತ್ತಿ ಹುರಿಗೊಳಿಸುವುದು - ಇದೇ ಉಪಾಯದಿಂದ ಬ್ರಿಟಿಷರು ಭಾರತದಲ್ಲಿ ತಮ್ಮ ಆಳ್ವಿಕೆಯನ್ನು ಮುಂದುವರಿಸಿಕೊಂಡು ಹೋಗಲು ಯತ್ನಿಸುತ್ತಿದ್ದರು ಎಂಬುದನ್ನು ನಾವು ತಿಳಿದಿರಬೇಕು. ಹೀಗೆ ಮೈಸೂರಲ್ಲೂ ಬ್ರಾಹ್ಮಣರ ಮೇಲೆ ಬ್ರಾಹ್ಮಣೇತರರನ್ನು ಎತ್ತಿಕಟ್ಟುವುದಕ್ಕೆ ಹವಣಿಸಿ ಅವರು ಒಂದು ಸಮಿತಿಯನ್ನು ನೇಮಕ ಮಾಡಿದರು. ವಿವಿಧ ಜಾತಿಗಳ ದೃಷ್ಟಿಯಿಂದ ಶಿಕ್ಷಣದ ಸಾಧ್ಯತೆಗಳನ್ನು ಪರಿಶೀಲಿಸುವುದು ಈ ಸಮಿತಿಯ ಉದ್ದೇಶವಾಗಿತ್ತು. ಇದನ್ನು ವಿಶ್ವೇಶ್ವರಯ್ಯ ವಿರೋಧಿಸಿದ್ದರು. ಆಗಲೆ ವಿಶ್ವೇಶ್ವರಯ್ಯನವರು ತಮ್ಮ ದಿವಾನ್ ಪದವಿಗೆ 1918ರ ಎಪ್ರಿಲ್ನಲ್ಲಿ ರಾಜೀನಾಮೆ ಕೊಡುವುದಾಗಿ ತಿಳಿಸಿ ಅದಕ್ಕೆ ಮಹಾರಾಜರಿಂದ ಗುಪ್ತವಾಗಿ ಒಪ್ಪಿಗೆ ಪಡೆದುಕೊಂಡಿದ್ದರು. ಆಮೇಲೆ 1918ರ ಡಿಸೆಂಬರ್ 9ರಂದು ಅವರು ಬೆಂಗಳೂರಿನ ಕೇಂದ್ರ ಹಾಗೂ ರೆವಿನ್ಯೂ ಸೆಕ್ರೆಟರಿಯೆಟ್ ಗೆ ಹೀಗೆ ತಿಳಿಸಿದ್ದರು: "ಖಾಸಗಿ ವಲಯಗಳಲ್ಲಿ ಆಗಾಗ ನಾನು ಆ ಜಾತಿಯ ಪರ, ಈ ಜಾತಿಯ ವಿರೋಧಿ ಮುಂತಾಗಿ ಹೇಳುತ್ತಿರುವುದುಂಟು; ಯಾವಾಗಲೂ ನಾನು ತಕ್ಕಡಿಯನ್ನು ಪೇರಿಲ್ಲದೆ ಹಿಡಿದಿದ್ದೇನೆಂಬುದನ್ನು ಕಾಲವೆ ತೋರಿಸಿಕೊಡುತ್ತದೆ." ಇವರು ಮುಂಚಿನ ಕಾಲದ ಹಾಗೂ ಐರೋಪ್ಯ ಶಿಕ್ಷಣದ ಚಿಂತನ ಕ್ರಮವನ್ನು ರೂಢಿಸಿಕೊಂಡವರು; ತಕ್ಕಡಿಯನ್ನು ನೇರ ಹಿಡಿದಿರಬೇಕೆಂಬ ನಿಷ್ಠೆಯಲ್ಲಿ, ಖಾಸಗಿ ಬದುಕಿನಲ್ಲೂ ನಿಷ್ಠುರ ಪ್ರಾಮಾಣಿಕತೆಯನ್ನು ಪಾಲಿಸಿಕೊಂಡವರು. ಆದರೆ ಹೀಗೆ ತಕ್ಕಡಿಯನ್ನು ಪೇರಿಲ್ಲದೆ ನೇರ ಹಿಡಿಯುವುದೇ ಕೆಲವು ಸಂದರ್ಭಗಳಲ್ಲಿ ಅನ್ಯಾಯವಾಗುತ್ತದೆ ಎಂಬುದನ್ನು ಅವರು ಅರಿತಿರಲಿಲ್ಲ, ಅಥವಾ ಹಾಗೆ ತಿಳಿಯುವುದೇ ಅವರಿಗೆ ಸಾಧ್ಯವಿರಲಿಲ್ಲ.<br /><span class=""></span></div><br /><div>ಉತ್ತರಪ್ರದೇಶದಲ್ಲಿ 1951ರ ಜನಗಣತಿಯ ಪ್ರಕಾರ ಕಾಣುವ ಆರು ಕೋಟಿ ಮುವ್ವತ್ತೆರಡು ಲಕ್ಷ ಜನಸಂಖ್ಯೆಯಲ್ಲಿ ಉತ್ತಮ ಜಾತಿಯವರು ಒಂದು ಕೋಟಿ ಇಪ್ಪತ್ತು ಲಕ್ಷ ಮತ್ತು ವಿಧಾನಸಭೆಯಲ್ಲಿ ಆ ಜಾತಿಯ ಸದಸ್ಯರ ಸಂಖ್ಯೆ 260; ಮುಸ್ಲಿಮರು ಅರವತ್ತು ಲಕ್ಷ ಮತ್ತು ಅವರ ಸದಸ್ಯರ ಸಂಖ್ಯೆ 43; ಹರಿಜನರು ಒಂದು ಕೋಟಿ ಇಪ್ಪತ್ತಾರು ಲಕ್ಷ, ಸದಸ್ಯರು 84. ಹಿಂದುಳಿದ ಕೋಮಿನವರು ಮೂರು ಕೋಟಿ ಇಪ್ಪತ್ತಾರು ಲಕ್ಷ; ಅವರ ಶಾಸಕರು 43; ಇಡೀ ದೇಶದಲ್ಲೂ ಇಂಥದೇ ಒಂದು ಸ್ಥಿತಿ ಕಾಣಸಿಗುತ್ತದೆ. ಆಯ್ಕೆಯಲ್ಲಾಗಲೀ ನೇಮಕಗಳಲ್ಲಾಗಲೀ ಯೋಗ್ಯತೆ ಮತ್ತು ನ್ಯಾಯತಕ್ಕಡಿಯೇ ಏಕೈಕ ನಿರ್ಣಾಯಕ ಅಂಶವಾಗುವುದಾದರೆ ಸುಮಾರು ಐದುಸಾವಿರ ವರ್ಷಗಳ ಮನಸ್ಸಂಸ್ಕಾರದ ಪೂರ್ವಪರಂಪರೆಯಿಂದ ವಿಶೇಷ ಸಿದ್ಧಿಪಡೆದುಕೊಂಡಿರುವ ಮೇಲು ಜಾತಿಯವರನ್ನು ಬೇರೆ ಯಾವ ಜಾತಿಯವರೂ ಗೆಲ್ಲಲು ಸಾಧ್ಯವಾಗುವುದಿಲ್ಲ. ಹಿಂದುಳಿದ ಜಾತಿಗಳಿಗೆ ಮತ್ತು ಆ ಮೂಲಕ ಇಂಡಿಯಾ ದೇಶಕ್ಕೇ ನ್ಯಾಯ ದೊರಕಿಸಿಕೊಡುವ ಸಲುವಾಗಿ ಉತ್ತಮ ಜಾತಿಗಳಿಗೆ ತಾತ್ಕಾಲಿಕ ಅನ್ಯಾಯ ಮಾಡಲೇಬೇಕಾಗುತ್ತದೆ.<br /><br />`ರಾಜಕೀಯ ಹಾಗೂ ಮತ್ತಿತರ ಸಮ್ಮೇಳನಗಳು' ಎಂಬ ಅಧ್ಯಾಯದಲ್ಲಿ ವಿಶ್ವೇಶ್ವರಯ್ಯನವರು ತಮಗೆ ಮಹಾತ್ಮ ಗಾಂಧಿ ಬಗ್ಗೆಯೂ ಸ್ವಾತಂತ್ರ್ಯ ಚಳವಳಿಯ ಬಗ್ಗೆಯೂ ಇದ್ದ ಸಹಾನುಭೂತಿಯನ್ನು ಅಡಗಿಸಿಡಲಾರದೆ ಹೋಗಿದ್ದಾರೆ. "ನಮ್ಮ ದೇಶದ ಜನ ಸಾಕಷ್ಟು ನೋವು ಅನುಭವಿಸಿದವರಲ್ಲ. ಅದಕ್ಕೇ ನನಗೆ ಇವರ ಶಕ್ತಿಯ ಬಗ್ಗೆ ಕಡಿಮೆ ವಿಶ್ವಾಸ" ಎಂಬ ಗಾಂಧೀಜಿಯ ಮಾತನ್ನು ಅವರು ಉದ್ಧರಿಸಿದ್ದಾರೆ. ವಿಶ್ವೇಶ್ವರಯ್ಯ ನೋವು ಅನುಭವಿಸಿದ್ದಾರೆ, ವಾಸ್ತವವಾಗಿ ಮಹತ್ತರವಾದ ನೋವುಗಳನ್ನೇ ಅನುಭವಿಸಿದ್ದಾರೆ. ಈ ಬಗ್ಗೆ ತಮ್ಮ ನೆನಪುಗಳಲ್ಲಿ ಅವರು ಪ್ರಸ್ತಾಪಿಸುವುದಿಲ್ಲ. ಹಾಗಿದ್ದರೂ, ತಮ್ಮ ಪತ್ನಿ ಕೈಬಿಟ್ಟಾಗ ಅವರು ತೋರಿದ ಘನವಂತಿಕೆ ಇಂಡಿಯಾದ ಪ್ರತಿಯೊಬ್ಬರೂ ತಿಳಿದಿರಬೇಕಾದ್ದು. ವಿಶಾಖಪಟ್ಟಣದ ಬಂದರಿಗೆ ಸಂಬಂಧಿಸಿದ ಒಂದು ಕತೆಯನ್ನು ಕೂಡ ಅವರು ಇಲ್ಲಿ ಹೇಳಿಲ್ಲ. ಆದರೆ ಐತಿಹ್ಯದಿಂದ ತಿಳಿಯುವ ಹಾಗೆ, ಈ ಬಂದರನ್ನು ಹತೋಟಿಗೆ ತಂದುಕೊಳ್ಳುವುದಕ್ಕೆ ಮೊದಲಲ್ಲಿ ಬೇಕಂತಲೇ ಕೆಲವು ಹಡಗುಗಳನ್ನು ಅದರಲ್ಲಿ ಮುಳುಗಿಸಿದರು; ಹಾಗೆ ಮಡಲು ಯೋಚಿಸಿದ ಪ್ರಪಂಚದ ಮೊತ್ತ ಮೊದಲ ಎಂಜಿನಿಯರ್ ಈತ. ವೈಯಕ್ತಿಕ ನೋವುಗಳನ್ನು ಹೇಳುವುದಾದರೆ ಪ್ರಾಯಶಃ ಅನೇಕ ಪ್ರಸಿದ್ಧ ಹುತಾತ್ಮರಿಗಿಂತ ಹೆಚ್ಚಾಗಿ ನೋವು ತಿಂದವರು ಇವರು. ಆದರೆ ಅವರಿಗೆ ರಾಜಕೀಯವಾದ ಅಥವಾ ಜನಸಾಮಾನ್ಯರಿಗಾಗಿ ನಿರ್ವೈಯಕ್ತಿಕವಾದ ನೋವು ತಿಂದ ಅನುಭವ ಅಷ್ಟಾಗಿ ಇರಲಾರದು. ಒಮ್ಮೆ ಅವರಿಗೆ ಅಂಥ ಸ್ವಂತಿಕೆಯನ್ನು ಮೀರಿದ ಶೋಕ, ಆರ್ತತೆಯ ಅನುಭವ ಇದ್ದಿದ್ದೇ ಆಗಿದ್ದರೆ ದೇಶದ ಈಚಿನ ಇತಿಹಾಸದಲ್ಲಿ ಅವರು ಮಹಾತ್ಮ ಗಾಂಧಿಯ ಪಕ್ಕದಲ್ಲೇ ಹತ್ತಿರ ಕೂತಿರುತ್ತಿದ್ದರು. ರಾಜಕೀಯ ಅಥವಾ ಸಾಧಾರಣೀಕೃತ ಸಂಕಷ್ಟಗಳನ್ನು ಅನುಭವಿಸಬಲ್ಲ ಸಾಮರ್ಥ್ಯ ದಕ್ಷಿಣ ಇಂಡಿಯಾದ ನಾಯಕಮಂದಿಯಲ್ಲಿ ಕೊಂಚ ತಣ್ಣಗಾಗಿಬಿಟ್ಟಿದೆ ಎಂಬುದೂ ನಿಜವಿರಬಹುದು. ಶ್ರೀ ಸಿ. ರಾಜಗೋಪಾಲಾಚಾರಿಯವರು ಕಾಂಗ್ರೆಸ್ ಪಕ್ಷದಲ್ಲೇ ನಿಸ್ಸಂಶಯವಾಗಿ ಅತ್ಯಂತ ಸಮರ್ಥರೂ ಅತ್ಯಂತ ಬುದ್ಧಿಶಾಲಿಯೂ ಆಗಿರುವವರು ಮತ್ತು ಅದೇ ಏಕೈಕ ಅರ್ಹತೆಯಾಗಿದ್ದರೆ ಸ್ವತಂತ್ರ ಭಾರತದ ಪ್ರಧಾನಿಯಾಗಲು ಅವರಿಗಿಂತ ಉತ್ತಮರು ಬೇರೆ ಇರಲಿಲ್ಲ. ಆದರೆ ಅವರು ಎಂದೂ ಆ ದರ್ಜೆಗೆ ಏರಲು ಶಕ್ತರಾಗಿರುವುದಿಲ್ಲವೆಂಬುದನ್ನು ಸೂಕ್ಷ್ಮ ಮನಸ್ಸಿನ ಜನ 1923-24ರಲ್ಲಾಗಲೇ ತಿಳಿದುಕೊಂಡು ಬಿಡಬಹುದಿತ್ತು. ಆ ಕಾಲದಲ್ಲಿ ಇಡೀ ದೇಶ ಮತ್ತು ಕಾಂಗ್ರೆಸ್ ಪಕ್ಷ ಅವರ ಕಾಲಿಗೆ ಎರಗಿತ್ತು; ಆಗ ಅವರಿಗೂ ಗುರುವಾದ ಗಾಂಧೀಜಿ ಸೆರೆಯಲ್ಲಿದ್ದರು, ಮತ್ತು ಕಾಂಗ್ರೆಸ್ ಪಕ್ಷದಲ್ಲಿನ ದೊಡ್ಡ ಜನರೆಲ್ಲರ ಏಕೀಕೃತ ಶಕ್ತಿಯನ್ನೂ ಕೂಡಾ ಇವರು ಹೆಚ್ಚು ಕಡಿಮೆ ಏಕಹಸ್ತರಾಗಿಯೇ ಸೋಲಿಸಿ ಚೆಲ್ಲಲು ಶಕ್ತರಾಗಿದ್ದರು. ಆದರೆ ಎದುರ್ಗೊಂಡು ಬಂದ ಅಂಥ ವಿಜಯಮಾಲಿಕೆಯನ್ನೇ ಅವರು ಸೋಲಿನ ಸರವಾಗಿ ಮಾಡಿಕೊಂಡರು. ಆ ಕಾಲದಲ್ಲಿ ಕಾಯಿದೆ ನಿರೋಧದ ಚಳವಳಿಯನ್ನು ನೇರ ಆರಂಭಿಸುವುದು ಬಿಟ್ಟು ಅವರು ಚಳುವಳಿಯ ಸಾಧ್ಯತೆಗಳನ್ನು ತನಿಖೆ ಮಾಡುವುದಕ್ಕೆ ಒಂದು ಸಮಿತಿಯನ್ನು ನೇಮಿಸಿ ಕೂತರು. ದಕ್ಷಿಣ ಇಂಡಿಯಾದ ಎಲ್ಲ ಸಮರ್ಥ ತರುಣರೂ, ಅದರಲ್ಲೂ ಮುಖ್ಯವಾಗಿ ಬಡವರ್ಗಗಳಿಗೆ ಸೇರಿದಂಥವರು, ಇತ್ತೀಚಿನ ಇತಿಹಾಸದ ಈ ಘಟನೆಗಳನ್ನು ಕುರಿತು ತೀವೃ ಆಲೋಚಿಸಬೇಕು ಮತ್ತು ಬೌದ್ಧಿಕತೆಯ ವೇದಿಕೆಯ ಮೇಲೆ ಕ್ರಿಯಾಶೀಲತೆ ಬಲಿಯಾಗಿ ಹೋಗದಂಥ ಸಂಭಾವಿತ ಜೀವನ ಕ್ರಮವನ್ನು ರೂಪಿಸಿಕೊಳ್ಳಬೇಕು.</div></div><br /><br /><strong>(ಚಿತ್ರಗಳು ವಿಕ್ರಾಂತ ಕರ್ನಾಟಕ, ಕನ್ನಡ ವಾರಪತ್ರಿಕೆಯ ಸೌಜನ್ಯ.)</strong>ಕೆ. ಸತ್ಯನಾರಾಯಣhttp://www.blogger.com/profile/15167030166766836381noreply@blogger.com0tag:blogger.com,1999:blog-1964049159346480323.post-19197788022670937452008-09-22T21:25:00.000-07:002008-10-01T11:18:37.581-07:00ಕಿರಂ ಬಗ್ಗೆ ಡಾ|| ಯು.ಆರ್.ಅನಂತಮೂರ್ತಿ...<a href="http://3.bp.blogspot.com/_D9K0HARbkSE/SNhwdHQcKuI/AAAAAAAAABY/tNt7MhgujfY/s1600-h/ananth.jpg"><img id="BLOGGER_PHOTO_ID_5249069011166833378" style="FLOAT: left; MARGIN: 0px 10px 10px 0px; CURSOR: hand" alt="" src="http://3.bp.blogspot.com/_D9K0HARbkSE/SNhwdHQcKuI/AAAAAAAAABY/tNt7MhgujfY/s320/ananth.jpg" border="0" /></a><br /><div><strong><span style="color:#993399;">On Mon, 22 Sep 2008 U R Ananthamurthy wrote :<br /></span></strong>Dear Satya<br />You are movingly excellent on Kiram. I have felt this in him. He considers me a guru but more truly I consider him a guru- for I have learnt from him. My reading in Kannada is not as wide as his. I find it difficult to tell him what you have written and I also feel, because all praise embarrasses him. He is a mad lover of literature- particularly poetry- and these days he has become more coherent to listeners in meetings. But he was always original in small circles.Ananthamurthy<br /><br /><strong><span style="color:#993399;">On Mon, Sep 22, 2008 at 5:29 PM, satyanarayana krishnamurthy <</span></strong><a href="mailto:satya_k_21@rediffmail.com"><strong><span style="color:#993399;">satya_k_21@rediffmail.com</span></strong></a><strong><span style="color:#993399;">> wrote:<br /></span></strong>My Dear Sir,If my piece on kiram is good all the credit goes to kiram only. I am yet to see a person who has internalised such vast reading and convert the same into passion. His rereading and unlearning is very inspiring and in this regard he scores Kurthakoti too. I also feel embarrassed to tell all these things to him. I avoided meeting him after writing this piece.<br />This is first part. In second part I intend to write on personal aspects.<br /><br />Thirumalesh’s translation of Rilke novel is very good. It opens new vistas. The feelings you have expressed about kiram needs circulation atleast among close friends. If you permit I will circulate your letter.<br />Regards<br />- Satyanarayana<br /><strong><span style="color:#cc33cc;">U R Ananthamurthy wrote :<br /></span></strong>Yes. I want all my friends to know how unique is Kiram in the world of letters-- I do mean in the WORLD of letters. After Dr Johnson in England the oral tradition has almost disappeared. Kiram speaks and he feels it is as good or better than writing. His vinaya is endless.<br />afflyAnanthamurthy </div><div> </div><div><strong>(ಫೋಟೋ ಕೃಪೆ : ಸಂಪದ.ನೆಟ್ )</strong></div>ಕೆ. ಸತ್ಯನಾರಾಯಣhttp://www.blogger.com/profile/15167030166766836381noreply@blogger.com1tag:blogger.com,1999:blog-1964049159346480323.post-16612538398786648522008-09-21T05:57:00.000-07:002008-09-21T06:02:12.962-07:00ಪುಸ್ತಕ ಸಮೀಕ್ಷೆ - ಲೋಹಿಯಾ ರೀತಿ<a href="http://1.bp.blogspot.com/_D9K0HARbkSE/SNZFJeZrRtI/AAAAAAAAABQ/Ov8pupX0myY/s1600-h/lohia-2.bmp"><img id="BLOGGER_PHOTO_ID_5248458444828788434" style="FLOAT: left; MARGIN: 0px 10px 10px 0px; CURSOR: hand" alt="" src="http://1.bp.blogspot.com/_D9K0HARbkSE/SNZFJeZrRtI/AAAAAAAAABQ/Ov8pupX0myY/s320/lohia-2.bmp" border="0" /></a><br /><div>ಕನ್ನಡದಲ್ಲಿ ಈಗ ಹಿಂದೆಂದೂ ಪ್ರಕಟವಾಗದಷ್ಟು ಸಂಖ್ಯೆಯಲ್ಲಿ ಪ್ರತಿವರ್ಷವೂ ಪುಸ್ತಕಗಳು ಹೊರಬರುತ್ತಿವೆ. ಬರೇ ಸಂಖ್ಯೆಯ ದೃಷ್ಟಿಯಿಂದ ಮಾತ್ರವಲ್ಲದೆ, ಗುಣ, ಸ್ವಭಾವ, ವೈವಿಧ್ಯಗಳ ದೃಷ್ಟಿಯಿಂದಲೂ ಕನ್ನಡ ಪುಸ್ತಕಗಳ ಪ್ರಪಂಚದಲ್ಲಿ ನಿರಂತರ ಬದಲಾವಣೆಯಾಗುತ್ತಿದೆ. ಹತ್ತಾರು ಅಕಾಡೆಮಿಗಳು, ಪ್ರಾಧಿಕಾರ, ಪರಿಷತ್ತು, ವಿಶ್ವವಿದ್ಯಾಲಯಗಳು ಮಾತ್ರವಲ್ಲದೆ ಬರಹಗಾರರು, ಬರಹಗಾರರ ಗುಂಪುಗಳು ಕೂಡ ತಮ್ಮ ತಮ್ಮ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. </div><div><br />ಈ ಪುಸ್ತಕಗಳೆಲ್ಲ ಓದುಗರ ಗಮನ ಸೆಳೆಯಲು, ಓದುಗರನ್ನು ತಲುಪಲು ನಮ್ಮಲ್ಲಿ ಯಾವ ರೀತಿಯ ವ್ಯವಸ್ಥೆಯೂ ಇಲ್ಲ. ದಿನಪತ್ರಿಕೆಗಳು/ವಾರಪತ್ರಿಕೆಗಳಲ್ಲಿ ಪ್ರಕಟವಾಗುವ ಪುಸ್ತಕ ಸಮೀಕ್ಷೆಗಳು ಬಹುಪಾಲು ಲೇಖಕ ಕೇಂದ್ರಿತವಾಗಿರುತ್ತವೆ. ಒಂದು ಪುಸ್ತಕ ಓದುಗನೊಬ್ಬನ ಆಸಕ್ತಿಗೆ, ಸದ್ಯದ ಆತನ ಬದುಕಿಗೆ ಹೇಗೆ ಮುಖ್ಯ ಎಂದು ತಿಳಿಸಬೇಕಾದ್ದು ಸಮೀಕ್ಷೆಗಳ ಕರ್ತವ್ಯ. ಬದಲಿಗೆ ನಮ್ಮಲ್ಲಿ ಬಹುಪಾಲು ಸಮೀಕ್ಷೆಗಳು ಲೇಖಕನ ಬಗ್ಗೆ, ಕೃತಿಯ ಬಗ್ಗೆ ತೀರ್ಪು ನೀಡುವುದಕ್ಕೆ, ಬರಹಗಾರನ ಸ್ಥಾನಮಾನವನ್ನು ನಿರ್ದೇಶಿಸುವುದಕ್ಕೆ, ಕೃತಿಕಾರನ ಜೊತೆ ಇರುವ ಸ್ನೇಹ-ಪ್ರೀತಿ, ಕೋಪ, ತಿರಸ್ಕಾರಗಳನ್ನು ತೋರುವುದಕ್ಕೆ ತೋರುಗಂಬಗಳಾಗುತ್ತವೆ. ಇನ್ನೂ ಮುಖ್ಯವಾದ ಸಂಗತಿಯೆಂದರೆ ಬಹುಪಾಲು ಸಮೀಕ್ಷೆಗಳು ಸಾಹಿತ್ಯ ಕೃತಿ ಕೇಂದ್ರಿತವಾಗಿರುತ್ತವೆ. ಸಾಧಾರಣ ಸುಮಾರು ಮಟ್ಟದ ಕತೆ, ಕಾದಂಬರಿ, ಕವನಗಳು, ಸಂಗ್ರಹಗಳು ಪಡೆಯುವ ಸಮೀಕ್ಷಾ ಗಮನವನ್ನು ಕನ್ನಡದಲ್ಲಿ ಒಂದು ಶಾಸ್ತ್ರಗ್ರಂಥ, ವೈಜ್ಞಾನಿಕ ಗ್ರಂಥ ಪಡೆಯುವುದು ಅಪರೂಪ.</div><div><br />ಈ ಹಿನ್ನೆಲೆಯಲ್ಲಿ ಡಾ. ರಾಮಮನೋಹರ ಲೋಹಿಯಾ ತಮ್ಮ Mankind ಪತ್ರಿಕೆಯಲ್ಲಿ ಮಾಡುತ್ತಿದ್ದ ಪುಸ್ತಕಗಳ ಸಮೀಕ್ಷೆಯ ರೀತಿಯನ್ನು ಕನ್ನಡ ಓದುಗರ ಗಮನಕ್ಕೆ ತರಬೇಕೆನ್ನಿಸಿತು. ಈ ಎಲ್ಲ ಸಮೀಕ್ಷೆಗಳು ಕರ್ನಾಟಕ ಸರ್ಕಾರ ಪ್ರಕಟಿಸಿರುವ ಸಮಗ್ರ ಲೋಹಿಯಾ ಸಾಹಿತ್ಯದ ಎರಡನೆಯ ಸಂಪುಟವಾದ `ಉತ್ತರ ದಕ್ಷಿಣ' (ಪುಟಗಳು 225-228)ರಲ್ಲಿ ಇವೆ. ಈ ಎಲ್ಲ ಸಮೀಕ್ಷೆಗಳು ಓದುಗನನ್ನು ಕೆಣಕುತ್ತವೆ. ಆತನ ಆಸಕ್ತಿಗೆ ಕಾರಣವಾಗುತ್ತವೆ. ಪುಸ್ತಕ/ವಿಷಯಗಳ ಬಗ್ಗೆ ಓದುಗ ಸಮೀಕ್ಷೆಯಾಗುತ್ತಿರುವ ಕೃತಿಯಿಂದಾಚೆಗೂ ಮತ್ತೆ ಮತ್ತೆ ಯಾವ ಕೃತಿಗಳನ್ನು/ಯಾವ ಲೇಖಕನನ್ನು ಗಮನಿಸಬೇಕು ಎಂಬ ಸೂಚನೆಗಳನ್ನು ಕೂಡ ಕೊಡುತ್ತವೆ. ಪುಸ್ತಕವು ಓದುಗನ ಪ್ರಜ್ಞಾವಂತಿಕೆಗೂ, ಸಮಾಜದ ಬದುಕಿಗೂ ಆರೋಗ್ಯಕ್ಕೂ ಹೇಗೆ ಪ್ರಸ್ತುತ ಎಂಬುದನ್ನೂ ಕೂಡ ಸಮೀಕ್ಷೆ ಪರಿಶೀಲಿಸುತ್ತದೆ. </div><div><br />ಮೊದಲಿಗೆ ಗಮನ ಸೆಳೆಯುವುದು ಲೋಹಿಯಾ ಆಯ್ಕೆ ಮಾಡುವ ಪುಸ್ತಕಗಳ ವೈವಿಧ್ಯ. ಇತಿಹಾಸ, ರಾಜಕೀಯ, ಆಧ್ಯಾತ್ಮ, ಭಾಷಾಶಾಸ್ತ್ರ, ಜೀವನಚರಿತ್ರೆ, ಕಾವ್ಯ, ಅನುವಾದ, ಕತೆಗಳು, ಪುಟ್ಟ ಹುಡುಗಿಯೊಬ್ಬಳ ಕವನ ಸಂಕಲನ. ಬರೇ ಪುಸ್ತಕಗಳನ್ನು ಮಾತ್ರ ಲೋಹಿಯಾ ಆಯ್ಕೆ ಮಾಡುವುದಿಲ್ಲ. ಕಲ್ಲಚ್ಚಿನ ಪ್ರತಿಯೊಂದನ್ನೂ, ಮಾಸಿಕ ಪತ್ರಿಕೆಗಳು, ವಾರಪತ್ರಿಕೆಗಳನ್ನು ಕೂಡ ಆಯ್ಕೆ ಮಾಡಿಕೊಳ್ಳುತ್ತಾರೆ. ಪತ್ರಿಕೆಗಳ ವಿಶೇಷ ಸಂಚಿಕೆಗಳಿಗೆ/ಸಾಮಾನ್ಯ ಸಂಚಿಕೆಗಳಿಗೆ, ಸಂಶೋಧನಾ ಗ್ರಂಥಗಳಿಗೆ ನೀಡುವಷ್ಟು ಮಹತ್ವವನ್ನು ನೀಡುತ್ತಾರೆ. ಹಂಗೇರಿ ಕ್ರಾಂತಿ, ಚೈತನ್ಯದೇವನ ಬರಹ, ಚಿಂತನೆ, ಒರಿಸ್ಸಾದ ಸಂಖ್ಯಾಶಾಸ್ತ್ರ ಸಂಪುಟ, ಮಕ್ಕಳಿಗೆಂದು ಬರೆದ ಚರಿತ್ರೆಯ ಪಾಠಗಳ ಪುಸ್ತಕ, ಉರ್ದುಕವಿ ಇಲಹಾಬಾದಿ, ಹಿಂದಿ ಮಾತೃಭಾಷೆಯಲ್ಲದವನೊಬ್ಬನು ಹಿಂದಿಯಲ್ಲಿ ಬರೆದ ಕಥಾಸಂಕಲನ, ಇನ್ನೂ ಮುದ್ರಣವಾಗದೇ ಕಲ್ಲಚ್ಚಿನ ಪ್ರತಿಯಾಗೇ ಸಿಕ್ಕಿರುವ ನಾಗರಿಕ ಅಸಹಕಾರದ ಬಗ್ಗೆ ಚಿಂತನಾ ಸರಣಿ - ಹೀಗೆ ವೈವಿಧ್ಯ ಬೆಳೆಯುತ್ತಲೇ ಹೋಗುತ್ತದೆ. ಹೆರಾಲ್ಡ್ ಬ್ಲೂಮ್ ಮತ್ತು ಜಾರ್ಜ್ ಆರ್ವೆಲ್ ಇಂತಹವರ ಸಮೀಕ್ಷೆಗಳಲ್ಲಿ ಮಾತ್ರ ಇಂತಹ ವೈವಿಧ್ಯ ಮತ್ತು ದಿಟ್ಟತನ ಕಾಣುತ್ತದೆ. </div><div><br />ತಮ್ಮ ಓದುಗಾರಿಕೆ, ಸಮೀಕ್ಷಾ ರೀತಿಯ ಬಗ್ಗೆ ಲೋಹಿಯಾ ಹೀಗೆ ಬರೆದುಕೊಳ್ಳುತ್ತಾರೆ:</div><div>"ನಾನೇನು ಇಂಥದ್ದೇ ಪುಸ್ತಕ ಎಂದು ಸರಿಯಾಗಿ ಆಯ್ದು ಓದುವ ಓದುಗನಲ್ಲ. ಅಂಥ ಓದುಗರು ಎಲ್ಲಿರುತ್ತಾರೆ? ವಾಷಿಂಗ್ಟನ್ ಕಾಂಗ್ರೆಸ್ನ ಗ್ರಂಥ ಭಂಡಾರವನ್ನು ಬಳಸುವ ಅವಕಾಶವಿರುವವರು ಕೂಡ ಹೀಗೆ ಪಕ್ಕಾ ಆಯ್ಕೆಯ ಓದುಗರಲ್ಲ. ಕಡೆಯ ಪಕ್ಷ ಈ `ಆಯ್ಕೆ' ಎಂಬುದರ ಪೂರ್ಣ ಅರ್ಥದಲ್ಲಿ ಈ ತನಕ ಅಚ್ಚಾಗಿರುವ ಹಾಗೂ ಇದೀಗ ಅಚ್ಚಾಗುತ್ತಿರುವ ಎಲ್ಲವೂ ಈ ಗ್ರಂಥಾಲಯದಲ್ಲಿ ದೊರಕಲಾರದು. ಯಾರೋ ಒಬ್ಬರು ಇವನ್ನು ಆಯ್ದು ಇಲ್ಲಿಟ್ಟಿದ್ದಾರೆ. ಪೂರ್ವಾಗ್ರಹಗಳಿಂದಾಗಿಯೋ, ಅವರಿಗೆ ದೊರೆತ ಅಧಿಕಾರದಿಂದಾಗಿಯೋ ಈ ಬಗೆಯ ಆಯ್ಕೆ ಒಮ್ಮೊಮ್ಮೆ ತಪ್ಪಾಗಿರುತ್ತದೆ. ಹಾಗೆಯೇ ಸಂವಹನ, ಭಾಷೆ, ಮುಂತಾದ ನಿಜವಾದ ಸಮಸ್ಯೆಗಳ ಕಾರಣಕ್ಕಾಗಿಯೂ ಇಂಥ ತಪ್ಪುಗಳಾಗಿರಬಹುದು. ಶಸ್ತ್ರಾಸ್ತ್ರಗಳ ಅಥವಾ ಆರ್ಥಿಕ ಬಲವಿಲ್ಲದ ದೇಶಗಳ ಪುಸ್ತಕಗಳು, ಪತ್ರಿಕೆಗಳು ಹಾಗೂ ಇನ್ನಿತರ ಮುದ್ರಿತ ಸಾಹಿತ್ಯ ಸಾಮಾನ್ಯವಾಗಿ ಇಂಥ ಕಡೆ ದೊರೆಯುವುದಿಲ್ಲ. ಈ ಬಗೆಯ ಜಾಗತಿಕ ಸ್ಥಿತಿಯ ಹಿನ್ನೆಲೆಯಲ್ಲಿ ನಾನು ನನ್ನ ಪುಸ್ತಕಗಳನ್ನು ಆಯ್ಕೆಯಲ್ಲಿ ತೀರಾ ತರತಮ ವ್ಯತ್ಯಾಸ ಮಾಡದಿರುವುದರಿಂದ ನನ್ನ ಆಯ್ಕೆಗಳು ತೀರಾ ತಪ್ಪಾಗಿರಲಾರವು. ನನ್ನ ಗೆಳೆಯನೊಬ್ಬನಿದ್ದಾನೆ. ಅವನಿಗೆ ಓದುವುದೆಂದರೆ ಅಫೀಮು ಸೇವಿಸಿದ ಹಾಗೆ. ಹೀಗಾಗಿ ನಗರದಲ್ಲಿ ಸಿಕ್ಕ ಕಸವನ್ನೆಲ್ಲ ಕೊಂಡು ತರುತ್ತಾನೆ. ನಾನು ಅವನ ಮನೆಗೆ ಹೋದಾಗಲೆಲ್ಲ ಈ ಕಸದಿಂದ ಆಯ್ದ ಪತ್ರಿಕೆಗಳು ಹಾಗೂ ಓದಬಲ್ಲ ಸಾಹಿತ್ಯವನ್ನು ಹೆಕ್ಕಿ ತರುತ್ತೇನೆ. ಜೊತೆಗೆ ಕೆಲವರು ತಮ್ಮ ಪುಸ್ತಕಗಳನ್ನು, ಪ್ರಚಾರ ಸಾಹಿತ್ಯವನ್ನು ನನಗೆ ಕಳಿಸುತ್ತಿರುತ್ತಾರೆ. ಹೀಗಾಗಿ ಇಲ್ಲಿ ಯಶಸ್ವಿ ಪುಸ್ತಕಗಳಂತೆ ಅಷ್ಟು ಯಶಸ್ವಿಯಲ್ಲದ ಮುದ್ರಿತ ಸಾಹಿತ್ಯ ಕೂಡ ನನ್ನ ಮಟ್ಟಿಗೆ ಲಾಭದಾಯಕವೇ."<br /><span class=""></span></div><div>ಶ್ರೀ ಚೈತನ್ಯ ದೇವರನ್ನು ಕುರಿತ ಪುಸ್ತಕವನ್ನು ತಾನೇಕೆ ಸಮೀಕ್ಷೆ ಮಾಡುತ್ತಿದ್ದೇನೆಂದು ಗುರುತಿಸುವಾಗ ಹೀಗೆ ಬರೆಯುತ್ತಾರೆ:<br />"ತತ್ಕ್ಷಣದ ವಿದ್ಯಮಾನಗಳಿಂದ ಧಾರ್ಮಿಕ ಪುಸ್ತಕಗಳು ಹಾಗೂ ಮತ್ತಿತರ ಕಲಾತೀತವೆನಿಸುವ ವಿಷಯಗಳೆಡೆಗೆ ಚಲಿಸುವುದು ಕುತೂಹಲಕರವಾಗಿರಬಲ್ಲದು. ಇದು ಅವುಗಳ ಮೌಲ್ಯ ಕುರಿತ ವ್ಯಾಖ್ಯಾನವಲ್ಲ. ಹೊಡೆದಾಟ, ಬಡಿದಾಟಗಳ ಈ ಜಗತ್ತಿನಲ್ಲಿ ವಿವಿಧ ಪಂಗಡಗಳ ಭಕ್ತರಿಗೆ ಆಧ್ಯಾತ್ಮಿಕ ಅನುಭವಗಳು ಮನಶ್ಶಾಂತಿಯನ್ನು ಕೊಡುವ ಹಾಗೆ ಕಾಣುತ್ತದೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ಅನೇಕ ಸಲ ಇಂತಹ ಮನಶ್ಶಾಂತಿ ಜೀವನದ ಬಗೆಗಿನ ತಪ್ಪು ಕಲ್ಪನೆ ಮತ್ತು ಮೌಢ್ಯದ ತಳಹದಿಯ ಮೇಲೆ ನಿಂತಿರುತ್ತದೆ ಎಂಬುದು ಮಾತ್ರ ಅತ್ಯಂತ ವಿಷಾದನೀಯ..."<br /><span class=""></span></div><div>ಲೋಹಿಯಾ ಸಮೀಕ್ಷೆಗಳ ವೈಶಿಷ್ಟ್ಯವೆಂದರೆ ಪಂಡಿತರಂಜಕತೆಯಿಂದ ಪೂರ್ತಿ ತಪ್ಪಿಸಿಕೊಂಡಿರುವುದು. ಎಲ್ಲೂ ಎಡಬಿಡಂಗಿ ನಿಲುವುಗಳಿಲ್ಲ. ಅಡ್ಡಗೋಡೆಯ ಮೇಲೆ ದೀಪವಿಡುವ ಪ್ರವೃತ್ತಿಯೂ ಇಲ್ಲ. ಭಾಷೆ ಕೂಡ ನೇರ, ಹರಿತ, ಸರಳ ಮತ್ತು ನಿರ್ದಿಷ್ಟ. ಕೆಲವು ಉದಾಹರಣೆಗಳನ್ನು ನೋಡಿ:<br /></div><div>"ಇಲಹಾಬಾದಿ ಅಕ್ಬರ್ ದೊಡ್ಡ ಕವಿಯೆಂದಾಗಲೀ, ಶ್ರೇಷ್ಠ ಕವಿಯೆಂದಾಗಲೀ ಕರೆಯುವುದು ತಪ್ಪು. ಆದರೆ ಆಧುನಿಕ ಭಾರತದ ಒಳ್ಳೆಯ ಮೈನರ್ ಕವಿಗಳ ಸಾಲಿನಲ್ಲಿ ಅಕ್ಬರ್ಗೆ ಸ್ಥಾನವಿದೆ ಎಂಬುದರಲ್ಲಿ ಅನುಮಾನವಿಲ್ಲ."<br /></div><div>"ಟ್ವೆಂಟಿಯತ್ ಸೆಂಚುರಿಯಂಥ ನಿಯತ ಕಾಲಿಕ ಕೂಡ ಎಂಥ ವ್ಯಾಕರಣ ತಪ್ಪು ಮಾಡುತ್ತದೆ ನೋಡಿ; between ಹಾಗೂ or ಜೊತೆಗೂಡಿರುವುದನ್ನು ಗಮನಿಸಿ."<br /></div><div>"ಯಾವ ಭಾಷೆ ತನ್ನ ಕೃತಿ ನಿರ್ಮಿತಿಗೆ ಒಗ್ಗಿ ಬರುವಂತೆ ಅತ್ಯಂತ ಆತ್ಮೀಯವಾಗಿರಲಾರದೋ ಅಂಥ ಭಾಷೆಯ ಸೆರೆಯಿಂದಲೂ ಲೇಖಕ ಮೊದಲು ಬಿಡಿಸಿಕೊಳ್ಳಬೇಕು."<br /></div><div>"ಕವಿ ಅರುಣ್ ಅತ್ಯಂತ ಪರಿಶ್ರಮ ಪಟ್ಟು ಕೊನೆಗೊಮ್ಮೆ ಚಿನ್ನದಂಥ ಸಾಲು ಬರೆಯಬಲ್ಲ ಕವಿ."<br /></div><div>"ಹೀಗೆ ಇತಿಹಾಸ ಎರಡು ರೀತಿಯ ಅಶಾಸ್ತ್ರೀಯತೆಗೆ ಮತ್ತು ಅಸತ್ಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಒಂದು ಇಲ್ಲಿಂದ ಹಿಂದೆ ನೋಡುವುದು. ಇನ್ನೊಂದು ಹಿಂದೆ ನಿಂತು ಅಲ್ಲಿ ಕಂಡದ್ದನ್ನೇ ಮುಂದೆ ಚಾಚುವುದು. ಇತಿಹಾಸವನ್ನು ಅದು ಹೇಗೆ ಅಭಿನೀತವಾಗುತ್ತದೋ ಹಾಗೇ ಯಥಾವತ್ ನೋಡದಿರುವ ಒಂದೇ ದೋಷವೇ ಈ ಅಸತ್ಯಗಳೆಲ್ಲಕ್ಕೂ ಮೂಲ. ಇಡೀ ಪ್ರಪಂಚವನ್ನೇ ಕಣ್ಣಲ್ಲಿಟ್ಟುಕೊಂಡು ಈ ವಿಷಯವನ್ನು ಇನ್ನೊಮ್ಮೆ ಪ್ರತಿಪಾದಿಸಬೇಕೆಂದು ನನಗೆ ಆಸೆಯಿದೆ."<br /></div><div>"......ಅತ್ಯಂತ ಚೆನ್ನಾಗಿ ಬರೆದು ಅಂಥ ಒಳ್ಳೆಯದೇನನ್ನೂ ಹೇಳದಿರುವ ಕಲೆ ಇಂಗ್ಲೀಷ್ ಲೇಖಕರಿಗೆ ಚೆನ್ನಾಗಿ ಗೊತ್ತು. ಹೆಚ್ಚು ನೀರಿಲ್ಲದಿದ್ದರೂ ಝುಳುಝುಳು ಹರಿವ ಹಳ್ಳದ ಹಾಗೆ ಅವರ ಬರವಣಿಗೆ."<br /><span class=""></span></div><div>ಕನ್ನಡ ಓದುಗರಿಗೂ ಸಮೀಕ್ಷಾ ಪಟುಗಳಿಗೂ ಆಸಕ್ತಿ ಕೆರಳಿಸಬಲ್ಲ ಒಂದು ಸಮೀಕ್ಷೆಯನ್ನು ಈ ಟಿಪ್ಪಣಿಗಳೊಡನೆ ಗಮನಿಸಬಹುದು.<br />ಇದು ಸರ್ ಎಂವಿಯವರ ವೃತ್ತಿಜೀವನದ ನೆನಪುಗಳು. ಲೋಹಿಯಾ ಎಂವಿಯವರನ್ನು ಭೇಟಿ ಮಾಡಿದ್ದರು. ಈ ಸಮೀಕ್ಷೆ ಎಂವಿಯವರ ಪುಸ್ತಕದ ಮೊದಲ ಆವೃತ್ತಿ ಬಂದಾಗಲೇ ಪ್ರಕಟವಾಗಿದ್ದರೂ, ಕನ್ನಡಾನುವಾದ ಕೂಡ ಮೂವತ್ತು ಮೂವತ್ತೈದು ವರ್ಷಗಳಿಂದ ಲಭ್ಯವಾಗಿದ್ದರೂ, ಎಂವಿ ಕುರಿತಂತೆ ಕನ್ನಡದ ಯಾವ ಪುಸ್ತಕಗಳಲ್ಲೂ ಇಂತಹ ಬಹುಶ್ರುತ ಸಂವೇದನಾಶೀಲ ಸಮೀಕ್ಷೆಯ ಉಲ್ಲೇಖವಿಲ್ಲ.(ಸಮೀಕ್ಷೆಯ ಅನುವಾದ ಮುಂದಿನ ಸಾರಿ)<br /><strong>(ವಿಕ್ರಾಂತ ಕರ್ನಾಟಕ ವಾರಪತ್ರಿಕೆಯ ಸೆಪ್ಟೆಂಬರ್ 19,2008ರ ಸಂಚಿಕೆಯಲ್ಲಿ ಪ್ರಕಟಿತ)<br /></div></strong>ಕೆ. ಸತ್ಯನಾರಾಯಣhttp://www.blogger.com/profile/15167030166766836381noreply@blogger.com3tag:blogger.com,1999:blog-1964049159346480323.post-91060691207881035532008-09-20T07:54:00.000-07:002008-09-20T08:07:53.203-07:00ಕವಿ ರಿಲ್ಕೆ ಕಂಡ ನಮ್ಮ ಕಿರಂ<a href="http://4.bp.blogspot.com/_D9K0HARbkSE/SNUQq_DdfKI/AAAAAAAAAAM/mShJZ1JVm4c/s1600-h/kiram.JPG"><img id="BLOGGER_PHOTO_ID_5248119271436680354" style="FLOAT: left; MARGIN: 0px 10px 10px 0px; CURSOR: hand" alt="" src="http://4.bp.blogspot.com/_D9K0HARbkSE/SNUQq_DdfKI/AAAAAAAAAAM/mShJZ1JVm4c/s320/kiram.JPG" border="0" /></a><br /><div><strong><span style="font-family:courier new;">ಸಾಂಸ್ಕೃತಿಕ ಲೋಕದ ಪೂರ್ವಪಕ್ಷ ಪ್ರವೀಣ</span></strong></div><br /><div align="justify">ಕಾವ್ಯದ ಸಮಗ್ರ ಮತ್ತು ಅಧಿಕೃತ ಓದುಗರು ಕರ್ನಾಟಕದಲ್ಲಿ ಯಾರು ಎಂಬ ಪ್ರಶ್ನೆ ಬಂದಾಗಲೆಲ್ಲ ಕುರ್ತಕೋಟಿ ಮತ್ತು ಅನಂತಮೂರ್ತಿಯವರ ಹೆಸರುಗಳ ಜೊತೆಯಲ್ಲೇ ಕಿರಂ ಹೆಸರು ಪ್ರಸ್ತಾಪಕ್ಕೆ ಬರುತ್ತದೆ. ಈ ಇಬ್ಬರು ಹಿರಿಯರಲ್ಲೂ ಇಲ್ಲದ ಒಂದು ವಿಶೇಷ ಶಕ್ತಿ ಕಿರಂ ನಾಗರಾಜರಲ್ಲಿ ಇದೆ. ಈ ಹಿರಿಯರಿಬ್ಬರು ಓದುಗರು, ಸೂಕ್ಷ್ಮ ವಿಮರ್ಶಕರು. ಆದರೆ ಕಿರಂ ವಿಶೇಷವಿರುವುದು ಕಾವ್ಯದೊಡನೆ ಇರುವ ಸಂಬಂಧದಲ್ಲಿ. ಕಾವ್ಯಮಂಡಲದ ಮಾಂಡಲೀಕರಾದ ಕಿರಂ ತಮಗೆ ಬೇಕಾದ ಕಾವ್ಯವನ್ನು ಬೇಕಾದಾಗ ಆವಾಹಿಸಿ ಮಂಡಲದೊಳಗೆ ದಿಗ್ಬಂಧನ ಹಾಕಿ ಕೂರಿಸಿ ತಮಗೆ ಬೇಕಾದಂತೆ ವರ್ತಿಸುವ ಹಾಗೆ ಮಾಡಬಲ್ಲರು. ಕೆಲವು ಕಾವ್ಯವನ್ನು ಭಕ್ತರ ರೀತಿಯಲ್ಲಿ ಆರ್ದ್ರವಾಗಿ ವಿನೀತವಾಗಿ ಬೇಡಿ ಪರಿತಪಿಸಬಲ್ಲರು. ಇನ್ನೂ ಕೆಲವು ರೀತಿಯ ಕಾವ್ಯಗಳನ್ನು ಸಖಿಯೊಬ್ಬಳು ಪ್ರಿಯಕರನ ಮೋಹಿಸುವಂತೆ, ಮುನಿಸಿನಿಂದ, ಕೆಣಕುವಿಕೆಯಿಂದ, ಪ್ರೀತಿಯಿಂದ, ಸ್ಪರ್ಶದಿಂದ ಒಳಗು ಮಾಡಿಕೊಳ್ಳುವರು. ಕಿರಂ ಮಂಡಲದಲ್ಲಿ ದಿಗ್ಬಂಧನದಲ್ಲಿ ಕೂತ ಕಾವ್ಯದ ಸಾಲುಗಳು, ಮಂಡಲದ ಆರಾಧನೆ - ಪೂಜೆ ಮುಂದುವರೆದಂತೆ ಹೊಸ ಹೊಸ ಕಾಣ್ಕೆ-ಅರ್ಥಗಳಿಂದ ಬೆಳಗುವುದನ್ನೂ, ಇಲ್ಲ ಕಿರಂ ಉತ್ಕಟವಾಗಿ ಬೆಳಗಿಸುವುದನ್ನು ಯಾರು ತಾನೇ ಕಂಡಿಲ್ಲ! ಮಾಂತ್ರಿಕ, ಭಕ್ತ, ಸಖಿ - ಈ ಮೂರೂ ಸ್ತರಗಳಲ್ಲಿ ಲೀಲಾಜಾಲವಾಗಿ ಓಡಾಡುತ್ತಾ ಕಾವ್ಯವನ್ನು ಕಿರಂ ಮೀಟುವ ರೀತಿಯನ್ನೂ ಯಾರಾದರೂ ಚಿತ್ರೀಕರಿಸಿ ದಾಖಲು ಮಾಡಿಕೊಳ್ಳಬೇಕು.</div><div align="justify"><br />ಕಿರಂ ಓದು ಎಷ್ಟು ವ್ಯಾಪಕವಾದದ್ದು, ಆಳವಾದದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಕಿರಂರ ಎಷ್ಟೋ ಜನ ಸಹೋದ್ಯೋಗಿಗಳು ಸಮಕಾಲೀನರಲ್ಲಾದಂತೆ ಈ ಓದು ಒಣ ಜ್ಞಾನದರ್ಪವಾಗಲೀ, ಠೇಂಕಾರವಾಗಲೀ, ಪಾಂಡಿತ್ಯ ಪ್ರದರ್ಶನವಾಗಲೀ ಆಗಲಿಲ್ಲ. ಜನಪ್ರಿಯ ಮೇಷ್ಟ್ರಾಗಿದ್ದು ಕಿರಂ ಉಪದೇಶರತ್ನಿಯಾಗಲಿಲ್ಲ. ಕಿರಂರಲ್ಲಿ ಎಡೆಬಿಡದ ಓದುವಿಕೆ ಇರುವಂತೆ ನಿರಂತರವಾದ Unlearning ಕೂಡ ಇದೆ. ಈ Unlearningನ್ನು ಕಿರಂ ಸಾಧಿಸಿರುವುದಕ್ಕೆ ಎರಡು ಮುಖ್ಯ ಕಾರಣಗಳನ್ನು ಕೊಡಬಹುದು. ಒಂದು ಕಿರಂ ಸ್ವಭಾವದಲ್ಲೇ ಇರುವ ಇನ್ನಿಲ್ಲದ ಮುಗ್ಧತೆ ಮತ್ತು ಅಸಾಧಾರಣ ವಿನಯಶೀಲತೆ. ಇದು ಸ್ವಭಾವದ ಮಾತಾಯಿತು. ಇದಕ್ಕಿಂತ ಮುಖ್ಯವಾದದ್ದು ಕಿರಂರಿಗೇ ವಿಶಿಷ್ಟವಾದ ಪಠ್ಯಗಳ ಮರುಓದು (Rereading) ಪಠ್ಯವೊಂದರ ಮತ್ತೆ ಮತ್ತೆ ಎನ್ನುವಂತೆ ಕಿರಂ ಒಳಹೋಗುತ್ತಲೇ ಇರುವುದರಿಂದ ಪ್ರತಿ ಓದಿನ ಸಂದರ್ಭದಲ್ಲೂ ಒಟ್ಟಿಗೇ Learning ಮತ್ತು Unlearningನ್ನು ಕಿರಂ ಸಾಧಿಸುತ್ತಾರೆ. ಕಿರಂ ನೆನಪಿನ ಶಕ್ತಿ ಅಗಾಧವಾಗಿದ್ದು ಕೂಡ ಮತ್ತೆ ಮತ್ತೆ ಪಠ್ಯವನ್ನು ಮರುಪ್ರವೇಶಿಸುವುದರ ಮಹತ್ವವನ್ನು ನಾವು ಮರೆಯಬಾರದು. ಪಠ್ಯವೊಂದನ್ನು ಎಂದೋ ಓದಿದಾಗ ಸಿಕ್ಕಿದ ಭಾವ - ನೋಟ, ಇಲ್ಲಿ ಓದಿನ ನೆನಪಿಗೆ ನಾವು ಬದ್ಧವಾಗಿ ಬಿಟ್ಟರೆ ಕಲಿಯುವಿಕೆ ನಿಂತೇ ಹೋಗಿಬಿಡುತ್ತದೆ. ಕಾಲಾಂತರದಲ್ಲಿ ಪಠ್ಯವು ಕೂಡ ನಮ್ಮಂತೆ ಒಳಗೊಳಗೇ ಬೆಳೆದಿರುತ್ತದೆ. ಮಾಗಿರುತ್ತದೆ. ಹೀಗೆ ತಿಳಿಯಬೇಕಾದರೆ ಹಿಂದೆ ಕಲಿತದ್ದರ Unlearningಗೆ ನಾವು ಸಿದ್ಧರಾಗಬೇಕಾಗುತ್ತದೆ. ಇದರಿಂದ ಕಿರಂಗೆ ಒಂದು ಪಠ್ಯ ನೀಡುವ ಅರ್ಥದ ಬಗ್ಗೆ ಮಾತ್ರವೇ ತಲೆ ಕೆಡಿಸಿಕೊಳ್ಳದೆ, ಅದು ನೀಡುವ ಅನುಭವದ ಕಡೆಗೇ ಮುಖಮಾಡಲು ಸಾಧ್ಯವಾಗಿದೆ. ಕುರ್ತಕೋಟಿಯಂತಹವರ ವಿಶಾಲ ಓದು ನೆನಪಿನ ಭಾರದಿಂದ ಬಿಡುಗಡೆ ಪಡೆಯಲೇ ಇಲ್ಲ. ಎಸ್.ದಿವಾಕರರಂತವರ ಓದುಗಾರಿಕೆ, ಸಂವೇದನೆ-ಸೃಜನಶೀಲತೆಯಾಗಿ ಪರಿವರ್ತನೆಯಾಗಲೇ ಇಲ್ಲ. ಕೆ.ವಿ.ತಿರುಮಲೇಶರ ಈಚಿನ ಅಂಕಣ ಬರಹಗಳಲ್ಲಿ ಶ್ರೀಯುತರ ವಿಶಾಲವಾದ ಓದುವಿಕೆಯ ಜೊತೆಗೆ ಓದು, ಕೃತಿ ಮತ್ತು ಬದುಕಿನ ಬಗ್ಗೆ ಒಂದು ರೀತಿಯ ದಿಗ್ಭ್ರಮೆಯೂ ಇರುವುದರಿಂದ ಬರಹವು ಉಪದೇಶಾತ್ಮಕತೆ ಮತ್ತು ಮಾಹಿತಿಗಳಿಂದಾಚೆಗೆ ಸಂವಾದದ ಕಡೆಗೂ ಚಲಿಸುವುದನ್ನು ಗಮನಿಸಬಹುದು. ಕಿರಂ ಕಾವ್ಯಪ್ರೇಮವನ್ನು ಮಾತ್ರ ಕಲಿಯದೆ ಈ Unlearning ಗುಣವನ್ನು ಕೂಡ ನಾವೆಲ್ಲ ರೂಢಿಸಿಕೊಂಡರೆ ಎಷ್ಟು ಚೆನ್ನ.</div><div align="justify"><br />ಈ ಹಿನ್ನೆಲೆಯಲ್ಲೇ ಕಿರಂಗೆ ಮೌಖಿಕ ಸಂಸ್ಕೃತಿ (oral culture) ಕಡೆಗೆ ಇರುವ ಒಲವನ್ನು ವಿಶ್ಲೇಷಿಸಬೇಕು. ಬರವಣಿಗೆಯ ತುಂಬಾ ಒಳ್ಳೆಯ ಮತ್ತು ತುಂಬಾ ಕೆಟ್ಟ ಗುಣವೆಂದರೆ ದಾಖಲಾಗುವ ಸ್ವಭಾವ. ಯಾವ ಭಾವ, ಯಾವ ವಿಚಾರವೂ ನಿರ್ದಿಷ್ಟವಲ್ಲ, ಅಂತಿಮವಲ್ಲ. ಪ್ರತಿ ಮರುಓದಿನಲ್ಲೂ ನಿರ್ಮಾಣವಾಗುವ ಭಾವ-ವಿಚಾರಗಳ ವಿನ್ಯಾಸವೇ ನಿಜವಾದದ್ದು ಎಂದು ನಂಬುವವರಿಗೆ ಬರವಣಿಗೆಯ ಮಿತಿಗಳು ಕೂಡ ಗೊತ್ತಿರುತ್ತವೆ. ಸಂಗೀತಗಾರನಿಗೆ ಪಠ್ಯವು ನಿರ್ದಿಷ್ಟವೆಂಬುದು ನಮ್ಮ ತಪ್ಪು ಕಲ್ಪನೆ. ಪ್ರತಿಸಲದ ಹಾಡುಗಾರಿಕೆಯಲ್ಲೂ, ಪ್ರತಿಸಲದ ಆಲಾಪನೆಯಲ್ಲೂ, ಪ್ರತಿ ವಿಳಂಬಿತ್ನಲ್ಲೂ ಪಠ್ಯಕ್ಕೆ ಹೊಸ ಜೀವ, ಹೊಸ ಭಾವ. ಕಿರಂ ಓದುಗಾರಿಕೆ, ಹಾಡುಗಾರಿಕೆಗೆ ತನ್ನನ್ನೇ ತೆತ್ತುಕೊಂಡ ಸಂಗೀತಗಾರನ ರೀತಿಯದು. ಈ ರೀತಿಯ ವೈಶಿಷ್ಟ್ಯವೆಂದರೆ ಓದುವಾಗ ತನ್ನೆಲ್ಲ ಒಳತೋಟಿಯೊಡನೆ ಓದಿ ಪಠ್ಯವನ್ನೇ ಉದ್ದೀಪಿಸುವುದು. ದ.ರಾ.ಬೇಂದ್ರೆ, ಗೋಪಾಲಕೃಷ್ಣ ಅಡಿಗರ ಎಷ್ಟೋ ಕವನಗಳ ಕಿರಂರ ಮರುಓದಿಗೆ ಸಾಕ್ಷಿಯಾಗಿರುವ ನಾನು ಪ್ರತಿ ಓದಿನಲ್ಲೂ ಕವನಗಳು ಹೊಸ ಅರ್ಥ, ಹೊಸ ಭಾವಗಳಲ್ಲಿ ಬೆಳಗಲು ಕಿರಂರ ಆವಾಹನೆಗೆ ಕಾಯುತ್ತಿರುವುದನ್ನು ಕಂಡು ಬೆರಗಾಗಿದ್ದೇನೆ. ಕಿರಂರ ಎರಡೂ ನಾಟಕಗಳು ನೀಗಿಕೊಂಡ ಸಂಸ, ಕಾಲಜ್ಞಾನಿ ಕನಕ - ಒಳತೋಟಿಯನ್ನೇ ಮೀಟುವುದನ್ನು, ಮೀಟಿದಾಗ ದಕ್ಕುವುದನ್ನೇ ಹಿಡಿಯಲು ಪ್ರಯತ್ನಿಸುತ್ತದೆಂದು ನನ್ನ ನೆನಪು. ಬರವಣಿಗೆ ವಿಪುಲವಾಗಿ, ಪ್ರವಾಹದೋಪಾದಿಯಲ್ಲಿ ಬರುತ್ತಿರುವ ಕನ್ನಡದ ಇಂದಿನ ಸಂದರ್ಭದಲ್ಲಿ ಕಿರಂರ ಮೌಖಿಕ ಸಂಸ್ಕೃತಿಯ ಒಲವು - ನಂಬಿಕೆಗಳ ಹಿಂದಿರುವ ಪ್ರೇರಣೆಗಳನ್ನು ಕುರಿತು ನಾವು ಗಂಭೀರವಾಗಿ ಯೋಚಿಸಬೇಕಿದೆ. ಅಕ್ಷರ ಜ್ಞಾನ ಮತ್ತು ಲಿಖಿತ ಸಂಸ್ಕೃತಿ - ಇವೆರಡನ್ನೂ ಕೂಡ ಹೆಚ್ಚಾಗಿ ಆಶ್ರಯಿಸದೆಯೂ ಪರಂಪರೆ, ತಿಳಿವಳಿಕೆ, ಜ್ಞಾನದ ವೃತ್ತಿ ಕೌಶಲ್ಯಗಳ ಸಾತತ್ಯವನ್ನು ಬಹುಕಾಲ ಕಾಪಾಡಿಕೊಂಡು ಬಂದ ನಮ್ಮ ಜೀವನ ಶೈಲಿಯ ಬಗ್ಗೆಯೂ ಕಿರಂರ ಹಿನ್ನೆಲೆಯಲ್ಲಿ ಯೋಚಿಸಬಹುದು. </div><div align="justify"><br />ಕಾವ್ಯ ಮಂಡಲವೆಂಬುದು ಕಿರಂ ತಾವೇ ತಮ್ಮ ಸಂಸ್ಥೆಗೆ ಕೊಟ್ಟುಕೊಂಡಿರುವ ಹೆಸರು. ಆದರೆ ಕಿರಂರ ಜೀವನ ಶೈಲಿ ಚಾವಡಿಯಲ್ಲಿ ಹರಟೆ ಹೊಡೆಯುವವರ ಯಜಮಾನನ ಗತ್ತು, ಬಿಡುಬೀಸುತನ, ದರ್ಪಕ್ಕೆ ಹತ್ತಿರವಾದದ್ದು. ಕಾವ್ಯಮಂಡಲದ ನಿರ್ದಿಷ್ಟ ಮತ್ತು ಪೂಜನೀಯ ಆವರಣಕ್ಕಿಂತ ಚಾವಡಿಯ ವೈಶಾಲ್ಯ ಮತ್ತು ಅನೌಪಚಾರಿಕತೆಯೇ ಕಿರಂಗೆ ಹತ್ತಿರವಾದದ್ದು. ಕಿರಂ ನೋಡಿದಾಗಲೆಲ್ಲ ಮಂಡಲದ ಆಚಾರ್ಯ, ಅವಧಾನಿಗಳಿಗಿಂತ ಹೆಚ್ಚಾಗಿ ನೆನಪಿಗೆ ಬರುವುದು ಕಾವ್ಯ ಪ್ರಚಾರ-ಪ್ರಸಾರಕ್ಕೇ ತಮ್ಮನ್ನು ತೆತ್ತುಕೊಂಡು ಬದುಕುತ್ತಿದ್ದ ಕೀರ್ತನಕಾರರು, ತಂಬೂರಿದಾಸರು (BAROS) ಈ ಕಾರಣಕ್ಕೇ.</div><div align="justify"><br />ಕಿರಂರಲ್ಲಿರುವ ಇನ್ನೊಂದು ಗುಣವನ್ನು ನನಗೆ ಅನುಕರಿಸಲು ಇಷ್ಟ. ಆದರೆ ಅಂತಹ ಅನುಕರಣೆಗೆ ಬೇಕಾದ ಸ್ವಭಾವ-ಪ್ರತಿಭೆ ನನ್ನದಲ್ಲ. ಮೇಲುನೋಟಕ್ಕೆ ಬಂಡುಕೋರನಾಗಿ, ಅರಾಜ್ಯ ಜೀವನಶೈಲಿಯ ಪ್ರತಿಪಾದಕನಾಗಿ ಕಾಣುವ ಕಿರಂರಲ್ಲಿರುವ ಆಂತರಿಕ ಸಂಯೋಜನೆ, ಶಿಸ್ತು ತುಂಬಾ ಅಪರೂಪದ್ದು. ಪುಸ್ತಕಗಳನ್ನು ಕ್ರಮಬದ್ಧವಾಗಿಯೂ, ಶಿಸ್ತಾಗಿಯೂ ಜೋಡಿಸಿಕೊಂಡು, ಬೇಕೆಂದಾಗ ವಿಚಾರಗಳನ್ನು ಅಡಿಟಿಪ್ಪಣಿಗಳ ಮೂಲಕ ಉಲ್ಲೇಖಿಸುವ ಶಿಸ್ತು ಕಿರಂದಲ್ಲ. ಎಲ್ಲ ತಿಳುವಳಿಕೆ, ವಿಚಾರಗಳು ಆಂತರಿಕವಾಗಿ ಸಂಯೋಜನೆಗೊಂಡಿರುವ ರೀತಿ ಕಿರಂರ ವಾಕ್ಪ್ರವಾಹದಲ್ಲಿ ಯಾರಿಗಾದರೂ ಗೋಚರಿಸುತ್ತದೆ. ನಮ್ಮಲ್ಲಿ ಕ್ಲೀಷೆಯಾಗಿರುವ ಮಾತಿನ ನೆರವಿನಿಂದಲೇ ಹೇಳುವುದಾದರೆ ಕಿರಂರ ಪ್ರತಿಭೆ ಸಂಶ್ಲೇಷಣಾ ರೀತಿಯದು, ವಿಶ್ಲೇಷಣಾತ್ಮಕವಾದದ್ದಲ್ಲ.</div><div align="justify"><br />ಪ್ರಸಿದ್ಧ ಜರ್ಮನ್ ಕವಿ ರೈನ್ರ್ ಮರಿಯಾ ರಿಲ್ಕೆ ಬರೆದಿರುವ ಒಂದೇ ಒಂದು ಕಾದಂಬರಿ `ಮಾಲ್ಟ್ ಅಲೌಂಡ್ಸ್ ಬ್ರಿಗ್ಗನ ಟಿಪ್ಪಣಿ ಪುಸ್ತಕ' ಈಚೆಗೆ ಕೆ.ವಿ.ತಿರುಮಲೇಶರಿಂದ ಕನ್ನಡದಲ್ಲಿ ಅನುವಾದಗೊಂಡು ಪ್ರಕಟವಾಗಿದೆ. (ಅಭಿನವ ಪ್ರಕಾಶನ ಬೆಂಗಳೂರು 2008). ರಿಲ್ಕೆ ಕಿರಂರನ್ನು ಕಂಡು ಭೇಟಿ ಮಾಡಿ, ಸಾಕಷ್ಟು ಒಡನಾಡಿ ಈ ಕೆಳಗಿನ ಸಾಲುಗಳನ್ನು ಬರೆದಂತಿದೆ.</div><div align="justify"><strong></strong> </div><div align="justify"><strong>ರಾಷ್ಟ್ರೀಯ ಗ್ರಂಥಾಲಯ</strong></div><div align="justify">ಇಲ್ಲಿ ನಾನು ಕೂತಿದ್ದೇನೆ. ಒಬ್ಬ ಕವಿಯನ್ನು ಓದುತ್ತ. ಓದುವ ಕೊಠಡಿಯಲ್ಲಿ ಸಾಕಷ್ಟು ಮಂದಿ ಇದ್ದಾರೆ. ಆದರೆ ನನಗವರ ಅರಿವಿಲ್ಲ. ಅವರು ಗ್ರಂಥಗಳ ಒಳಗಿದ್ದಾರೆ. ಕೆಲವು ಸಲ ಅವರು ಆಚೀಚೆ ಸರಿಯುತ್ತಾರೆ. ಪುಟಗಳ ಒಳಗಡೆ, ಎರಡು ಕನಸುಗಳ ನಡುವೆ ಮಗ್ಗಲು ಬದಲಿಸುವ ನಿದ್ರಾಧೀನರಂತೆ. ಆಹಾ! ಓದುವವರ ಮಧ್ಯೆ ಇರುವುದೆಂದರೆ ಅದೆಷ್ಟು ಸೊಗಸು. ಜನ ಯಾವಾಗಲೂ ಯಾಕೆ ಹಾಗಿಲ್ಲ?</div><div align="center">****</div><div align="justify">ಮತ್ತು ನಾನಿಲ್ಲಿ ಕವಿಯ ಜೊತೆ ಕೂತಿದ್ದೇನೆ. ಎಂಥ ಅದೃಷ್ಟ ನನ್ನದು. ಸದ್ಯ ಇಲ್ಲಿ ಮುನ್ನೂರು ಮಂದಿ ಇದ್ದಾರು. ಎಲ್ಲರೂ ಓದುವವರೇ. ಆದರೆ ಪ್ರತಿಯೊಬ್ಬನಿಗೂ ಒಬ್ಬ ಕವಿಯಿರಬೇಕೆಂದರೆ ಅಸಾಧ್ಯ. (ಅವರಿಗೇನಿದೆಯೋ ದೇವರಿಗೇ ವೇದ್ಯ). ಮುನ್ನೂರು ಮಂದಿ ಕವಿಗಳಿಲ್ಲ. ಆದರೆ ಯೋಚಿಸಿ ನೋಡಿ, ಬಹುಶಃ ಈ ಓದುಗರಲ್ಲೆಲ್ಲಾ ಅತ್ಯಂತ ದೈನೇಸಿಯೂ ಹಾಗೂ ವಿದೇಶಿಯನೂ ಆದ ನನಗೆ ದೈವ ಏನು ಬಗೆದಿದೆ ಎಂಬುದನ್ನು. ನನಗೊಬ್ಬ ಕವಿಯಿದ್ದಾನೆ. ನಾನು ದರಿದ್ರನಾಗಿದ್ದೂ ನಾನು ದಿನಂಪ್ರತಿ ತೊಡುವ ಸೂಟು ಕೆಲವು ಕಡೆ ತೇಪೆಯಾಗಿರಲು ತೊಡಗಿದ್ದರೂ ಮತ್ತು ಕೆಲವು ವಿಧಗಳಲ್ಲಿ ನನ್ನ ಶೂಗಳು ಖಂಡನಾತೀತವಾಗಿರದೆ ಇದ್ದರೂ.' (ಪುಟ 26-27). </div><br /><div><strong><em>(ದಿನಾಂಕ 31ಆಗಸ್ಟ್ 2008ರ ಸಾಪ್ತಾಹಿಕ ಪ್ರಭ (ಕನ್ನಡಪ್ರಭದ ಭಾನುವಾರದ ಪುರವಣಿ)ದಲ್ಲಿ ಪ್ರಕಟಿತ.)</em></strong> </div>ಕೆ. ಸತ್ಯನಾರಾಯಣhttp://www.blogger.com/profile/15167030166766836381noreply@blogger.com0